ಬಾಲಕೃಷ್ಣಗೆ ಬೋಲ್ಡ್ ಆದ ಬಾಲಿವುಡ್ ಸ್ಟಾರ್ ರಣ್​ಬೀರ್ ಕಪೂರ್, ಡೈಲಾಗ್​ಗಳ ಮೇಲೆ ಡೈಲಾಗ್

Nandamuri Balakrishna: ನಟ ರಣ್​ಬೀರ್ ಕಪೂರ್, ಬಾಲಕೃಷ್ಣ ಅವರನ್ನು ಭೇಟಿಯಾಗಿದ್ದಾರೆ. ಬಾಲಕೃಷ್ಣರ ಡೈಲಾಗ್​ಗಳನ್ನು ಒಂದರ ಹಿಂದೊಂದರಂತೆ ಹೇಳಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.

ಬಾಲಕೃಷ್ಣಗೆ ಬೋಲ್ಡ್ ಆದ ಬಾಲಿವುಡ್ ಸ್ಟಾರ್ ರಣ್​ಬೀರ್ ಕಪೂರ್, ಡೈಲಾಗ್​ಗಳ ಮೇಲೆ ಡೈಲಾಗ್
ರಣ್​ಬೀರ್ ಕಪೂರ್
Follow us
|

Updated on: Nov 20, 2023 | 3:01 PM

ಮಾಸ್​ಗಳಿಗೇ ಮಾಸ್ ನಂದಮೂರಿ ಬಾಲಕೃಷ್ಣ (Nandamuri Balakrishna) ಎಲ್ಲ ಬಾಲಿವುಡ್​ನ ಚಾಕಲೇಟ್ ಬಾಯ್, ಸಟಲ್ ನಟ ರಣ್​ಬೀರ್ ಕಪೂರ್ ಎಲ್ಲಿ. ನಟನೆಯಲ್ಲಿ, ಸಿನಿಮಾ ಆಯ್ದುಕೊಳ್ಳುವ ವಿಧಾನದಲ್ಲಿ ಉತ್ತರ ಧೃವ-ದಕ್ಷಿಣ ಧೃವ ಎಂಬಂತಿರುವ ಈ ನಟರಿಬ್ಬರೂ ಒಂದೇ ವೇದಿಕೆ ಮೇಲೆ ಸೇರಿದ್ದಾರೆ. ಪರಸ್ಪರ ಮಾತನಾಡಿದ್ದಾರೆ, ಮಸ್ತಿ ಮಾಡಿದ್ದಾರೆ. ಬಾಲಕೃಷ್ಣ ಅವರ ಮಾಸ್ ಡೈಲಾಗ್​ಗಳನ್ನು ತೆಲುಗಿನಲ್ಲಿಯೇ ಹೇಳಿ ಖುಷಿ ಪಟ್ಟಿದ್ದಾರೆ ರಣ್​ಬೀರ್ ಕಪೂರ್.

ನಟ, ರಾಜಕಾರಣಿಯಾಗಿ ಈಗಾಗಲೇ ಯಶಸ್ವಿಯಾಗಿರುವ ನಂದಮೂರಿ ಬಾಲಕೃಷ್ಣ, ನಿರೂಪಕರಾಗಿಯೂ ಯಶಸ್ವಿಯಾಗಿದ್ದಾರೆ. ಆಹಾ ಒಟಿಟಿಗಾಗಿ ಅನ್​ಸ್ಟಾಪೆಬಲ್ ಬಾಲಯ್ಯ ಹೆಸರಿನ ಟಾಕ್ ಶೋ ಅನ್ನು ಬಾಲಕೃಷ್ಣ ನಡೆಸಿಕೊಡುತ್ತಿದ್ದು, ಈ ಶೋ ಭಾರಿ ಹಿಟ್ ಆಗಿದೆ. ಹಲವು ದಿಗ್ಗಜರನ್ನು ತಮ್ಮ ಶೋಗೆ ಕರೆದು ಮಾತನಾಡಿಸಿದ್ದಾರೆ ಬಾಲಯ್ಯ. ಇದೀಗ ಅನ್​ಸ್ಟಾಪೆಬಲ್ ವಿತ್ ಬಾಲಯ್ಯ ಶೋನ ಹೊಸ ಸೀಸನ್ ಆರಂಭವಾಗುತ್ತಿದ್ದು, ಶೋನ ಮೊದಲ ಅತಿಥಿಯಾಗಿ ಬಾಲಿವುಡ್​ನ ನಟ ರಣ್​ಬೀರ್ ಕಪೂರ್ ಆಗಮಿಸಿದ್ದಾರೆ.

ಕೇವಲ ರಣ್​ಬೀರ್ ಕಪೂರ್ ಮಾತ್ರವೇ ಅಲ್ಲದೆ ‘ಅನಿಮಲ್’ ಸಿನಿಮಾದ ನಿರ್ದೇಶಕ, ತೆಲುಗಿನವರೇ ಆದ ಸಂದೀಪ್ ರೆಡ್ಡಿ ವಂಗ ಹಾಗೂ ಸಿನಿಮಾದ ನಟಿ ರಶ್ಮಿಕಾ ಮಂದಣ್ಣ ಸಹ ಶೋಗೆ ಆಗಮಿಸಿದ್ದಾರೆ. ಅತಿಥಿಗಳೊಟ್ಟಿಗೆ ಬಿಡು-ಬೀಸಾಗಿ, ಮುಚ್ಚು ಮರೆ ಇಲ್ಲದೆ ಮಾತನಾಡುವ ಬಾಲಕೃಷ್ಣ, ರಣ್​ಬೀರ್, ರಶ್ಮಿಕಾ ಜೊತೆಗೂ ಹಾಗೆಯೇ ಮಾತನಾಡಿದ್ದಾರೆ. ಶೋನ ಪ್ರೋಮೋ ಈಗಾಗಲೇ ಬಿಡುಗಡೆ ಆಗಿದ್ದು ರಣ್​ಬೀರ್ ಅಂತೂ ಶೋ ಅನ್ನು ಬಹಳ ಎಂಜಾಯ್ ಮಾಡಿದಂತೆ ಕಾಣುತ್ತಿದ್ದಾರೆ.

ಇದನ್ನೂ ಓದಿ:ಸ್ಟಾರ್ ನಟ ಬೇಡವೆಂದಿದ್ದ ಅನಿಮಲ್ ಸಿನಿಮಾ, ರಣ್​ಬೀರ್​ಗೆ ದೊರಕಿದ್ದು ಹೇಗೆ?

ಶೋನಲ್ಲಿ ರಣ್​ಬೀರ್ ಕಪೂರ್, ಡೈಲಾಗ್ ಕಿಂಗ್ ಬಾಲಕೃಷ್ಣರ ಜನಪ್ರಿಯ ಡೈಲಾಗ್​ಗಳನ್ನು ತೆಲುಗಿನಲ್ಲಿಯೇ ಹೇಳಿ ಭೇಷ್ ಎನಿಸಿಕೊಂಡಿದ್ದಾರೆ. ‘ಫ್ಲೂಟು ಜಿಂಕ ಮುಂದು ಊದು, ಸಿಂಹಂ ಮುಂದು ಕಾದು’ ಡೈಲಾಗ್ ಅನ್ನು ಹೇಳಿರುವ ರಣ್​ಬೀರ್ ಕಪೂರ್ ಆ ಬಳಿಕ, ‘ಡೋಂಡ್ ಟ್ರಬಲ್​ ದಿ ಟ್ರಬಲ್, ಇಫ್​ ಯು ಟ್ರಬಲ್​ ದಿ ಟ್ರಬಲ್ ವಿಲ್ ಟ್ರಬಲ್ಸ್​ ಯು, ಐ ಆಮ್ ನಾಟ್ ದಿ ಟ್ರಬಲ್, ಐ ಆಮ್​ ದಿ ಟ್ರೂತ್’ ಎಂಬ ಬಾಲಕೃಷ್ಣರ ಜನಪ್ರಿಯ ಡೈಲಾಗ್ ಅನ್ನು ಸಹ ಹೇಳಿದ್ದಾರೆ.

ಜೊತೆಗೆ ಬಾಲಕೃಷ್ಣರ ಕೆಲವು ಹಾಡುಗಳಿಗೆ ರಣ್​ಬೀರ್ ಕಪೂರ್ ಡ್ಯಾನ್ಸ್ ಸಹ ಮಾಡಿದ್ದಾರೆ. ‘ಅನಿಮಲ್’ ಸಿನಿಮಾದ ಬಗ್ಗೆಯೂ ಪರಸ್ಪರ ಮಾತನಾಡಿದ್ದಾರೆ. ದಕ್ಷಿಣ ಚಿತ್ರರಂಗ ಹಾಗೂ ಬಾಲಿವುಡ್ ಬಗ್ಗೆಯೂ ಇಬ್ಬರ ನಡುವೆ ಚರ್ಚೆಗಳು ನಡೆದಿವೆ. ಅಂದಹಾಗೆ ರಣ್​ಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ಡಿಸೆಂಬರ್ 1 ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ. ಸಿನಿಮಾವನ್ನು ಟಿ-ಸೀರೀಸ್, ಭದ್ರಕಾಳಿ ಫಿಲಮ್ಸ್, ಸಿನೆ 1 ಸ್ಟುಡಿಯೋ ನಿರ್ಮಾಣ ಮಾಡಿದೆ. ಎಎ ಫಿಲಮ್ಸ್ ಸಿನಿಮಾದ ವಿತರಣೆ ಜವಾಬ್ದಾರಿ ವಹಿಸಿಕೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಾಸನಾಂಬೆ ದರ್ಶನಕ್ಕೆ ಹೊಸ ವ್ಯವಸ್ಥೆ ಮಾಡಿದ ಆಡಳಿತ ಮಂಡಳಿ; ಏನದು?
ಹಾಸನಾಂಬೆ ದರ್ಶನಕ್ಕೆ ಹೊಸ ವ್ಯವಸ್ಥೆ ಮಾಡಿದ ಆಡಳಿತ ಮಂಡಳಿ; ಏನದು?
72 ದಿನಗಳ ಬಳಿಕ ನದಿಯಲ್ಲಿ ಅರ್ಜುನ ಪತ್ತೆ: ಗುಡ್ಡ ಕುಸಿತದ ಭೀಕರತೆ ನೋಡಿ..
72 ದಿನಗಳ ಬಳಿಕ ನದಿಯಲ್ಲಿ ಅರ್ಜುನ ಪತ್ತೆ: ಗುಡ್ಡ ಕುಸಿತದ ಭೀಕರತೆ ನೋಡಿ..
ಯುವ ದಸರಾನಲ್ಲಿ ಪ್ರೇಕ್ಷಕರಿಂದ ಪ್ರಮಾಣ ಮಾಡಿಸಿಕೊಂಡ ನಟ ಶ್ರೀಮುರಳಿ
ಯುವ ದಸರಾನಲ್ಲಿ ಪ್ರೇಕ್ಷಕರಿಂದ ಪ್ರಮಾಣ ಮಾಡಿಸಿಕೊಂಡ ನಟ ಶ್ರೀಮುರಳಿ
ಹಾಸನಾಂಬೆ ಭಕ್ತರಿಗೆ ಇಸ್ಕಾನ್ ಲಡ್ಡು; ಡಿಸಿ ಸಿ. ಸತ್ಯಭಾಮ ಹೇಳಿದ್ದಿಷ್ಟು
ಹಾಸನಾಂಬೆ ಭಕ್ತರಿಗೆ ಇಸ್ಕಾನ್ ಲಡ್ಡು; ಡಿಸಿ ಸಿ. ಸತ್ಯಭಾಮ ಹೇಳಿದ್ದಿಷ್ಟು
ತನಿಖೆಗೆ ಆದೇಶಿಸಿದ್ದರೂ ಸಿಎಂ ವಿರುದ್ಧ ಮತ್ತೊಂದು ಹೋರಾಟಕ್ಕೆ ಸಜ್ಜು!
ತನಿಖೆಗೆ ಆದೇಶಿಸಿದ್ದರೂ ಸಿಎಂ ವಿರುದ್ಧ ಮತ್ತೊಂದು ಹೋರಾಟಕ್ಕೆ ಸಜ್ಜು!
CM ವಿರುದ್ದ ದೂರಿಗೆ ಹಿಂಬರಹ ನೀಡಲು ಲೋಕಾಯುಕ್ತ SPಗೆ ಗಡುವು ನೀಡಿದ ದೂರುದಾರ
CM ವಿರುದ್ದ ದೂರಿಗೆ ಹಿಂಬರಹ ನೀಡಲು ಲೋಕಾಯುಕ್ತ SPಗೆ ಗಡುವು ನೀಡಿದ ದೂರುದಾರ
IND vs BAN: ಕಾನ್ಪುರ್​ಗೆ ಬಂದಿಳಿದ ಟೀಮ್ ಇಂಡಿಯಾ: ಇಲ್ಲಿದೆ ವಿಡಿಯೋ
IND vs BAN: ಕಾನ್ಪುರ್​ಗೆ ಬಂದಿಳಿದ ಟೀಮ್ ಇಂಡಿಯಾ: ಇಲ್ಲಿದೆ ವಿಡಿಯೋ
ಪಾಕಿಸ್ತಾನಕ್ಕೆ ಹೋಲಿಕೆ: ಹೈಕೋರ್ಟ್​ ನ್ಯಾಯಾಧೀಶರಿಗೆ ಸುಪ್ರಿಂ ತರಾಟೆ
ಪಾಕಿಸ್ತಾನಕ್ಕೆ ಹೋಲಿಕೆ: ಹೈಕೋರ್ಟ್​ ನ್ಯಾಯಾಧೀಶರಿಗೆ ಸುಪ್ರಿಂ ತರಾಟೆ
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್​ನಲ್ಲಿ ಆ್ಯಪಲ್ ಐಫೋನ್ ಆಫರ್
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್​ನಲ್ಲಿ ಆ್ಯಪಲ್ ಐಫೋನ್ ಆಫರ್
ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಯತ್ನ: ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ
ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಯತ್ನ: ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ