AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಬಂದು ‘ಸ್ಕ್ಯಾಮ್’ ಸರಣಿ, ಸಹರಾ ಸಂಸ್ಥೆ ನೀಡಿತು ಎಚ್ಚರಿಕೆ

‘ಸ್ಕ್ಯಾಮ್ 2010’ ಘೋಷಣೆಯಾಗಿದೆ. ಸುಬ್ರತಾ ರಾಯ್ ಮಾಡಿದ ಹಗರಣ ಕುರಿತಾದ ಕತೆಯನ್ನು ಈ ಬಾರಿಯ ಸ್ಕ್ಯಾಮ್ ಒಳಗೊಂಡಿರಲಿದೆ. ಆದರೆ ಸಹರಾ ಸಂಸ್ಥೆ ನಿರ್ಮಾಪಕರಿಗೆ ಎಚ್ಚರಿಕೆ ನೀಡಿದೆ.

ಮತ್ತೆ ಬಂದು ‘ಸ್ಕ್ಯಾಮ್’ ಸರಣಿ, ಸಹರಾ ಸಂಸ್ಥೆ ನೀಡಿತು ಎಚ್ಚರಿಕೆ
ಮಂಜುನಾಥ ಸಿ.
|

Updated on: May 18, 2024 | 2:56 PM

Share

ಸ್ಕ್ಯಾಮ್’ (Scam), ಭಾರತದಲ್ಲಿ ನಿರ್ಮಾಣವಾಗುತ್ತಿರುವ ವೆಬ್ ಸೀರೀಸ್​ಗಳಲ್ಲಿ (Web Series) ಒಂದು ಉತ್ತಮ ವೆಬ್ ಸೀರೀಸ್. ಮೊದಲಿಗೆ ಷೇರುಮಾರುಕಟ್ಟೆಯಲ್ಲಿ ಭಾರಿ ದೊಡ್ಡ ಸ್ಕ್ಯಾಮ್ ಮಾಡಿದ್ದ ಹರ್ಷದ್ ಮೆಹ್ತಾ ಜೀವನವನ್ನು ‘ಸ್ಕ್ಯಾಮ್ 1992’ ವೆಬ್ ಸರಣಿಯಲ್ಲಿ ಕಟ್ಟಿಕೊಡಲಾಗಿತ್ತು. ಆ ವೆಬ್ ಸರಣಿ ಭಾರಿ ದೊಡ್ಡ ಹಿಟ್ ಆಗಿತ್ತು. ‘ಸ್ಕ್ಯಾಮ್ 1992’ ವೆಬ್ ಸರಣಿಯ ನಿರ್ಮಾಣದ ಗುಣಮಟ್ಟ, ಕಲಾವಿದರ ನಟನೆ, ಹಿನ್ನೆಲೆ ಸಂಗೀತ ಎಲ್ಲವೂ ಭಾರತೀಯ ಪ್ರೇಕ್ಷಕನ ಸೆಳೆದಿತ್ತು. ಅದಾದ ಬಳಿಕ ‘ಸ್ಕ್ಯಾಮ್ 2003 ನಿರ್ಮಿಸಲಾಯ್ತು. ಇದರಲ್ಲಿ ಬೆಂಗಳೂರಿನ ಗಾಢ ನಂಟಿರುವ ತೆಲಗಿ ಛಾಪಾ ಕಾಗದ ಹಗರಣವನ್ನು ವಿಷಯವಸ್ತುವನ್ನಾಗಿಸಿಕೊಳ್ಳಲಾಗಿತ್ತು. ಇದೀಗ ‘ಸ್ಕ್ಯಾಮ್ 2010’ ತೆರೆಗೆ ತರಲು ತಯಾರಾಗಿದೆ ಅದೇ ತಂಡ.

‘ಸ್ಕ್ಯಾಮ್ 2010’ ಇನ್ನೂ ದೊಡ್ಡ ಭ್ರಷ್ಟಾಚಾರಿಯ ಬಗೆಗಿನ ಕತೆಯನ್ನು ಒಳಗೊಂಡಿದೆ. ಸಹರಾ ಸ್ಕ್ಯಾಮ್ ಮಾಡಿದ ಸುಬ್ರತಾ ರಾಯ್ ಕುರಿತಾದ ಕತೆಯನ್ನು ‘ಸ್ಕ್ಯಾಮ್ 2010’ ಒಳಗೊಂಡಿದೆ. ಸಹರಾ ಇಂಡಿಯಾ ಪರಿವಾರ್​ನ ಮಾಲೀಕ ಸುಬ್ರತಾ ರಾಯ್ ಕುರಿತಾದ ಕತೆಯನ್ನು ಈ ವೆಬ್ ಸರಣಿ ಒಳಗೊಂಡಿರಲಿದೆ. ವೆಬ್ ಸರಣಿಯ ಘೋಷಣೆಯನ್ನಷ್ಟೆ ಇದೀಗ ಮಾಡಲಾಗಿದ್ದು, ಚಿತ್ರೀಕರಣ ಇನ್ನಷ್ಟೆ ಪ್ರಾರಂಭವಾಗಬೇಕಿದೆ. ಅಷ್ಟರಲ್ಲಾಗಲೆ ಸಹರಾ ಸಂಸ್ಥೆಯಿಂದ ವೆಬ್ ಸರಣಿಯ ನಿರ್ಮಾಪಕರಿಗೆ ನೊಟೀಸ್ ಬಂದಿದೆ.

ಇದನ್ನೂ ಓದಿ:ವೆಬ್ ಸರಣಿಯಲ್ಲಿ ನಟಿಸಲಿದ್ದಾರೆ ಶಾರುಖ್ ಪುತ್ರಿ ಸುಹಾನಾ ಖಾನ್

‘ಸ್ಕಾಮ್ 2010: ದಿ ಸುಬ್ರತಾ ರಾಯ್ ಸಾಗಾ’ ಘೋಷಿಸುವ ಮೂಲಕ ಅಗ್ಗದ ಪ್ರಚಾರವನ್ನು ಪಡೆಯಲು ‘ಸ್ಕ್ಯಾಮ್’ ವೆಬ್ ಸರಣಿಯ ನಿರ್ಮಾಪಕರು ಯತ್ನಿಸುತ್ತಿರುವುದು ನಿಂದನೀಯ ಮತ್ತು ತೀವ್ರವಾಗಿ ಖಂಡನೀಯ. ಸಹರಾ ಪರಿವಾರದ ಮಾನಹಾನಿ ಮಾಡುವ ಪ್ರಯತ್ನದಲ್ಲಿ ನಿರತರಾಗಿರವ ಎಲ್ಲಾ ವ್ಯಕ್ತಿಗಳು ಮತ್ತು ಪಕ್ಷಗಳ ಇಂಥಹ ಕೃತ್ಯಗಳನ್ನು ಸಹರಾ ಇಂಡಿಯಾ ಪರಿವಾರ್ ಖಂಡಿಸುತ್ತದೆ ಮತ್ತು ಅವರ ಆಕ್ಷೇಪಾರ್ಹ ನಡವಳಿಕೆಯನ್ನು ವಿರೋಧಿಸುತ್ತದೆ. ಈ ನಿಟ್ಟಿನಲ್ಲಿ ನಿರ್ಮಾಪಕರು, ನಿರ್ದೇಶಕರು ಹಾಗೂ ಅಕ್ರಮ ಎಸಗಿರುವ ಎಲ್ಲರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ನೊಟೀಸ್ ನಲ್ಲಿ ಹೇಳಲಾಗಿದೆ.

ಸೆಬಿ ಮತ್ತು ಸಹಾರಾ ನಡುವಿನ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇನ್ನೂ ಬಾಕಿ ಉಳಿದಿವೆ ಮತ್ತು ಈಗ ನಡೆಯುತ್ತಿರುವ ನ್ಯಾಯ ಪ್ರಕ್ರಿಯೆಗಳ ಮೇಲೆ ಪ್ರಭಾವ ಬೀರುವ ಯಾವುದೇ ಪ್ರಯತ್ನವು ‘ನ್ಯಾಯಾಂಗ ನಿಂದನೆ’ ಎಂದೆನಿಸಿಕೊಳ್ಳುತ್ತದೆ. “ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿಯ ಹಕ್ಕಿನ ಅಡಿಯಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳಲು, ವ್ಯಕ್ತಿಯ ಅಭಿಮಾನ ಮತ್ತು ಖ್ಯಾತಿಯನ್ನು ಹಾಳುಮಾಡಲು ಯಾರಿಗೂ ಅವಕಾಶ ನೀಡಲಾಗುವುದಿಲ್ಲ’ ಎಂದು ಸಹರಾ ಪರಿವಾರ್ ಹೇಳಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!