ಬಿಗ್​ ಬಾಸ್​ನಲ್ಲಿರುವ ಶಮಿತಾ ಶೆಟ್ಟಿಗೆ ಸ್ಪೆಷಲ್​ ಮೆಸೇಜ್ ಕಳಿಸಿದ ಶಿಲ್ಪಾ ಶೆಟ್ಟಿ​; ಈ ವಾರ ಇಬ್ಬರು ಔಟ್​

| Updated By: ಮದನ್​ ಕುಮಾರ್​

Updated on: Aug 22, 2021 | 11:48 PM

ವಾರಾಂತ್ಯದ ಈ ಎಪಿಸೋಡ್​ನಲ್ಲಿ ಕರಣ್​ ಜೋಹರ್​ ಸಿಕ್ಕಾಪಟ್ಟೆ ಖಡಕ್​ ಆಗಿಯೇ ಮಾತನಾಡಿದ್ದಾರೆ. ಕೆಲವು ಸ್ಪರ್ಧಿಗಳಿಗೆ ಅವರು ಕ್ಲಾಸ್​ ತೆಗೆದುಕೊಂಡಿದ್ದಾರೆ.

ಬಿಗ್​ ಬಾಸ್​ನಲ್ಲಿರುವ ಶಮಿತಾ ಶೆಟ್ಟಿಗೆ ಸ್ಪೆಷಲ್​ ಮೆಸೇಜ್ ಕಳಿಸಿದ ಶಿಲ್ಪಾ ಶೆಟ್ಟಿ​; ಈ ವಾರ ಇಬ್ಬರು ಔಟ್​
ಶಿಲ್ಪಾ ಶೆಟ್ಟಿ, ಶಮಿತಾ ಶೆಟ್ಟಿ
Follow us on

ನಟಿ ಶಮಿತಾ ಶೆಟ್ಟಿ ಅವರು ‘ಬಿಗ್​ ಬಾಸ್​ ಓಟಿಟಿ’ ಕಾರ್ಯಕ್ರಮದಲ್ಲಿ ಮಿಂಚುತ್ತಿದ್ದಾರೆ. ಪ್ರತಿ ದಿನದ ಎಪಿಸೋಡ್​ನಲ್ಲಿಯೂ ಅವರು ಹೈಲೈಟ್​ ಆಗುತ್ತಿದ್ದಾರೆ. ಒಂದಿಲ್ಲೊಂದು ವಿಚಾರಕ್ಕೆ ಅವರು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈ ನಡುವೆ ಅವರಿಗೆ ಶಿಲ್ಪಾ ಶೆಟ್ಟಿ ಕಡೆಯಿಂದ ಒಂದು ವಿಶೇಷವಾದ ಸಂದೇಶ ರವಾನೆ ಆಗಿದೆ. ಬಿಗ್​ ಬಾಸ್​ ಓಟಿಟಿಯ 2ನೇ ವಾರದ ವೀಕೆಂಡ್​ ಎಪಿಸೋಡ್​ಗಳು ಮುಗಿದಿವೆ. ಈ ವಾರ ನಿರೂಪಕ ಕರಣ್​ ಜೋಹರ್​ ಅವರು ಇಬ್ಬರನ್ನು ಎಲಿಮಿನೇಟ್​ ಮಾಡಿದ್ದಾರೆ. ಕರಣ್​ ನಾಥ್​ ಮತ್ತು ರಿಧಿಮಾ ಪಂಡಿತ್​ ಔಟ್​ ಆಗಿದ್ದಾರೆ.

ಈ ವಾರ ಬಿಗ್​ ಬಾಸ್​ ಮನೆಯ ಎಲ್ಲ ಸದಸ್ಯರೂ ನಾಮಿನೇಟ್​ ಆಗಿದ್ದರು. ಆದರೆ ಅವರ ಪೈಕಿ ಅತಿ ಕಡಿಮೆ ವೋಟ್​ ಪಡೆದ ರಿಧಿಮಾ ಪಂಡಿತ್​ ಮತ್ತು ಕರಣ್​ ನಾಥ್​ ಅವರ ಬಿಗ್​ ಬಾಸ್​ ಜರ್ನಿ ಅಂತ್ಯವಾಗಿದೆ. ವಾರಾಂತ್ಯದ ಈ ಎಪಿಸೋಡ್​ನಲ್ಲಿ ಕರಣ್​ ಜೋಹರ್​ ಸಿಕ್ಕಾಪಟ್ಟೆ ಖಡಕ್​ ಆಗಿಯೇ ಮಾತನಾಡಿದ್ದಾರೆ. ಕೆಲವು ಸ್ಪರ್ಧಿಗಳಿಗೆ ಅವರು ಕ್ಲಾಸ್​ ತೆಗೆದುಕೊಂಡಿದ್ದಾರೆ. ಇದು ಕೇವಲ ಓಟಿಟಿಯಲ್ಲಿ ಪ್ರಸಾರವಾಗುತ್ತಿರುವ ಶೋ ಆದ್ದರಿಂದ ಅವರು ಕೊಂಚ ಖಾರದ ಮಾತುಗಳನ್ನೇ ಆಡಿದ್ದಾರೆ.

ಇನ್ನು, ಭಾನುವಾರ (ಆ.22) ದೇಶದೆಲ್ಲೆಡೆ ರಕ್ಷಾಬಂಧನ ಹಬ್ಬ ಆಚರಿಸಲಾಯಿತು. ಹಾಗಾಗಿ ಬಿಗ್​ ಬಾಸ್​ ಮನೆಯಲ್ಲಿರುವ ಸ್ಪರ್ಧಿಗಳಿಗೂ ಅವರವರ ಕುಟುಂಬದವರಿಂದ ರಾಖಿ ಹಬ್ಬದ ಶುಭಾಶಯ ತಿಳಿಸುವಂತಹ ಮೆಸೇಜ್​ಗಳನ್ನು ಕಳಿಸಲಾಗಿದೆ. ಶಮಿತಾ ಶೆಟ್ಟಿಗೆ ಅವರ ಅಕ್ಕ ಶಿಲ್ಪಾ ಶೆಟ್ಟಿ ಕಡೆಯಿಂದ ಸ್ಪೆಷಲ್​ ಮೆಸೇಜ್​ ಬಂದಿದೆ. ‘ನಮ್ಮಿಬ್ಬರಿಗೆ ಸಹೋದರರು ಇಲ್ಲದಿದ್ದರೂ ನಾವು ಪರಸ್ಪರ ಬೆಂಬಲವಾಗಿ ನಿಂತುಕೊಂಡಿದ್ದೇವೆ. ಬಿಗ್​ ಬಾಸ್​ ಮನೆಯಲ್ಲಿ ನೀನು ಗಟ್ಟಿಯಾಗಿ ಇರಬೇಕು’ ಎಂದು ತಂಗಿಗೆ ಶಿಲ್ಪಾ ಶೆಟ್ಟಿ ಧೈರ್ಯ ತುಂಬಿದ್ದಾರೆ.

ನೋವು ತೋಡಿಕೊಂಡಿದ್ದ ಶಮಿತಾ:

ತಾವು ಇಂದಿಗೂ ಶಿಲ್ಪಾ ಶೆಟ್ಟಿಯ ನೆರಳಿನಲ್ಲಿ ಬದುಕುತ್ತಿರುವುದಕ್ಕೆ ಶಮಿತಾ ಶೆಟ್ಟಿಗೆ ಸಖತ್​ ನೋವಿದೆ. ಮೊದಲ ವೀಕೆಂಡ್​ ಎಪಿಸೋಡ್​ನಲ್ಲಿ ಅವರು ಆ ನೋವನ್ನು ತೋಡಿಕೊಂಡಿದ್ದರು. ಶಿಲ್ಪಾ ಶೆಟ್ಟಿಯ ತಂಗಿ ಎಂದೇ ಜನರು ಅವರನ್ನು ಗುರುತಿಸುತ್ತಾರೆ. ಅದರಿಂದ ಹೊರಬರಬೇಕು ಎಂದು ಶಮಿತಾ ಸಿಕ್ಕಾಪಟ್ಟೆ ಕಷ್ಟ ಪಟ್ಟಿದ್ದಾರೆ. ಈಗ ತಮ್ಮತನವನ್ನು ತೋರಿಸಲು ಬಿಗ್​ ಬಾಸ್​ ಮನೆಗೆ ಕಾಲಿಟ್ಟಿರುವುದಾಗಿ ಅವರು ಹೇಳಿದ್ದಾರೆ. ಶಿಲ್ಪಾ ಶೆಟ್ಟಿ ನೆರಳಿನಲ್ಲಿ ತಾವು ಇರುವುದು ಕಷ್ಟಕರವೇ ಹೌದಾದರೂ ಅದು ತಮ್ಮನ್ನು ರಕ್ಷಿಸುತ್ತಿದೆ ಎಂಬ ಸತ್ಯವನ್ನೂ ಶಮಿತಾ ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ತಾವು ಲಕ್ಕಿ ಎಂದೂ ಅವರು ಹೇಳಿದ್ದಾರೆ. ಶಮಿತಾ ಚೆನ್ನಾಗಿ ಆಟ ಆಡುತ್ತಿರುವುದಕ್ಕೆ ಕರಣ್​ ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ:

ಅಕ್ಷರಾ- ಜೀಶಾನ್ ನಡುವೆ ಕಿತ್ತಾಟ; ಪಕ್ಕದಲ್ಲೇ ಇದ್ದರೂ ತಲೆಕೆಡಿಸಿಕೊಳ್ಳದೇ ರೊಟ್ಟಿ ತಟ್ಟಿದ ಶಮಿತಾ ಶೆಟ್ಟಿ

‘ಗಂಡ ಸತ್ತ ನಂತರದಲ್ಲಿ ಮಹಿಳೆ ಹೋರಾಡಲೇಬೇಕು’; ಆವೇಶದ ಮಾತುಗಳನ್ನಾಡಿದ ಶಿಲ್ಪಾ ಶೆಟ್ಟಿ