AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಚ್ಚಿನ ನಿರ್ದೇಶಕನ ಬಗ್ಗೆ ಪ್ರಭಾಸ್ ಭರಪೂರ ಮೆಚ್ಚುಗೆ: ಯಾರು ಆ ನಿರ್ದೇಶಕ?

Prabhas movie: ಪ್ರಭಾಸ್​ ನಿರ್ದೇಶಕ ಮತ್ತು ನಿರ್ಮಾಪಕರ ನೆಚ್ಚಿನ ನಟ, ಅವರೊಟ್ಟಿಗೆ ಕೆಲಸ ಮಾಡಲು ಹಲವು ನಿರ್ದೇಶಕರು ಕಾತರದಿಂದ ಕಾಯುತ್ತಿದ್ದಾರೆ. ಎಲ್ಲರನ್ನೂ ಪ್ರೀತಿಯಿಂದ ಡಾರ್ಲಿಂಗ್ ಎಂದು ಕರೆಯುವ ರಾಜಮೌಳಿ, ಇದೀಗ ತಮ್ಮ ನೆಚ್ಚಿನ ನಿರ್ದೇಶಕನ ಬಗ್ಗೆ ಮಾತನಾಡಿದ್ದಾರೆ. ಮಾತ್ರವಲ್ಲದೆ ತಮಗೆ ಯಾವ ರೀತಿಯ ಸಿನಿಮಾಗಳು ಹೆಚ್ಚು ಇಷ್ಟ ಎಂಬುದನ್ನು ಸಹ ಅವರು ಹೇಳಿದ್ದಾರೆ.

ನೆಚ್ಚಿನ ನಿರ್ದೇಶಕನ ಬಗ್ಗೆ ಪ್ರಭಾಸ್ ಭರಪೂರ ಮೆಚ್ಚುಗೆ: ಯಾರು ಆ ನಿರ್ದೇಶಕ?
Prabhas1
ಮಂಜುನಾಥ ಸಿ.
|

Updated on: Feb 21, 2026 | 9:53 AM

Share

ಪ್ರಭಾಸ್(Prabhas), ನಿರ್ದೇಶಕರುಗಳ ನೆಚ್ಚಿನ ನಟ. ಭಾರತದ ಹಲವು ಟಾಪ್ ನಿರ್ದೇಶಕರುಗಳು ಸಹ ಪ್ರಭಾಸ್ ಜೊತೆಗೆ ಕೆಲಸ ಮಾಡಲು ಕಾತರರಾಗಿ ಕಾಯುತ್ತಿದ್ದಾರೆ. ರಾಜಮೌಳಿ ಅಂಥಹಾ ಟಾಪ್ ನಿರ್ದೇಶಕರಿಗೂ ಪ್ರಭಾಸ್ ಮೇಲೆ ವಿಪರೀತ ಪ್ರೀತಿ, ಪ್ರಭಾಸ್ ಜೊತೆಗೆ ಮೂರು-ಮೂರು ಸಿನಿಮಾಗಳನ್ನು ರಾಜಮೌಳಿ ಮಾತನಾಡಿದ್ದಾರೆ. ಎಲ್ಲರನ್ನೂ ಪ್ರೀತಿಯಿಂದ ಡಾರ್ಲಿಂಗ್ ಎಂದು ಕರೆಯುವ ರಾಜಮೌಳಿ, ಇದೀಗ ತಮ್ಮ ನೆಚ್ಚಿನ ನಿರ್ದೇಶಕನ ಬಗ್ಗೆ ಮಾತನಾಡಿದ್ದಾರೆ. ಮಾತ್ರವಲ್ಲದೆ ತಮಗೆ ಯಾವ ರೀತಿಯ ಸಿನಿಮಾಗಳು ಹೆಚ್ಚು ಇಷ್ಟ ಎಂಬುದನ್ನು ಸಹ ಅವರು ಹೇಳಿದ್ದಾರೆ.

ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್, ಆಕ್ಷನ್ ಮತ್ತು ಮಾಸ್ ಸಿನಿಮಾಗಳ ಸಂಕೇತವೇ ಆಗಿಬಿಟ್ಟಿದ್ದಾರೆ. ‘ಬಾಹುಬಲಿ’ಯಿಂದ ಹಿಡಿದು ಇತ್ತೀಚಿನ ‘ಸಲಾರ್’, ‘ರಾಜಾಸಾಬ್’ ವರೆಗೆ ಪ್ರಭಾಸ್ ಬೆಳ್ಳಿತೆರೆಯ ಮೇಲೆ ಅಬ್ಬರಿಸಿದ್ದೇ ಹೆಚ್ಚು. ಆಕ್ಷನ್ ಹೀರೋ ಎನಿಸಿಕೊಂಡಿರುವ ಪ್ರಭಾಸ್​​ಗೆ ವೈಯಕ್ತಿಕವಾಗಿ ಯಾವ ರೀತಿಯ ಸಿನಿಮಾಗಳು ಇಷ್ಟ? ಅವರ ಫೇವರೆಟ್ ನಿರ್ದೇಶಕರು ಯಾರು? ಈ ಬಗ್ಗೆ ಪ್ರಭಾಸ್ ಇತ್ತೀಚೆಗೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ತೆಲುಗಿನ ‘ಕಪಲ್ ಫ್ರೆಂಡ್ಲಿ’ ಹೆಸರಿನ ಸಿನಿಮಾದ ಪ್ರಚಾರಕ್ಕಾಗಿ ನೀಡಿರುವ ವಿಶೇಷ ಸಂದರ್ಶನದಲ್ಲಿ ಈ ವಿಷಯಗಳನ್ನು ಪ್ರಭಾಸ್ ಹಂಚಿಕೊಂಡಿದ್ದಾರೆ.

ಪ್ರಭಾಸ್ ಸದ್ಯ ಸರಣಿ ಆಕ್ಷನ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದರೂ, ಅವರ ಮನಸ್ಸಿಗೆ ಹತ್ತಿರವಾದದ್ದು ಮಾತ್ರ ಪ್ರೇಮಕಥೆಗಳಂತೆ. ‘ನನಗೆ ರೊಮ್ಯಾಂಟಿಕ್ ಲವ್ ಸ್ಟೋರಿಗಳೆಂದರೆ ಬಹಳ ಇಷ್ಟ’ ಎಂದು ಪ್ರಭಾಸ್ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಲೆಜೆಂಡರಿ ನಿರ್ದೇಶಕ ಮಣಿರತ್ನಂ ಅವರ ‘ಗೀತಾಂಜಲಿ’ ಸಿನಿಮಾ ತಮ್ಮ ಆಲ್‌ಟೈಮ್ ಫೇವರೆಟ್ ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ. ತೆರೆಯ ಮೇಲೆ ಮಚ್ಚು, ಗನ್ನು ಹಿಡಿದು ಎದುರಾಳಿಗಳ ರುಂಡ ಕತ್ತರಿಸುವ ಪ್ರಭಾಸ್ ಒಳಗೊಬ್ಬ ಮೃದು ಸ್ವಭಾವದ ರೊಮ್ಯಾಂಟಿಕ್ ಹೀರೋ ಇದ್ದಾನೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಇದನ್ನೂ ಓದಿ:ರಿಷಬ್ ಶೆಟ್ಟಿಗಾಗಿ ಪ್ರಭಾಸ್ ಸಿನಿಮಾ ಕೈಬಿಟ್ಟರೆ ಯುವ ನಿರ್ದೇಶಕ

ಇನ್ನು ಪ್ರಭಾಸ್​​ ತಮ್ಮ ಇಷ್ಟದ ನಿರ್ದೇಶಕರುಗಳಲ್ಲಿ ಒಬ್ಬ ನಿರ್ದೇಶಕರ ಬಗ್ಗೆ ವಿಶೇಷವಾಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ ಅದುವೇ ನಿರ್ದೇಶಕ ಪುರಿ ಜಗನ್ನಾಥ್. ಅವರ ಬಗ್ಗೆ ಪ್ರಭಾಸ್ ವಿಶೇಷ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ‘ಪುರಿ ಜಗನ್ನಾಥ್ ಅವರಂತೆ ಹೀರೊ ಪಾತ್ರವನ್ನು ಕಲ್ಪಿಸಿಕೊಳ್ಳುವ ಮತ್ತು ಬರೆಯುವ ನಿರ್ದೇಶಕರು ಭಾರತೀಯ ಚಿತ್ರರಂಗದಲ್ಲೇ ವಿರಳ. ನನ್ನ ವೃತ್ತಿಜೀವನದಲ್ಲಿ ‘ಬುಜ್ಜಿಗಾಡು’ ಮತ್ತು ‘ಏಕ್ ನಿರಂಜನ್’ ಚಿತ್ರಗಳಲ್ಲಿನ ಪಾತ್ರಗಳು ನನಗೆ ಬಹಳ ಇಷ್ಟ, ‘ಬುಜ್ಜಿಗಾಡು’ ನಾಯಕನ ಪಾತ್ರ ಕೇಳಿದಾಗಲಂತೂ ನಾನು ಥ್ರಿಲ್ ಆಗಿಬಿಟ್ಟಿದ್ದೆ. ಪುರಿ ಜಗನ್ನಾಥ್ ಅವರಂತೆ ಹೀರೋಗಳ ಪಾತ್ರವನ್ನು ಬರೆಯುವವರು ಯಾರೂ ಇಲ್ಲ, ಅದು ಅವರಿಗೆ ವಿಶೇಷವಾಗಿ ಒಲಿದಿರುವ ಕಲೆ ಎಂದು ಅವರು ಹೇಳಿದ್ದಾರೆ. ಪುರಿ ಅವರ ‘ಬುಜ್ಜಿಗಾಡು’ ಪಾತ್ರವನ್ನು ಮಾಡುವಾಗ ಆರಂಭದಲ್ಲಿ ತಮಗೆ ಭಯವಿತ್ತು, ಆದರೆ ಆ ಪಾತ್ರದ ಮ್ಯಾನರಿಸಂಗಳು ಅದ್ಭುತವಾಗಿದ್ದವು ಎಂದು ಪ್ರಭಾಸ್ ನೆನಪಿಸಿಕೊಂಡಿದ್ದಾರೆ.

ಸದ್ಯ ಪ್ರಭಾಸ್ ಹನು ರಾಘವಪುಡಿ ನಿರ್ದೇಶನದ ‘ಫೌಜಿ’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಯುದ್ಧದ ಹಿನ್ನೆಲೆಯುಳ್ಳ ಒಂದು ಸುಂದರ ಪ್ರೇಮಕಥೆಯಾಗಿದ್ದು, ಪ್ರಭಾಸ್ ಇದರಲ್ಲಿ ಸೈನಿಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ಸಂದೀಪ್ ರೆಡ್ಡಿ ವಂಗಾ ಅವರ ‘ಸ್ಪಿರಿಟ್’ ಚಿತ್ರದ ಮೇಲೆಯೂ ದೊಡ್ಡ ನಿರೀಕ್ಷೆಯಿದೆ. ಅದಾದ ಬಳಿಕ ‘ಕಲ್ಕಿ 2’, ‘ಸಲಾರ್ 2’ ಸಿನಿಮಾಗಳಲ್ಲಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚಪ್ಪಾಳೆ ತಟ್ಟುವುದು ಯಾಕೆ? ಇದರ ಹಿಂದಿನ ರಹಸ್ಯವೇನು?
ಚಪ್ಪಾಳೆ ತಟ್ಟುವುದು ಯಾಕೆ? ಇದರ ಹಿಂದಿನ ರಹಸ್ಯವೇನು?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಲ್ಲಿ ಮನ್ನಣೆ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಲ್ಲಿ ಮನ್ನಣೆ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು