AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Prabhas: ಆದಿಪುರುಷ್​ಗಾಗಿ ಬಾಡಿ ಬೆಳೆಸಲು ಸ್ಟಿರಾಯ್ಡ್​ ಬಳಸಿದ್ದಾರಾ ಪ್ರಭಾಸ್​? ಸಹನಟ ತೆರೆದಿಟ್ಟ ಸತ್ಯ ಇಲ್ಲಿದೆ

Adipurush: ಬಾಡಿ ಬಿಲ್ಡ್​ ಮಾಡಲು ಪ್ರಭಾಸ್​ ಯಾವ ಮಾರ್ಗ ಅನುಸರಿಸುತ್ತಿದ್ದಾರೆ? ಡಯೆಟ್​ ಯಾವ ರೀತಿ ಇದೆ ಎಂಬ ಬಗ್ಗೆ ಕೌತುಕ ಮನೆ ಮಾಡಿದೆ. ಈ ಬಗ್ಗೆ ಆದಿಪುರುಷ್​ ಸಿನಿಮಾದ ಇನ್ನೋರ್ವ ನಟ ಸನ್ನಿ​ ಸಿಂಗ್​ ಮಾತನಾಡಿದ್ದಾರೆ.

Prabhas: ಆದಿಪುರುಷ್​ಗಾಗಿ ಬಾಡಿ ಬೆಳೆಸಲು ಸ್ಟಿರಾಯ್ಡ್​ ಬಳಸಿದ್ದಾರಾ ಪ್ರಭಾಸ್​? ಸಹನಟ ತೆರೆದಿಟ್ಟ ಸತ್ಯ ಇಲ್ಲಿದೆ
ಪ್ರಭಾಸ್​ - ಸನ್ನಿ ಸಿಂಗ್​
ಮದನ್​ ಕುಮಾರ್​
|

Updated on: May 22, 2021 | 8:15 AM

Share

ಬಾಹುಬಲಿ ಸಿನಿಮಾಗಾಗಿ ಹಲವು ವರ್ಷಗಳನ್ನು ಮೀಸಲಿಟ್ಟಿದ್ದ ಟಾಲಿವುಡ್ ನಟ​ ಪ್ರಭಾಸ್​ ಅವರು ಈಗ ಬೇಗ ಬೇಗ ಸಿನಿಮಾ ಮಾಡುತ್ತಿದ್ದಾರೆ. ಬ್ಯಾಕ್​ ಟು ಬ್ಯಾಕ್ ಚಿತ್ರಗಳನ್ನು ಒಪ್ಪಿಕೊಂಡು ಅವುಗಳ ಶೂಟಿಂಗ್​ ಮುಗಿಸುತ್ತಿದ್ದಾರೆ. ಒಂದೊಂದು ಸಿನಿಮಾದಲ್ಲಿ ಅವರಿಗೆ ಒಂದೊಂದು ರೀತಿಯ ಗೆಟಪ್​ಗಳಿವೆ. ಸದ್ಯ ಪ್ರಭಾಸ್​ ಕೈಯಲ್ಲಿ ರಾಧೆ ಶ್ಯಾಮ್​, ಆದಿಪುರುಷ್​, ಸಲಾರ್​ ಮುಂತಾದ ಸಿನಿಮಾಗಳಿವೆ. ಈ ಎಲ್ಲ ಪ್ರಾಜೆಕ್ಟ್​ಗಳ ಮೇಲೂ ಅಭಿಮಾನಿಗಳು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದಿಪುರುಷ್​ ಚಿತ್ರದಲ್ಲಿ ಪ್ರಭಾಸ್​ ಅವರು ರಾಮನ ಪಾತ್ರ ಮಾಡುತ್ತಿರುವುದು ವಿಶೇಷ. ಅದಕ್ಕಾಗಿ ಅವರು ಭರ್ಜರಿಯಾಗಿ ಬಾಡಿ ಬಿಲ್ಡ್​ ಮಾಡುತ್ತಿದ್ದಾರೆ.

ಮೊದಲೇ ಹೇಳಿದಂತೆ ಪ್ರಭಾಸ್​ ನಟನೆಯ ಎಲ್ಲ ಸಿನಿಮಾಗಳ ಕೆಲಸಗಳು ವೇಗವಾಗಿ ಸಾಗುತ್ತಿವೆ. ಎಲ್ಲ ಪಾತ್ರಗಳಿಗಾಗಿಯೂ ಅವರು ಬೇಗ ಬೇಗ ಸಿದ್ಧರಾಗುತ್ತಿದ್ದಾರೆ. ಆದಿಪುರುಷ್​ ಚಿತ್ರಕ್ಕಾಗಿ ಅವರು ಕಟ್ಟುಮಸ್ತಾಗಿ ಬಾಡಿ ಬೆಳೆಸುತ್ತಿದ್ದು, ಆ ಬಗ್ಗೆಯೂ ಅಭಿಮಾನಿಗಳಿಗೆ ಕುತೂಹಲ ಇದೆ. ಬಾಡಿ ಬಿಲ್ಡ್​ ಮಾಡಲು ಪ್ರಭಾಸ್​ ಯಾವ ಮಾರ್ಗ ಅನುಸರಿಸುತ್ತಿದ್ದಾರೆ? ಡಯೆಟ್​ ಯಾವ ರೀತಿ ಇದೆ ಎಂಬ ಬಗ್ಗೆಯೂ ಕೌತುಕ ಮನೆ ಮಾಡಿದೆ. ಈ ಬಗ್ಗೆ ಈ ಸಿನಿಮಾದ ಇನ್ನೋರ್ವ ನಟ ಸನ್ನಿ​ ಸಿಂಗ್​ ಮಾತನಾಡಿದ್ದಾರೆ.

‘ಈ ಸಿನಿಮಾಗಾಗಿ ನಾವು ಕಠಿಣ ಡಯೆಟ್​ ಮಾಡುತ್ತಿದ್ದೇವೆ. ಶೇ.50 ಕಾರ್ಬ್ಸ್​ ಹಾಗೂ ಶೇ.50 ಪ್ರೋಟೀನ್​ ಸೇವಿಸುತ್ತಿದ್ದೇವೆ. ಪ್ರತಿ ದಿನ 15 ಅಥವಾ 10 ಮೊಟ್ಟೆ ತಿನ್ನುತ್ತಿದ್ದೇನೆ. ಈ ಚಿತ್ರದಲ್ಲಿ ನಾನು ಮತ್ತು ಪ್ರಭಾಸ್​ ಕಟ್ಟುಮಸ್ತಾಗಿ ಕಾಣಬೇಕಿದೆ. ಪಾತ್ರಕ್ಕೆ ಅದು ಅನಿವಾರ್ಯವಾಗಿದೆ. ಯಾವುದೇ ಸ್ಟಿರಾಯ್ಡ್​ ಅಥವಾ ಸಪ್ಲಿಮೆಂಟ್​ಗಳನ್ನು ನಾವು ಬಳಸುತ್ತಿಲ್ಲ. ತುಂಬ ನ್ಯಾಚುರಲ್​ ಆಗಿ ಬಾಡಿ ಬೆಳೆಸುತ್ತಿದ್ದೇವೆ’ ಎಂದು ಸನ್ನಿ ಸಿಂಗ್​ ಹೇಳಿದ್ದಾರೆ. ಈ ಚಿತ್ರದಲ್ಲಿ ಅವರು ಲಕ್ಷ್ಮಣನ ಪಾತ್ರ ಮಾಡುತ್ತಿದ್ದಾರೆ.

‘ತಾನಾಜಿ: ದಿ ಅನ್​ಸಂಗ್​ ವಾರಿಯರ್​’ ಸಿನಿಮಾ ಮೂಲಕ ಭಾರಿ ಯಶಸ್ಸು ಪಡೆದ ನಿರ್ದೇಶಕ ಓಂ ರಾವುತ್​ ಅವರು ‘ಆದಿಪುರುಷ್​’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ರಾಮನಾಗಿ ಪ್ರಭಾಸ್​ ನಟಿಸಿದರೆ, ಸೀತೆಯಾಗಿ ಕೃತಿ ಸನೋನ್​ ಕಾಣಿಸಿಕೊಳ್ಳಲಿದ್ದಾರೆ. ರಾವಣನಾಗಿ ಸೈಫ್​ ಅಲಿ ಖಾನ್​ ಅಭಿನಯಿಸುತ್ತಿದ್ದಾರೆ. ಇನ್ನೂ ಹಲವು ಕಲಾವಿದರ ಹೆಸರು ಕೇಳಿಬರುತ್ತಿದೆ. ಆದರೆ ಆ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಇದೊಂದು ಪೌರಾಣಿಕ ಸಿನಿಮಾ ಆಗಿರುವುದರಿಂದ ಪ್ರಭಾಸ್​ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸದ್ಯ ಲಾಕ್​ಡೌನ್​ನಿಂದಾಗಿ ಸಿನಿಮಾದ ಚಿತ್ರೀಕರಣ ಸ್ಥಗಿತಗೊಂಡಿದೆ.

ಇದನ್ನೂ ಓದಿ:

ಬಯಲಾಯ್ತು ಪ್ರಭಾಸ್​-ಪ್ರಶಾಂತ್​ ನೀಲ್​ ‘ಸಲಾರ್’ ಚಿತ್ರದ ಇನ್ನೊಂದು ಸೀಕ್ರೆಟ್​

ಬಿಗ್ ಬಾಸ್​ ಸ್ಪರ್ಧಿಗೆ ಖ್ಯಾತ ತೆಲುಗು ನಟ ಪ್ರಭಾಸ್​ ಜತೆ ನಟಿಸೋ ಅವಕಾಶ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ