AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಶಮಂತ್​ಗೆ ಲೈನ್​ ಹೊಡಿತಿದೀನಿ, ಆದರೆ…; ಮನದಾಳದ ಮಾತು ಹೇಳಿಕೊಂಡ ಪ್ರಿಯಾಂಕಾ

ಈಗೆಲ್ಲ ಲೈನ್​ ವರ್ಕೌಟ್​ ಆಗಲ್ಲ. ಇಂದಿನ ಕಾಲದಲ್ಲಿ ಲವ್ ಯೂ ಅಂತ ಹೇಳದೆ ಪ್ರೀತಿ ಮಾಡುತ್ತಾರೆ. ಮನಸ್ಸಿನ ಮೂಲಕವೇ ಮಾತನಾಡಿಕೊಳ್ಳುತ್ತಾರೆ ಎಂದು ಪ್ರಿಯಾಂಕಾ ಹೇಳಿದರು.

ನಾನು ಶಮಂತ್​ಗೆ ಲೈನ್​ ಹೊಡಿತಿದೀನಿ, ಆದರೆ...; ಮನದಾಳದ ಮಾತು ಹೇಳಿಕೊಂಡ ಪ್ರಿಯಾಂಕಾ
ಶಮಂತ್​-ಪ್ರಿಯಾಂಕಾ
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​|

Updated on: May 08, 2021 | 7:20 AM

Share

ಬಿಗ್​ ಬಾಸ್​ ಮನೆಯಲ್ಲಿ ಕೆಲವೊಂದು ಲವ್​​ಸ್ಟೋರಿಗಳು ಅದಾಗೇ ಹುಟ್ಟಿಕೊಳ್ಳುತ್ತವೆ. ಇನ್ನೂ ಕೆಲವು ಲವ್​ಸ್ಟೋರಿಗಳನ್ನು ಕೆಲವರು ಹುಟ್ಟುಹಾಕಲು ಪ್ರಯತ್ನಿಸುತ್ತಾರೆ. ಈಗ ಬಿಗ್​ ಬಾಸ್​ ಮನೆಯಲ್ಲೂ ಅದೇ ನಡೆಯುತ್ತಿದೆ. ಶಮಂತ್​ ಬ್ರೋ ಗೌಡ ಹಾಗೂ ಪ್ರಿಯಾಂಕಾ ತಿಮ್ಮೇಶ್​ ಅವರನ್ನು ಜೋಡಿ ಮಾಡಲು ಚಕ್ರವರ್ತಿ ಚಂದ್ರಚೂಡ್​ ಪ್ರಯತ್ನಿಸಿದ್ದಾರೆ. ಈ ವೇಳೆ ಪ್ರಿಯಾಂಕಾ ತಮ್ಮ ಮನಸ್ಸಿನಲ್ಲಿರುವುದನ್ನು ಹೇಳಿಕೊಂಡರು.

ಬಿಗ್​ ಬಾಸ್​ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್​ ಹಾಗೂ ಪ್ರಿಯಾಂಕಾ ತಿಮ್ಮೇಶ್​ ಮಾತನಾಡುತ್ತಿದ್ದರು. ‘ಲೈನ್​ ಹೊಡ್ಯೋದು ಅಂದರೆ ಏನು’ ಎಂದು ಪ್ರಿಯಾಂಕಾ ಬಳಿ ಚಕ್ರವರ್ತಿ ಕೇಳಿದ್ದಾರೆ. ‘ಲೈನ್​ ಹೊಡೆಯೋದು ಅಂದ್ರೆ ನಾನು ಶಮಂತ್​ಗೆ ಹೊಡಿತೀನಲ್ಲ ಅದು. ಅವನು ಏನೋ ಮಾಡ್ತಾ ಇರುತ್ತಾನೆ. ನಾನು ಏನೋ ಮಾಡ್ತಾ ಇರುತ್ತೇನೆ. ಇಬ್ಬರೂ ಒಮ್ಮೆ ನೋಡ್ತೀವಿ. ಆಗ ನಾನು ನಗುತ್ತೇನೆ. ನನ್ನ ಪ್ರಕಾರ ಅದು ಲೈನ್​ ಹೊಡ್ಯೋದು’ ಎಂದು ಪ್ರಿಯಾಂಕಾ ವಿವರಣೆ ನೀಡಿದರು.

ಈ ಮಾತಿಗೆ ಚಕ್ರವರ್ತಿ ಅಚ್ಚರಿ ವ್ಯಕ್ತಪಡಿಸಿದರು. ಅಲ್ಲದೆ, ‘ಶಮಂತ್ ಒಳ್ಳೆಯ ಹುಡುಗ, ನೀನು ಆತನಿಗೆ ಲೈನ್​ ಹೊಡೆಯಬಹುದು’ ಎಂದರು. ಈ ವೇಳೆ ಪ್ರಿಯಾಂಕಾ ಮನದಾಳದ ಮಾತನ್ನು ಹೇಳಿಕೊಂಡರು. ನನಗೆ ಅವನು ಸೂಟ್​ ಆಗಲ್ಲ. ನನಗೆ ಇನ್ನೂ ಚೆನ್ನಾಗಿರೋ ಹುಡುಗಬೇಕು ಎಂದು ಮಾತು ಆರಂಭಿಸಿದರು.

‘ಈಗೆಲ್ಲ ಲೈನ್​ ವರ್ಕೌಟ್​ ಆಗಲ್ಲ. ಇಂದಿನ ಕಾಲದಲ್ಲಿ ಲವ್ ಯೂ ಅಂತ ಹೇಳದೆ ಪ್ರೀತಿ ಮಾಡುತ್ತಾರೆ. ಮನಸ್ಸಿನ ಮೂಲಕವೇ ಮಾತನಾಡಿಕೊಳ್ಳುತ್ತಾರೆ. ಇಷ್ಟ ಆದರೆ ಲವ್​ ಯೂ ಹೇಳೋದೇಕೆ? ಮಾತನಾಡದೆಯೂ ಇಬ್ಬರಿಗೂ ಗೊತ್ತಾಗುತ್ತದೆ. ನಡೆದುಕೊಳ್ಳುವ ರೀತಿಯಲ್ಲೇ ಗೊತ್ತಾಗುತ್ತದೆ,’ ಎಂದರು ಪ್ರಿಯಾಂಕಾ.

ಈ ವೇಳೆ ಪ್ರೀತಿ ಎಂದರೇನು ಎಂದು ಚಕ್ರರ್ತಿ ಪ್ರಶ್ನೆ ಎಸೆದರು. ಇದಕ್ಕೆ ಉತ್ತರಿಸಿದ ಪ್ರಿಯಾಂಕಾ ‘ಪ್ರೀತಿ ಎಂದರೆ, ಲವ್, ನಂಬಿಕೆ, ವಾತ್ಸಲ್ಯ, ವಿಶ್ವಾಸ, ಮಮತೆ. 21ರಿಂದ 26ವರೆಗೆ ಆಗೋದು ಮಾತ್ರ ನಿಜವಾದ ಲವ್’​ ಎಂದರು.

ಚಕ್ರವರ್ತಿ ಚಂದ್ರಚೂಡ್​ ಸುತ್ತಿ-ಬಳಸಿ ಶಮಂತ್​ ವಿಷಯಕ್ಕೆ ಪ್ರೀತಿಯನ್ನು ಎಳೆದುಕೊಂಡು ಹೋಗುತ್ತಿದ್ದರು. ಇದು ಪ್ರಿಯಾಂಕಾಗೆ ಅಸಮಾಧಾನ ತರಿಸಿದೆ. ನೀವು ಯಾವುದಾದರೂ ವಿಚಾರ ಹೇಳುವಾಗ ಅದನ್ನು ನಾನು ನೆಗ್ಲೆಟ್​ ಮಾಡುತ್ತೇನೆ ಎಂದರೆ ಅದು ನನಗೆ ಇಷ್ಟವಿಲ್ಲ ಎಂದರ್ಥ ಎಂದು ಕಠಿಣವಾಗಿಯೇ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ನಾನೇ ಮುಂದೆ ನಿಂತು ಮದುವೆ ಮಾಡಿಸುತ್ತೇನೆ; ಬಿಗ್​ ಬಾಸ್​ ಮನೆಯಲ್ಲಿ ಶಮಂತ್​-ಪ್ರಿಯಾಂಕಾ ಪ್ರೇಮಕಥೆ ಆರಂಭ?

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!