AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಶಮಂತ್​ಗೆ ಲೈನ್​ ಹೊಡಿತಿದೀನಿ, ಆದರೆ…; ಮನದಾಳದ ಮಾತು ಹೇಳಿಕೊಂಡ ಪ್ರಿಯಾಂಕಾ

ಈಗೆಲ್ಲ ಲೈನ್​ ವರ್ಕೌಟ್​ ಆಗಲ್ಲ. ಇಂದಿನ ಕಾಲದಲ್ಲಿ ಲವ್ ಯೂ ಅಂತ ಹೇಳದೆ ಪ್ರೀತಿ ಮಾಡುತ್ತಾರೆ. ಮನಸ್ಸಿನ ಮೂಲಕವೇ ಮಾತನಾಡಿಕೊಳ್ಳುತ್ತಾರೆ ಎಂದು ಪ್ರಿಯಾಂಕಾ ಹೇಳಿದರು.

ನಾನು ಶಮಂತ್​ಗೆ ಲೈನ್​ ಹೊಡಿತಿದೀನಿ, ಆದರೆ...; ಮನದಾಳದ ಮಾತು ಹೇಳಿಕೊಂಡ ಪ್ರಿಯಾಂಕಾ
ಶಮಂತ್​-ಪ್ರಿಯಾಂಕಾ
ರಾಜೇಶ್ ದುಗ್ಗುಮನೆ
| Edited By: |

Updated on: May 08, 2021 | 7:20 AM

Share

ಬಿಗ್​ ಬಾಸ್​ ಮನೆಯಲ್ಲಿ ಕೆಲವೊಂದು ಲವ್​​ಸ್ಟೋರಿಗಳು ಅದಾಗೇ ಹುಟ್ಟಿಕೊಳ್ಳುತ್ತವೆ. ಇನ್ನೂ ಕೆಲವು ಲವ್​ಸ್ಟೋರಿಗಳನ್ನು ಕೆಲವರು ಹುಟ್ಟುಹಾಕಲು ಪ್ರಯತ್ನಿಸುತ್ತಾರೆ. ಈಗ ಬಿಗ್​ ಬಾಸ್​ ಮನೆಯಲ್ಲೂ ಅದೇ ನಡೆಯುತ್ತಿದೆ. ಶಮಂತ್​ ಬ್ರೋ ಗೌಡ ಹಾಗೂ ಪ್ರಿಯಾಂಕಾ ತಿಮ್ಮೇಶ್​ ಅವರನ್ನು ಜೋಡಿ ಮಾಡಲು ಚಕ್ರವರ್ತಿ ಚಂದ್ರಚೂಡ್​ ಪ್ರಯತ್ನಿಸಿದ್ದಾರೆ. ಈ ವೇಳೆ ಪ್ರಿಯಾಂಕಾ ತಮ್ಮ ಮನಸ್ಸಿನಲ್ಲಿರುವುದನ್ನು ಹೇಳಿಕೊಂಡರು.

ಬಿಗ್​ ಬಾಸ್​ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್​ ಹಾಗೂ ಪ್ರಿಯಾಂಕಾ ತಿಮ್ಮೇಶ್​ ಮಾತನಾಡುತ್ತಿದ್ದರು. ‘ಲೈನ್​ ಹೊಡ್ಯೋದು ಅಂದರೆ ಏನು’ ಎಂದು ಪ್ರಿಯಾಂಕಾ ಬಳಿ ಚಕ್ರವರ್ತಿ ಕೇಳಿದ್ದಾರೆ. ‘ಲೈನ್​ ಹೊಡೆಯೋದು ಅಂದ್ರೆ ನಾನು ಶಮಂತ್​ಗೆ ಹೊಡಿತೀನಲ್ಲ ಅದು. ಅವನು ಏನೋ ಮಾಡ್ತಾ ಇರುತ್ತಾನೆ. ನಾನು ಏನೋ ಮಾಡ್ತಾ ಇರುತ್ತೇನೆ. ಇಬ್ಬರೂ ಒಮ್ಮೆ ನೋಡ್ತೀವಿ. ಆಗ ನಾನು ನಗುತ್ತೇನೆ. ನನ್ನ ಪ್ರಕಾರ ಅದು ಲೈನ್​ ಹೊಡ್ಯೋದು’ ಎಂದು ಪ್ರಿಯಾಂಕಾ ವಿವರಣೆ ನೀಡಿದರು.

ಈ ಮಾತಿಗೆ ಚಕ್ರವರ್ತಿ ಅಚ್ಚರಿ ವ್ಯಕ್ತಪಡಿಸಿದರು. ಅಲ್ಲದೆ, ‘ಶಮಂತ್ ಒಳ್ಳೆಯ ಹುಡುಗ, ನೀನು ಆತನಿಗೆ ಲೈನ್​ ಹೊಡೆಯಬಹುದು’ ಎಂದರು. ಈ ವೇಳೆ ಪ್ರಿಯಾಂಕಾ ಮನದಾಳದ ಮಾತನ್ನು ಹೇಳಿಕೊಂಡರು. ನನಗೆ ಅವನು ಸೂಟ್​ ಆಗಲ್ಲ. ನನಗೆ ಇನ್ನೂ ಚೆನ್ನಾಗಿರೋ ಹುಡುಗಬೇಕು ಎಂದು ಮಾತು ಆರಂಭಿಸಿದರು.

‘ಈಗೆಲ್ಲ ಲೈನ್​ ವರ್ಕೌಟ್​ ಆಗಲ್ಲ. ಇಂದಿನ ಕಾಲದಲ್ಲಿ ಲವ್ ಯೂ ಅಂತ ಹೇಳದೆ ಪ್ರೀತಿ ಮಾಡುತ್ತಾರೆ. ಮನಸ್ಸಿನ ಮೂಲಕವೇ ಮಾತನಾಡಿಕೊಳ್ಳುತ್ತಾರೆ. ಇಷ್ಟ ಆದರೆ ಲವ್​ ಯೂ ಹೇಳೋದೇಕೆ? ಮಾತನಾಡದೆಯೂ ಇಬ್ಬರಿಗೂ ಗೊತ್ತಾಗುತ್ತದೆ. ನಡೆದುಕೊಳ್ಳುವ ರೀತಿಯಲ್ಲೇ ಗೊತ್ತಾಗುತ್ತದೆ,’ ಎಂದರು ಪ್ರಿಯಾಂಕಾ.

ಈ ವೇಳೆ ಪ್ರೀತಿ ಎಂದರೇನು ಎಂದು ಚಕ್ರರ್ತಿ ಪ್ರಶ್ನೆ ಎಸೆದರು. ಇದಕ್ಕೆ ಉತ್ತರಿಸಿದ ಪ್ರಿಯಾಂಕಾ ‘ಪ್ರೀತಿ ಎಂದರೆ, ಲವ್, ನಂಬಿಕೆ, ವಾತ್ಸಲ್ಯ, ವಿಶ್ವಾಸ, ಮಮತೆ. 21ರಿಂದ 26ವರೆಗೆ ಆಗೋದು ಮಾತ್ರ ನಿಜವಾದ ಲವ್’​ ಎಂದರು.

ಚಕ್ರವರ್ತಿ ಚಂದ್ರಚೂಡ್​ ಸುತ್ತಿ-ಬಳಸಿ ಶಮಂತ್​ ವಿಷಯಕ್ಕೆ ಪ್ರೀತಿಯನ್ನು ಎಳೆದುಕೊಂಡು ಹೋಗುತ್ತಿದ್ದರು. ಇದು ಪ್ರಿಯಾಂಕಾಗೆ ಅಸಮಾಧಾನ ತರಿಸಿದೆ. ನೀವು ಯಾವುದಾದರೂ ವಿಚಾರ ಹೇಳುವಾಗ ಅದನ್ನು ನಾನು ನೆಗ್ಲೆಟ್​ ಮಾಡುತ್ತೇನೆ ಎಂದರೆ ಅದು ನನಗೆ ಇಷ್ಟವಿಲ್ಲ ಎಂದರ್ಥ ಎಂದು ಕಠಿಣವಾಗಿಯೇ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ನಾನೇ ಮುಂದೆ ನಿಂತು ಮದುವೆ ಮಾಡಿಸುತ್ತೇನೆ; ಬಿಗ್​ ಬಾಸ್​ ಮನೆಯಲ್ಲಿ ಶಮಂತ್​-ಪ್ರಿಯಾಂಕಾ ಪ್ರೇಮಕಥೆ ಆರಂಭ?

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?