ಟಾಲಿವುಡ್​ನ ದೊಡ್ಡ ಸ್ಟಾರ್ ಯಾರು? ಯಶಸ್ವಿ ನಿರ್ಮಾಪಕ ಕೊಟ್ಟ ಉತ್ತರ

Tollywood: ಪ್ರಭಾಸ್, ಅಲ್ಲು ಅರ್ಜುನ್, ರಾಮ್ ಚರಣ್, ಜೂ ಎನ್​ಟಿಆರ್, ಮಹೇಶ್ ಬಾಬು, ಚಿರಂಜೀವಿ, ಬಾಲಕೃಷ್ಣ, ರವಿತೇಜ, ಪವನ್ ಕಲ್ಯಾಣ್ ಇನ್ನೂ ಕೆಲವು ದೊಡ್ಡ ಸ್ಟಾರ್​ ನಟರು ಟಾಲಿವುಡ್​ನಲ್ಲಿದ್ದಾರೆ. ಆದರೆ ಇವರಲ್ಲಿ ಅತಿ ದೊಡ್ಡ ಸ್ಟಾರ್ ಯಾರು?

ಟಾಲಿವುಡ್​ನ ದೊಡ್ಡ ಸ್ಟಾರ್ ಯಾರು? ಯಶಸ್ವಿ ನಿರ್ಮಾಪಕ ಕೊಟ್ಟ ಉತ್ತರ
Follow us
|

Updated on: Oct 17, 2024 | 2:23 PM

ಪ್ರಸ್ತುತ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಖ್ಯೆಯ ಪ್ಯಾನ್ ಇಂಡಿಯಾ ಸ್ಟಾರ್ ನಟರನ್ನು ಹೊಂದಿರುವ ಚಿತ್ರರಂಗವೆಂದರೆ ಅದು ತೆಲುಗು ಚಿತ್ರರಂಗ. ಸ್ಟಾರ್ ನಟರ ದೊಡ್ಡ ಲೈನ್ ತೆಲುಗು ಚಿತ್ರರಂಗದಲ್ಲಿದೆ. ಪ್ರಭಾಸ್, ಚಿರಂಜೀವಿ, ಅಲ್ಲು ಅರ್ಜುನ್, ಜೂ ಎನ್​ಟಿಆರ್, ರಾಮ್ ಚರಣ್, ಬಾಲಕೃಷ್ಣ, ಮಹೇಶ್ ಬಾಬು, ರವಿತೇಜ, ನಾಗಾರ್ಜುನ ಪಟ್ಟಿ ಉದ್ದವಾಗುತ್ತಾ ಹೋಗುತ್ತದೆ. ಭಾರತದ ಇನ್ಯಾವುದೇ ಚಿತ್ರರಂಗದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸ್ಟಾರ್ ನಟರಿಲ್ಲ. ಆದರೆ ಇಷ್ಟು ಜನರಿರುವ ತೆಲುಗು ಚಿತ್ರರಂಗದಲ್ಲಿ ಎಲ್ಲರಿಗಿಂತಲೂ ದೊಡ್ಡ ಸ್ಟಾರ್ ನಟ ಯಾರು? ತೆಲುಗು ಚಿತ್ರರಂಗದ ಹಿರಿಯ ಮತ್ತು ಯಶಸ್ವಿ ನಿರ್ಮಾಪಕ ದಗ್ಗುಬಾಟಿ ಸುರೇಶ್ ಬಾಬು ಅವರು ಉತ್ತರ ನೀಡಿದ್ದಾರೆ. ಅದಕ್ಕೆ ಕಾರಣವನ್ನೂ ವಿವರಿಸಿದ್ದಾರೆ.

ದಗ್ಗುಬಾಟಿ ಸುರೇಶ್ ಬಾಬು, ತೆಲುಗು ಚಿತ್ರರಂಗದ ಅತ್ಯಂತ ಹಿರಿಯ, ಬುದ್ಧಿವಂತ ಮತ್ತು ಯಶಸ್ವಿ ನಿರ್ಮಾಪಕ. ತೆಲುಗು ಮಾತ್ರವಲ್ಲದೆ ಹಲವು ಭಾಷೆಗಳಲ್ಲಿ ಸಿನಿಮಾಗಳನ್ನು ಮಾಡಿ ಗೆಲುವು ಸಾಧಿಸಿದ್ದಾರೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ತೆಲುಗಿನ ದೊಡ್ಡ ಸ್ಟಾರ್ ನಟ ಯಾರು ಎಂಬ ಪ್ರಶ್ನೆ ಅವರಿಗೆ ಎದುರಾಯ್ತು. ಡಿಪ್ಲೋಮ್ಯಾಟಿಕ್ ಉತ್ತರಗಳಿಗೆ ಮೊರೆ ಹೋಗದ ಸುರೇಶ್ ನೇರವಾಗಿ ಪವನ್ ಕಲ್ಯಾಣ್ ಹೆಸರು ಹೇಳಿದರು. ಆ ನಂತರ ಅದಕ್ಕೆ ಕಾರಣವನ್ನೂ ನೀಡಿದರು.

ನನ್ನ ಪ್ರಕಾರ ಪವನ್ ಕಲ್ಯಾಣ್ ಅತಿ ದೊಡ್ಡ ಸ್ಟಾರ್ ಏಕೆಂದರೆ ಅವರು ಸಣ್ಣ ನಿರ್ದೇಶಕರು, ಸಣ್ಣ ಬಜೆಟ್ ಸಿನಿಮಾಗಳ ಜೊತೆ ಬಂದರೂ ಸಹ ಭಾರಿ ದೊಡ್ಡ ಓಪನಿಂಗ್ ಅವರಿಗೆ ಸಿಗುತ್ತದೆ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರಲು ಅವರಿಗೆ ನಿರ್ದೇಶಕ, ಭಾರಿ ಬಜೆಟ್, ಬೇರೆ ಗಿಮಿಕ್​ಗಳ ಅವಶ್ಯಕತೆ ಇಲ್ಲ. ಅವರೊಬ್ಬರಿಂದಲೇ ಚಿತ್ರಮಂದಿರಗಳು ತುಂಬುತ್ತವೆ. ಸಣ್ಣ-ಪುಟ್ಟ ನಿರ್ದೇಶಕರ ಜೊತೆ ಸಿನಿಮಾ ಮಾಡಿಯೇ ಇಷ್ಟು ದೊಡ್ಡ ಓಪನಿಂಗ್ ಪಡೆಯುತ್ತಿದ್ದಾರೆಂದರೆ ಒಂದು ವೇಳೆ ದೊಡ್ಡ ನಿರ್ದೇಶಕರ ಜೊತೆ ಸಿನಿಮಾ ಮಾಡಿದರೆ ಅದ್ಯಾವ ಮಟ್ಟದ ಓಪನಿಂಗ್, ಕಲೆಕ್ಷನ್ ಆಗಬಹುದು ಊಹಿಸಿ ಎಂದಿದ್ದಾರೆ.

ಇದನ್ನೂ ಓದಿ:ಅಲ್ಲು ಅರ್ಜುನ್ ಹೆಸರು ಹೇಳಿ, ಅಭಿಮಾನಿಗಳ ಆಕ್ರೋಶ ತಣ್ಣಗೆ ಮಾಡಿದ ಪವನ್ ಕಲ್ಯಾಣ್

ಪವನ್ ಕಲ್ಯಾಣ್​ರ ಈ ಹಿಂದಿನ ಸಿನಿಮಾಗಳ ಕಲೆಕ್ಷನ್ ನೋಡಿದರೆ ಸುರೇಶ್ ಅವರ ವಿಶ್ಲೇಷಣೆ ಸರಿಯಾಗಿದೆ ಅನಿಸದೇ ಇರದು. ಪವನ್ ಕಲ್ಯಾಣ್​ 2018 ರ ಬಳಿ ಪವನ್ ಕಲ್ಯಾಣ್ ನಟಿಸಿರುವ ಮೂರು ಸಿನಿಮಾಗಳಷ್ಟೆ ಬಿಡುಗಡೆ ಆಗಿದೆ. ಅದರಲ್ಲಿ ಎರಡರಲ್ಲಿ ಮಾತ್ರ ಅವರು ಪೂರ್ಣ ಪ್ರಮಾಣದ ನಾಯಕ. ವಿಶೇಷವೆಂದರೆ ಆ ಎರಡೂ ಸಿನಿಮಾಗಳೂ ಸಹ ರೀಮೇಕ್ ಸಿನಿಮಾಗಳು ಮತ್ತು ಆ ಎರಡೂ ಸಿನಿಮಾಗಳ ನಿರ್ದೇಶಕರು ಅನನುಭವಿ ಮತ್ತು ಜನಪ್ರಿಯತೆ ಇಲ್ಲದ ನಿರ್ದೇಶಕರು, ಸಿನಿಮಾಗಳು ಸಹ ಸೀಮಿತ ಬಜೆಟ್​ನ ಸಿನಿಮಾಗಳು. ಹಾಗಿದ್ದರೂ ಸಹ ಸಿನಿಮಾಗಳು ಭಾರಿ ದೊಡ್ಡ ಕಲೆಕ್ಷನ್ ಅನ್ನು ಬಾಕ್ಸ್ ಆಫೀಸ್​ನಲ್ಲಿ ಮಾಡಿವೆ.

ಪವನ್ ಕಲ್ಯಾಣ್ ಪ್ರಸ್ತುತ ಮೂರು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಮರ್ಶಿಯಲ್ ಸಿನಿಮಾಗಳ ನಿರ್ದೇಶಕ ಹರಿ ನಿರ್ದೇಶಿಸುತ್ತಿರುವ ‘ಉಸ್ತಾದ್ ಭಗತ್ ಸಿಂಗ್’, ಕ್ರಿಶ್ ನಿರ್ದೇಶನ ಮಾಡುತ್ತಿರುವ ಐತಿಹಾಸಿಕ ಕತೆಯ ಸಿನಿಮಾ ‘ಹರಿಹರ ವೀರ ಮಲ್ಲು’, ಕೇವಲ ಎರಡು ಸಿನಿಮಾ ನಿರ್ದೇಶಿಸಿರುವ ಸುಜಿತ್ ನಿರ್ದೇಶನದ ‘ಓಜಿ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ‘ಓಜಿ’ ಸಿನಿಮಾ ಬೇಗನೆ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚನ್ನಪಟ್ಟಣದಿದ ಡಿಕೆ ಸುರೇಶ್, ಸುಳಿವು ನೀಡಿದ ಶಾಸಕ ತನ್ವೀರ್ ಸೇಠ್
ಚನ್ನಪಟ್ಟಣದಿದ ಡಿಕೆ ಸುರೇಶ್, ಸುಳಿವು ನೀಡಿದ ಶಾಸಕ ತನ್ವೀರ್ ಸೇಠ್
ಅಯೋಧ್ಯೆಯ ರಾಮ ಮಂದಿರ ನೋಡಿ ‘ಅದ್ಭುತ’ ಎಂದು ಉದ್ಘರಿಸಿದ ಇಸ್ರೇಲ್ ರಾಯಭಾರಿ
ಅಯೋಧ್ಯೆಯ ರಾಮ ಮಂದಿರ ನೋಡಿ ‘ಅದ್ಭುತ’ ಎಂದು ಉದ್ಘರಿಸಿದ ಇಸ್ರೇಲ್ ರಾಯಭಾರಿ
ಚನ್ನಪಟ್ಟಣ; ಕುಮಾರಸ್ವಾಮಿ ನಮ್ಮ ವರಿಷ್ಠರೊಂದಿಗೆ ಚರ್ಚಿಸಲಿದ್ದಾರೆ:ಬೊಮ್ಮಾಯಿ
ಚನ್ನಪಟ್ಟಣ; ಕುಮಾರಸ್ವಾಮಿ ನಮ್ಮ ವರಿಷ್ಠರೊಂದಿಗೆ ಚರ್ಚಿಸಲಿದ್ದಾರೆ:ಬೊಮ್ಮಾಯಿ
ಮಳೆಗಾಲದಲ್ಲೂ ಇಷ್ಟು ಜೋರು ಮಳೆಯಾಗಿರಲಿಲ್ಲ ಎನ್ನುತ್ತಾರೆ ಸ್ಥಳೀಯರು!
ಮಳೆಗಾಲದಲ್ಲೂ ಇಷ್ಟು ಜೋರು ಮಳೆಯಾಗಿರಲಿಲ್ಲ ಎನ್ನುತ್ತಾರೆ ಸ್ಥಳೀಯರು!
ಉತ್ತಮ ಮಳೆ, ತುಂಬಿದ ಕೆಆರ್​​ಎಸ್; ಮಂಡ್ಯ ರೈತನ ಸಂತೋಷಕ್ಕೆ ಪಾರವೇ ಇಲ್ಲ!
ಉತ್ತಮ ಮಳೆ, ತುಂಬಿದ ಕೆಆರ್​​ಎಸ್; ಮಂಡ್ಯ ರೈತನ ಸಂತೋಷಕ್ಕೆ ಪಾರವೇ ಇಲ್ಲ!
ನಡು ರಸ್ತೆಯಲ್ಲಿ ತಲ್ವಾರ್​ನಿಂದ ಕೇಕ್​ ಕತ್ತರಿಸಿ ಹುಟ್ಟು ಹಬ್ಬ ಆಚರಣೆ
ನಡು ರಸ್ತೆಯಲ್ಲಿ ತಲ್ವಾರ್​ನಿಂದ ಕೇಕ್​ ಕತ್ತರಿಸಿ ಹುಟ್ಟು ಹಬ್ಬ ಆಚರಣೆ
ಕಾವೇರಿ ತೀರ್ಥೋದ್ಭವ: ಆ ದಿವ್ಯ ಕ್ಷಣ ಹೇಗಿತ್ತು ನೋಡಿ
ಕಾವೇರಿ ತೀರ್ಥೋದ್ಭವ: ಆ ದಿವ್ಯ ಕ್ಷಣ ಹೇಗಿತ್ತು ನೋಡಿ
ರಣರೋಚಕ ಫೈನಲ್​ನಲ್ಲಿ ಗೆದ್ದು ಬೀಗಿದ ಸದರ್ನ್ ಸೂಪರ್ ಸ್ಟಾರ್ಸ್
ರಣರೋಚಕ ಫೈನಲ್​ನಲ್ಲಿ ಗೆದ್ದು ಬೀಗಿದ ಸದರ್ನ್ ಸೂಪರ್ ಸ್ಟಾರ್ಸ್
ಜಗದೀಶ್​ಗೆ ಸೀರೆ ಕೊಡೋಕೆ ಮುಂದಾದ ಮನೆ ಮಂದಿ; ‘ಹೆಂಗಸಾಗೋಕೂ ಯೋಗ್ಯತೆ ಇಲ್ಲ’
ಜಗದೀಶ್​ಗೆ ಸೀರೆ ಕೊಡೋಕೆ ಮುಂದಾದ ಮನೆ ಮಂದಿ; ‘ಹೆಂಗಸಾಗೋಕೂ ಯೋಗ್ಯತೆ ಇಲ್ಲ’
ತಲಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ, ಅರ್ಚಕರ ತಂಡದಿಂದ ಪೂಜೆ
ತಲಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ, ಅರ್ಚಕರ ತಂಡದಿಂದ ಪೂಜೆ