‘ಪುಷ್ಪ 2’ ಚಿತ್ರದ ಆ ಒಂದು ಸಾಂಗ್ ಬಗ್ಗೆ ನಿರ್ದೇಶಕರಿಗೆ ಮೂಡಿದೆ ಗೊಂದಲ

Pushpa 2: ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಡಿಸೆಂಬರ್ ಮೊದಲ ವಾರದಲ್ಲಿ ಬಿಡುಗಡೆ ಆಗಲಿದೆ. ಆದರೆ ಚಿತ್ರತಂಡ ಒಂದು ಹಾಡಿನ ಬಗ್ಗೆ ಇನ್ನೂ ಗೊಂದಲದಲ್ಲಿಯೇ ಇದೆ. ಗೊಂದಲಕ್ಕೆ ಕಾರಣವೇನು?

‘ಪುಷ್ಪ 2’ ಚಿತ್ರದ ಆ ಒಂದು ಸಾಂಗ್ ಬಗ್ಗೆ ನಿರ್ದೇಶಕರಿಗೆ ಮೂಡಿದೆ ಗೊಂದಲ
ಅಲ್ಲು ಅರ್ಜುನ್
Edited By:

Updated on: Nov 06, 2024 | 6:30 PM

ತೆಲುಗು ಚಿತ್ರರಂಗದವರು ಸಾಂಗ್​ನ ಅದ್ದೂರಿಯಾಗಿ ಶೂಟ್ ಮಾಡಲು ಆದ್ಯತೆ ನೀಡುತ್ತಾರೆ. ಸಿನಿಮಾದ ಕೊನೆಯಲ್ಲಿ ಹಾಡನ್ನು ಶೂಟ್ ಮಾಡಲು ಮತ್ತು ಇದಕ್ಕೆ ದೊಡ್ಡ ಸೆಟ್ ಹಾಕಲು ತೆಲುಗು ಮಂದಿ ಬಯಸುತ್ತಾರೆ. ‘ಪುಷ್ಪ’ ಚಿತ್ರದಲ್ಲಿ ಭರ್ಜರಿ ಹಾಡುಗಳು ಇದ್ದವು. ಇವೆಲ್ಲ ಹಿಟ್ ಆಗಿದ್ದವು. ಈಗ ‘ಪುಷ್ಪ 2’ ಚಿತ್ರದಲ್ಲೂ ಸಾಂಗ್ಗೆ ಆದ್ಯತೆ ನೀಡಲಾಗಿದೆ. ಹಲವು ಸಾಂಗ್ಗಳ ಶೂಟ್ ಮಾಡಲಾಗಿದೆ. ಈಗ ಒಂದು ಹಾಡಿನ ಬಗ್ಗೆ ನಿರ್ದೇಶಕ ಸುಕುಮಾರ್ ಅವರು ಆಲೋಚನೆ ಮಾಡುತ್ತಿದ್ದಾರೆ ಎನ್ನಲಾಗಿದೆ.

‘ಪುಷ್ಪ’ ಚಿತ್ರದ ಐಟಂ ಸಾಂಗ್ ಹಿಟ್ ಆಗಿತ್ತು. ಅದೇ ರೀತಿ ‘ಪುಷ್ಪ 2’ ಚಿತ್ರದಲ್ಲೂ ವಿಶೇಷ ಸಾಂಗ್ ಇದೆ. ಇದನ್ನು ಸುಕುಮಾರ್ ಈ ವಾರ ಶೂಟ್ ಮಾಡಿ ಮುಗಿಸಲಿದ್ದಾರೆ. ಮತ್ತೊಂದು ಹಾಡಿನ ಶೂಟ್ ಬಗ್ಗೆ ಅವರು ಆಲೋಚನೆ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ನಡುವಿನ ಸಾಂಗ್ ಶೂಟ್ ಬೇಕೆ ಅಥವಾ ಬೇಡವೇ ಎನ್ನುವ ಗೊಂದಲದಲ್ಲಿ ಇದ್ದಾರೆ.

‘ಪುಷ್ಪ 2’ ಸಿನಿಮಾದ ರಿಲೀಸ್ ದಿನಾಂಕ ಈಗಾಗಲೇ ಕೆಲವು ಬಾರಿ ಮುಂದಕ್ಕೆ ಹೋಗಿವೆ. ಈ ಸಿನಿಮಾ ರಿಲೀಸ್ಗೆ ಇರೋದು ಇನ್ನು ಒಂದು ತಿಂಗಳು ಮಾತ್ರ. ಅದಕ್ಕೂ ಮೊದಲು ‘ಪುಷ್ಪ 2’ ಚಿತ್ರದ ಶೂಟ್ನ ಪೂರ್ಣಗೊಳಿಸಬೇಕಿದೆ. ಕೆಲವು ವರದಿಗಳ ಪ್ರಕಾರ ಐಟಂ ಸಾಂಗ್ ಹಾಗೂ ಡ್ಯೂಯೆಟ್ ಸಾಂಗ್ ಪೂರ್ಣಗೊಂಡರೆ ಶೂಟಿಂಗ್ ಮುಗಿದಂತೆ. ಡ್ಯುಯೆಟ್ ಸಾಂಗ್​ನ ಮಾಡದಿರಲು ಸುಕುಮಾರ್ ಆಲೋಚಿಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:‘ಪುಷ್ಪ 2’ ಪ್ರಚಾರಕ್ಕೆ ಖರ್ಚು ಮಾಡುತ್ತಿರುವ ಹಣದಲ್ಲಿ 3 ಸಿನಿಮಾ ನಿರ್ಮಿಸಬಹುದು

ಸದ್ಯ ‘ಸೂಸೇಕಿ..’ ಹಾಗೂ ಟೈಟಲ್ ಸಾಂಗ್ ‘ಪುಷ್ಪ ಪುಷ್ಪ..’ ರಿಲೀಸ್ ಆಗಿದೆ. ಜಾತ್ರೆಯಲ್ಲಿ ನಡೆಯೋ ಹಾಡನ್ನು ಕೂಡ ರಿಲೀಸ್ ಮಾಡಲು ತಂಡ ರೆಡಿ ಆಗಿದೆ. ಈಗ ಇದರ ಜೊತೆ ಮತ್ತೊಂದು ಹಾಡನ್ನು ಶೂಟ್ ಮಾಡೋದಾದರೆ ಸಿನಿಮಾದ ಅವಧಿ ಕೂಡ ಹೆಚ್ಚುತ್ತದೆ. ಅದನ್ನು ಕೇವಲ ಪ್ರಚಾರಕ್ಕೆ ಮಾತ್ರ ಬಳಕೆ ಮಾಡಿಕೊಳ್ಳೋಣ ಎಂದರೆ ಬಜೆಟ್ ಹೆಚ್ಚಲಿದೆ. ಹೀಗಾಗಿ, ಸುಕುಮಾರ್ ಈ ಬಗ್ಗೆ ಆಲೋಚನೆ ಮಾಡುತ್ತಿದ್ದಾರೆ.

‘ಪುಷ್ಪ 2’ ಚಿತ್ರ ಡಿಸೆಂಬರ್ 5ರಂದು ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್, ಫಹಾದ್ ಫಾಸಿಲ್ ಮೊದಲಾದವರು ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಮೈತ್ರಿ ಮೂವೀ ಮೇಕರ್ಸ್ ಬಂಡವಾಳ ಹೂಡುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us