Prabhas: ಪ್ರವಾಹ ಸಂತ್ರಸ್ತರಿಗೆ 1 ಕೋಟಿ ರೂ. ನೀಡಿದ ಪ್ರಭಾಸ್; ಇತರೆ ಹೀರೋಗಳು ಕೊಟ್ಟ ಹಣ ಎಷ್ಟು?
Andhra Pradesh Floods: ಚಿರಂಜೀವಿ, ಮಹೇಶ್ ಬಾಬು, ಜ್ಯೂ. ಎನ್ಟಿಆರ್, ರಾಮ್ ಚರಣ್ ಮುಂತಾದ ನಟರಿಗಿಂತಲೂ ಪ್ರಭಾಸ್ ಹೆಚ್ಚು ದೇಣಿಗೆ ನೀಡಿದ್ದಾರೆ. ಒಂದು ಕೋಟಿ ರೂ. ನೀಡುವ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಅವರು ಪಾತ್ರರಾಗಿದ್ದಾರೆ.

ಹೈದರಾಬಾದ್ನಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹ (Andhra Pradesh Floods) ಪರಿಸ್ಥಿತಿ ಉಂಟಾಗಿತ್ತು. ಇದರಿಂದ ಅನೇಕ ಜನರ ಜೀವನ ದುಸ್ತರ ಆಗಿದೆ. ಅಪಾರ ಆಸ್ತಿ-ಪಾಸ್ತಿಗೆ ಹಾನಿಗೆ ಆಗಿದೆ. ಮನೆ ಕಳೆದುಕೊಂಡು ಬೀದಿಗೆ ಬಂದವರು ಹಲವರಿದ್ದಾರೆ. 24ಕ್ಕೂ ಅಧಿಕ ಮಂದಿ ನಿಧನರಾದ ಬಗ್ಗೆ ವರದಿ ಆಗಿದೆ. ಅನೇಕರು ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆ ಆಗಿದ್ದಾರೆ. ಆಂಧ್ರ ಪ್ರದೇಶದ ಈ ಕಷ್ಟದ ಪರಿಸ್ಥಿತಿಗೆ ಟಾಲಿವುಡ್ ಸ್ಟಾರ್ ನಟರು ಮರುಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಮ್ಮ ಕೈಲಾಸ ಸಹಾಯ ಮಾಡುತ್ತಿದ್ದಾರೆ. ಜ್ಯೂ. ಎನ್ಟಿಆರ್, ರಾಮ್ ಚರಣ್, ಚಿರಂಜೀವಿ ಮುಂತಾದ ನಟರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ (CM Relief Fund) ದೇಣಿಗೆ ನೀಡಿದ್ದಾರೆ. ವಿಶೇಷ ಎಂದರೆ, ಈ ಎಲ್ಲ ಹೀರೋಗಳಿಗಿಂತಲೂ ನಟ ಪ್ರಭಾಸ್ (Prabhas) ಅವರು ಹೆಚ್ಚು ಹಣ ನೀಡಿದ್ದಾರೆ. ಬರೋಬ್ಬರಿ 1 ಕೋಟಿ ರೂ. ಹಣವನ್ನು ಅವರು ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ! ಸದ್ಯ ಅವರು ‘ರಾಧೆ ಶ್ಯಾಮ್’ (Radhe Shyam) ಸಿನಿಮಾ ಬಿಡುಗಡೆಯನ್ನು ಎದುರುನೋಡುತ್ತಿದ್ದಾರೆ.
‘ಮೆಗಾ ಸ್ಟಾರ್’ ಚಿರಂಜೀವಿ, ಮಹೇಶ್ ಬಾಬು, ಜ್ಯೂ. ಎನ್ಟಿಆರ್, ರಾಮ್ ಚರಣ್ ಅವರು ತಲಾ 25 ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಅವರೆಲ್ಲರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿರುವ ಪ್ರಭಾಸ್ ಅವರು 1 ಕೋಟಿ ರೂ. ನೀಡುವ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 2020ರಲ್ಲಿ ಕೊರೊನಾ ವೈರಸ್ ಹಾವಳಿಯಿಂದ ಲಾಕ್ಡೌನ್ ಉಂಟಾಗಿದ್ದಾಗಲೂ ಪ್ರಭಾಸ್ ಕೊಡುಗೈ ದಾನಿ ಆಗಿದ್ದರು. 4.5 ಕೋಟಿ ರೂ. ನೀಡಿದ್ದ ಅವರನ್ನು ಎಲ್ಲರೂ ಕೊಂಡಾಡಿದ್ದರು.
‘ಬಾಹುಬಲಿ’ ಸಿನಿಮಾದಿಂದ ಸಿಕ್ಕ ದೊಡ್ಡ ಯಶಸ್ಸಿನ ಬಳಿಕ ಪ್ರಭಾಸ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದರು. ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಅವರ ಕಾಲ್ಶೀಟ್ಗಾಗಿ ಮನೆ ಮುಂದೆ ಕಾಯುವಂತಾಯಿತು. ಅವರ ಸಂಭಾವನೆ ಕೂಡ ಹೆಚ್ಚಿದೆ. ಸಿನಿಮಾರಂಗದಿಂದ ಇಷ್ಟೆಲ್ಲ ದುಡಿಯುತ್ತಿರುವ ಪ್ರಭಾಸ್ ಅವರು ಜನರ ಸಂಕಷ್ಟಕ್ಕೆ ಮಿಡಿಯುವಲ್ಲಿ ಹಿಂದೆ ಬೀಳುವುದಿಲ್ಲ. ಈಗ ಅವರ ಕೈಯಲ್ಲಿ ಹಲವು ಬಿಗ್ ಬಜೆಟ್ ಸಿನಿಮಾಗಳಿವೆ.
ಪ್ರಭಾಸ್ ನಟಿಸಿರುವ ‘ರಾಧೆ ಶ್ಯಾಮ್’ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿದೆ. ಈ ಚಿತ್ರದಲ್ಲಿ ಅವರಿಗೆ ಪೂಜಾ ಹೆಗ್ಡೆ ಜೋಡಿ ಆಗಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಹಾಡುಗಳು ಮತ್ತು ಟೀಸರ್ ಧೂಳೆಬ್ಬಿಸಿವೆ. 2022ರ ಜ.14ರಂದು ಈ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಕನ್ನಡಕ್ಕೂ ಡಬ್ ಆಗಿದ್ದು ಏಕಕಾಲಕ್ಕೆ ಕನ್ನಡ ವರ್ಷನ್ ಕೂಡ ತೆರೆಕಾಣಲಿದೆ. ಇದಲ್ಲದೇ, ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’, ಓಂ ರಾವುತ್ ನಿರ್ದೇಶನದ ‘ಆದಿಪುರುಷ್’ ಸಿನಿಮಾಗಳಲ್ಲೂ ಪ್ರಭಾಸ್ ನಟಿಸುತ್ತಿದ್ದಾರೆ.
ಇದನ್ನೂ ಓದಿ:
‘ರಾಧೆ ಶ್ಯಾಮ್’ ಚಿತ್ರದ ಕಥೆ ಲೀಕ್; ಪ್ರಭಾಸ್-ಪೂಜಾ ಹೆಗ್ಡೆ ಸಿನಿಮಾದ ಈ ಹಾಡಿನಲ್ಲಿ ಅಡಗಿದೆ ಸ್ಟೋರಿ
ಪ್ರಭಾಸ್ ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಬೇಸರ ಮೂಡಿಸಿದ ಪ್ರಶಾಂತ್ ನೀಲ್; ‘ಸಲಾರ್’ ಟೀಮ್ ಎಡವಿದ್ದೆಲ್ಲಿ?