AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟ ರಾಜ್ ತರುಣ್ ಗೆಳೆಯನಿಗೆ ಚಪ್ಪಲಿಯಲ್ಲಿ ಹೊಡೆದ ಲಾವಣ್ಯ

Raj Tarun: ನಟ ರಾಜ್ ತರುಣ್ ವಿರುದ್ಧ ದೂರು ನೀಡಿರುವ ಮಾಜಿ ಗರ್ಲ್​ಫ್ರೆಂಡ್ ಲಾವಣ್ಯ, ನ್ಯೂಸ್ ಚಾನೆಲ್​ ಚರ್ಚೆಯಲ್ಲಿ ಭಾಗವಹಿಸಿದ್ದಾಗ ರಾಜ್ ತರುಣ್​ರ ಗೆಳೆಯ ಶೇಖರ್ ಅನ್ನು ಚಪ್ಪಲಿಯಲ್ಲಿ ಹೊಡೆದಿದ್ದಾರೆ.

ನಟ ರಾಜ್ ತರುಣ್ ಗೆಳೆಯನಿಗೆ ಚಪ್ಪಲಿಯಲ್ಲಿ ಹೊಡೆದ ಲಾವಣ್ಯ
ರಾಜ್ ತರುಣ್
ಮಂಜುನಾಥ ಸಿ.
|

Updated on: Aug 02, 2024 | 10:59 AM

Share

ತೆಲುಗು ನಟ ರಾಜ್ ತರುಣ್ ಖಾಸಗಿ ಜೀವನ ವಿವಾದವಾಗಿದೆ. ರಾಜ್ ತರುಣ್ ಮಾಜಿ ಪ್ರೇಯಸಿ ಲಾವಣ್ಯ, ರಾಜ್ ವಿರುದ್ಧ ವಂಚನೆ ಆರೋಪ ಮಾಡಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಈಗ ಬೇರೊಬ್ಬ ನಟಿಯೊಡನೆ ಸಂಬಂಧದಲ್ಲಿದ್ದಾಣೆ ಎಂದು ಲಾವಣ್ಯ ಆರೋಪ ಮಾಡಿದ್ದು, ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾರೆ. ಇದರ ಜೊತೆಗೆ ಮಾಧ್ಯಮಗಳಲ್ಲಿ ರಾಜ್ ತರುಣ್ ಬಗ್ಗೆ ಹಲವು ಆರೋಪಗಳನ್ನು ಸಹ ಮಾಡುತ್ತಿದ್ದು, ರಾಜ್ ತರುಣ್ ಮನೆಯ ಮುಂದೆ ಪ್ರತಿಭಟನೆಯನ್ನೂ ಮಾಡಿದ್ದಾರೆ. ಇತ್ತೀಚೆಗೆ ನ್ಯೂಸ್ ಚಾನೆಲ್ ಡಿಬೇಟ್​ನಲ್ಲಿ ಭಾಗಿಯಾಗಿದ್ದ ಲಾವಣ್ಯ, ರಾಜ್ ತರುಣ್ ಗೆಳೆಯನೊಬ್ಬನಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ.

ರಾಜ್ ತರುಣ್ ವಿವಾದ ಕುರಿತು ತೆಲುಗು ನ್ಯೂಸ್ ಚಾನೆಲ್ ಒಂದು ಚರ್ಚೆ ಆಯೋಜಿಸಿತ್ತು. ಚರ್ಚೆಯಲ್ಲಿ ರಾಜ್ ತರುಣ್ ಪರವಾಗಿ ಅವರ ಗೆಳೆಯ ಆರ್​ಜೆ ಶೇಖರ್ ಭಾಷಾ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಆರ್​ಜೆ ಶೇಖರ್ ಲಾವಣ್ಯ ಬಗ್ಗೆ ಮಾತನಾಡುತ್ತಿದ್ದರು, ಎದುರು ಕೂತಿದ್ದ ಲಾವಣ್ಯ, ಕಾಲಿನಲ್ಲಿ ಧರಿಸಿದ್ದ ಚಪ್ಪಲಿ ತೆಗೆದು ಆರ್​ಕೆ ಶೇಖರ್ ಕಡೆಗೆ ಎಸೆದರು. ಚಪ್ಪಲಿ ತಮಗೆ ತಾಗುತ್ತಿದ್ದಂತೆ ಮೇಲೆದ್ದ ಶೇಖರ್, ಲಾವಣ್ಯ ಮೇಲೆ ಜಗಳಕ್ಕೆ ಹೋದರು, ಜೋರಾಗಿ ಕಿರುಚಾಡಿ ತುಸು ಎಳೆದಾಡಿದರೂ ಸಹ. ಆದರೆ ಕೈ ಮಾಡಲಿಲ್ಲ.

ಲಾವಣ್ಯ, ಆರ್​ಜೆ ಶೇಖರ್ ಮೇಲೆ ಚಪ್ಪಲಿ ಎಸೆದ ವಿಡಿಯೋ ಇದೀಗ ವೈರಲ್ ಆಗಿದೆ. ಚಪ್ಪಲಿ ಏಟು ತಿಂದ ಶೇಖರ್ ಸಹ ಅದೇ ಶೋನಲ್ಲಿ ಲಾವಣ್ಯ ವಿರುದ್ಧ ನಿಂದನೆ ಮಾಡಿದ್ದಾರೆ. ಅದಕ್ಕೆ ಲಾವಣ್ಯ, ‘ಶೇಖರ್ ಹೇಳಿದ ಮಾತು ಸರಿಯಿಲ್ಲ ಅದಕ್ಕೆ ಹೊಡೆದೆ’ ಎಂದಿದ್ದಾರೆ. ಅಲ್ಲದೆ, ‘ನನ್ನ ಮೇಲೆ ಬೇಕಾದರೆ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟುಕೋ ಹೋಗು’ ಎಂದು ಆವಾಜ್ ಹಾಕಿದ್ದಾರೆ.

ಇದನ್ನೂ ಓದಿ:ಲಂಡನ್ ಡಯರೀಸ್ ಫೋಟೋ ಹಂಚಿಕೊಂಡ ಲಾವಣ್ಯಾ

ರಾಜ್ ತರುಣ್ ಹಾಗೂ ಲಾವಣ್ಯ ಹಲವು ವರ್ಷಗಳಿಂದ ಲಿವಿನ್ ರಿಲೇಷನ್​ನಲ್ಲಿದ್ದರು. ಮದುವೆ ಆಗುವುದಾಗಿ ರಾಜ್ ತರುಣ್, ಲಾವಣ್ಯಗೆ ಭರವಸೆ ನೀಡಿದ್ದರಂತೆ. ಆದರೆ ಇತ್ತೀಚೆಗೆ ರಾಜ್ ತರುಣ್ ಹಿಮಾಚಲ ಪ್ರದೇಶ ಮೂಲದ ನಾಯಕಿ ಮಾಳವಿ ಮಲ್ಹೋತ್ರಾ ಜೊತೆ ಸಂಬಂಧದಲ್ಲಿದ್ದಾರೆ ಎಂದು ಲಾವಣ್ಯ ಆರೋಪಿಸಿದ್ದಾರೆ. ಮಾಳವಿ ಮಲ್ಹೋತ್ರಾ ಸಹ ಲಾವಣ್ಯ ವಿರುದ್ಧ ದೂರು ನೀಡಿದ್ದು, ತನ್ನ ಸಹೋದರ ಹಾಗೂ ಪೋಷಕರಿಗೆ ಕೊಲೆ ಬೆದರಿಕೆಯನ್ನು ಲಾವಣ್ಯ ಹಾಕಿದ್ದಾರೆಂದು ಆರೋಪ ಮಾಡಿದ್ದಾರೆ.

ರಾಜ್ ತರುಣ್ ಕಳೆದ ಹತ್ತು ವರ್ಷಗಳಿಂದಲೂ ತೆಲುಗು ಚಿತ್ರರಂಗದಲ್ಲಿದ್ದಾರೆ. ಹಲವು ಜನಪ್ರಿಯ ಸಿನಿಮಾಗಳಲ್ಲಿ ರಾಜ್ ತರುಣ್ ನಟಿಸಿದ್ದಾರೆ. ‘ಉಯ್ಯಾಲ ಜಂಪಾಲ’, ‘ಕುಮಾರಿ 21 ಎಫ್’, ‘ಸಿನಿಮಾ ಚೂಪಿಸ್ತಾ ಮಾವ’, ‘ರಂಗುಲ ರತ್ನಮ್ಮ’ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ನಾಗಾರ್ಜುನ ಜೊತೆಗೆ ‘ನಾ ಸಾಮಿ ರಂಗ’ ನಲ್ಲಿ ನಟಿಸಿದ್ದರು. ಇದೀಗ ‘ತಿರಗಬಡರಾ ಸಾಮಿ’ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾದಲ್ಲಿ ರಾಜ್​ ತರುಣ್​ರ ಹೊಸ ಗರ್ಲ್​ಫ್ರೆಂಡ್ ಮಾಳವಿ ಮಲ್ಹೋತ್ರಾ ನಾಯಕಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ