AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾರುಖ್ ಮನೆ ಮುಂದೆ ಗಂಟೆಗಟ್ಟಲೆ ಕಾಯುತ್ತಿದ್ದ ಯುವಕ ಈಗ ಬಾಲಿವುಡ್​ನ ಟಾಪ್ ನಟ

ಬಾಲಿವುಡ್​ನ ಯುವ ಸ್ಟಾರ್ ನಟ ಹಿಂದೊಮ್ಮೆ ಶಾರುಖ್ ಖಾನ್ ಮನೆ ಮನ್ನತ್ ಮುಂದೆ ಗಂಟೆ ಗಟ್ಟಲೆ ಕಾಯುತ್ತಿದ್ದರಂತೆ. ಆ ದಿನಗಳನ್ನು ಇದೀಗ ನೆನಪಿಸಿಕೊಂಡಿದ್ದಾರೆ ನಟ.

ಶಾರುಖ್ ಮನೆ ಮುಂದೆ ಗಂಟೆಗಟ್ಟಲೆ ಕಾಯುತ್ತಿದ್ದ ಯುವಕ ಈಗ ಬಾಲಿವುಡ್​ನ ಟಾಪ್ ನಟ
ಮಂಜುನಾಥ ಸಿ.
|

Updated on:May 16, 2024 | 10:07 AM

Share

ಹಿಂದಿ ಚಿತ್ರರಂಗ ಪ್ರವೇಶಿಸುವ ಕಾಣುವ ಕೋಟ್ಯಂತರ ಮಂದಿ ಯುವಕರಿಗೆ ಬಾಲಿವುಡ್​ನ (Bollywood) ಅಗ್ರಗಣ್ಯ ನಟರಲ್ಲಿ ಒಬ್ಬರಾದ ಶಾರುಖ್ ಖಾನ್ ಅವರೇ ಪ್ರೇರಣೆ. ಚಿತ್ರರಂಗದ ಹಿನ್ನೆಲೆಯೇ ಇಲ್ಲದೆ ನಟನಾಗುವ ಆಸೆ ಹೊತ್ತು ಬಂದವನಿಗಂತೂ ಶಾರುಖ್ ಖಾನ್ ಆದರ್ಶ. ಈಗ ಚಾಲ್ತಿಯಲ್ಲಿರುವ ಹಲವು ಬಾಲಿವುಡ್ ನಟರುಗಳು ಸಹ ಹಿಂದೊಮ್ಮೆ ಶಾರುಖ್ ಖಾನ್ (Shah Rukh Khan) ಅವರನ್ನು ಆದರ್ಶವಾಗಿಟ್ಟುಕೊಂಡು ಅವರಂತೆ ಆಗಬೇಕೆಂಬ ಕನಸು ಕಂಡವರೇ ಆಗಿರುತ್ತಾರೆ. ಅವರಲ್ಲಿ ಬಾಲಿವುಡ್​ನ ಪ್ರತಿಭಾವಂತ ನಟ ರಾಜ್​ಕುಮಾರ್ ರಾವ್ ಸಹ ಒಬ್ಬರು.

ಶ್ರೀಕಾಂತ್ ಹೆಸರಿನ ಭಿನ್ನವಾದ ಸಿನಿಮಾದಲ್ಲಿ ಅಂಧ ವ್ಯಕ್ತಿಯ ಸವಾಲಿನ ಪಾತ್ರದಲ್ಲಿ ನಟಿಸಿ ಗೆದ್ದಿರುವ ರಾಜ್​ಕುಮಾರ್ ರಾವ್, ತಾವು ಶಾರುಖ್ ಖಾನ್ ಮನೆಯ ಮುಂದೆ ಗಂಟೆಗಟ್ಟಲೆ ನಿಂತು ಶಾರುಖ್ ಖಾನ್​ಗಾಗಿ ಕಾಯುತ್ತಿದ್ದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಶಾರುಖ್ ಖಾನ್ ರೀತಿಯಲ್ಲಿಯೇ ರಾಜ್​ಕುಮಾರ್ ರಾವ್ ಸಹ ಚಿತ್ರರಂಗಕ್ಕೆ ಹೊರಗಿನವರು. ಯಾವುದೇ ಗಾಡ್​ಫಾದರ್​ಗಳಿಲ್ಲದೆ ಕೇವಲ ಪ್ರತಿಭೆಯ ಬಲದ ಮೇಲೆ ಚಿತ್ರರಂಗಕ್ಕೆ ಎಂಟ್ರಿ ನೀಡಿ ಗೆದ್ದು ನಟರಾದವರು.

ಗುರುಗ್ರಾಮ (ಗುಡ್​ಗಾಂವ್) ದವರಾದ ರಾಜ್​ಕುಮಾರ್ ರಾವ್, ‘ಬೂಗಿ ವೂಗಿ’ ಡ್ಯಾನ್ಸ್ ಶೋಗಾಗಿ ಮುಂಬೈಗೆ ಬಂದಿದ್ದರಂತೆ. ಆಗಿನ್ನೂ ಅವರಿಗೆ 16 ವರ್ಷ ವಯಸ್ಸು, ತಮ್ಮ 12 ವರ್ಷದ ಸಹೋದರನ ಜೊತೆಗೆ ಮುಂಬೈಗೆ ಬಂದಿದ್ದರಂತೆ ರಾಜ್​ಕುಮಾರ್ ರಾವ್. ಆಗ ಶಾರುಖ್ ಖಾನ್ ಅವರನ್ನು ನೋಡುವ ಉದ್ದೇಶದಿಂದ ಇಡೀ ದಿನ ಅವರ ಮನೆಯ ಎದುರಿಗೆ ನಿಂತಿದ್ದರಂತೆ. ಆದರೆ ಶಾರುಖ್ ಖಾನ್ ಅಂದು ಸಿಗಲಿಲ್ಲವೆಂದು ನೆನಪು ಮಾಡಿಕೊಂಡಿದ್ದಾರೆ ರಾಜ್​ಕುಮಾರ್.

‘ಮೊದಲ ಬಾರಿಗೆ ಮುಂಬೈಗೆ ಬಂದಾಗ ಈ ನಗರ ಕಂಡು ನಾನು ಮಾರುಹೋಗಿದ್ದೆ. ಇದೊಂದು ಸ್ವರ್ಗದಂತೆ ಅನಿಸಿತ್ತು. ಸಾಕಷ್ಟು ಜಾಗಗಳಲ್ಲಿ ನಾನು ಹಾಗೂ ನನ್ನ ಸಹೋದರ ಓಡಾಡಿದೆವು. ಆದರೆ ನಾವು ಇಲ್ಲಿಂದ ಹೊರಡುವ ಮುನ್ನವೇ ನಮ್ಮಲ್ಲಿದ್ದ ಹಣವನ್ನು ಖರ್ಚು ಮಾಡಿಬಿಟ್ಟೆವು. ಕೊನೆಯ ದಿನ ನಾವು ರೈಲ್ವೆ ನಿಲ್ದಾಣದಲ್ಲಿ ನಿದ್ದೆ ಮಾಡಿದೆವು. ಅಂದು ನಮ್ಮಲ್ಲಿ ಇದ್ದಿದ್ದು ಕೇವಲ ಎರಡು ವಡಾಪಾವ್ ಖರೀದಿ ಮಾಡುವಷ್ಟು ಮಾತ್ರವೇ ಹಣ’ ಎಂದು ರಾಜ್​ಕುಮಾರ್ ನೆನಪು ಮಾಡಿಕೊಂಡಿದ್ದಾರೆ.

ರಾಜ್​ಕುಮಾರ್ ರಾವ್ ಬಾಲಿವುಡ್​ನ ವರ್ಸಟೈಲ್ ನಟ. ಎಲ್ಲ ವಿಧದ ಪಾತ್ರಗಳಿಗೂ ಅವರು ಸರಿಹೊಂದುತ್ತಾರೆ. ಅದೇ ಕಾರಣಕ್ಕೆ ಭಿನ್ನ-ಭಿನ್ನ ಪಾತ್ರಗಳಲ್ಲಿ ರಾಜ್​ಕುಮಾರ್ ರಾವ್ ನಟಿಸಿದ್ದಾರೆ. ಅಂಧ ಸಾಧಕ ಶ್ರೀಕಾಂತ್ ಪಾತ್ರದಲ್ಲಿ ರಾಜ್​ಕುಮಾರ್ ಅದ್ಭುತವಾಗಿ ನಟಿಸಿದ್ದರು. ಆ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ವಿಮರ್ಶಕರಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಇದೀಗ ಜಾನ್ಹವಿ ಕಪೂರ್ ಜೊತೆಗೆ ‘ಮಿಸ್ಟರ್ ಆಂಡ್ ಮಿಸಸ್ ಮಹಿ’ ಸಿನಿಮಾದಲ್ಲಿ ನಟಿಸಿದ್ದು ಆ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:28 am, Thu, 16 May 24

Follow Us
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!