Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸರಿಯಾಗಿ ಪ್ರಪೋಸ್​ ಆದ್ರೂ ಮಾಡು’​; ನನ್ನ ಮದುವೆ ಆಗಿ ಎಂದು ನೇರವಾಗಿ ಕೇಳಿದವನಿಗೆ ರಶ್ಮಿಕಾ ಖಡಕ್​ ಉತ್ತರ

ಶೂಟಿಂಗ್​ ಬಿಡುವಿನಲ್ಲೇ ಮಂಗಳವಾರ (ಜೂ.29) ಅಭಿಮಾನಿಗಳಿಂದ ರಶ್ಮಿಕಾ ಪ್ರಶ್ನೆ ಆಹ್ವಾನಿಸಿದರು. ಆಗ ಒಬ್ಬಾತ ನೇರವಾಗಿ ‘ನನ್ನನ್ನು ಮದುವೆ ಮಾಡಿಕೊಳ್ಳಿ’ ಎಂದು ಕೇಳಿದ್ದಾನೆ.

‘ಸರಿಯಾಗಿ ಪ್ರಪೋಸ್​ ಆದ್ರೂ ಮಾಡು’​; ನನ್ನ ಮದುವೆ ಆಗಿ ಎಂದು ನೇರವಾಗಿ ಕೇಳಿದವನಿಗೆ ರಶ್ಮಿಕಾ ಖಡಕ್​ ಉತ್ತರ
ರಶ್ಮಿಕಾ ಮಂದಣ್ಣ
Follow us
TV9 Web
| Updated By: ಮದನ್​ ಕುಮಾರ್​

Updated on: Jun 29, 2021 | 4:07 PM

ಅತಿ ಹೆಚ್ಚು ಬ್ಯುಸಿ ಆಗಿರುವ ನಟಿಯರ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ ಹೆಸರು ಕೂಡ ಮುಂಚೂಣಿಯಲ್ಲಿ ಇದೆ. ಬಹುಭಾಷೆಯಲ್ಲಿ ಅವರಿಗೆ ಬೇಡಿಕೆ ಇದೆ. ಸಿನಿಮಾ ಕೆಲಸಗಳ ಒತ್ತಡ ಎಷ್ಟೇ ಇದ್ದರೂ ಕೂಡ ಅವರು ಅಭಿಮಾನಿಗಳಿಗಾಗಿ ಒಂದಷ್ಟು ಸಮಯ ಮೀಸಲಿಟ್ಟಿರುತ್ತಾರೆ. ಸೋಶಿಯಲ್​ ಮೀಡಿಯಾದಲ್ಲಿ ಫ್ಯಾನ್ಸ್​ ಜೊತೆ ಪ್ರಶ್ನೋತ್ತರ ನಡೆಸುತ್ತಾರೆ. ಈ ವೇಳೆ ಅವರಿಗೆ ಅನೇಕ ಬಗೆಯ ಪ್ರಶ್ನೆಗಳು ಎದುರಾಗುತ್ತವೆ. ಮದುವೆ ಪ್ರಪೋಸಲ್​ಗಳು ಕೂಡ ಬರುತ್ತವೆ! ಅದಕ್ಕೆ ರಶ್ಮಿಕಾ ಅಷ್ಟೇ ಜಾಣತನದಿಂದ ಉತ್ತರ ನೀಡುತ್ತಾರೆ.

ಮಂಗಳವಾರ (ಜೂ.29) ಶೂಟಿಂಗ್​ ಬಿಡುವಿನಲ್ಲಿ ಅಭಿಮಾನಿಗಳಿಂದ ರಶ್ಮಿಕಾ ಪ್ರಶ್ನೆ ಆಹ್ವಾನಿಸಿದರು. ಆಗ ಒಬ್ಬಾತ ನೇರವಾಗಿ ‘ನನ್ನನ್ನು ಮದುವೆ ಮಾಡಿಕೊಳ್ಳಿ’ ಎಂದು ಕೇಳಿದ್ದಾನೆ. ಅದಕ್ಕೆ ಉತ್ತರಿಸಿರುವ ಕಿರಿಕ್​ ಕುವರಿ ರಶ್ಮಿಕಾ, ‘ಕೊನೇಪಕ್ಷ ಸರಿಯಾಗಿ ಪ್ರಪೋಸ್​ ಆದ್ರೂ ಮಾಡು’ ಎಂದು ಹೇಳಿದ್ದಾರೆ. ಇದನ್ನು ಅವರು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

ನಿಮಗೆ ಎಷ್ಟು ಭಾಷೆ ಬರುತ್ತದೆ ಎಂದು ಕೇಳಿದ್ದಕ್ಕೆ ಕೆಲವು ಸೆಕೆಂಡ್​ಗಳ ಕಾಲ ಲೆಕ್ಕಹಾಕಿ ‘6 ಭಾಷೆ ಬರುತ್ತದೆ’ ಅಂತ ರಶ್ಮಿಕಾ ಉತ್ತರಿಸಿದ್ದಾರೆ. ‘ಎಲ್ಲರೂ ನಿಮ್ಮನ್ನು ನ್ಯಾಷನಲ್ ಕ್ರಶ್​ ಅಂತ ಕರೆಯುವಾಗ ನಿಮಗೆ ಏನು ಅನಿಸುತ್ತದೆ’ ಎಂಬ ಪ್ರಶ್ನೆಗೆ ‘ನಾಚಿಕೆ ಆಗುತ್ತದೆ’ ಎಂಬ ರೀತಿಯಲ್ಲಿ ರಶ್ಮಿಕಾ ಎಕ್ಸ್​ಪ್ರೆಷನ್​ ನೀಡಿದ್ದಾರೆ. ವಿಜಯ್​ ದೇವರಕೊಂಡ ಜೊತೆಗೆ ಇರುವ ತಮ್ಮ ನೆಚ್ಚಿನ​ ಫೋಟೋ ಯಾವುದು ಎಂಬುದನ್ನು ಕೂಡ ಅವರು ತೋರಿಸಿದ್ದಾರೆ.

ಈ ಹಿಂದೆ ಕೂಡ ರಶ್ಮಿಕಾ ಇದೇ ರೀತಿ ಪ್ರಶ್ನೋತ್ತರ ನಡೆಸಿದಾಗ ನಿಮ್ಮ ಬಾಯ್ ಫ್ರೆಂಡ್​ ಯಾರು ಎಂಬ ಪ್ರಶ್ನೆ ಎದುರಾಗಿತ್ತು. ‘ಕೆಲಸವೇ ನನ್ನ ಬಾಯ್​ಫ್ರೆಂಡ್​. ಅದನ್ನು ಬಿಟ್ಟರೆ ನನಗೆ ಬೇರೆ ಯಾವುದಕ್ಕೂ ಸಮಯ ಇಲ್ಲ’ ಎಂದು ಅವರು ಉತ್ತರ ನೀಡಿದ್ದರು. ಸದ್ಯ ಬಾಲಿವುಡ್​ನಲ್ಲಿ ಸಿದ್ಧಾರ್ಥ್​ ಮಲ್ಹೋತ್ರಾ ಜೊತೆ ‘ಮಿಷನ್​ ಮಜ್ನು’, ಅಮಿತಾಭ್​ ಬಚ್ಚನ್​ ಜೊತೆ ‘ಗುಡ್​ಬೈ’ ಸಿನಿಮಾಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಟಾಲಿವುಡ್​ನಲ್ಲಿ ಅಲ್ಲು ಅರ್ಜುನ್​ ಜೊತೆ ತೆರೆ ಹಂಚಿಕೊಳ್ಳುತ್ತಿರುವ ‘ಪುಷ್ಪ’ ಚಿತ್ರಕ್ಕೆ ಕೊನೇ ಹಂತದ ಕೆಲಸಗಳು ನಡೆಯುತ್ತಿವೆ.

ಇದನ್ನೂ ಓದಿ:

ಮುಂಬೈನಲ್ಲಿ ಹೊಸ ಅಪಾರ್ಟ್​ಮೆಂಟ್​ ಸೇರಿಕೊಂಡ ರಶ್ಮಿಕಾ; ಅಲ್ಲೇ ಸೆಟ್ಲ್​ ಆಗ್ತಾರಾ ಕೊಡಗಿನ ಕುವರಿ?

ಪ್ಲೀಸ್​.. ಇಂಥ ಕೆಲಸ ಮಾಡಬೇಡಿ; ಮನನೊಂದ ರಶ್ಮಿಕಾ ಪರಿಪರಿಯಾಗಿ ಬೇಡಿಕೊಂಡಿದ್ದೇಕೆ?

ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ
ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ