Sign In

By signing in or creating an account, you agree with Associated Broadcasting Company's Terms & Conditions and Privacy Policy.

Roberrt Kannada Movie Review: ಒಂದೇ ಟಿಕೆಟ್​ನಲ್ಲಿ ದರ್ಶನ್​ ಫ್ಯಾನ್ಸ್​ಗೆ ರಾಬರ್ಟ್​ ಮತ್ತು ರಾಘವನ ಡಬಲ್​ ಧಮಾಕಾ!

Roberrt Movie Review: ಭಾರಿ ನಿರೀಕ್ಷೆಯೊಂದಿಗೆ ರಾಬರ್ಟ್​ ಸಿನಿಮಾ ಬಿಡುಗಡೆ ಆಗಿದೆ. ದರ್ಶನ್​ ಅಭಿಮಾನಿಗಳ ಈ ನಿರೀಕ್ಷೆಯನ್ನು ಪೂರ್ಣಗೊಳಿಸುವಲ್ಲಿ ಈ ಚಿತ್ರ ಯಶಸ್ವಿ ಆಗಿದೆಯಾ? ಒಟ್ಟಾರೆ ‘ರಾಬರ್ಟ್​’ ಚಿತ್ರ ಹೇಗಿದೆ? ಇಲ್ಲಿದೆ ವಿಮರ್ಶೆ...

Roberrt Kannada Movie Review:  ಒಂದೇ ಟಿಕೆಟ್​ನಲ್ಲಿ ದರ್ಶನ್​ ಫ್ಯಾನ್ಸ್​ಗೆ ರಾಬರ್ಟ್​ ಮತ್ತು ರಾಘವನ ಡಬಲ್​ ಧಮಾಕಾ!
ರಾಬರ್ಟ್​ ಸಿನಿಮಾದಲ್ಲಿ ದರ್ಶನ್​
Follow us
ಮದನ್​ ಕುಮಾರ್​
|

Updated on:Mar 11, 2021 | 4:58 PM

ಸಿನಿಮಾ: ರಾಬರ್ಟ್ ನಿರ್ದೇಶನ: ತರುಣ್​ ಸುಧೀರ್​ ನಿರ್ಮಾಣ: ಉಮಾಪತಿ ಶ್ರೀನಿವಾಸ್​ ಗೌಡ ಪಾತ್ರವರ್ಗ: ದರ್ಶನ್​, ಆಶಾ ಭಟ್​, ಜಗಪತಿ ಬಾಬು, ರವಿಶಂಕರ್​, ವಿನೋದ್​ ಪ್ರಭಾಕರ್​, ಸೋನಲ್​ ಮಂಥೆರೋ, ಚಿಕ್ಕಣ್ಣ ಮುಂತಾದವರು. ಸ್ಟಾರ್​: 3.5/5

ಮಾಸ್​ ಸಿನಿಮಾಗಳ ಮೂಲಕವೇ ಹೆಚ್ಚು ಗುರುತಿಸಿಕೊಂಡವರು ದರ್ಶನ್​. ಅವರ ಅಭಿಮಾನಿಗಳು ಕೂಡ ಅಂತಹ ಸಿನಿಮಾಗಳನ್ನೇ ಹೆಚ್ಚಾಗಿ ಇಷ್ಟಪಡುತ್ತಾರೆ. ಪಂಚಿಂಗ್​ ಡೈಲಾಗ್​ಗಳು, ಭರ್ಜರಿ ಸಾಹಸದೃಶ್ಯಗಳು ಡಿ ಫ್ಯಾನ್ಸ್​ ಪಾಲಿಗೆ ಸಿಕ್ಕಾಪಟ್ಟೆ ಮನರಂಜನೆ ನೀಡುತ್ತವೆ. ಅದೇ ನಿರೀಕ್ಷೆಯನ್ನು ಇಟ್ಟುಕೊಂಡು ‘ರಾಬರ್ಟ್​’ ನೋಡಲು ಬರುವ ಪ್ರೇಕ್ಷಕರು ಈ ಸಿನಿಮಾ ಪ್ರಾರಂಭ ಆಗುತ್ತಿದ್ದಂತೆಯೇ ಅಚ್ಚರಿಗೆ ಒಳಗಾಗಬಹುದು. ಯಾಕೆಂದರೆ, ಚಿತ್ರದ ಆರಂಭದಲ್ಲಿ ಆ ಕಮರ್ಷಿಯಲ್​ ಅಂಶಗಳನ್ನೆಲ್ಲ ಬದಿಗಿಟ್ಟು, ಸಂಪೂರ್ಣ ಬೇರೆ ರೀತಿಯಲ್ಲಿ ‘ಚಾಲೆಂಜಿಂಗ್ ಸ್ಟಾರ್​’ ದರ್ಶನ ನೀಡುತ್ತಾರೆ. ರಾಬರ್ಟ್​ ನೋಡಲು ಬಂದವರಿಗೆ ರಾಘವ ಎದುರಾಗುತ್ತಾನೆ!

ಹೌದು, ಈ ಸಿನಿಮಾದಲ್ಲಿ ರಾಬರ್ಟ್​ ಮತ್ತು ರಾಘವ ಎಂಬ ಎರಡು ಡಿಫರೆಂಟ್​ ಶೇಡ್​ನ ಪಾತ್ರದಲ್ಲಿ ದರ್ಶನ್​ ಕಾಣಿಸಿಕೊಂಡಿದ್ದಾರೆ. ರಾಘವ ತುಂಬ ಕ್ಲಾಸ್​. ಆದರೆ ರಾಬರ್ಟ್​ ಸಿಕ್ಕಾಪಟ್ಟೆ ಮಾಸ್​. ಒಂದು ಕಾಲದಲ್ಲಿ ಮಂಬೈನಲ್ಲಿ ರಾಬರ್ಟ್​ ಆಗಿ ಮೆರೆದ ವ್ಯಕ್ತಿಯೇ ಈಗ ಲಖನೌನಲ್ಲಿ ರಾಘವನಾಗಿ ಹೆಸರು ಬದಲಾಯಿಸಿಕೊಂಡು ಬದುಕುತ್ತಿದ್ದಾನೆ. ಅರ್ಜುನ್​ ಎಂಬ ಮಗನನ್ನು ಕಾಪಾಡುವ ಹೊಣೆ ಅವನ ಮೇಲಿದೆ. ನಿಜಕ್ಕೂ ರಾಘವ ಮತ್ತು ಅರ್ಜುನ್ ತಂದೆ-ಮಗನಾ? ರಾಬರ್ಟ್​ ಆಗಿದ್ದ ಕಥಾನಾಯಕ ರಾಘವ ಆಗಿ ಬದಲಾಗಲು ಕಾರಣವಾಗಿದ್ದೇನು ಎಂಬುದು ಗೊತ್ತಾಗುವುದು ಸೆಕೆಂಡ್​ ಹಾಫ್​ನಲ್ಲಿ!

ಈವರೆಗೂ ದರ್ಶನ್​ ನಟಿಸಿದ ಎಲ್ಲ ಸಿನಿಮಾಗಳಿಗಿಂತಲೂ ರಾಬರ್ಟ್​ನಲ್ಲಿ ಅವರಿಗೆ ಡಿಫರೆಂಟ್​ ಆದಂತಹ ಪಾತ್ರ ಸಿಕ್ಕಿದೆ. ಮೊದಲಾರ್ಧದಲ್ಲಿ ಅವರು ಯಾವುದೇ ಮಾಸ್​ ಇಮೇಜ್​ಗೆ ಕಟ್ಟುಬೀಳದೇ ಸಂಪೂರ್ಣವಾಗಿ ಪಾತ್ರಕ್ಕೆ ಶರಣಾಗಿದ್ದಾರೆ. ವಿಲನ್​ಗಳ ಕಾಲು ಹಿಡಿದುಕೊಳ್ಳುವಷ್ಟರಮಟ್ಟಿಗೆ ಕ್ಲಾಸ್​ ಆಗಿ ನಡೆದುಕೊಂಡಿದ್ದಾರೆ. ಪಂಚಿಂಗ್​ ಡೈಲಾಗ್​ಗಳ ಹಂಗು ಇಲ್ಲದೆ, ಉಗ್ಗುತ್ತ ಮಾತನಾಡುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಸಿಟ್ಟು-ದ್ವೇಷ ಇಲ್ಲದ ಬಾಣಸಿಗನಾಗಿ ಅಭಿನಯಿಸಿದ್ದಾರೆ. ಆದರೆ ಮಧ್ಯಂತರದ ವೇಳೆ ಬೇರೆ ಅವತಾರ ತಾಳುತ್ತಾರೆ. ಅಲ್ಲಿಂದಲೇ ಶುರು ಆಗುವುದು ರಾಬರ್ಟ್​ನ ಅಸಲಿ ಆಟ. ಮಾಸ್​ಪ್ರಿಯರು ಬಯಸುವ ದರ್ಶನ್​ ಸೆಕೆಂಡ್​ ಹಾಫ್​ನಲ್ಲಿ ಸಿಗುತ್ತಾರೆ. ಖಡಕ್​ ಡೈಲಾಗ್​ಗಳು ಮತ್ತು ಹೊಡೆಬಡಿ ದೃಶ್ಯಗಳ ಮೂಲಕ ಮನರಂಜನೆ ನೀಡುತ್ತಾರೆ. ಹೀಗೆ ರಾಘವ ಮತ್ತು ರಾಬರ್ಟ್​ ಅವತಾರಗಳಲ್ಲಿ ಪ್ರೇಕ್ಷಕರಿಗೆ ಡಬಲ್​ ಧಮಾಕಾ ನೀಡಿದ್ದಾರೆ.

ಎಲ್ಲ ಫ್ರೇಮ್​ನಲ್ಲೂ ಶ್ರೀಮಂತಿಕೆ ಎದ್ದು ಕಾಣುತ್ತದೆ. ಕೆಲವು ಅದ್ದೂರಿ ಸೆಟ್​ಗಳು ಕಣ್ಣು ಕುಕ್ಕುತ್ತವೆ. ಮೇಕಿಂಗ್​ ವಿಚಾರದಲ್ಲಿ ಹೊಸತನ ನೀಡಲು ಪ್ರಯತ್ನಿಸಿರುವ ನಿರ್ದೇಶಕ ತರುಣ್ ಸುಧೀರ್​ ಅವರು ಕಥೆ ಮತ್ತು ನಿರೂಪಣೆಯಲ್ಲಿ ಎಂದಿನ ಸೂತ್ರಗಳನ್ನು ಫಾಲೋ ಮಾಡಿದ್ದಾರೆ. ನಿರೀಕ್ಷಿಸಬಹುದಾದ ರೀತಿಯಲ್ಲಿ ಚಿತ್ರಕಥೆ ಹೆಣೆಯಲಾಗಿದೆ. ಅದರ ಬಗ್ಗೆ ಗಮನ ನೀಡದೇ ಎಂಜಾಯ್​ ಮಾಡುವವರಿಗೆ ‘ರಾಬರ್ಟ್​’ ಇಷ್ಟವಾಗುತ್ತಾನೆ. ದರ್ಶನ್​ ಜೊತೆಗೆ ವಿನೋದ್​ ಪ್ರಭಾಕರ್​ ಅವರು ಅತಿ ಹೆಚ್ಚು ಸ್ಕ್ರೀನ್​ ಸ್ಪೇಸ್​ ಗಿಟ್ಟಿಸಿದ್ದಾರೆ. ಅವರ ಅಭಿಮಾನಿಗಳಿಗೆ ಇದು ಸರ್ಪ್ರೈಸ್​. ಸೆಕೆಂಡ್​ ಹೀರೋ ಎನ್ನಬಹುದಾದಷ್ಟು ಸ್ಕೋಪ್ ಅವರಿಗೆ ಸಿಕ್ಕಿದೆ.

ಸಿನಿಮಾದಲ್ಲಿ ಹಲವು ಕಲಾವಿದರು ಇದ್ದಾರೆ. ಚಿಕ್ಕಣ್ಣ ಮತ್ತು ಧರ್ಮಣ್ಣ ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಕೂಡ ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ. ಆ ಪಾತ್ರಗಳಿಗೆ ಫ್ರೆಶ್​ ಸಂಭಾಷಣೆಗಳನ್ನು ಬರೆದ ರಾಜ್​ಶೇಖರ್​ ಮತ್ತು ಚಂದ್ರಮೌಳಿ ಅವರಿಗೆ ಕ್ರೆಡಿಟ್​ ಸಲ್ಲಬೇಕು. ನಟ ಶಿವರಾಜ್​ ಕೆ.ಆರ್​. ಪೇಟೆ ಕೂಡ ಎರಡು ಡಿಫರೆಂಟ್​ ಪಾತ್ರದಲ್ಲಿ ಮನರಂಜಿಸಿದ್ದಾರೆ. ನಾಯಕಿ ಆಶಾ ಭಟ್​ ಅವರ ನಟನೆಗೆ ಹೆಚ್ಚು ಅವಕಾಶ ಸಿಕ್ಕಿಲ್ಲ. ಆದರೆ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದಾರೆ. ‘ಕಣ್ಣು ಹೊಡಿಯಾಕ..’ ಮತ್ತು ‘ಬೇಬಿ ಡ್ಯಾನ್ಸ್​ ಫ್ಲೋರ್​ ರೆಡಿ..’ ಹಾಡಿನಲ್ಲಿ ಅವರು ಹೆಚ್ಚು ಮೈಲೇಜ್​ ಪಡೆದುಕೊಂಡಿದ್ದಾರೆ. ದರ್ಶನ್​ ರೀತಿಯೇ ಬಾಲ ನಟ ಜೇಸನ್​ ಡಿಸೋಜಾ ಕೂಡ ಇಡೀ ಸಿನಿಮಾದಲ್ಲಿ ಹೈಲೈಟ್​ ಆಗಿದ್ದಾನೆ. ಆತನ ನಟನೆಗೆ ಫುಲ್​ ಮಾರ್ಕ್ಸ್​ ನೀಡಬಹುದು.

ಅರ್ಜುನ್​ ಜನ್ಯ ಸಂಗೀತ ನೀಡಿರುವ ಹಾಡುಗಳಿಂದ ಚಿತ್ರದ ಕಮರ್ಷಿಯಲ್ ಮೆರುಗು ಹೆಚ್ಚಿದೆ. ಹಿನ್ನೆಲೆ ಸಂಗೀತದಲ್ಲಿ ಅವರಿಗೆ ವಿ. ಹರಿಕೃಷ್ಣ ಪೈಪೋಟಿ ನೀಡಿದ್ದಾರೆ. ರಾಘವ ಮತ್ತು ರಾಬರ್ಟ್​ ಎಂಬ ಎರಡು ಶೇಡ್​ಗೆ ತಕ್ಕಂತೆಯೇ ಅಂಡರ್​ವರ್ಲ್ಡ್​ ಹಾಗೂ ಫ್ಯಾಮಿಲಿ ಸೆಂಟಿಮೆಂಟ್​ ಸನ್ನಿವೇಶಗಳನ್ನು ಬೇರೆ ಬೇರೆ ರೀತಿಯ ಫೀಲ್​ ಬರುವಂತೆ ಛಾಯಾಗ್ರಾಹಕ ಸುಧಾಕರ್​ ಎಸ್. ರಾಜ್ ಸೆರೆ ಹಿಡಿದಿದ್ದಾರೆ. ಒಟ್ಟಾರೆಯಾಗಿ ಈ ಸಿನಿಮಾ ದರ್ಶನ್​ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುತ್ತದೆ.

ಇದನ್ನೂ ಓದಿ: Roberrt Twitter Review: ರಾಬರ್ಟ್​ ಸಿನಿಮಾಗೆ ಥಂಮ್ಸ್​ ಅಪ್​ ತೋರಿದ ಟ್ವಿಟ್ಟರ್​ ಮಂದಿ

Roberrt Movie: ದರ್ಶನ್ ಕಟೌಟ್​ಗೆ ಬಿಯರ್​ನಿಂದ ಅಭಿಷೇಕ; ವಿಡಿಯೋ ವೈರಲ್

Published On - 1:25 pm, Thu, 11 March 21

ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು