AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮನೆಯಲ್ಲಿ ಮತ್ತೆ ಬಕ್ರಾ ಆದ ರೂಪೇಶ್ ರಾಜಣ್ಣ; ಅವರ ಪಾಡು ಯಾರಿಗೂ ಬೇಡ

ಈ ವಾರ ಗೊಂಬೆ ಮಾಡುವ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್​​ ಆಡುವ ವೇಳೆ ರೂಪೇಶ್ ರಾಜಣ್ಣ ಅವರು ಚಿನ್ನದ ಉಂಗುರ ಹಾಗೂ ಬ್ರೆಸ್​ಲೆಟ್​ ಅನ್ನು ಕಳೆದುಕೊಂಡಿದ್ದರು. ಇದು ರೂಪೇಶ್ ಶೆಟ್ಟಿಗೆ ಸಿಕ್ಕಿತ್ತು.

ಬಿಗ್ ಬಾಸ್ ಮನೆಯಲ್ಲಿ ಮತ್ತೆ ಬಕ್ರಾ ಆದ ರೂಪೇಶ್ ರಾಜಣ್ಣ; ಅವರ ಪಾಡು ಯಾರಿಗೂ ಬೇಡ
ರೂಪೇಶ್ ರಾಜಣ್ಣ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Nov 17, 2022 | 9:55 PM

Share

ರೂಪೇಶ ರಾಜಣ್ಣ (Roopesh Rajanna) ಅವರು ಬಿಗ್ ಬಾಸ್ (Bigg Boss) ಮನೆಯಲ್ಲಿ ಆಟದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅವರು ಕೆಲವೊಮ್ಮೆ ಮುಗ್ಧರಂತೆ ನಡೆದುಕೊಳ್ಳುವುದು ಅನೇಕರಿಗೆ ಇಷ್ಟವಾಗುತ್ತಿದೆ. ಕೆಲ ವಾರಗಳ ಹಿಂದೆ ರೂಪೇಶ್ ರಾಜಣ್ಣ ಅವರನ್ನು ಸಾನ್ಯ ಐಯ್ಯರ್ ಕುರಿ ಮಾಡಿದ್ದರು. ಆ ಎಪಿಸೋಡ್ ವೀಕ್ಷಕರಿಗೆ ಸಖತ್ ಮನರಂಜನೆ ನೀಡಿತ್ತು. ಈಗ ಬಕ್ರಾ ಪ್ರೋಗ್ರಾಂ ಮತ್ತೆ ಮುಂದುವರಿದಿದೆ. ಈ ಬಾರಿ ರೂಪೇಶ್ ರಾಜಣ್ಣ ಮತ್ತೆ ಕುರಿ ಆಗಿದ್ದಾರೆ.

ಈ ವಾರ ಗೊಂಬೆ ಮಾಡುವ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್​​ ಆಡುವ ವೇಳೆ ರೂಪೇಶ್ ರಾಜಣ್ಣ ಅವರು ಚಿನ್ನದ ಉಂಗುರ ಹಾಗೂ ಬ್ರೆಸ್​ಲೆಟ್​ ಅನ್ನು ಕಳೆದುಕೊಂಡಿದ್ದರು. ಇದು ರೂಪೇಶ್ ಶೆಟ್ಟಿಗೆ ಸಿಕ್ಕಿತ್ತು. ಅಮೂಲ್ಯ ವಸ್ತು ಕಳೆದುಕೊಂಡಿದ್ದು ರೂಪೇಶ್ ರಾಜಣ್ಣ ಅವರಿಗೆ ಸಾಕಷ್ಟು ಬೇಸರ ತರಿಸಿತ್ತು. ಮನೆಯಲ್ಲಿ ಅವರು ಎಲ್ಲ ಕಡೆಗಳಲ್ಲಿ ಹುಡುಕಾಟ ನಡೆಸಿದ್ದರು.

ಈ ಸಂದರ್ಭಕ್ಕೆ ಸರಿಯಾಗಿ ರೂಪೇಶ್ ಶೆಟ್ಟಿ ಬಂದು ರೂಪೇಶ್ ರಾಜಣ್ಣ ಕಿವಿಯಲ್ಲಿ ಕೆಲ ವಿಚಾರ ಹೇಳಿದ್ದಾರೆ. ‘ರೂಪೇಶ್ ರಾಜಣ್ಣ ಅವರೇ ಹೀಗೆಲ್ಲ ಮಾಡಿದ್ರೆ ಸಿಗಲ್ಲ. ಬಿಗ್ ಬಾಸ್ ಎಲ್ಲವನ್ನೂ ನೋಡ್ತಾ ಇರ್ತಾರೆ. ಅವರಿಗೆ ಉಂಗುರ ಎಲ್ಲಿದೆ ಅನ್ನೋದು ಗೊತ್ತಿರುತ್ತದೆ. ಅವರ ಬಳಿ ಗಂಭೀರವಾಗಿ ಬೇಡಿಕೊಳ್ಳಿ’ ಎಂದರು. ಇದನ್ನು ನಂಬಿದ ರೂಪೇಶ್ ರಾಜಣ್ಣ ಅವರು ತುಂಬಾನೇ ಗಂಭೀರವಾಗಿ ಕುಳಿತು, ಕೈ ಮುಗಿದು ಬೇಡಿಕೊಂಡರು. ಬಿಗ್ ಬಾಸ್​ನ ಖುಷಿಪಡಿಸಲು ಉರುಳುಸೇವೆ ಕೂಡ ಮಾಡಿದರು. ಆದರೆ, ಬಿಗ್ ಬಾಸ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಈ ವಿಚಾರದಲ್ಲಿ ಆರ್ಯವರ್ಧನ್​ ಗುರೂಜಿ ಕೂಡ ಸೇರಿಕೊಂಡರು. ತಮ್ಮ ದಿವ್ಯ ಶಕ್ತಿಯಿಂದ ಉಂಗುರ ಹಾಗೂ ಬ್ರೆಸ್​ಲೆಟ್ ಎಲ್ಲಿದೆ ಎಂಬುದನ್ನು ಕಂಡು ಹಿಡಿಯುತ್ತೇನೆ ಎಂದು ಹೇಳಿದರು ಆರ್ಯವರ್ಧನ್​. ಅಡುಗೆ ಮನೆಯಿಂದ ಮೆಣಸಿನ ಕಾಯಿ, ಆಲೂಗಡ್ಡೆ ಮತ್ತಿತರ ತರಕಾರಿ ತಂದು ಮಂತ್ರ ಮಾಡುವ ರೀತಿ ಮಾಡಿದರು. ಇದೇ ಸಂದರ್ಭಕ್ಕೆ ಸರಿಯಾಗಿ ರೂಪೇಶ್ ಶೆಟ್ಟಿ ಗಾರ್ಡನ್ ಏರಿಯಾದಲ್ಲಿ ಉಂಗುರ ಹಾಗೂ ಬ್ರೆಸ್​ಲೆಟ್ ಅನ್ನು ಅಡಗಿಸಿಟ್ಟು ಬಂದರು. ಗುರೂಜಿ ಅದೇ ಜಾಗವನ್ನು ಸರಿಯಾಗಿ ನೋಡಿ ಆಲೂಗಡ್ಡೆ ಎಸೆದರು.

ಇದನ್ನೂ ಓದಿ: ರೂಪೇಶ್ ರಾಜಣ್ಣ ಮಾಡಿದ ನೋವಿಗೆ ಭಿನ್ನವಾಗಿ ಸೇಡು ತೀರಿಸಿಕೊಂಡ ದಿವ್ಯಾ ಉರುಡುಗ

ಗುರೂಜಿ ಅವರ ಅದೃಷ್ಟ ಎಂಬಂತೆ ಉಂಗುರ ಹಾಗೂ ಬ್ರೆಸ್​ಲೆಟ್ ಇದ್ದ ಜಾಗಕ್ಕೆ ಆಲೂಗಡ್ಡೆ ಹೋಗಿ ನಿಂತಿತು. ಅಲ್ಲಿ ಹುಡುಕಿ ಎಂದು ಗುರೂಜಿ ಹೇಳಿದರು. ಹೋಗಿ ಹುಡುಕಿದಾಗ ರೂಪೇಶ್ ರಾಜಣ್ಣ ಕಳೆದುಕೊಂಡ ವಸ್ತುಗಳು ಸಿಕ್ಕವು. ಇದೊಂದು ಪವಾಡ ಎಂದೇ ರೂಪೇಶ್ ರಾಜಣ್ಣ ಭಾವಿಸಿದ್ದಾರೆ. ಈ ಮೂಲಕ ಮತ್ತೆ ಕುರಿ ಆಗಿದ್ದಾರೆ ಅವರು.

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ