AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಕ್ಷಿಣ ಭಾರತಕ್ಕೆ ಬಂದು ಚಿರಂಜೀವಿಗೆ ಹೊಸ ಐಡಿಯಾ ಕೊಟ್ಟ ಸಲ್ಮಾನ್​ ಖಾನ್​

ಸಲ್ಮಾನ್​ ಖಾನ್​ ಹಾಗೂ ಚಿರು ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಇಂಡಸ್ಟ್ರಿ ಬೇರೆ ಆದರೂ ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಇದೆ. ಈ ಕಾರಣಕ್ಕೆ ಸಿನಿಮಾ ನಿರ್ಮಾತೃರು ಸಲ್ಲು ಅವರನ್ನು ಕರೆತಂದಿದ್ದಾರೆ.

ದಕ್ಷಿಣ ಭಾರತಕ್ಕೆ ಬಂದು ಚಿರಂಜೀವಿಗೆ ಹೊಸ ಐಡಿಯಾ ಕೊಟ್ಟ ಸಲ್ಮಾನ್​ ಖಾನ್​
ಸಲ್ಮಾನ್​ ಖಾನ್​-ಚಿರಂಜೀವಿ
TV9 Web
| Edited By: |

Updated on: Nov 14, 2021 | 2:51 PM

Share

ಮೆಗಾಸ್ಟಾರ್​ ಚಿರಂಜೀವಿ (Chiranjeevi) 153ನೇ ಸಿನಿಮಾ ‘ಗಾಡ್​​ಫಾದರ್​’  (Godfather)ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಮಲಯಾಳಂನ ಸೂಪರ್​ ಹಿಟ್​ ಚಿತ್ರ ‘ಲೂಸಿಫರ್’ ರಿಮೇಕ್​ ಇದಾಗಿದೆ. ಈ ಸಿನಿಮಾದ ಶೂಟಿಂಗ್​ ಈಗಾಗಲೇ ಆರಂಭಗೊಂಡಿದೆ. ಚಿತ್ರದಲ್ಲಿ ಸಲ್ಮಾನ್​ ಖಾನ್​ ನಟಿಸುತ್ತಿದ್ದಾರೆ. ಮೋಹನ್​ಲಾಲ್​ ನಟನೆಯ ‘ಲೂಸಿಫರ್​’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಈ ಚಿತ್ರದಲ್ಲಿ ಪೃಥ್ವಿರಾಜ್​ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮೋಹನ್​ಲಾಲ್​​ಗೆ ಸಹಾಯ ಮಾಡುವ ಡಾನ್​ ಪಾತ್ರ ಇದಾಗಿತ್ತು. ಅವರು ತೆರೆಮೇಲೆ ಕಾಣಿಸೋದು ಕಡಿಮೆಯಾದರೂ ಇಡೀ ಚಿತ್ರದಲ್ಲಿ ತುಂಬಾನೇ ಮುಖ್ಯ ಎನಿಸಿಕೊಳ್ಳುತ್ತದೆ ಆ ಪಾತ್ರ. ತೆಲುಗಿನಲ್ಲಿ ಸಲ್ಲು ಈ ಪಾತ್ರದಲ್ಲಿ ನಟಿಸಲಿದ್ದಾರೆ. ಈಗ ಚಿರಂಜೀವಿಗೆ ಸ್ಪೆಷಲ್​ ಐಡಿಯಾ ಒಂದನ್ನು ನೀಡಿದ್ದಾರೆ ಎನ್ನಲಾಗುತ್ತಿದೆ.

ಸಲ್ಮಾನ್​ ಖಾನ್​ ಹಾಗೂ ಚಿರುಗೋಸ್ಕರ ವಿಶೇಷ ಸಾಂಗ್​ ಮಾಡೋಕೆ ಚಿತ್ರತಂಡ ಪ್ಲ್ಯಾನ್​ ಮಾಡಿಕೊಂಡಿದೆ. ಮೂಲ ಸಿನಿಮಾ ‘ಲೂಸಿಫರ್​’ನಲ್ಲಿ ಈ ರೀತಿಯ ಸಾಂಗ್ ಇಲ್ಲ. ಆದರೆ, ಸಲ್ಲು ಬಾಲಿವುಡ್​ ಅಂಗಳದಿಂದ ದಕ್ಷಿಣಕ್ಕೆ ಬರುವ ಕಾರಣಕ್ಕೆ ಚಿತ್ರತಂಡ ಈ ಆಲೋಚನೆ ಮಾಡಿದೆ. ತಮನ್​ ಈ ಸಿನಿಮಾ ಸಂಗೀತ ಸಂಯೋಜನೆ ಮಾಡುತ್ತಿದ್ದು, ವಿದೇಶಿ ಗಾಯಕರನ್ನು ತರುವ ಆಲೋಚನೆಯಲ್ಲಿದ್ದಾರೆ. ಆದರೆ, ಈ ಆಲೋಚನೆಯನ್ನು ಸಲ್ಮಾನ್​ ಖಾನ್​ ತಿರಸ್ಕರಿಸಿದ್ದಾರೆ. ಅಲ್ಲದೆ, ಚಿತ್ರತಂಡಕ್ಕೆ ಹೊಸ ಐಡಿಯಾ ನೀಡಿದ್ದಾರೆ. ಬಾಲಿವುಡ್​ನ ಸಾಕಷ್ಟು ಸಿಂಗರ್​ಗಳು ವಿಶ್ವ ಮಟ್ಟದಲ್ಲಿ ಖ್ಯಾತಿ ಗಳಿಸಿಕೊಂಡಿದ್ದಾರೆ. ಅವರಲ್ಲಿ ಕೆಲವರು ದಕ್ಷಿಣಕ್ಕೆ ಬಂದಿಲ್ಲ. ವಿದೇಶಿ ಸಿಂಗರ್​ಗಳಿಗೆ ಹೆಚ್ಚಿನ ಹಣ ನೀಡಿ ಅವರನ್ನು ಕರೆ ತರುವ ಬದಲು, ಬಾಲಿವುಡ್​ ಮಂದಿಯನ್ನೇ ಕರೆತರುವಂತೆ ಸೂಚನೆ ನೀಡಿದ್ದಾರೆ. ಈ ಆಯ್ಕೆ ಚಿತ್ರತಂಡದವರಿಗೂ ಇಷ್ಟವಾಗಿದೆ.

ಸಲ್ಮಾನ್​ ಖಾನ್​ ಹಾಗೂ ಚಿರು ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಇಂಡಸ್ಟ್ರಿ ಬೇರೆ ಆದರೂ ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಇದೆ. ಈ ಕಾರಣಕ್ಕೆ ಸಿನಿಮಾ ನಿರ್ಮಾತೃರು ಸಲ್ಲು ಅವರನ್ನು ಕರೆತಂದಿದ್ದಾರೆ. ಮೋಹನ್​ ರಾಜ್​ ಅವರು ಚಿರು 153ನೇ ಚಿತ್ರ ‘ಗಾಡ್​ಫಾದರ್​’ಗೆ ಆ್ಯಕ್ಷನ್​​ ಕಟ್​ ಹೇಳುತ್ತಿದ್ದಾರೆ.

ಇದನ್ನೂ ಓದಿ: 6 ದಿನ ನಡೆಯುವ ಕತ್ರಿನಾ ಮದುವೆಗೆ ಮಾಜಿ ಬಾಯ್​ಫ್ರೆಂಡ್​ಗಳಿಗೆ ಇದೆಯಾ ಆಹ್ವಾನ? ರಣಬೀರ್​, ಸಲ್ಲು ಕೂಡ ಬರ್ತಾರಾ?

ಬಿಗ್​ ಬಾಸ್​ ಸ್ಪರ್ಧಿ ಮೇಲೆ ಸಿಟ್ಟಾಗಿ ಬೀಪ್​ ಶಬ್ದಗಳಿಂದ ಬೈದ ಸಲ್ಮಾನ್​ ಖಾನ್

ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ