AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಸ್ಪರ್ಧಿ ಮೇಲೆ ಸಿಟ್ಟಾಗಿ ಬೀಪ್​ ಶಬ್ದಗಳಿಂದ ಬೈದ ಸಲ್ಮಾನ್​ ಖಾನ್

ಈ ವಾರದ ಪ್ರೋಮೋವನ್ನು ಬಿಗ್​ ಬಾಸ್ ಸೋಶಿಯಲ್​ ಮೀಡಿಯಾ​ ಪೇಜ್​ನಲ್ಲಿ ಹಂಚಿಕೊಳ್ಳಲಾಗಿದೆ. ಈ ಪ್ರೋಮೋದಲ್ಲಿ ಸಲ್ಮಾನ್​ ಖಾನ್​ ತುಂಬಾನೇ ಸಿಟ್ಟಾಗಿದ್ದರು.

ಬಿಗ್​ ಬಾಸ್​ ಸ್ಪರ್ಧಿ ಮೇಲೆ ಸಿಟ್ಟಾಗಿ ಬೀಪ್​ ಶಬ್ದಗಳಿಂದ ಬೈದ ಸಲ್ಮಾನ್​ ಖಾನ್
ಪ್ರತೀಕ್​-ಸಲ್ಮಾನ್​
TV9 Web
| Edited By: |

Updated on: Nov 13, 2021 | 5:22 PM

Share

ಹಿಂದಿ ಬಿಗ್​ ಬಾಸ್ 15ನೇ (Bigg Boss 15)ಸೀಸನ್​ ಆರಂಭಗೊಂಡು ಹಲವು ದಿನಗಳು ಕಳೆದಿವೆ. ಮನೆಯಲ್ಲಿರುವ ಸ್ಪರ್ಧಿಗಳು ಒಬ್ಬೊಬ್ಬರಾಗಿಯೇ ಎಲಿಮಿನೇಟ್​ ಆಗುತ್ತಿದ್ದಾರೆ. ಇದರ ಜತೆಗೆ ಸಾಕಷ್ಟು ವಿವಾದಗಳನ್ನು ಕೂಡ ಈ ಶೋ ಸೃಷ್ಟಿ ಮಾಡುತ್ತಿದೆ. ಈ ಬಾರಿಯ ಬಿಗ್​ ಬಾಸ್​ ಕಾಡಿನ ಥೀಮ್​ನಲ್ಲಿ ಮೂಡಿ ಬಂದಿದ್ದು, ವೀಕ್ಷಕರಿಗೆ ಇಷ್ಟವಾಗುತ್ತಿದೆ. ಪ್ರತೀ ವೀಕೆಂಡ್​ನಲ್ಲಿ ಸಲ್ಮಾನ್​ ಖಾನ್​ (Salman Khan) ನಿರೂಪಣೆ ಗಮನ ಸೆಳೆಯುತ್ತಿದೆ. ಎಲ್ಲಾ ಪರಿಸ್ಥಿತಿಗಳನ್ನು ಅವರು ಕೂಲ್​ ಆಗಿ ನಿರ್ವಹಿಸುತ್ತಾರೆ. ಆದರೆ, ಈ ವಾರ ಸಲ್ಮಾನ್​ ಖಾನ್ ತಮ್ಮ ಟೆಂಪರ್​ ಕಳೆದುಕೊಂಡಿದ್ದಾರೆ. ಪ್ರತೀಕ್​ ಸೆಹಜ್​ಪಾಲ್​ಗೆ ಬಾಯಿಗೆ ಬಂದಂತೆ ಬೈದಿದ್ದಾರೆ. ಈ ವೇಳೆ ಬೀಪ್​ ಶಬ್ದಗಳನ್ನು ಕೂಡ ಬಳಕೆ ಮಾಡಿದ್ದು ವೀಕ್ಷಕರಲ್ಲಿ ಅಚ್ಚರಿ ಮೂಡಿಸಿದೆ.

ಈ ವಾರದ ಪ್ರೋಮೋವನ್ನು ಬಿಗ್​ ಬಾಸ್ ಸೋಶಿಯಲ್​ ಮೀಡಿಯಾ​ ಪೇಜ್​ನಲ್ಲಿ ಹಂಚಿಕೊಳ್ಳಲಾಗಿದೆ. ಈ ಪ್ರೋಮೋದಲ್ಲಿ ಸಲ್ಮಾನ್​ ಖಾನ್​ ತುಂಬಾನೇ ಸಿಟ್ಟಾಗಿದ್ದರು. ಇದಕ್ಕೆ ಕಾರಣವಾಗಿದ್ದು ಪ್ರತೀಕ್​ ಅವರು. ರಾಜೀವ್​ ಅವರನ್ನು ತುಂಬಾನೇ ಕೆಟ್ಟದಾಗಿ ಹೀಯಾಳಿಸಿದ್ದರು ಪ್ರತೀಕ್​. ಇದು ಸಲ್ಮಾನ್​ ಖಾನ್​ಗೆ ಸಿಟ್ಟು ತರಿಸಿದೆ.

‘ಪ್ರತೀಕ್, ನೀವು ಬೇರೆಯವರ ಬಗ್ಗೆ ಹಾಸ್ಯ ಮಾಡೋಕೆ​ ಇದು ಕಾಮಿಡಿ ಶೋ ಎಂದುಕೊಂಡಿದ್ದೀರಾ? ನಾನು ಯಾವಾಗಲೂ ನನ್ನ ಗೆರೆಯನ್ನು ದಾಟಿಲ್ಲ. ರಾಜೀವ್​​ಗೆ ನೀವು ಏನು ಹೇಳೋಕೆ ಹೊರಟಿರಿ?’ ಎಂಬಿತ್ಯಾದಿ ಪ್ರಶ್ನೆಗಳನ್ನು ತುಂಬಾನೇ ಸಿಟ್ಟಿನಿಂದ ಕೇಳಿದರು ಸಲ್ಮಾನ್​ ಖಾನ್​. ಇದಕ್ಕೆ ಸಮಜಾಯಿಷಿ ನೀಡೋಕೆ ಬಂದರು ಪ್ರತೀಕ್​. ಆಗ ಸಲ್ಲು ಸಿಟ್ಟು ಮತ್ತಷ್ಟು ಹೆಚ್ಚಾಯಿತು. ಸಲ್ಲು ಬೀಪ್​ ಶಬ್ದ ಬಳಕೆ ಮಾಡಿದರು. ಮುಂದುವರಿದು, ‘ನಿಮಗೆ ನಿಮ್ಮ ಗಡಿ ಏನು ಎಂಬುದು ಗೊತ್ತಿಲ್ಲ.  ನಾನು ನಿಮ್ಮ ಬಗ್ಗೆ ತಮಾಷೆ ಮಾಡಲು ಪ್ರಾರಂಭಿಸಬೇಕೇ? ಹಾಗೆ ಮಾಡಿದರೆ ನೀವು ಎರಡು ಸೆಕೆಂಡುಗಳಲ್ಲಿ ಅಳಲು ಪ್ರಾರಂಭಿಸುತ್ತೀರಿ’ ಎಂದರು ಸಲ್ಮಾನ್​ ಖಾನ್​.

‘ನಾನು ನಿಮ್ಮೊಂದಿಗೆ ಇರಬೇಕಿತ್ತು. ನಾನು ನಿಮ್ಮನ್ನು ಯಾವ ಗತಿಗೆ ತರುತ್ತಿದ್ದೆ ಎಂಬುದನ್ನು ಯೋಚಿಸಿ. ನಾನು ಅಲ್ಲಿದ್ದಿದ್ದರೆ ಮನೆ ಬಿಟ್ಟು ಕಳುಹಿಸಿ ಎಂದು ನೀವು ಬೇಡಬೆಕಿತ್ತು. ಆ ಪರಿಸ್ಥಿತಿಗೆ ನಿಮ್ಮನ್ನು ತರುತ್ತಿದ್ದೆ’ ಎಂದಿದ್ದಾರೆ ಸಲ್ಲು.

ಇದನ್ನೂ ಓದಿ: Salman Khan: ಸೆಲ್ಫಿ ಗೆದುಕೊಳ್ಳಲು ಬಂದ ಅಭಿಮಾನಿ ಬಗ್ಗೆ ಸಿಟ್ಟಾದ ಸಲ್ಮಾನ್​ ಖಾನ್ ಮಾಡಿದ್ದೇನು ನೋಡಿ

Follow Us
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು