Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಸ್ಪರ್ಧಿ ಮೇಲೆ ಸಿಟ್ಟಾಗಿ ಬೀಪ್​ ಶಬ್ದಗಳಿಂದ ಬೈದ ಸಲ್ಮಾನ್​ ಖಾನ್

ಈ ವಾರದ ಪ್ರೋಮೋವನ್ನು ಬಿಗ್​ ಬಾಸ್ ಸೋಶಿಯಲ್​ ಮೀಡಿಯಾ​ ಪೇಜ್​ನಲ್ಲಿ ಹಂಚಿಕೊಳ್ಳಲಾಗಿದೆ. ಈ ಪ್ರೋಮೋದಲ್ಲಿ ಸಲ್ಮಾನ್​ ಖಾನ್​ ತುಂಬಾನೇ ಸಿಟ್ಟಾಗಿದ್ದರು.

ಬಿಗ್​ ಬಾಸ್​ ಸ್ಪರ್ಧಿ ಮೇಲೆ ಸಿಟ್ಟಾಗಿ ಬೀಪ್​ ಶಬ್ದಗಳಿಂದ ಬೈದ ಸಲ್ಮಾನ್​ ಖಾನ್
ಪ್ರತೀಕ್​-ಸಲ್ಮಾನ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 13, 2021 | 5:22 PM

ಹಿಂದಿ ಬಿಗ್​ ಬಾಸ್ 15ನೇ (Bigg Boss 15)ಸೀಸನ್​ ಆರಂಭಗೊಂಡು ಹಲವು ದಿನಗಳು ಕಳೆದಿವೆ. ಮನೆಯಲ್ಲಿರುವ ಸ್ಪರ್ಧಿಗಳು ಒಬ್ಬೊಬ್ಬರಾಗಿಯೇ ಎಲಿಮಿನೇಟ್​ ಆಗುತ್ತಿದ್ದಾರೆ. ಇದರ ಜತೆಗೆ ಸಾಕಷ್ಟು ವಿವಾದಗಳನ್ನು ಕೂಡ ಈ ಶೋ ಸೃಷ್ಟಿ ಮಾಡುತ್ತಿದೆ. ಈ ಬಾರಿಯ ಬಿಗ್​ ಬಾಸ್​ ಕಾಡಿನ ಥೀಮ್​ನಲ್ಲಿ ಮೂಡಿ ಬಂದಿದ್ದು, ವೀಕ್ಷಕರಿಗೆ ಇಷ್ಟವಾಗುತ್ತಿದೆ. ಪ್ರತೀ ವೀಕೆಂಡ್​ನಲ್ಲಿ ಸಲ್ಮಾನ್​ ಖಾನ್​ (Salman Khan) ನಿರೂಪಣೆ ಗಮನ ಸೆಳೆಯುತ್ತಿದೆ. ಎಲ್ಲಾ ಪರಿಸ್ಥಿತಿಗಳನ್ನು ಅವರು ಕೂಲ್​ ಆಗಿ ನಿರ್ವಹಿಸುತ್ತಾರೆ. ಆದರೆ, ಈ ವಾರ ಸಲ್ಮಾನ್​ ಖಾನ್ ತಮ್ಮ ಟೆಂಪರ್​ ಕಳೆದುಕೊಂಡಿದ್ದಾರೆ. ಪ್ರತೀಕ್​ ಸೆಹಜ್​ಪಾಲ್​ಗೆ ಬಾಯಿಗೆ ಬಂದಂತೆ ಬೈದಿದ್ದಾರೆ. ಈ ವೇಳೆ ಬೀಪ್​ ಶಬ್ದಗಳನ್ನು ಕೂಡ ಬಳಕೆ ಮಾಡಿದ್ದು ವೀಕ್ಷಕರಲ್ಲಿ ಅಚ್ಚರಿ ಮೂಡಿಸಿದೆ.

ಈ ವಾರದ ಪ್ರೋಮೋವನ್ನು ಬಿಗ್​ ಬಾಸ್ ಸೋಶಿಯಲ್​ ಮೀಡಿಯಾ​ ಪೇಜ್​ನಲ್ಲಿ ಹಂಚಿಕೊಳ್ಳಲಾಗಿದೆ. ಈ ಪ್ರೋಮೋದಲ್ಲಿ ಸಲ್ಮಾನ್​ ಖಾನ್​ ತುಂಬಾನೇ ಸಿಟ್ಟಾಗಿದ್ದರು. ಇದಕ್ಕೆ ಕಾರಣವಾಗಿದ್ದು ಪ್ರತೀಕ್​ ಅವರು. ರಾಜೀವ್​ ಅವರನ್ನು ತುಂಬಾನೇ ಕೆಟ್ಟದಾಗಿ ಹೀಯಾಳಿಸಿದ್ದರು ಪ್ರತೀಕ್​. ಇದು ಸಲ್ಮಾನ್​ ಖಾನ್​ಗೆ ಸಿಟ್ಟು ತರಿಸಿದೆ.

‘ಪ್ರತೀಕ್, ನೀವು ಬೇರೆಯವರ ಬಗ್ಗೆ ಹಾಸ್ಯ ಮಾಡೋಕೆ​ ಇದು ಕಾಮಿಡಿ ಶೋ ಎಂದುಕೊಂಡಿದ್ದೀರಾ? ನಾನು ಯಾವಾಗಲೂ ನನ್ನ ಗೆರೆಯನ್ನು ದಾಟಿಲ್ಲ. ರಾಜೀವ್​​ಗೆ ನೀವು ಏನು ಹೇಳೋಕೆ ಹೊರಟಿರಿ?’ ಎಂಬಿತ್ಯಾದಿ ಪ್ರಶ್ನೆಗಳನ್ನು ತುಂಬಾನೇ ಸಿಟ್ಟಿನಿಂದ ಕೇಳಿದರು ಸಲ್ಮಾನ್​ ಖಾನ್​. ಇದಕ್ಕೆ ಸಮಜಾಯಿಷಿ ನೀಡೋಕೆ ಬಂದರು ಪ್ರತೀಕ್​. ಆಗ ಸಲ್ಲು ಸಿಟ್ಟು ಮತ್ತಷ್ಟು ಹೆಚ್ಚಾಯಿತು. ಸಲ್ಲು ಬೀಪ್​ ಶಬ್ದ ಬಳಕೆ ಮಾಡಿದರು. ಮುಂದುವರಿದು, ‘ನಿಮಗೆ ನಿಮ್ಮ ಗಡಿ ಏನು ಎಂಬುದು ಗೊತ್ತಿಲ್ಲ.  ನಾನು ನಿಮ್ಮ ಬಗ್ಗೆ ತಮಾಷೆ ಮಾಡಲು ಪ್ರಾರಂಭಿಸಬೇಕೇ? ಹಾಗೆ ಮಾಡಿದರೆ ನೀವು ಎರಡು ಸೆಕೆಂಡುಗಳಲ್ಲಿ ಅಳಲು ಪ್ರಾರಂಭಿಸುತ್ತೀರಿ’ ಎಂದರು ಸಲ್ಮಾನ್​ ಖಾನ್​.

‘ನಾನು ನಿಮ್ಮೊಂದಿಗೆ ಇರಬೇಕಿತ್ತು. ನಾನು ನಿಮ್ಮನ್ನು ಯಾವ ಗತಿಗೆ ತರುತ್ತಿದ್ದೆ ಎಂಬುದನ್ನು ಯೋಚಿಸಿ. ನಾನು ಅಲ್ಲಿದ್ದಿದ್ದರೆ ಮನೆ ಬಿಟ್ಟು ಕಳುಹಿಸಿ ಎಂದು ನೀವು ಬೇಡಬೆಕಿತ್ತು. ಆ ಪರಿಸ್ಥಿತಿಗೆ ನಿಮ್ಮನ್ನು ತರುತ್ತಿದ್ದೆ’ ಎಂದಿದ್ದಾರೆ ಸಲ್ಲು.

ಇದನ್ನೂ ಓದಿ: Salman Khan: ಸೆಲ್ಫಿ ಗೆದುಕೊಳ್ಳಲು ಬಂದ ಅಭಿಮಾನಿ ಬಗ್ಗೆ ಸಿಟ್ಟಾದ ಸಲ್ಮಾನ್​ ಖಾನ್ ಮಾಡಿದ್ದೇನು ನೋಡಿ

ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ
ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ
ಕುಮಾರಸ್ವಾಮಿ ಮನೆಗೆ ಲೇಟಾಗಿ ಹೋಗಿದ್ದರೆ ಅವರೇ ಅದಕ್ಕೆ ಜಬಾಬ್ದಾರರು: ಸಚಿವ
ಕುಮಾರಸ್ವಾಮಿ ಮನೆಗೆ ಲೇಟಾಗಿ ಹೋಗಿದ್ದರೆ ಅವರೇ ಅದಕ್ಕೆ ಜಬಾಬ್ದಾರರು: ಸಚಿವ
ಪಬ್ಲಿಕ್​ನಲ್ಲಿ ಮುಸ್ಲಿಂ ಮಹಿಳೆಯ ಹಿಜಾಬ್ ಕಳಚಿದ ಪುರುಷರು
ಪಬ್ಲಿಕ್​ನಲ್ಲಿ ಮುಸ್ಲಿಂ ಮಹಿಳೆಯ ಹಿಜಾಬ್ ಕಳಚಿದ ಪುರುಷರು
ಭಯಾನಕ ವಿಡಿಯೋ: ಜೀಪ್ ರ‍್ಯಾಲಿ ನಡೆಯುವ ವೇಳೆ‌ ಕಾಡಾನೆ ಡೆಡ್ಲಿ ಅಟ್ಯಾಕ್
ಭಯಾನಕ ವಿಡಿಯೋ: ಜೀಪ್ ರ‍್ಯಾಲಿ ನಡೆಯುವ ವೇಳೆ‌ ಕಾಡಾನೆ ಡೆಡ್ಲಿ ಅಟ್ಯಾಕ್
4 ವರ್ಷದ ಪ್ರೀತಿಗೆ ಸಾಕ್ಷಿಯಾದ ಅಂಬೇಡ್ಕರ್ ಜಯಂತಿ: ಪ್ರತಿಮೆ ಎದುರೇ ವಿವಾಹ
4 ವರ್ಷದ ಪ್ರೀತಿಗೆ ಸಾಕ್ಷಿಯಾದ ಅಂಬೇಡ್ಕರ್ ಜಯಂತಿ: ಪ್ರತಿಮೆ ಎದುರೇ ವಿವಾಹ
ಜಾತಿಗಣತಿ ವರದಿ ಬಗ್ಗೆ ಕೇಳಿದರೆ ಸಿಡಿಮಿಡಿಗೊಳ್ಳುವ ಸಿಎಂ ಸಿದ್ದರಾಮಯ್ಯ
ಜಾತಿಗಣತಿ ವರದಿ ಬಗ್ಗೆ ಕೇಳಿದರೆ ಸಿಡಿಮಿಡಿಗೊಳ್ಳುವ ಸಿಎಂ ಸಿದ್ದರಾಮಯ್ಯ
ನಿರ್ಜನ ಪ್ರದೇಶದಲ್ಲಿ ತಪ್ಪಿಸಿಕೊಳ್ಳುವ ವ್ಯರ್ಥ ಪ್ರಯತ್ನ ನಡೆಸಿದ್ದ ಆರೋಪಿ
ನಿರ್ಜನ ಪ್ರದೇಶದಲ್ಲಿ ತಪ್ಪಿಸಿಕೊಳ್ಳುವ ವ್ಯರ್ಥ ಪ್ರಯತ್ನ ನಡೆಸಿದ್ದ ಆರೋಪಿ