ಸಮಂತಾ ನಂಬಿ ಪೂಜಿಸುವ ದೇವರು ಯಾವುದು? ಏನು ಈ ದೇವಿಯ ಮಹಿಮೆ?

Samantha: ಮಾಸಿಕ, ದಹಿಕ ಆರೋಗ್ಯ ತೀವ್ರ ಹದಗೆಟ್ಟು ಜೀವನದಲ್ಲಿ ಇನ್ನು ಮೇಲೆ ಬರಲಾಗುವುದೇ ಇಲ್ಲವೇನೋ ಎಂಬ ಸ್ಥಿತಿಗೆ ತಲುಪಿದ್ದ ಸಮಂತಾರಿಗೆ ಜೀವನೋತ್ಸಾಹ ತುಂಬಿದ್ದು ದೇವಿಯ ಆರಾಧನೆ. ಯಾರಾ ದೇವಿ? ಏನು ಆಕೆಯ ಮಹಿಮೆ?

ಸಮಂತಾ ನಂಬಿ ಪೂಜಿಸುವ ದೇವರು ಯಾವುದು? ಏನು ಈ ದೇವಿಯ ಮಹಿಮೆ?
ಸಮಂತಾ
Follow us
|

Updated on: May 18, 2023 | 6:26 PM

ಕಳೆದ ಕೆಲ ವರ್ಷಗಳಲ್ಲಿ ಖಾಸಗಿ ಜೀವನದಲ್ಲಿ ಸಾಕಷ್ಟು ನೋವುಗಳನ್ನುಂಡವರು ಸಮಂತಾ (Samantha). ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಸಮಂತಾಗೆ ದೈಹಿಕ ಆರೋಗ್ಯ ಸಮಸ್ಯೆಗಳು ಸಹ ಒಂದರ ಬಳಿಕ ಒಂದರಂತೆ ಕಾಡಿದವು. ವಿಚ್ಛೇದನದ ಬಳಿಕವಂತೂ ಸಮಂತಾ ಇನ್ನು ಮೇಲೇರಲಾರರು ಎಂದೇ ಹಲವು ಸಿನಿಮಾ ಮಂದಿ ಎಣಿಸಿದ್ದರು. ಆದರೆ ಹಲವರಿಗೆ ಆಶ್ಚರ್ಯ ಮೂಡಿಸುವಂತೆ ಹಿಂದಿನಕ್ಕಿಂತಲೂ ಗಟ್ಟಿಯಾಗಿ ಅವರು ಮೇಲೆದ್ದು ಬಂದರು. ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯದಲ್ಲಿ ಹಿಂದಿಗಿಂತಲೂ ಗಟ್ಟಿಯಾಗಿದ್ದಾರೆ. ವೃತ್ತಿಯಲ್ಲಿ ಸಹ ಏರುಗತಿಯಲ್ಲಿದ್ದಾರೆ. ಇದಕ್ಕೆ ಸಮಂತಾರ ಸ್ವಪ್ರಯತ್ನವೇ ಕಾರಣವಾದರೂ ಆ ಸ್ವಪ್ರಯತ್ನಕ್ಕೆ ಪ್ರೇರಣೆ ಒದಗಿಸಿದ್ದು ಭಕ್ತಿ! ಸಮಂತಾ ನಂಬಿದ್ದ ದೇವರು (God). ಸಮಂತಾ ನಂಬಿರುವ ದೇವರು ಪವಾಡಗಳನ್ನು ಮಾಡುವ, ವರಗಳನ್ನು ಕರುಣಿಸುವ ದೇವರಲ್ಲ ಬದಲಿಗೆ ಅಂತಃಶಕ್ತಿ ತುಂಬುವ ದೇವರು.

ಸಮಂತಾ, ಲಿಂಗ ಭೈರವಿ ದೇವಿಯ ಆರಾಧಕಿ. ತಮ್ಮ ಮನೆಯಲ್ಲಿಯೇ ಸಣ್ಣ ಗುಡಿ ಕಟ್ಟಿ ಲಿಂಗ ಭೈರವಿಯನ್ನು ಪ್ರತಿಷ್ಠಾಪನೆ ಮಾಡಿ ಪ್ರತಿದಿನವೂ ದೇವಿಯ ಆರಾಧನೆ ಮಾಡುತ್ತಾರೆ. ದೇವರ ಮುಂದೆ ಕೂತು ಧ್ಯಾನಸ್ತರಾಗುತ್ತಾರೆ. ದೇವಿಯ ಸ್ತೋತ್ರಗಳನ್ನು ಪಠಿಸಿ ಆನಂದ ಪಡೆಯುತ್ತಾರೆ, ಬದುಕನ್ನು ತಮಗೆ ಸರಿಎನಿಸಿದಂತೆ ಬದುಕಲು ಪ್ರೇರಣೆ ಪಡೆಯುತ್ತಾರೆ.

ಲಿಂಗ ಭೈರವಿ ದೇವಿ ಸಾಂಪ್ರದಾಯಿಕ ದೇವರುಗಳಂತಲ್ಲ. ದೈವಿಕ ಸ್ತೀತ್ವವನ್ನು ಲಿಂಗದ ರೂಪದಲ್ಲಿ ಪೂಜಿಸುವುದೇ ಲಿಂಗ ಭೈರವಿಯ ಆರಾಧನೆಯ ಉದ್ದೇಶ. ಭೈರವಿ ದೇವಿಯ ಲಿಂಗದ ರೂಪವೆಂದೂ ಹೇಳಬಹುದು. ಲಿಂಗದ ರೂಪದಲ್ಲಿನ ಏಕೈಕ ದೇವಿ ಎಂದೂ ಹೇಳಬಹುದು. ಲಿಂಗ ಭೈರವಿ ದೇವಿಯ ರೂಪ ಅನೂಹ್ಯವಾದುದು. ಲಿಂಗಕ್ಕೆ ಎರಡು ದೊಡ್ಡ ಕಣ್ಣಿನ ಜೊತೆಗೆ ಹತ್ತು ಪುಟ್ಟ ಕೈಗಳಿವೆ. ವಿಶೇಷವೆಂದರೆ ಪರಮೇಶ್ವರನಂತೆ ಈಕೆಯ ಹಣೆಯ ಮೇಲೂ ಮೂರನೇ ಕಣ್ಣೋಂದಿದೆ. ಒಂದು ಮೂಗುತಿಯೂ ಇದೆ.

ಭೈರವಿಯ ಕೃಪೆಗೆ ಪಾತ್ರರಾದವರು ಜೀವನ ಅಥವಾ ಮರಣ, ಬಡತನ ಅಥವಾ ವೈಫಲ್ಯದ ಚಿಂತೆ ಅಥವಾ ಭಯ ಅವರನ್ನು ಕಾಡುವುದಿಲ್ಲ. ಈ ಎಲ್ಲ ಪ್ರಾಪಂಚಿಕ ಭಯಗಳಿಂದ ಅವರು ಹೊರಗೆ ಬರುತ್ತಾರೆ. ಯಾವುದು ಉತ್ತಮ ಎಂದು ಮನುಷ್ಯರು ಪರಿಗಣಿಸತ್ತಾರೋ ಅವಲ್ಲವೂ ಲಿಂಗ ಭೈರವಿ ದೇವಿಯ ಕೃಪೆಗೆ ಪಾತ್ರರಾದವರಿಗೆ ಧಕ್ಕುತ್ತದೆ ಎನ್ನುತ್ತಾರೆ ಇಶಾ ಫೌಂಡೇಶನ್​ನ ಸದ್ಗುರು.

ಇದನ್ನೂ ಓದಿ:ಸಮಂತಾ ಜೊತೆಗಿನ ವಿಚ್ಛೇದನದ ಬಗ್ಗೆ ನಾಗ ಚೈತನ್ಯ ಮಾತು, ಮೂರನೇ ವ್ಯಕ್ತಿಗಳ ಬಗ್ಗೆ ಆಕ್ರೋಶ

ಲಿಂಗ ಭೈರವಿಯು ದೈವಿಕ ಸ್ತ್ರೀತ್ವದ ಅಭಿವ್ಯಕ್ತಿಯಾಗಿದೆ, ಕೊಯಂಬತ್ತೂರಿನ ವೆಲ್ಲಿಯಂಗಿರಿ ತಪ್ಪಲಿನಲ್ಲಿ ಇದರ ದೇವಾಲಯವಿದೆ (ಇಶಾ ಫೌಂಡೇಶನ್). ಶಕ್ತಿಯುತ, ವರ್ಣರಂಜಿತ, ಮಣ್ಣಿನ ಗುಣಗುಳ್ಳ, ಮಾನವೀಯತೆವೆತ್ತ ತಾಯಿಯಂತಹ ಗುಣಗಳುಳ್ಳ ಲಿಂಗ ಭೈರವಿಯು ಪೂರ್ಣ ಪ್ರಮಾಣದ ಸಂಪೂರ್ಣ ಮಹಿಳೆ, ಈಕೆ ಏಕಕಾಲದಲ್ಲಿ ಉಗ್ರಳೂ ಮತ್ತು ಕರುಣಾಮಯಿಯೂ ಹೌದು ಎನ್ನುತ್ತಾರೆ ಸದ್ಗುರು. ಅವರೇ ಹೇಳಿರುವಂತೆ ನೀವು ಲಿಂಗ ಭೈರವಿಯ ಭಕ್ತರಾಗಿ ಇರಬೇಕೆಂದೇನೂ ಇಲ್ಲ. ನಿಮಗೆ ಆಕೆಯ ಮೇಲೆ ನಂಬಿಕೆ ಇರಬೇಕೆಂದೇನೂ ಇಲ್ಲ. ನೀವು ಆಕೆಯ ಧನಾತ್ಮಕತೆಯ ಬಗ್ಗೆ ಯೋಚಿಸಿ, ಆ ಧನಾತ್ಮಕತೆ ನಿಮ್ಮ ಜೀವನದಲ್ಲಿ ಪ್ರವೇಶಿಸಿದರೆ ಹೇಗಿರಬಹುದೆಂದು ಯೋಚಿಸಿರಿ ಸಾಕು ನೀವು ಆಕೆಯ ಭಕ್ತರಾಗುತ್ತೀರಿ ಎಂದಿದ್ದಾರೆ.

ಸಮಂತಾ ಮಾತ್ರವೇ ಅಲ್ಲ ನಟಿ ತಮನ್ನಾ ಸಹ ಲಿಂಗ ಭೈರವಿಯ ಪರಮ ಭಕ್ತೆ. ಇತ್ತೀಚೆಗಷ್ಟೆ ಇಶಾ ಫೌಂಡೇಶನ್​ನಲ್ಲಿ ಲಿಂಗ ಭೈರವಿಯ ವಿಶೇಷ ಪೂಜೆಯಲ್ಲಿ ನಟಿ ಸಮಂತಾ ಭಾಗವಹಿಸಿದ್ದರು. ಸ್ತ್ರೀತ್ವದ (ಫೆಮಿನಿಸಮ್) ಪ್ರತಿಪಾಧಕಿಯಾಗಿರುವ ತಮನ್ನಾ, ಸ್ತ್ರೀತನದ ದೈವಿಕ ಅವತಾರವಾದ ಲಿಂಗ ಭೈರವಿಯನ್ನು ನಂಬುತ್ತಾರೆ ಆರಾಧಿಸುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ