AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮತ್ತೆ ಸೂಪರ್​ ಹಿಟ್​ ಆಗಲಿದೆ A ಸಿನಿಮಾ’: ನಟಿ ಚಾಂದಿನಿ ಭರವಸೆಯ ಮಾತು

‘ಎ’ ಸಿನಿಮಾದ ಮೂಲಕ ಮನೆಮಾತಾದ ನಟಿ ಚಾಂದಿನಿ ಅವರು ಬಳಿಕ ಕೆಲವು ಸಿನಿಮಾಗಳಲ್ಲಿ ನಟಿಸಿದರು. ಈಗ ‘ಎ’ ಸಿನಿಮಾ ಮರುಬಿಡುಗಡೆ ಆಗುತ್ತಿರುವ ಸಂದರ್ಭದಲ್ಲಿ ಆ ದಿನಗಳನ್ನು ಚಾಂದಿನಿ ಅವರು ನೆನಪಿಸಿಕೊಂಡಿದ್ದಾರೆ. ಉಪೇಂದ್ರ ಮತ್ತು ಚಾಂದಿನಿ ಅವರನ್ನು ದೊಡ್ಡ ಪರದೆಯ ಮೇಲೆ ಮತ್ತೊಮ್ಮೆ ಜೋಡಿಯಾಗಿ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗುತ್ತಿದೆ.

‘ಮತ್ತೆ ಸೂಪರ್​ ಹಿಟ್​ ಆಗಲಿದೆ A ಸಿನಿಮಾ’: ನಟಿ ಚಾಂದಿನಿ ಭರವಸೆಯ ಮಾತು
ಚಾಂದಿನಿ
ಮದನ್​ ಕುಮಾರ್​
|

Updated on: May 16, 2024 | 6:38 PM

Share

ಉಪೇಂದ್ರ ಅವರ ಅಭಿಮಾನಿಗಳಿಗೆ ಈ ವಾರ ಸ್ಪೆಷಲ್​ ಆಗಿರಲಿದೆ. ಅದೇ ರೀತಿ, ನಟಿ ಚಾಂದಿನಿ (Chandini) ಅವರ ಅಭಿಮಾನಿಗಳಿಗೆ ಕೂಡ ಇದು ವಿಶೇಷ ವಾರ. ಯಾಕೆಂದರೆ, ಉಪೇಂದ್ರ (Upendra) ಮತ್ತು ಚಾಂದಿನಿ ಜೋಡಿಯಾಗಿ ನಟಿಸಿದ ‘ಎ’ ಸಿನಿಮಾ ಮೇ 17ರಂದು ಮರುಬಿಡುಗಡೆ ಆಗಲಿದೆ. ಅದಕ್ಕಾಗಿ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಹೊಸ ಸಿನಿಮಾಗಳು ಬಿಡುಗಡೆ ಆಗದ ಹಿನ್ನೆಲೆಯಲ್ಲಿ ಹಳೇ ಸಿನಿಮಾಗಳನ್ನು ರೀ-ರಿಲೀಸ್​ ಮಾಡುವ ಟ್ರೆಂಡ್​ ಚಾಲ್ತಿಯಲ್ಲಿದೆ. ಈಗ ‘ಎ’ ಸಿನಿಮಾ (A Kannada Movie) ಹಿಟ್​ ಆಗಲಿದೆ ಎಂದು ಚಾಂದಿನಿ ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಸ್ಯಾಂಡಲ್​ವುಡ್​ನ ಸಾರ್ವಕಾಲಿಕ ಸೂಪರ್ ಹಿಟ್ ಸಿನಿಮಾಗಳ ಪಟ್ಟಿಯಲ್ಲಿ ‘ಎ’ ಸಿನಿಮಾ ಕೂಡ ಇದೆ. 1998ರಲ್ಲಿ ತೆರೆಕಂಡಿದ್ದ ಈ ಚಿತ್ರ ಭರ್ಜರಿ ಯಶಸ್ಸು ಗಳಿಸಿತ್ತು. ಹೊಸತನ ಮತ್ತು ಹೊಸಬರಿಂದ ಕೂಡಿದ್ದ ಈ ಚಿತ್ರಕ್ಕೆ ಜನರು ಮೆಚ್ಚುಗೆ ನೀಡಿದ್ದರು. ಉಪೇಂದ್ರ ಅವರಿಗೆ ಜೋಡಿಯಾಗಿ ನಟಿಸಿದ್ದ ಚಾಂದಿನಿ ಅವರು ಈ ಸಿನಿಮಾದಿಂದ ಮನೆ ಮಾತಾದರು. ಈಗ ರೀ-ರಿಲೀಸ್​ ಆಗುತ್ತಿರುವ ಸಂದರ್ಭದಲ್ಲಿ ಚಾಂದಿನಿ ಅವರು ‘ಎ’ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ಚಾಂದಿನಿ ಪಾಲಿಗೆ ‘ಎ’ ಒಂದು ಮೈಲುಗಲ್ಲಿನ ಸಿನಿಮಾ. ಅದೇ ರೀತಿ ಚಿತ್ರರಂಗದ ಪಾಲಿಗೂ ಇದು ಹೊಸ ಮೈಲಿಗಲ್ಲನ್ನು ಸೃಷ್ಟಿ ಮಾಡಿದ್ದ ಸಿನಿಮಾ. ಹೀಗೂ ಸಿನಿಮಾ ಮಾಡಬಹುದಾ ಅಂತ ತೋರಿಸಿದ ಚಿತ್ರ ‘ಎ’. ಅಷ್ಟರಮಟ್ಟಿಗೆ ಕ್ರಿಯೇಟಿವ್​ ಆಗಿತ್ತು ಉಪೇಂದ್ರ ಅವರ ನಿರ್ದೇಶನ. ‘ಎ’ ಸಿನಿಮಾ ಈಗಿನ ಕಾಲಕ್ಕೂ ಪ್ರಸ್ತುತವಾಗಿದೆ ಎಂದು ಚಾಂದಿನಿ ಹೇಳಿದ್ದಾರೆ.

‘ನನ್ನ ಬದುಕನ್ನೇ ಬದಲಾಯಿಸಿದ ಸಿನಿಮಾ ಅದು. ಆ ಸಿನಿಮಾದ ಕಾರಣದಿಂದ ನನಗೆ ಜನರ ಪ್ರೀತಿ ಮತ್ತು ಜನಪ್ರಿಯತೆ ಸಿಕ್ಕಿತು. ಸಿನಿಮಾದಲ್ಲಿ ಗಾಡ್​ ಈಸ್​ ಗ್ರೇಟ್​ ಎಂಬ ಡೈಲಾಗ್​ನ ರೀತಿ ದೇವರು ಮತ್ತು ಜನರ ಆಶೀರ್ವಾದದಿಂದ ನಾನು ಇಂದಿಗೂ ‘ಎ’ ಸಿನಿಮಾದ ಚಾಂದಿನಿ ರೀತಿಯೇ ಇದ್ದೇನೆ. ಎಲ್ಲ ಕಾಲಘಟ್ಟವನ್ನೂ ಮೀರಿದ ಒಂದು ಅಪ್ರತಿಮ ಪ್ರೇಮಕಥೆಯೇ ಎ ಸಿನಿಮಾ’ ಎಂದಿದ್ದಾರೆ ಚಾಂದಿನಿ.

ಇದನ್ನೂ ಓದಿ: ‘ಚಿತ್ರಮಂದಿರಕ್ಕೆ ಬರಲ್ಲ ಅಂತ ಜನರನ್ನು ದೂಷಿಸಬಾರದು’: ಉಪೇಂದ್ರ

‘ಉಪೇಂದ್ರ ಅವರ ಡೈರೆಕ್ಷನ್​ ಬಗ್ಗೆ ವರ್ಣಿಸಲು ಪದಗಳೇ ಸಾಕಾಗಲ್ಲ. ಈಗಲೂ ಅವರೇ ನನ್ನ ನೆಚ್ಚಿನ ನಿರ್ದೇಶಕರು. ಗುರುಕಿರಣ್ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದ್ದ ಹಾಡುಗಳು ಈಗಲೂ ಟ್ರೆಂಡ್​ನಲ್ಲಿವೆ. ಕನ್ನಡ ಸಿನಿಪ್ರಿಯರು ಎ ಸಿನಿಮಾದಿಂದ ಇಂದಿನ ತನಕ ನನಗೆ ತೋರಿಸಿದ ಪ್ರೀತಿಗೆ ನಾನು ಚಿರಋಣಿ. ಇಂಥ ಸೂಪರ್ ಹಿಟ್ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಮತ್ತು ನಿರ್ದೇಶಕರಿಗೆ ಧನ್ಯವಾದ’ ಎಂದು ಚಾಂದಿನಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ