AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್​ಕುಮಾರ್ ಹಳೆಯ ವಿಡಿಯೋ ಹಂಚಿಕೊಂಡ ನಟ ಜಗ್ಗೇಶ್​; ಗುರುಪೂರ್ಣಿಮೆಗೆ ವಿಶೇಷ ಸ್ಮರಣೆ

‘ನಮ್ಮದು ಕಲಾವಿದರ ಜಾತಿ. ಕಲಾವಿದರು ಬೆಳೆದರೆ ನನಗೆ ಖುಷಿ. ನಾನು ನಟ ಮಾತ್ರನಲ್ಲ. ನಾನು ಅಭಿಮಾನಿಯೂ ಹೌದು. ಕಲೆಯ ಅಭಿಮಾನ ನನಗೆ ತುಂಬಾನೇ ಇದೆ’ ಎಂದು ವಿಡಿಯೋದಲ್ಲಿ ರಾಜ್​ಕುಮಾರ್​ ಮಾತನಾಡಿದ್ದಾರೆ.

ರಾಜ್​ಕುಮಾರ್ ಹಳೆಯ ವಿಡಿಯೋ ಹಂಚಿಕೊಂಡ ನಟ ಜಗ್ಗೇಶ್​; ಗುರುಪೂರ್ಣಿಮೆಗೆ ವಿಶೇಷ ಸ್ಮರಣೆ
‘ಅಣ್ಣಾವ್ರ ಹಿತನುಡಿ ಮನದಲ್ಲಿ ಲೀನವಾಗಿ ಬದುಕಿನ ಭಾಗವಾಗಿದೆ’; ಗುರುಪೂರ್ಣಿಮೆ ದಿನ ಜಗ್ಗೇಶ್​ ಸ್ಮರಣೆ
TV9 Web
| Edited By: |

Updated on: Jul 24, 2021 | 4:59 PM

Share

ಇಂದು ಗುರುಪೂರ್ಣಿಮೆ. ತಮ್ಮ ಜೀವನದಲ್ಲಿ ಬಂದು ಒಂದಲ್ಲಾ ಒಂದು ರೀತಿಯಲ್ಲಿ ಪಾಠ ಕಲಿಸಿದ ಗುರುವನ್ನು ಎಲ್ಲರೂ ನೆನೆಯುತ್ತಿದ್ದಾರೆ. ನಟ ಜಗ್ಗೇಶ್​ ಕೂಡ ಈ ವಿಶೇಷ ದಿನದಂದು ತಮ್ಮ ಗುರುವನ್ನು ನೆನೆದಿದ್ದು, ವರನಟ ಡಾ. ರಾಜ್​ಕುಮಾರ್​ ಅವರಿಗೆ ಗುರುಪೂರ್ಣಿಮೆಯ ನಮನಗಳು ಎಂದಿದ್ದಾರೆ.

ರಾಜ್​ಕುಮಾರ್​ ಅವರು ಮಾತನಾಡಿದ ವಿಡಿಯೋವನ್ನು ಜಗ್ಗೇಶ್​ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ, ‘ಈ ಮಾತುಗಳನ್ನು ಎದುರಲ್ಲೇ ಕೂತು ಕೇಳಿದ ಅದೃಷ್ಟವಂತ ನಾನು. ಇವರ ಎಲ್ಲಾ ಹಿತನುಡಿ ನನ್ನ ಮನದಲ್ಲಿ ಲೀನವಾಗಿ ಬದುಕಿನ ಭಾಗವಾಗಿದೆ. ಯಾವಜನ್ಮದ ಪುಣ್ಯವೋ ಅವರ ಅಭಿಮಾನಿಯಾಗಿ, ಅವರ ಕಾಲದಲ್ಲೇ ನಟಿಸಿ ಅವರ ಬಳಿಯೇ ಶಹಭಾಸ್​​ಗಿರಿ ಪಡೆದುಬಿಟ್ಟೆ. ನನ್ನ ಕಲಾರಂಗದ ಗುರುವಿಗೆ ಗುರುಪೂರ್ಣಿಮೆಯ ನಮನಗಳು. ಗುರುಭ್ಯೋನಮಃ’ ಎಂದು ಜಗ್ಗೇಶ್​ ಬರೆದುಕೊಂಡಿದ್ದಾರೆ.

‘ನಮ್ಮದು ಕಲಾವಿದರ ಜಾತಿ. ಕಲಾವಿದರು ಬೆಳೆದರೆ ನನಗೆ ಖುಷಿ. ನಾನು ನಟ ಮಾತ್ರನಲ್ಲ. ನಾನು ಅಭಿಮಾನಿಯೂ ಹೌದು. ಕಲೆಯ ಅಭಿಮಾನ ನನಗೆ ತುಂಬಾನೇ ಇದೆ’ ಎಂದು ವಿಡಿಯೋದಲ್ಲಿ ರಾಜ್​ಕುಮಾರ್​ ಮಾತನಾಡಿದ್ದಾರೆ. ಇದಲ್ಲದೆ, ನಿರ್ಮಾಪಕರ ಬಗ್ಗೆಯೂ ರಾಜ್​ಕುಮಾರ್​ ಮಾತನಾಡಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​ ಆಗಿರುವ ಸೆಲೆಬ್ರಿಟಿಗಳಲ್ಲಿ ನಟ ಜಗ್ಗೇಶ್​ ಕೂಡ ಪ್ರಮುಖರು. ಸಿನಿಮಾ ಮಾತ್ರವಲ್ಲದೆ ಹಲವು ವಿಚಾರಗಳನ್ನು ಹಂಚಿಕೊಳ್ಳುವ ಅವರು ಸದಾ ಕಾಲ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರುತ್ತಾರೆ. ಕೊರೊನಾ ಎರಡನೇ ಹಾವಳಿ ಬಳಿಕ ಒಂದಷ್ಟು ದಿನಗಳ ಕಾಲ ಸಾಮಾಜಿಕ ಜಾಲತಾಣದಿಂದ ದೂರ ಉಳಿದುಕೊಂಡಿದ್ದ ಜಗ್ಗೇಶ್​ ಈಗ ಮತ್ತೆ ಸಕ್ರಿಯರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಜಗ್ಗೇಶ್​ ಅವರು ನಾಲ್ಕು ಒಳ್ಳೆಯ ಸ್ಕ್ರಿಪ್ಟ್​ಗಳನ್ನು ಕೇಳಿದ್ದಾರೆ. ಆ ಪೈಕಿ ಎರಡಕ್ಕೆ ಗ್ರೀನ್​ ಸಿಗ್ನಲ್​ ನೀಡಿದ್ದು, ಇನ್ನೆರಡು ಸ್ಕ್ರಿಪ್ಟ್​ಗಳ ಮಾತುಕತೆ ನಡೆಯುತ್ತಿದೆ ಎಂದು ಅವರು​ ಇತ್ತೀಚೆಗೆ ಮಾಹಿತಿ ನೀಡಿದ್ದರು. ವಿಜಯ್​ ಪ್ರಸಾದ್​ ನಿರ್ದೇಶನದ ‘ತೋತಾಪುರಿ’ ಸಿನಿಮಾ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ.

ಇದನ್ನೂ ಓದಿ: ದರ್ಶನ್​ ವಿವಾದ: ಫ್ಯಾನ್ಸ್​ ಇಟ್ಟ ಬೇಡಿಕೆಗೆ ಒಂದೇ ಮಾತಲ್ಲಿ ಉತ್ತರಿಸಿದ ಜಗ್ಗೇಶ್​

ಜಗ್ಗೇಶ್​ 10ನೇ ಕ್ಲಾಸ್​ ಅಂಕಪಟ್ಟಿ ವೈರಲ್​; ಅಪ್ಪನಿಂದ ಬಿದ್ದಿತ್ತು ಬೂಟಿನ ಏಟು

Follow Us
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ