ಮೊಬೈಲ್​ ಬರುವುದಕ್ಕೂ ಮುನ್ನ ‘ಕಾಗದ’ದಲ್ಲಿತ್ತು ಪ್ರೀತಿ-ಪ್ರೇಮ; ಟೀಸರ್​ ನೋಡಿ..

ಹೊಸ ನಟ ಆದಿತ್ಯ ಅವರು ‘ಕಾಗದ’ ಸಿನಿಮಾಗೆ ಹೀರೋ ಆಗಿದ್ದಾರೆ. ಈ ಮೂಲಕ ಅವರು ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಬಾಲನಟಿಯಾಗಿ ಗುರುತಿಸಿಕೊಂಡ ಅಂಕಿತಾ ಜಯರಾಂ ಅವರು ಈ ಸಿನಿಮಾದಲ್ಲಿ ಹೀರೋಯಿನ್​ ಆಗಿದ್ದಾರೆ. ನೇಹಾ ಪಾಟೀಲ್, ನೀನಾಸಂ ಅಶ್ವತ್ಥ್​ ಮುಂತಾದ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ‘ಕಾಗದ’ ಚಿತ್ರದ ಟೀಸರ್​ ರಿಲೀಸ್​ ಆಗಿದೆ.

ಮೊಬೈಲ್​ ಬರುವುದಕ್ಕೂ ಮುನ್ನ ‘ಕಾಗದ’ದಲ್ಲಿತ್ತು ಪ್ರೀತಿ-ಪ್ರೇಮ; ಟೀಸರ್​ ನೋಡಿ..
ಆದಿತ್ಯ, ಅಂಕಿತಾ ಜಯರಾಂ
Follow us
|

Updated on:May 31, 2024 | 10:05 PM

ಪ್ರೇಮಕಥೆಗಳಿಗೆ ಕೊನೆ ಇಲ್ಲ. ಸಿನಿಮಾ ಪ್ರೇಕ್ಷಕರು ಇಂಥ ಕಥೆಗಳನ್ನು ಸದಾ ಕಾಲ ನೋಡಲು ಬಯಸುತ್ತಾರೆ. ಈಗಾಗಲೇ ಹಲವು ಬಗೆಯ ಲವ್​ ಸ್ಟೋರಿಗಳನ್ನು ನೋಡಿದ್ದಾಗಿದೆ. ಹಾಗಿದ್ದರೂ ಕೂಡ ಹೊಸ ಹೊಸ ಪ್ರೇಮಕಥೆಯ ಸಿನಿಮಾಗಳು ತಯಾರಾಗುತ್ತಲೇ ಇವೆ. ಈಗ ಕನ್ನಡದಲ್ಲಿ ‘ಕಾಗದ’ (Kaagada) ಎಂಬ ಹೊಸ ಸಿನಿಮಾ ಸಿದ್ಧವಾಗಿದೆ. ಶೀರ್ಷಿಕೆಯೇ ಹೇಳುವಂತೆ ಕಾಗದಗಳು ವಿನಿಮಯ ಆಗುತ್ತಿದ್ದ ಕಾಲದ ಲವ್​ ಸ್ಟೋರಿ ಇದು. ಅಂದರೆ, ಮೊಬೈಲ್​ಗಳು ಬರುವುದಕ್ಕೂ ಮುನ್ನ ಇದ್ದ ಪ್ರೇಮಕಥೆ. ಅದನ್ನು ‘ಕಾಗದ’ ಸಿನಿಮಾದಲ್ಲಿ (Kannada Movie) ತೋರಿಸಲಾಗುತ್ತಿದೆ.

ಇತ್ತೀಚೆಗಷ್ಟೇ ‘ಕಾಗದ’ ಸಿನಿಮಾದ ಟೀಸರ್​ ಬಿಡುಗಡೆ ಆಗಿದೆ. ಅರುಣ್ ಕುಮಾರ್ ಆಂಜನೇಯ ಅವರ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ರಂಜಿತ್ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. ‘ಜಂಕಾರ್ ಮ್ಯೂಸಿಕ್’ ಮೂಲಕ ‘ಕಾಗದ’ ಟೀಸರ್​ ಬಿಡುಗಡೆ ಆಗಿದೆ. ಟೀಸರ್ ನೋಡಿದ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡಿಜಿಟಲ್​ ಯುಗದ ಪ್ರೇಕ್ಷಕರಿಗೆ ‘ಕಾಗದ’ದ ಕಾಲದ ಪ್ರೇಮಕಥೆಯನ್ನು ತೋರಿಸಲು ಈ ಚಿತ್ರತಂಡ ಸಜ್ಜಾಗಿದೆ.

ಒಂದು ಮುಗ್ಧ ಪ್ರೇಮಕಥೆ ಈ ಸಿನಿಮಾದಲ್ಲಿ ಇದೆ. ಎರಡು ಹಳ್ಳಿಗಳ ಮಧ್ಯದ ದ್ವೇಷದ ನಡುವೆಯೂ ಅರಳಿದ ಪ್ರೀತಿಯ ಕಥೆ ಕೂಡ ಹೌದು. ಈಗಾಗಲೇ ಈ ಸಿನಿಮಾಗೆ ಚಿತ್ರೀಕರಣ ಮುಕ್ತಾಯ ಆಗಿದೆ. ಅಲ್ಲದೇ, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಕೂಡ ಮುಗಿದಿದೆ. ತೆರೆಗೆ ಬರಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಇತ್ತೀಚಿಗೆ ಬಿಡುಗಡೆ ಆದ ಟೀಸರ್​ಗೆ ಜನರಿಂದ ಮೆಚ್ಚುಗೆ ಸಿಕ್ಕಿರುವುದಕ್ಕೆ ಚಿತ್ರತಂಡದವರು ಖುಷಿ ಆಗಿದ್ದಾರೆ.

ಇದನ್ನೂ ಓದಿ: ‘ಸಂಭವಾಮಿ ಯುಗೇ ಯುಗೇ’ ಸಿನಿಮಾದ ಸಾಂಗ್​ ಬಿಡುಗಡೆ ಮಾಡಿದ ಶ್ರುತಿ ಹರಿಹರನ್

ನಿರ್ದೇಶಕ ರಂಜಿತ್​ ಅವರು ಈ ಮೊದಲು ‘ಆ್ಯಪಲ್ ಕೇಕ್’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದರು. ಅವರ ಎರಡನೇ ಸಿನಿಮಾವಾಗಿ ‘ಕಾಗದ’ ಮೂಡಿಬಂದಿದೆ. ಈ ಸಿನಿಮಾದಲ್ಲಿ ನಾಲ್ಕು ಹಾಡುಗಳು ಇವೆ. ಅವುಗಳಿಗೆ ಪ್ರದೀಪ್ ವರ್ಮ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ವೀನಸ್ ನಾಗರಾಜ್ ಮೂರ್ತಿ ಅವರ ಛಾಯಾಗ್ರಹಣ ಈ ಸಿನಿಮಾಗಿದೆ. ಪವನ್ ಗೌಡ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.

‘ಕಾಗದ’ ಸಿನಿಮಾ ಟೀಸರ್​:

‘ಕಾಗದ’ ಸಿನಿಮಾದ ಮೂಲಕ ಯುವ ನಟ ಆದಿತ್ಯ ಅವರು ಹೀರೋ ಆಗಿ ಚಿತ್ರರಂಗ ಪ್ರವೇಶ ಪಡೆಯುತ್ತಿದ್ದಾರೆ. ಬಾಲನಟಿಯಾಗಿ ಜನಪ್ರಿಯತೆ ಪಡೆದ ಅಂಕಿತಾ ಜಯರಾಂ ಈ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ನೇಹಾ ಪಾಟೀಲ್ ಅವರಿಗೆ ಒಂದು ವಿಶೇಷ ಪಾತ್ರ ಈ ಸಿನಿಮಾದಲ್ಲಿದೆ. ಬಾಲರಾಜ್​ ವಾಡಿ, ಅಶ್ವತ್ಥ್​ ನೀನಾಸಂ, ಮಠ ಕೊಪ್ಪಳ, ಶಿವಮಂಜು ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:05 pm, Fri, 31 May 24