AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಲು ಹಿಡಿದರೂ ಆ ಮಹಿಳೆಯನ್ನು ಕ್ಷಮಿಸಲೇ ಇಲ್ಲ ಅಂಬರೀಷ್

ಅಂಬರೀಷ್ ಅವರ ಆಹಾರ ಶೈಲಿಯೇ ವಿಭಿನ್ನ. ಬಾಡೂಟವೆಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಸಹ ಕಲಾವಿದರನ್ನು ಜೊತೆಗಿಟ್ಟುಕೊಂಡು ಊಟ ಮಾಡುವುದನ್ನು ಅವರು ಇಷ್ಟಪಡುತ್ತಿದ್ದರು. ಮೈಕೋ ನಾಗರಾಜ್ ಅವರು 'ಕಲಾ ಮಾಧ್ಯಮ'ಕ್ಕೆ ನೀಡಿದ ಸಂದರ್ಶನದಲ್ಲಿ ಅಂಬಿ ಅವರ ಅಚ್ಚರಿಯ ಆಹಾರ ಕ್ರಮ ಹಾಗೂ ಔದಾರ್ಯದ ಬಗ್ಗೆ ಮಾತನಾಡಿದ್ದಾರೆ.

ಕಾಲು ಹಿಡಿದರೂ ಆ ಮಹಿಳೆಯನ್ನು ಕ್ಷಮಿಸಲೇ ಇಲ್ಲ ಅಂಬರೀಷ್
ಅಂಬರೀಷ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Feb 07, 2026 | 8:05 AM

Share

ಅಂಬರೀಷ್ (Ambareesh) ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಮಂಡ್ಯದ ಗಂಡು ಎಂದೇ ಫೇಮಸ್ ಆಗಿದ್ದರು. ಅವರು ಮಾಡಿದ ಹಲವು ಸೂಪರ್ ಹಿಟ್ ಚಿತ್ರಗಳು ಗಮನ ಸೆಳೆದಿವೆ ಎಂಬುದು ಎಲ್ಲರಿಗೂ ಗೊತ್ತಿರೋ ವಿಷಯ. ಅವರ ಊಟದ ಶೈಲಿಯೇ ಭಿನ್ನವಾಗಿರುತ್ತಿತ್ತು. ಈ ಬಗ್ಗೆ ಮೈಕೋ ನಾಗರಾಜ್ ಅವರು ‘ಕಲಾ ಮಾಧ್ಯಮಕ್ಕೆ’ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದರು. ಅಂಬರೀಷ್ ಅವರ ಆಹಾರ ಕ್ರಮದ ಬಗ್ಗೆ ಅಚ್ಚರಿ ಹೊರಹಾಕಿದ್ದರು. ಅಲ್ಲದೆ ಒಂದು ಮಹಿಳೆಯ ಬಗ್ಗೆ ಅವರು ಮಾತನಾಡಿದ್ದರು.

ಅಂಬರೀಷ್ ಅವರು ಆಹಾರದ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಆ ಪ್ರೀತಿಯನ್ನು ಅವರು ಕೊನೆಯವರೆಗೂ ಇಟ್ಟುಕೊಂಡಿದ್ದರು. ಅದರಲ್ಲೂ ಬಾಡೂಟ ಎಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಸಹ ಕಲಾವಿದರನ್ನು ಜೊತೆಗೆ ಇಟ್ಟುಕೊಂಡು ಅವರು ಊಟ ಮಾಡಲು ಇಷ್ಟಪಡುತ್ತಿದ್ದರು. ಮೈ ನಾಗರಾಜ್ ಅವರಿಗೆ ಅಂಬರೀಷ್ ತುಂಬಾನೇ ಹತ್ತಿರವಾಗಿದ್ದರು. ಆ ಬಗ್ಗೆ ನಾಗರಾಜ್ ಮಾತನಾಡಿದ್ದರು.

ಮೈಕೋ ನಾಗರಾಜ್ ಅವರು ವಿಲನ್ ಹಾಗೂ ಪೋಷಕ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಅಂಬಿ ಬಗ್ಗೆ ಮಾತನಾಡಿದ್ದರು. ‘ಒಂದು ದಿನ ಸಿನಿಮಾ ಸೆಟ್ ಅಲ್ಲಿ ಸಿಕ್ಕರು. ಆಗಲೇ ಅವರ ಜೊತೆ ಆತ್ಮೀಯತೆ ಬೆಳೆದಿತ್ತು. ಎಲ್ಲಿ ಊಟ ಮಾಡಿದೆ ಎಂದು ಕೇಳಿದರು. ಸೆಟ್​​ ಅಲ್ಲಿ ಎಂದೆ. ನಾಳೆ ನನ್ನ ಜೊತೆ ಊಟ ಮಾಡಬೇಕು ಎಂದು ಆದೇಶ ಹೊರಡಿಸಿದರು’ ಎಂದು ಹಳೆಯ ಘಟನೆ ಹೇಳಿಕೊಂಡಿದ್ದಾರೆ ಅವರು.

ನಾಗರಾಜ್ ಅವರು ಮರುದಿನ ಅಂಬಿ ಜೊತೆ ಊಟಕ್ಕೆ ಹೋದರಂತೆ. ಅಲ್ಲಿರುವ ಊಟ ನೋಡಿ ಅವರೇ ಕಂಗಾಲಾಗಿದ್ದರು. ಏಕೆಂದರೆ 25 ಬಗೆಯ ಊಟಗಳು ಅಲ್ಲಿ ಇದ್ದವು ಮತ್ತು ಎಲ್ಲವೂ ನಾಗರಾಜ್ ಅವರ ಬಟ್ಟಲು ಸೇರಿತ್ತು. ಇದನ್ನು ತಿನ್ನಬೇಕು ಎಂದು ಅವರು ಆದೇಶ ಹೊರಡಿಸಿದರು.

ನನ್ನ ತೊಡೆ ಸವರಿ ಊಟ ಮಾಡಿಸಿದರು. ‘ಇದಕ್ಕಿಂತ ದೊಡ್ಡ ಊಟ ಮಾಡಲು ಸಾಧ್ಯವೇ’ ಎಂದು ಕೇಳಿದರು ನಾಗರಾಜ್. ‘ಫೈಡ್ ಅಂತ ಹೊಡೆದರು ಅಂಬರೀಷ್. ಎಲ್ಲರೂ ಒಂದೇ’ ಎಂದು ಅಂಬಿ ಹೇಳಿದರಂತೆ. ಏನೇ ಮಾಡಿದರೂ ಓಪನ್ ಆಗಿ ಮಾಡಬೇಕು ಎಂಬುದು ಅಂಬಿ ಸೂಚನೆ ಆಗಿತ್ತಂತೆ.

ಇದನ್ನೂ ಓದಿ: ಅಂಬರೀಷ್ ಕಾರಣದಿಂದ ಕಾರು ಖರೀದಿಸಿದ ಚರಣ್ ರಾಜ್; 40 ವರ್ಷವಾದರೂ ಇನ್ನೂ ಇದೆ

ಅಂಬರೀಷ್ ಇದ್ದಲ್ಲಿ ಒಂದು ಹೆಂಗಸು ಬರುತ್ತಿದ್ದರಂತೆ. ಅವರು ಕಾಲು ಹಿಡಿದರೂ ಅಂಬಿ ಅವರನ್ನು ಕ್ಷಮಿಸಲಿಲ್ಲ. ಕ್ಷಮೆ ಕೊಡಲೇ ಇಲ್ಲ. ಎಲೆಕ್ಷನ್​​ಗೆ ನಿಂತಾಗ ಡಬಲ್​​ಗೇಮ್ ಆಡಿದ್ದರಂತೆ. ಈ ಕಾರಣಕ್ಕೆ ಅಂಬಿ ಅವರ ಕಡೆ ತಿರುಗಿ ನೋಡಿಲ್ಲವಂತೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:01 am, Sat, 7 February 26

ಇಂದು ಈ ರಾಶಿಯವರಿಗೆ ಡಬಲ್ ಅದೃಷ್ಟ!
ಇಂದು ಈ ರಾಶಿಯವರಿಗೆ ಡಬಲ್ ಅದೃಷ್ಟ!
ಇಸ್ಲಾಮಾಬಾದ್‌ನಲ್ಲಿ ನಡೆದ ಬಾಂಬ್ ದಾಳಿಯ ವಿಡಿಯೋ ಇಲ್ಲಿದೆ
ಇಸ್ಲಾಮಾಬಾದ್‌ನಲ್ಲಿ ನಡೆದ ಬಾಂಬ್ ದಾಳಿಯ ವಿಡಿಯೋ ಇಲ್ಲಿದೆ
ಕಾಡಿನ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರನ್ನು ಎತ್ತಲು ಯತ್ನಿಸಿದ ಆನೆ
ಕಾಡಿನ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರನ್ನು ಎತ್ತಲು ಯತ್ನಿಸಿದ ಆನೆ
ಐತಿಹಾಸಿಕ ಲಕ್ಕುಂಡಿ ಚೌಕಿಮಠ ಕುಟುಂಬಸ್ಥರ ಇಂಟ್ರೆಸ್ಟಿಂಗ್ ಮಾಹಿತಿ
ಐತಿಹಾಸಿಕ ಲಕ್ಕುಂಡಿ ಚೌಕಿಮಠ ಕುಟುಂಬಸ್ಥರ ಇಂಟ್ರೆಸ್ಟಿಂಗ್ ಮಾಹಿತಿ
ಮದುವೆ ಮಾಡಿಸಿ ಎಂದು ವಿದ್ಯುತ್ ತಂತಿ ಹಿಡಿದು ನೇತಾಡಿದ 15 ವರ್ಷದ ಬಾಲಕ
ಮದುವೆ ಮಾಡಿಸಿ ಎಂದು ವಿದ್ಯುತ್ ತಂತಿ ಹಿಡಿದು ನೇತಾಡಿದ 15 ವರ್ಷದ ಬಾಲಕ
ಕೇಂದ್ರವೇ ಮೆಟ್ರೋ ದರ ಏರಿಸಿದ್ದಾದ್ರೆ ರಾಜ್ಯ ಇವತ್ತೇ ಪತ್ರ ಬರೆಯಲಿ
ಕೇಂದ್ರವೇ ಮೆಟ್ರೋ ದರ ಏರಿಸಿದ್ದಾದ್ರೆ ರಾಜ್ಯ ಇವತ್ತೇ ಪತ್ರ ಬರೆಯಲಿ
ಬಿರಿಯಾನಿ ಕೊಟ್ಟು ಸಿನಿಮಾ ತೋರಿಸ್ತಿದ್ದಾರೆ: ನಿರ್ಮಾಪಕರ ಟೀಕಿಸಿದ ಕೆ ಮಂಜು
ಬಿರಿಯಾನಿ ಕೊಟ್ಟು ಸಿನಿಮಾ ತೋರಿಸ್ತಿದ್ದಾರೆ: ನಿರ್ಮಾಪಕರ ಟೀಕಿಸಿದ ಕೆ ಮಂಜು
ಚಂದ್ರಚೂಡ್ ವಿವಾದ: ಸುದೀಪ್ ಬಗ್ಗೆ ಮಾತನಾಡಿದ್ದಕ್ಕೆ ಕೆ. ಮಂಜು ಸ್ಪಷ್ಟನೆ
ಚಂದ್ರಚೂಡ್ ವಿವಾದ: ಸುದೀಪ್ ಬಗ್ಗೆ ಮಾತನಾಡಿದ್ದಕ್ಕೆ ಕೆ. ಮಂಜು ಸ್ಪಷ್ಟನೆ
ರಸ್ತೆಗಳು ಮಾತ್ರವಲ್ಲ,ಮನಷ್ಯರು ತಿರುಗಾಡುವ ಫುಟ್​​​ಬಾತ್​​ಗಳು ಸರಿ ಇಲ್ಲ
ರಸ್ತೆಗಳು ಮಾತ್ರವಲ್ಲ,ಮನಷ್ಯರು ತಿರುಗಾಡುವ ಫುಟ್​​​ಬಾತ್​​ಗಳು ಸರಿ ಇಲ್ಲ
ಹಿಂದೂ ಧರ್ಮಕ್ಕೆ ಅಪಮಾನವಾಗೋ ರೀತಿ ಸ್ಟೇಟಸ್​​ ಇಟ್ಟಿದ್ದ ಯುವಕನ ಬಂಧನ
ಹಿಂದೂ ಧರ್ಮಕ್ಕೆ ಅಪಮಾನವಾಗೋ ರೀತಿ ಸ್ಟೇಟಸ್​​ ಇಟ್ಟಿದ್ದ ಯುವಕನ ಬಂಧನ