AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಾಲ ಮನ್ನ, ಉಚಿತ ಅಕ್ಕಿ’ ಇದನ್ನೆಲ್ಲ ದಾಟಿ ಮುಂದೆ ಹೋಗಬೇಕಿದೆ: ಅನಂತ್​ನಾಗ್

Karnataka Assembly Election: ಮತದಾನ ಮಾಡಿದ ನಟ ಅನಂತ್​ನಾಗ್, ಮತದಾರರು, ಸಾಲ ಮನ್ನಾ, ಉಚಿತ ರೇಷನ್ ಇವುಗಳನ್ನು ದಾಟಿ ಮುಂದೆ ಹೋಗಬೇಕು, ಯೂರೋಪ್ ಮಾದರಿಯ ಅಭಿವೃದ್ಧಿ ನಮ್ಮ ಗುರಿ ಆಗಬೇಕು ಎಂದಿದ್ದಾರೆ.

'ಸಾಲ ಮನ್ನ, ಉಚಿತ ಅಕ್ಕಿ' ಇದನ್ನೆಲ್ಲ ದಾಟಿ ಮುಂದೆ ಹೋಗಬೇಕಿದೆ: ಅನಂತ್​ನಾಗ್
ಅನಂತ್ ನಾಗ್
ಮಂಜುನಾಥ ಸಿ.
|

Updated on: May 10, 2023 | 5:22 PM

Share

ಕರ್ನಾಟಕ ವಿಧಾನಸಭಾ ಚುನಾವಣೆ 2023ಕ್ಕೆ (Karnataka Assembly Election 2023) ಇಂದು ಮತದಾನ ನಡೆದಿದೆ. ರಾಜ್ಯದ ಎಲ್ಲ 224 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನವನ್ನು ಚುನಾವಣಾ ಆಯೋಗ (Election Commission) ನಡೆಸಿದ್ದು, ರಾಜ್ಯದ ಜನ ಸಕ್ರಿಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಹಲವು ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು ಸಹ ತಮ್ಮ ತಮ್ಮ ಕ್ಷೇತ್ರದಲ್ಲಿ ಇಂದು ಮತಚಲಾವಣೆ ಮಾಡಿದ್ದಾರೆ. ಹಿರಿಯ ನಟ ಅನಂತ್​ನಾಗ್ (Ananth Nag) ಸಹ ಇಂದು ಮತಚಲಾವಣೆ ಮಾಡಿದ್ದು ಮತದಾನ ಮಾಡಿದ ಬಳಿಕ ಮಾಧ್ಯಮಗಳೊಟ್ಟಿಗೆ ಅಭಿವೃದ್ಧಿಯ ಬಗ್ಗೆ ಹಾಗೂ ಯಾವ ಕಾರಣಕ್ಕೆ ಮತ ಚಲಾಯಿಸಬೇಕು ಎಂಬ ಬಗ್ಗೆ ಮಾತನಾಡಿದ್ದಾರೆ.

ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ, ಮೂಲಭೂತ ಸೌಕರ್ಯಗಳು ಇಂದು ಎಲ್ಲರಿಗೂ ದೊರೆಯುತ್ತಿವೆ. ನರೇಂದ್ರ ಮೋದಿಯವರು ಬಂದ ನಂತರವಂತೂ ಒಳ್ಳೆಯ ಅಭಿವೃದ್ಧಿ ಆಗುತ್ತಿವೆ. ಫ್ಲೈ ಓವರ್, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳು ಎಲ್ಲ ಬಹಳ ಚೆನ್ನಾಗಿ ಆಗುತ್ತಿವೆ. ಮೂಲಭೂತ ಸೌಕರ್ಯದಿಂದ ಮೇಲೆ ಹೋಗುವ ಪ್ರಯತ್ನ ನಾವು ಮಾಡಬೇಕು. ಪ್ರತಿಸಲವೂ ನಾವು ಸಾಲಮನ್ನಾ, ಉಚಿತ ರೇಷನ್​ ಇವುಗಳನ್ನು ದಾಟಿ ಮುಂದೆ ಹೋಗಬೇಕು ಎಂದಿದ್ದಾರೆ. ಆ ಮೂಲಕ ಪರೋಕ್ಷವಾಗಿ ಸಾಲಮನ್ನಾ ಮಾಡುವ ಭರವಸೆ, ಉಚಿತ ಅಕ್ಕಿ ನೀಡುವ ಭರವಸೆ ನೀಡುವವರಿಗೆ ಮತನೀಡಬೇಡಿ ಎಂದಿದ್ದಾರೆ.

ಮುಂದುವರೆದು, ”ಯೂರೋಪ್, 27 ದೇಶಗಳ ಒಕ್ಕೂಟ, ಅವರು ಬಹಳ ಅಭಿವೃದ್ಧಿ ಸಾಧಿಸಿದ್ದಾರೆ. ಅವರು ಕೆಳಸ್ತರದಲ್ಲಿ ಇಲ್ಲ. ಬಿಪಿಎಲ್ (ಬಡತನ ರೇಖೆಗಿಂತ ಕೆಳಗೆ) ಎಂದು ಏನನ್ನು ಕರೀತೀವಿ ಅದು ಯೂರೋಪ್​ನಲ್ಲಿಲ್ಲ. ಅದೇ ರೀತಿಯ ಸ್ವರ್ಗ ನಮ್ಮಲ್ಲೂ ನಿರ್ಮಾಣ ಆಗಬೇಕು. ಬಡತನ ಸಂಪೂರ್ಣವಾಗಿ ನಿರ್ನಾಮವಾಗಬೇಕು, ಅಂತಹಾ ಸಮಯ ಬೇಗ ಬರಲಿ ಎಂದು ನಾನು ಆಶಿಸುತ್ತೇನೆ, ಯೂರೋಪ್ ಮಾದರಿಯಲ್ಲಿ ನಾವು ಬೆಳೆಯಬೇಕು, ಬಿಲೋ ಪವರ್ಟಿ ಲೈನ್ ಎನ್ನುವ ಪದವೇ ಇರಬಾರದು” ಎಂದರು ಅನಂತ್​ನಾಗ್.

”ನಿನ್ನೆಯಿಂದ ನಾವು ನೋಡುತ್ತಿದ್ದೇವೆ ನಮ್ಮ ಪಕ್ಕದ ದೇಶದಲ್ಲಿ ಏನಾಗುತ್ತಿದೆ ಎಂದು. ಎಷ್ಟು ಗಲಾಟೆಗಳು ಆಗುತ್ತಿವೆ ಎಂದು. ಅದಕ್ಕೆ ಹೋಲಿಸಿಕೊಂಡರೆ ನಾವು ಬಹಳ ಚೆನ್ನಾಗಿದ್ದೇವೆ, ಗಟ್ಟಿಯಾದ ಪ್ರಜಾಪ್ರಭುತ್ವದ ವ್ಯವಸ್ಥೆ ಮಾಡಿಕೊಂಡಿದ್ದೇವೆ” ಎಂದು ಪಾಕಿಸ್ತಾನದಲ್ಲಿ ನಡೆಯುತ್ತಿರುವ ಘಟನೆಯನ್ನು ಉದಾಹರಣೆಯಾಗಿ ನೀಡಿ ಅನಂತ್​ನಾಗ್ ಹೇಳಿದರು.

ಇದನ್ನೂ ಓದಿ:ಯಾವ ಪಕ್ಷಕ್ಕೂ ಸೇರಲ್ಲ ಹಿರಿಯ ನಟ ಅನಂತ್ ನಾಗ್; ವದಂತಿ ಹಬ್ಬಿಸಿದವರ ಬಗ್ಗೆ ಅಸಮಾಧಾನ

ಅನಂತ್​ನಾಗ್ ಅವರು ಬಿಜೆಪಿ ಬೆಂಬಲಿಗರಾಗಿದ್ದು, ತಾವು ಮೋದಿಯವರ ಅಭಿಮಾನಿ ಎಂದು ಈ ಹಿಂದೆಯೂ ಹಲವು ಬಾರಿ ಹೇಳಿಕೊಂಡಿದ್ದಾರೆ. ಚುನಾವಣೆ ಘೋಷಣೆಗೆ ಮುನ್ನ, ಅನಂತ್​ನಾಗ್ ಬಿಜೆಪಿ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ ಎನ್ನಲಾಗಿತ್ತು ಆದರೆ ಕೊನೆಯ ಕ್ಷಣದಲ್ಲಿ ಅದು ರದ್ದಾಯಿತು. ಅನಂತ್​ನಾಗ್ ಸ್ವತಃ ರಾಜಕಾರಣಿಯಾಗಿದ್ದು ಮಾಜಿ ಸಚಿವರೂ ಆಗಿದ್ದಾರೆ. ಆದರೆ ಬಹಳ ವರ್ಷಗಳಿಂದ ಅವರು ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ