AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಜನರಿಂದ ದೂರ ಹೋಗಿಲ್ಲ, ಮತ್ತಷ್ಟು ಹತ್ತಿರವಾಗಿದ್ದೇನೆ’; ಕಂಬ್ಯಾಕ್ ಬಗ್ಗೆ ಅನಿರುದ್ಧ ಜತ್ಕರ್ ಮಾತು

Aniruddha Jatkar: ನಟ ಅನಿರುದ್ಧ ಜತ್ಕರ್ ಅವರು ದೊಡ್ಡ ಪರದೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ. ಅವರ ಹೊಸ ಸಿನಿಮಾದ ಸ್ಕ್ರಿಪ್ಟ್ ಪೂಜೆ ಇತ್ತೀಚೆಗೆ ನೆರವೇರಿದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.

‘ನಾನು ಜನರಿಂದ ದೂರ ಹೋಗಿಲ್ಲ, ಮತ್ತಷ್ಟು ಹತ್ತಿರವಾಗಿದ್ದೇನೆ’; ಕಂಬ್ಯಾಕ್ ಬಗ್ಗೆ ಅನಿರುದ್ಧ ಜತ್ಕರ್ ಮಾತು
ಅನಿರುದ್ಧ ಜತ್ಕರ್
ರಾಜೇಶ್ ದುಗ್ಗುಮನೆ
|

Updated on:Jul 29, 2023 | 2:41 PM

Share

ನಟ ಅನಿರುದ್ಧ ಜತ್ಕರ್ (Aniruddha Jatkar) ಅವರು ಇತ್ತೀಚಿನ ವರ್ಷಗಳಲ್ಲಿ ಕಿರುತೆರೆಯಲ್ಲಿ ಹೆಚ್ಚು ಬ್ಯುಸಿ ಇದ್ದರು. ಈಗ ಅವರು ದೊಡ್ಡ ಪರದೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ. ಅವರ ಹೊಸ ಸಿನಿಮಾದ ಸ್ಕ್ರಿಪ್ಟ್ ಪೂಜೆ ಇತ್ತೀಚೆಗೆ ನೆರವೇರಿದೆ. ರೇಚಲ್​ ಡೇವಿಡ್ (Rachel David), ನಿಧಿ ಸುಬ್ಬಯ್ಯ ಚಿತ್ರದ ನಾಯಕಿಯರು. ಈ ಚಿತ್ರವನ್ನು ಆನಂದ್ ರಾಜ್ ನಿರ್ದೇಶನ ಮಾಡುತ್ತಿದ್ದು, ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ.ಎನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸಿನಿಮಾ ರಂಗಕ್ಕೆ ಕಂಬ್ಯಾಕ್ ಮಾಡುತ್ತಿರುವ ಖುಷಿಯನ್ನು ‘ಟಿವಿ9 ಕನ್ನಡ ಡಿಜಿಟಲ್’ ಜೊತೆ ಅನಿರುದ್ಧ ಹಂಚಿಕೊಂಡಿದ್ದಾರೆ.

ಕಂಬ್ಯಾಕ್ ಸಿನಿಮಾದ ಬಗ್ಗೆ ಎಷ್ಟು ಖುಷಿ ಇದೆ?

ನಿಜಕ್ಕೂ ಸಾಕಷ್ಟು ಖುಷಿ ಆಗುತ್ತಿದೆ. ನಾನು ಸಿನಿಮಾಗಳಲ್ಲಿ ಹೀರೋ ಆಗಿ ನಟಿಸದೇ ಐದು ವರ್ಷ ಆಗಿದೆ. ಈಗ ಹೊಸ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಆದರೆ, ಈ ಐದು ವರ್ಷಗಳಲ್ಲಿ ಜನರಿಂದ ದೂರ ಹೋಗಿಲ್ಲ. ಜನರಿಗೆ ಮತ್ತಷ್ಟು ಹತ್ತಿರ ಆದೆ. ಧಾರಾವಾಹಿಗಳ ಮೂಲಕ ಜನರಿಗೆ ಹೆಚ್ಚು ತಲುಪಿಸಿದೆ.

ಸಿನಿಮಾಗೆ ಏನಾದರೂ ಸಿದ್ಧತೆ ಮಾಡಿಕೊಂಡ್ರಾ?

ಖಂಡಿತವಾಗಿಯೂ. ಸಿನಿಮಾ ಇರಲಿ ಧಾರಾವಾಹಿ ಇರಲಿ ಸಿದ್ಧತೆಯಂತೂ ಮಾಡಿಕೊಂಡೇ ಇರುತ್ತೇನೆ. ಧಾರಾವಾಹಿಗಳಲ್ಲಿ ಒಂದು ದಿನದಲ್ಲಿ ಎಷ್ಟು ದೃಶ್ಯ ಮುಗಿಸುತ್ತೇವೆ ಅನ್ನೋದು ನಿರ್ಮಾಪಕರಿಗೆ ಮುಖ್ಯವಾಗುತ್ತದೆ. ಜನರ ಪ್ರತಿಕ್ರಿಯೆಗೆ ತಕ್ಕಂತೆ ಅಲ್ಲಿ ಬದಲಾವಣೆಗಳು ಆಗುತ್ತವೆ. ಆದರೆ, ಸಿನಿಮಾಗಳಲ್ಲಿ ಆ ರೀತಿ ಆಗುವುದಿಲ್ಲ. ಸಂಪೂರ್ಣ ಸಿದ್ಧತೆಯೊಂದಿಗೆ ತಂಡ ಸೆಟ್​​ಗೆ ಬರುತ್ತದೆ. ಸಾಕಷ್ಟು ಸಮಯ ತೆಗೆದುಕೊಂಡು ತಾಳ್ಮೆಯಿಂದ, ಪ್ರೀತಿಯಿಂದ ದೃಶ್ಯವನ್ನು ಶೂಟ್ ಮಾಡಬಹುದು.

‘ಮಾಲ್ಗುಡಿ ದಿನಗಳು’ಗೆ ಕಂಠ ದಾನ ಮಾಡಿದ ಬಗ್ಗೆ..

ಆರ್​ಕೆ ನಾರಾಯಣ್ ಅವರು ಬರೆದ ‘ಮಾಲ್ಗುಡಿ ಡೇಸ್’ ಪುಸ್ತಕವನ್ನು ‘ಮಾಲ್ಗುಡಿ ದಿನಗಳು’ ಎಂದು ಕನ್ನಡಕ್ಕೆ ಡಾ. ಎಚ್​ ರಾಮಚಂದ್ರಸ್ವಾಮಿ ಅನುವಾದ ಮಾಡಿದ್ದಾರೆ. ಇದರಲ್ಲಿ 32 ಕಥೆಗಳಿವೆ. ಇದರ ಆಡಿಯೋ ಬುಕ್ ರೆಡಿ ಮಾಡಲಾಗಿದೆ. ಈ ಕಥೆಗಳನ್ನು ನಾನು ಓದಿದ್ದೇನೆ. ಆಗಸ್ಟ್ ಮೂರನೇವಾರಕ್ಕೆ ಇದು ಅಪ್​ಲೋಡ್ ಆಗಬಹುದು. ನಾನು ‘ಮಾಲ್ಗುಡಿ ಡೇಸ್​’ ನೋಡಿ ಬೆಳೆದವನು. ನಾನು ಬೆಂಗಳೂರಿಗೆ ಬರುವುದಕ್ಕಿಂತ ಮೊದಲೇ ಶಂಕರ್ ನಾಗ್ ತೀರಿಕೊಂಡಿದ್ದರು. ಮೊದಲೇ ಬೆಂಗಳೂರಿಗೆ ಬಂದು ಅವರನ್ನು ಭೇಟಿ ಮಾಡಿದ್ದರೆ ನನಗೆ ಇದರಲ್ಲಿ ನಟಿಸಲು ನನಗೂ ಅವಕಾಶ ಸಿಗುತ್ತಿತ್ತೋನೋ. ಈಗ ಈ ಕಥೆಗಳನ್ನು ಓದಿದ ಖುಷಿ ಇದೆ.

ಇದನ್ನೂ ಓದಿ: ವಿಷ್ಣುವರ್ಧನ್ ಸ್ಮಾರಕದಲ್ಲಿ ಅನಿರುದ್ಧ್ ಹೊಸ ಸಿನಿಮಾಕ್ಕೆ ಚಾಲನೆ: ಕತೆ ತುಸು ಭಿನ್ನ

ಮತ್ತೆ ಧಾರಾವಾಹಿಗಳಲ್ಲಿ ನಟಿಸುದು ಯಾವಾಗ?

ನನಗೆ ಹಿರಿತೆರೆ-ಕಿರುತೆರೆ ಎಂಬ ಭೇದಭಾವ ಇಲ್ಲ. ಎಲ್ಲಾ ಕ್ಷೇತ್ರಗಳು ತುಂಬಾನೇ ನೀಡಿವೆ. ಕಿರುತೆರೆಯಿಂದ ನಾನು ಸಾಕಷ್ಟು ಜನರಿಗೆ ಹತ್ತಿರವಾಗಿದ್ದೇನೆ. ಆ ಖುಷಿ ಇದೆ. ಮತ್ತೆ ಅವಕಾಶ ಸಿಕ್ಕರೆ ಖಂಡಿತವಾಗಿಯೂ ಧಾರಾವಾಹಿಗಳಲ್ಲಿ ನಟಿಸುತ್ತೇನೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:55 pm, Sat, 29 July 23

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು