Ee Pattanakke Enagide: ‘ಈ ಪಟ್ಟಣಕ್ಕೆ ಏನಾಗಿದೆ’? ಬೆಂಗಳೂರಲ್ಲಿ ಸೆನ್ಸಾರ್​ ಪ್ರಮಾಣಪತ್ರ ಸಿಗದೇ ಹೈದರಾಬಾದ್​ಗೆ ಹೋದ ಚಿತ್ರತಂಡ

Censor Board: ರವಿ ಸುಬ್ಬರಾವ್ ಅವರು ತಮ್ಮ ರಿಯಲ್​ ಲೈಫ್​ನಲ್ಲಿ ನೋಡಿದ ಅನೇಕ ಘಟನೆಗಳನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ‘ಈ ಪಟ್ಟಣಕ್ಕೆ ಏನಾಗಿದೆ’ ಎಂಬ ಶೀರ್ಷಿಕೆ ಡಿಫರೆಂಟ್​ ಆಗಿದೆ.

Ee Pattanakke Enagide: ‘ಈ ಪಟ್ಟಣಕ್ಕೆ ಏನಾಗಿದೆ’? ಬೆಂಗಳೂರಲ್ಲಿ ಸೆನ್ಸಾರ್​ ಪ್ರಮಾಣಪತ್ರ ಸಿಗದೇ ಹೈದರಾಬಾದ್​ಗೆ ಹೋದ ಚಿತ್ರತಂಡ
‘ಈ ಪಟ್ಟಣಕ್ಕೆ ಏನಾಗಿದೆ’ ಚಿತ್ರತಂಡ
Follow us
|

Updated on: Jul 28, 2023 | 4:19 PM

ಇತ್ತೀಚಿನ ದಿನಗಳಲ್ಲಿ ಪ್ರತಿ ಸಿನಿಮಾಗಳನ್ನೂ ಸೆನ್ಸಾರ್​ ಮಂಡಳಿಯವರು (Censor Board) ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ‘ಆದಿಪುರುಷ್​’, ‘ಆಪನ್​ಹೈಮರ್​’ ಮುಂತಾದ ಸಿನಿಮಾಗಳ ದೃಶ್ಯಗಳಿಗೆ ಆಕ್ಷೇಪ ಎದುರಾದ ಹಿನ್ನೆಲೆಯಲ್ಲಿ ದಿನದಿನಕ್ಕೂ ನಿಯಮಗಳು ಕಠಿಣವಾಗುತ್ತಿವೆ. ಹಿಂದಿಯ ‘ಒಎಂಜಿ 2’ ಸಿನಿಮಾ ಕೂಡ ಸೆನ್ಸಾರ್​ ಪ್ರಮಾಣ ಪತ್ರ (Censor Certificate) ಪಡೆಯಲು ಕಷ್ಟಪಡುತ್ತಿದೆ. ಅದೇ ರೀತಿ ಕನ್ನಡದ ‘ಈ ಪಟ್ಟಣಕ್ಕೆ ಏನಾಗಿದೆ’ (Ee Pattanakke Enagide) ಸಿನಿಮಾಗೂ ಸಹ ಪ್ರಮಾಣಪತ್ರ ಸಿಗುವುದು ಕಷ್ಟ ಆಗಿತ್ತು. ಆದರೆ ಬೆಂಗಳೂರಿನಲ್ಲಿ ಸೆನ್ಸಾರ್ ಆಗಲಿಲ್ಲ ಎಂಬ ಕಾರಣಕ್ಕೆ ಹೈದರಾಬಾದ್​ಗೆ ತೆರಳಿತ್ತು ಚಿತ್ರತಂಡ. ಆಗಸ್ಟ್​ ತಿಂಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.

‘ಈ ಪಟ್ಟಣಕ್ಕೆ ಏನಾಗಿದೆ’ ಸಿನಿಮಾಗೆ ರವಿ ಸುಬ್ಬರಾವ್ ಅವರು ನಿರ್ದೇಶನ ಮಾಡಿದ್ದಾರೆ. ಸೆನ್ಸಾರ್ ಸಮಸ್ಯೆ ಆಗುವಂಥದ್ದು ಈ ಚಿತ್ರದಲ್ಲಿ ಏನಿದೆ? ಈ ಪ್ರಶ್ನೆಗೆ ನಿರ್ದೇಶಕ ರವಿ ಸುಬ್ಬರಾವ್ ಉತ್ತರ ನೀಡಿದ್ದಾರೆ. ‘ಅನೇಕ ಸನ್ನಿವೇಶಗಳನ್ನು ನಾವು ನೈಜವಾಗಿ ಶೂಟ್​ ಮಾಡಿದ್ದೇವೆ. ಆದ್ದರಿಂದ ಕರ್ನಾಟಕದಲ್ಲಿ ನಮಗೆ ಸೆನ್ಸಾರ್ ಮಾಡಿಸಲು ಸಾಧ್ಯವಾಗಲಿಲ್ಲ. ಬಳಿಕ ನಾವು ಹೈದರಾಬಾದ್​​ನಲ್ಲಿ ಸಿನಿಮಾದ ಸೆನ್ಸಾರ್ ಮಾಡಿಸಿದೆವು. ಅಲ್ಲಿನ ಸೆನ್ಸಾರ್ ಬೋರ್ಡ್​ ಸದಸ್ಯರು ಕೆಲವು ಕಡೆಗಳಿಗೆ ಕತ್ತರಿ ಹಾಕಲು ಸೂಚಿಸಿ, ಎ ಪ್ರಮಾಣಪ್ರತ್ರ ನೀಡಿದ್ದಾರೆ’ ಎಂದಿದ್ದಾರೆ ರವಿ ಸುಬ್ಬರಾವ್.

ಇದನ್ನೂ ಓದಿ: Dharma Censor Board: ‘ಧಾರ್ಮಿಕ ಸೆನ್ಸಾರ್​ ಮಂಡಳಿ’; ಸಿನಿಮಾಗಳಲ್ಲಿ ಹಿಂದೂ ದೇವರ ಅಪಮಾನ ತಡೆಯಲು ಹೀಗೊಂದು ಪ್ರಯತ್ನ

ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನೂ ರವಿ ಸುಬ್ಬರಾವ್ ಅವರೇ ನಿಭಾಯಿಸಿದ್ದಾರೆ. ಅವರು ತಮ್ಮ ಸ್ನೇಹಿತರಾದ ರಿತೇಶ್ ಜೋಶಿ ಜೊತೆ ಸೇರಿ ಬಂಡವಾಳವನ್ನೂ ಹೂಡಿದ್ದಾರೆ. ಈ ಸಿನಿಮಾದಲ್ಲಿ ಹೀರೋ ಪಾತ್ರವನ್ನು ಕೂಡ ರವಿ ಅವರೇ ನಿಭಾಯಿಸಿದ್ದಾರೆ. ಅಂದಹಾಗೆ ಈಗ ಬಿಡುಗಡೆಗೆ ಸಿದ್ಧವಾಗಿರುವುದು ಮೊದಲ ಭಾಗ. ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಆ ಕುರಿತು ಮಾಹಿತಿ ಹಂಚಿಕೊಂಡಿದೆ ‘ಈ ಪಟ್ಟಣಕ್ಕೆ ಏನಾಗಿದೆ ಭಾಗ 1’ ಸಿನಿಮಾ ತಂಡ.

ಇದನ್ನೂ ಓದಿ: OTT Censorship: ಒಟಿಟಿ ಸೆನ್ಸಾರ್​ಶಿಪ್​ ಬಗ್ಗೆ ಮಹತ್ವದ ಆದೇಶ ನೀಡಿದ ಸುಪ್ರೀಂ ಕೋರ್ಟ್​

ರವಿ ಸುಬ್ಬರಾವ್ ಅವರು ತಮ್ಮ ರಿಯಲ್​ ಲೈಫ್​ನಲ್ಲಿ ನೋಡಿದ ಅನೇಕ ಘಟನೆಗಳನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ‘ಈ ಪಟ್ಟಣಕ್ಕೆ ಏನಾಗಿದೆ’ ಎಂಬ ಶೀರ್ಷಿಕೆ ಕೂಡ ಡಿಫರೆಂಟ್​ ಆಗಿದ್ದು, ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ರಾಧಿಕಾ ರಾಮ್ ಅವರು ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅವರ ಪಾತ್ರ ತುಂಬ ಬೋಲ್ಡ್​ ಆಗಿದೆ. ಅನಿಲ್ ಸಿ.ಜೆ. ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ಸೆನ್ಸಾರ್​ ಇಲ್ಲದೆ ನಾಚಿಕೆ ಆಗುವಂತಹ ಟಾಸ್ಕ್​ ನೀಡಿದ ಸನ್ನಿ ಲಿಯೋನ್​; ಬಿಗ್​ ಬಾಸ್​ ಸ್ಪರ್ಧಿಗಳಿಗೆ ಶಾಕ್​

‘ಜೂಜು ಹಾಗೂ ಬೆಟ್ಟಿಂಗ್ ಮಾಫಿಯಾ ಕುರಿತು ಕಥೆ ಹೆಣೆಯಲಾಗಿದೆ. ಈ ಮಾಫಿಯಾದ ಮೂಲಕ ನಾಯಕನು ಯುವಜನರನ್ನು ಮೋಸದ ಬಲೆಗೆ ಬೀಳಿಸುತ್ತಾನೆ. ಈ ಕಾಲದ ಹುಡುಗರು ಮನೆಯಲ್ಲಿರುವ ರೀತಿಯೇ ಬೇರೆ. ಹೊರಗಡೆ ವರ್ತಿಸುವ ರೀತಿಯೇ ಬೇರೆ. ಅದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ’ ಎಂದು ಹೇಳಿಕೊಂಡಿದೆ ‘ಈ ಪಟ್ಟಣಕ್ಕೆ ಏನಾಗಿದೆ’ ಚಿತ್ರತಂಡ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ