AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dharma Censor Board: ‘ಧಾರ್ಮಿಕ ಸೆನ್ಸಾರ್​ ಮಂಡಳಿ’; ಸಿನಿಮಾಗಳಲ್ಲಿ ಹಿಂದೂ ದೇವರ ಅಪಮಾನ ತಡೆಯಲು ಹೀಗೊಂದು ಪ್ರಯತ್ನ

Avimukteshwaranand Saraswati | Censor Board: ಸಿನಿಮಾ ಮತ್ತು ವೆಬ್​ ಸೀರಿಸ್​ಗಳಲ್ಲಿ ಹಿಂದೂ ದೇವರಿಗೆ ಅವಮಾನ ಆಗುತ್ತಿದೆ ಎಂಬ ಕೂಗು ಆಗಾಗ ಕೇಳಿಬರುತ್ತಿದೆ. ಅದರ ಬೆನ್ನಲ್ಲೇ ಧಾರ್ಮಿಕ ಸೆನ್ಸಾರ್​ ಮಂಡಳಿ ಹುಟ್ಟಿಕೊಂಡಿದೆ.

Dharma Censor Board: ‘ಧಾರ್ಮಿಕ ಸೆನ್ಸಾರ್​ ಮಂಡಳಿ’; ಸಿನಿಮಾಗಳಲ್ಲಿ ಹಿಂದೂ ದೇವರ ಅಪಮಾನ ತಡೆಯಲು ಹೀಗೊಂದು ಪ್ರಯತ್ನ
ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ
ಮದನ್​ ಕುಮಾರ್​
| Updated By: Digi Tech Desk|

Updated on:Jan 20, 2023 | 5:45 PM

Share

ಸಿನಿಮಾಗಳಲ್ಲಿನ ವಿಚಾರ ಇಟ್ಟುಕೊಂಡು ಕಿರಿಕ್​ ಮಾಡುವ ಟ್ರೆಂಡ್​ ಇತ್ತೀಚೆಗೆ ಜಾಸ್ತಿ ಆಗಿದೆ. ಸಣ್ಣದೊಂದು ಟ್ರೇಲರ್​ ರಿಲೀಸ್​ ಆದರೂ ಸಾಕು, ಒಂದು ವರ್ಗದ ಮಂದಿ ಟೀಕೆ ಮಾಡಲು ರೆಡಿಯಾಗಿರುತ್ತಾರೆ. ಧಾರ್ಮಿಕ ವಿಚಾರಗಳನ್ನೇ ಹೈಲೈಟ್​ ಮಾಡಿಕೊಂಡು ವಿವಾದ ಎಬ್ಬಿಸಲಾಗುತ್ತದೆ. ‘ಪಠಾಣ್​’ ಸಿನಿಮಾದಲ್ಲಿ (Pathaan Movie) ದೀಪಿಕಾ ಪಡುಕೋಣೆ ಧರಿಸಿದ್ದ ಬಿಕಿನಿ ಬಣ್ಣ ‘ಕೇಸರಿ’ ಎಂಬ ಕಾರಣಕ್ಕೆ ಕೆಲವು ಹಿಂದೂ ಪರ ಸಂಘಟನೆಗಳು ತಕರಾರು ತೆಗೆದಿದ್ದೇ ಈ ಮಾತಿಗೆ ಲೇಟೆಸ್ಟ್​ ಉದಾಹರಣೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಧಾರ್ಮಿಕ ಸೆನ್ಸಾರ್​ ಮಂಡಳಿ’ (Dharma Censor Board) ಸ್ಥಾಪಿಸಲಾಗಿದೆ! ಈ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ಈಗಾಗಲೇ ಸರ್ಕಾರದ ವತಿಯಿಂದ ನೇಮಿಸಲಾಗಿರುವ ಸೆನ್ಸಾರ್​ ಮಂಡಳಿ ಇರುವಾಗಲೇ ಈ ರೀತಿ ಹೊಸ ಸೆನ್ಸಾರ್​ ಮಂಡಳಿಯನ್ನು ಹುಟ್ಟುಹಾಕಲಾಗಿದೆ. ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ (Avimukteshwaranand Saraswati) ಅವರಿಂದ ಈ ಪ್ರಯತ್ನ ನಡೆದಿದೆ.

ಇತ್ತೀಚೆಗೆ ‘ಪಠಾಣ್​’ ಸಿನಿಮಾವನ್ನು ಅನೇಕ ಹಿಂದೂಪರ ಸಂಘಟನೆಗಳು ವಿರೋಧಿಸಿದವು. ಅದಕ್ಕೂ ಮುನ್ನ ‘ಕಾಳಿ’ ಸಾಕ್ಷ್ಯಚಿತ್ರದ ಪೋಸ್ಟರ್​ ಕೂಡ ವಿವಾದ ಎಬ್ಬಿಸಿತ್ತು. ಈ ಎಲ್ಲ ಘಟನೆಗಳ ಪರಿಣಾಮವಾಗಿ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ‘ಧಾರ್ಮಿಕ ಸೆನ್ಸಾರ್​ ಬೋರ್ಡ್​’ ಮಾಡಿರುವುದಾಗಿ ತಿಳಿಸಿದ್ದಾರೆ. ಗುರುವಾರ (ಜ.19) ಈ ಸೆನ್ಸಾರ್​ ಮಂಡಳಿಯ ನಿಯಮಾವಳಿಗಳನ್ನು ಅವರು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: Shah Rukh Khan: ‘ಪಠಾಣ್​’ ಚಿತ್ರದಲ್ಲಿ ‘ಪ್ರಧಾನ ಮಂತ್ರಿ’ ಪದಕ್ಕೆ ಕತ್ತರಿ ಹಾಕಿದ ಸೆನ್ಸಾರ್​ ಮಂಡಳಿ; 13 ಕಡೆಗಳಲ್ಲಿ ಬದಲಾವಣೆ

ಇದನ್ನೂ ಓದಿ
Image
Shah Rukh Khan: ‘ಪಠಾಣ್​’ ಚಿತ್ರದಲ್ಲಿ ‘ಪ್ರಧಾನ ಮಂತ್ರಿ’ ಪದಕ್ಕೆ ಕತ್ತರಿ ಹಾಕಿದ ಸೆನ್ಸಾರ್​ ಮಂಡಳಿ; 13 ಕಡೆಗಳಲ್ಲಿ ಬದಲಾವಣೆ
Image
OTT Censorship: ಒಟಿಟಿ ಸೆನ್ಸಾರ್​ಶಿಪ್​ ಬಗ್ಗೆ ಮಹತ್ವದ ಆದೇಶ ನೀಡಿದ ಸುಪ್ರೀಂ ಕೋರ್ಟ್​
Image
ದಿಶಾ ಪಟಾನಿ ಹಾಟ್ ಅವತಾರಕ್ಕೆ ಸೆನ್ಸಾರ್ ಮಂಡಳಿ ಕತ್ತರಿ; ‘ಏಕ್ ವಿಲನ್ ರಿಟರ್ನ್ಸ್​’ ತಂಡದವರು ಏನಂದ್ರು?
Image
ಸೆನ್ಸಾರ್​ ಇಲ್ಲದೆ ನಾಚಿಕೆ ಆಗುವಂತಹ ಟಾಸ್ಕ್​ ನೀಡಿದ ಸನ್ನಿ ಲಿಯೋನ್​; ಬಿಗ್​ ಬಾಸ್​ ಸ್ಪರ್ಧಿಗಳಿಗೆ ಶಾಕ್​

ಸಿನಿಮಾ, ವೆಬ್​ ಸಿರೀಸ್​ ಮುಂತಾದ ಮನರಂಜನಾ ಕಂಟೆಂಟ್​ಗಳಲ್ಲಿ ಹಿಂದೂ ದೇವರನ್ನು ಅಪಮಾನಿಸುವಂತಹ ದೃಶ್ಯಗಳು ಇದ್ದರೆ ಅದನ್ನು ತಡೆಯುವ ನಿಟ್ಟಿನಲ್ಲಿ ‘ಧಾರ್ಮಿಕ ಸೆನ್ಸಾರ್​ ಮಂಡಳಿ’ಯನ್ನು ತಾವು ಆರಂಭಿಸಿರುವುದಾಗಿ ಸ್ವಾಮೀಜಿ ತಿಳಿಸಿದ್ದಾರೆ. ಸಿನಿಮಾ ಬಿಡುಗಡೆ ಆದ ಬಳಿಕ ಅದನ್ನು ನೋಡಿ ತಮ್ಮ ಸೆನ್ಸಾರ್​ ಮಂಡಳಿಯಿಂದ ಒಂದು ಪ್ರಮಾಣ ಪತ್ರ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: OTT Censorship: ಒಟಿಟಿ ಸೆನ್ಸಾರ್​ಶಿಪ್​ ಬಗ್ಗೆ ಮಹತ್ವದ ಆದೇಶ ನೀಡಿದ ಸುಪ್ರೀಂ ಕೋರ್ಟ್​

‘ಧಾರ್ಮಿಕ ಸೆನ್ಸಾರ್​ ಮಂಡಳಿ’ ನಿಯಮಗಳನ್ನು ಎಲ್ಲ ಸಿನಿಮಾ ನಿರ್ಮಾಪಕರಿಗೆ ಕಳಿಸಿಕೊಡಲಾಗುವುದು. ಸನಾತನ ಧರ್ಮವನ್ನು ಟೀಕಿಸಲು, ಅಪಮಾನ ಮಾಡಲು, ಅಗೌರವದಿಂದ ಕಾಣಲು ಬಿಡುವುದಿಲ್ಲ. ಈ ನಿಯಮಗಳನ್ನು ಪಾಲಿಸದಿದ್ದರೆ ಕಾನೂನಿನ ಮೂಲಕ ಉತ್ತರ ನೀಡಲಾಗುವುದು. ಅದಕ್ಕಾಗಿ ಪ್ರತ್ಯೇಕ ಘಟಕ ಸ್ಥಾಪಿಸಲಾಗಿದೆ ಎಂದು ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ. ಈಗಾಗಲೇ ಇರುವ ಸೆನ್ಸಾರ್​ ಮಂಡಳಿಗೆ ಸಹಾಯವಾಗುವ ರೀತಿಯಲ್ಲಿ ಧಾರ್ಮಿಕ ಸೆನ್ಸಾರ್​ ಮಂಡಳಿ ಕೆಲಸ ಮಾಡಲಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ಆದಿಪುರುಷ್​​’ ಚಿತ್ರಕ್ಕೆ ಮುಳುವಾದ ವಿವಾದ; ಉತ್ತರಿಸಲು ಸೆನ್ಸಾರ್ ಮಂಡಳಿಗೆ ಕೋರ್ಟ್​ ಆದೇಶ

ಸಿನಿಮಾ, ವೆಬ್​ ಸೀರಿಸ್​ ಮಾತ್ರವಲ್ಲದೇ ಶಾಲೆ-ಕಾಲೇಜುಗಳಲ್ಲಿ ನಡೆಯುವ ನಾಟಕಗಳನ್ನು ಕೂಡ ಈ ಮಂಡಳಿಯು ಸೆನ್ಸಾರ್​ ಮಾಡಲಿದೆ. ಸಿನಿಮಾ ಶೀರ್ಷಿಕೆಗಳ ಮೇಲೂ ಈ ಮಂಡಳಿ ಕಣ್ಣಿಡಲಿದೆ. ಸರ್ಕಾರದ ಸೆನ್ಸಾರ್​ ಮಂಡಳಿಯಲ್ಲಿ ಓರ್ವ ಧಾರ್ಮಿಕ ವ್ಯಕ್ತಿ ಇರಬೇಕು ಎಂಬ ಬೇಡಿಕೆ ಈಡೇರಿಲ್ಲದ ಕಾರಣದಿಂದ ಈಗ ಧಾರ್ಮಿಕ ಸೆನ್ಸಾರ್​ ಮಂಡಳಿ ಶುರು ಮಾಡಿರುವುದಾಗಿ ಅವಿಮುಕ್ತೇಶ್ವರಾನಂದ ಸರಸ್ವತಿ ತಿಳಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:30 pm, Fri, 20 January 23

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ