AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಾರ್ಟಿನ್​’ ಸಿನಿಮಾ ಬಜೆಟ್​ ಬಗ್ಗೆ ಅಚ್ಚರಿಯ ಮಾಹಿತಿ ನೀಡಿದ ಎ.ಪಿ. ಅರ್ಜುನ್​

ಆದಷ್ಟು ಬೇಗ ‘ಮಾರ್ಟಿನ್​’ ಸಿನಿಮಾವನ್ನು ನೋಡಬೇಕು ಎಂದು ಪ್ರೇಕ್ಷಕರು ಕಾದಿದ್ದಾರೆ. ಧ್ರುವ ಸರ್ಜಾ ಅವರ ಫ್ಯಾನ್ಸ್​ ತುಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬರೋಬ್ಬರಿ 240 ದಿನಗಳ ಕಾಲ ಈ ಸಿನಿಮಾದ ಶೂಟಿಂಗ್​ ಮಾಡಲಾಗಿದೆ. ಇಷ್ಟು ಲೇಟ್​ ಆಗಲು ಕಾರಣ ಏನು ಎಂಬುದನ್ನು ನಿರ್ದೇಶಕ ಎ.ಪಿ. ಅರ್ಜುನ್​ ಅವರು ವಿವರಿಸಿದ್ದಾರೆ. ಅಲ್ಲದೇ ಬಜೆಟ್​ ಬಗ್ಗೆಯೂ ಅವರು ಮಾತನಾಡಿದ್ದಾರೆ.

‘ಮಾರ್ಟಿನ್​’ ಸಿನಿಮಾ ಬಜೆಟ್​ ಬಗ್ಗೆ ಅಚ್ಚರಿಯ ಮಾಹಿತಿ ನೀಡಿದ ಎ.ಪಿ. ಅರ್ಜುನ್​
ಎ.ಪಿ. ಅರ್ಜುನ್​, ಧ್ರುವ ಸರ್ಜಾ
Follow us
ಮದನ್​ ಕುಮಾರ್​
|

Updated on: Mar 06, 2024 | 10:39 PM

‘ಆ್ಯಕ್ಷನ್​ ಪ್ರಿನ್ಸ್​’ ಧ್ರುವ ಸರ್ಜಾ (Dhruva Sarja) ನಟನೆಯ ‘ಮಾರ್ಟಿನ್​’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಮೂಡಿದೆ. ಫಸ್ಟ್​ ಲುಕ್​ ರಿಲೀಸ್​ ಆದ ದಿನದಿಂದಲೂ ಈ ಸಿನಿಮಾ ಹೈಪ್​ ಸೃಷ್ಟಿ ಮಾಡಿದೆ. ಅದ್ದೂರಿ ಬಜೆಟ್​ನಲ್ಲಿ ಉದಯ್​ ಕೆ. ಮೆಹ್ತಾ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಷ್ಟಕ್ಕೂ ‘ಮಾರ್ಟಿನ್​’ ಸಿನಿಮಾದ (Martin Movie) ಬಜೆಟ್​ ಎಷ್ಟು? ಈ ಬಗ್ಗೆ ಎಲ್ಲರಲ್ಲೂ ಕೌತುಕ ಇದೆ. ಸದ್ಯಕ್ಕೆ ಈ ಸಿನಿಮಾದ ಶೂಟಿಂಗ್​ ಮುಗಿದಿದೆ. ಕೊನೇ ದಿನದ ಶೂಟಿಂಗ್​ ಮುಗಿಸಿದ ಬಳಿಕ ನಿರ್ದೇಶಕ ಎ.ಪಿ. ಅರ್ಜುನ್​ (AP Arjun) ಅವರು ಮಾಧ್ಯಮಗಳ ಎದುರು ಮಾತನಾಡಿದ್ದಾರೆ. ಚಿತ್ರದ ಬಜೆಟ್​ ಬಗ್ಗೆಯೂ ಅವರು ಇಂಟರೆಸ್ಟಿಂಗ್​ ವಿಚಾರ ಹಂಚಿಕೊಂಡಿದ್ದಾರೆ.

‘ಈ ಸಿನಿಮಾ ಶುರುವಾಗಿ ಎರಡೂವರೆ ವರ್ಷ ಆಯಿತು. 240 ದಿನಗಳ ಕಾಲ ಶೂಟಿಂಗ್​ ಮಾಡಿದ್ದೇವೆ. ಎಷ್ಟು ದಿನ ಶೂಟಿಂಗ್​ ಮಾಡುತ್ತೀರಿ ಅಂತ ಎಲ್ಲರೂ ಕೇಳುತ್ತಿದ್ದರು. ಅದರಿಂದ ನನಗೆ ಮುಜುಗರ ಆಗುತ್ತಿತ್ತು. ಮಾರ್ಟಿನ್​ ಸಿನಿಮಾಗೆ ಇಷ್ಟು ದಿನ ಚಿತ್ರೀಕರಣ ಮಾಡಲಾಗುತ್ತೆ ಅಂತ ನಾನಾಗಲಿ, ನಿರ್ಮಾಪಕರಾಗಲಿ ಅಥವಾ ಧ್ರುವ ಸರ್ಜಾ ಅವರಾಗಲಿ ಊಹಿಸಿರಲಿಲ್ಲ’ ಎಂದು ಎ.ಪಿ. ಅರ್ಜುನ್​ ಹೇಳಿದ್ದಾರೆ.

ಇದನ್ನೂ ಓದಿ: ‘ನಾವೆಲ್ಲ ಸಾಯ್ತೀವಿ’: ತಂದೆ-ತಾಯಿಗೆ ಮೆಸೇಜ್​ ಕಳಿಸಿದ್ದ ‘ಮಾರ್ಟಿನ್​’ ಸಿನಿಮಾ ನಟಿ

‘ಮೊದಲಿಗೆ ಅಂದುಕೊಂಡ ಬಜೆಟ್​ ಬೇರೆ. 35ರಿಂದ 40 ಕೋಟಿ ರೂಪಾಯಿ ಬಜೆಟ್​ನಲ್ಲಿ ಮಾರ್ಟಿನ್​ ಸಿನಿಮಾ ಮಾಡಬೇಕು ಎಂದುಕೊಂಡಿದ್ದೆವು. ಹೋಗ್ತಾ ಹೋಗ್ತಾ 80-90 ದಿನಕ್ಕೆ ಆ ಬಜೆಟ್​ ತಲುಪಿತು. ಇದೊಂದು ಎಪಿಸೋಡ್​ ಚೆನ್ನಾಗಿ ಮಾಡೋಣ ಎಂದುಕೊಂಡು ಎಲ್ಲ ಎಪಿಸೋಡ್​ ದೊಡ್ಡದಾಗುತ್ತಲೇ ಹೋಯ್ತು. ಚೆನ್ನಾಗಿ ಮಾಡಬೇಕು ಎಂದಾಗ ಎಲ್ಲೋ ಒಂದು ಲೊಕೇಷನ್​ನಲ್ಲಿ ಶೂಟ್​ ಮಾಡೋಕೆ ಆಗಲ್ಲ. ಅದಕ್ಕೆ ಅದ್ದೂರಿ ಸೆಟ್​ ಹಾಕಬೇಕಾಯ್ತು’ ಎಂದು ಎ.ಪಿ. ಅರ್ಜುನ್​ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎ.ಪಿ. ಅರ್ಜುನ್​:

‘ಸೆಟ್​ ರೆಡಿ ಮಾಡಿದ ಬಳಿಕ ಬೇರೆ ಬೇರೆ ಅಡೆತಡೆ ಬಂದವು. 18ರಿಂದ 20 ರೀತಿಯ ಸೆಟ್​ ಹಾಕಿದ್ದೆವು. ನಾವು ಪ್ಲಾನ್​ ಮಾಡಿದಾಗ 20 ದಿನಕ್ಕೆ ಸೆಟ್​ ಕೆಲಸ ಮುಗಿಯಬಹುದು ಎಂದುಕೊಂಡಿರುತ್ತೇವೆ. ಆದರೆ ಅದು ಇನ್ನೂ ಹೆಚ್ಚಿನ ದಿನ ಬೇಡುತ್ತದೆ. ಇನ್ನೇನು ಶೂಟ್​ ಮಾಡಬೇಕು ಎಂದಾಗ ಮಳೆ ಬರುತ್ತದೆ. ಕ್ಲೈಮ್ಯಾಕ್ಸ್​ ದೃಶ್ಯವನ್ನು 25 ದಿನದಲ್ಲಿ ಶೂಟಿಂಗ್​ ಮಾಡಬೇಕು ಎಂದುಕೊಂಡಿದ್ವಿ. ಆದರೆ ಅದು 52 ದಿನ ಆಯ್ತು. 52 ದಿನದಲ್ಲಿ ಇಡೀ ಸಿನಿಮಾ ಚಿತ್ರೀಕರಣ ಮಾಡಬಹುದು ಅಂತ ಎಲ್ಲರೂ ಕಾಲೆಳೆದರು’ ಎಂದಿದ್ದಾರೆ ಎ.ಪಿ. ಅರ್ಜುನ್​.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್