Sign In

By signing in or creating an account, you agree with Associated Broadcasting Company's Terms & Conditions and Privacy Policy.

Aparoopa: ಜುಲೈ 14ರಂದು ಬಿಡುಗಡೆ ಆಗಲಿದೆ ‘ಅರಸು’ ನಿರ್ದೇಶಕರ ‘ಅಪರೂಪ’ ಸಿನಿಮಾ

ಪ್ರೇಮಕಥೆಗಳನ್ನು ತೆರೆಗೆ ತರುವಲ್ಲಿ ನಿರ್ದೇಶಕ ಮಹೇಶ್​ ಬಾಬು ಫೇಮಸ್​. ಈಗ ಅವರು ‘ಅಪರೂಪ’ ಸಿನಿಮಾದ ಮೂಲಕ ಒಂದು ಡಿಫರೆಂಟ್​ ಕಥೆಯನ್ನು ಪ್ರೇಕ್ಷಕರ ಮುಂದಿಡುತ್ತಿದ್ದಾರೆ.

Aparoopa: ಜುಲೈ 14ರಂದು ಬಿಡುಗಡೆ ಆಗಲಿದೆ ‘ಅರಸು’ ನಿರ್ದೇಶಕರ 'ಅಪರೂಪ' ಸಿನಿಮಾ
ಸುಘೋಷ್‌, ಹೃತಿಕಾ
Follow us
ಮದನ್​ ಕುಮಾರ್​
|

Updated on: Jun 30, 2023 | 4:29 PM

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಮಹೇಶ್​ ಬಾಬು (Director Mahesh Babu) ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಪುನೀತ್​ ರಾಜ್​ಕುಮಾರ್​ ನಟನೆಯ ‘ಅರಸು’ ಮತ್ತು ‘ಆಕಾಶ್‌’ ಚಿತ್ರಗಳಿಗೆ ನಿರ್ದೇಶನ ಮಾಡಿದ ಅವರು ಪ್ರೇಕ್ಷಕರಲ್ಲಿ ಭರವಸೆ ಮೂಡಿಸಿದರು. ಆ ಸಿನಿಮಾಗಳ (Kannada Movie) ಬಗ್ಗೆ ಫ್ಯಾನ್ಸ್​ ಈಗಲೂ ಮಾತನಾಡುತ್ತಾರೆ. ಇನ್ನು ಹೊಸಬರ ಜೊತೆಗೂ ಸಿನಿಮಾ ಮಾಡುವ ಮೂಲಕ ಮಹೇಶ್​ ಬಾಬು ಅವರು ಸೈ ಎನಿಸಿಕೊಂಡಿದ್ದಾರೆ. ‘ಅಜಿತ್‌’, ‘ಅತಿರಥ’ ಮುಂತಾದ ಸಿನಿಮಾಗಳಿಗೆ ಅವರು ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಈಗ ಅವರ ನಿರ್ದೇಶನದಲ್ಲಿ ಹೊಸ ಸಿನಿಮಾ ಮೂಡಿಬಂದಿದೆ. ಇದರ ಹೆಸರು ‘ಅಪರೂಪ’ (Aparoopa). ಇಂಥ ವಿಶೇಷವಾದ ಟೈಟಲ್​ನಲ್ಲಿ ಸಿನಿಮಾ ಸಿದ್ಧವಾಗಿದ್ದು, ಬಿಡುಗಡೆಗೆ ಸಜ್ಜಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಲವ್​ ಸ್ಟೋರಿಗಳನ್ನು ತೆರೆಗೆ ತರುವಲ್ಲಿ ನಿರ್ದೇಶಕ ಮಹೇಶ್​ ಬಾಬು ಫೇಮಸ್​. ಈಗ ಅವರು ‘ಅಪರೂಪ’ ಸಿನಿಮಾದ ಮೂಲಕ ಒಂದು ಡಿಫರೆಂಟ್​ ಆದ ಕಥೆಯನ್ನು ಪ್ರೇಕ್ಷಕರ ಮುಂದಿಡುತ್ತಿದ್ದಾರೆ. ಜುಲೈ 14ರಂದು ‘ಅಪರೂಪ’ ಚಿತ್ರವು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಈ ಸಿನಿಮಾದ ಮೂಲಕ ನಟ ಸುಘೋಷ್‌ ಮತ್ತು ನಟಿ ಹೃತಿಕಾ ಅವರು ಕನ್ನಡ ಚಿತ್ರರಂಗಕ್ಕೆ ಹೀರೋ-ಹೀರೋಯಿನ್​ ಆಗಿ ಎಂಟ್ರಿ ನೀಡುತ್ತಿದ್ದಾರೆ.

‘ಅಪರೂಪ’ ಸಿನಿಮಾದ ಕಥೆ ಏನು?

ಸಿನಿಮಾ ಎಂದಮೇಲೆ ವಿಲನ್​ ಇರಲೇಬೇಕು. ‘ಅಪರೂಪ’ ಸಿನಿಮಾದಲ್ಲಿ ಅಹಂಕಾರವೇ ವಿಲನ್​! ನಾಯಕ ಮತ್ತು ನಾಯಕಿ ನಡುವಿನ ಅಹಂ ಎಂಬುದೇ ಈ ಕಥೆಯಲ್ಲಿ ವಿಲನ್‌ ಆಗುತ್ತದೆ. ಅದರಿಂದ ಯಾವೆಲ್ಲ ತೊಂದರೆಗಳು ಉಂಟಾಗುತ್ತವೆ ಎಂಬುದನ್ನು ‘ಅಪರೂಪ’ ಚಿತ್ರದಲ್ಲಿ ತೋರಿಸಲಾಗಿದೆ. ಆ ಕಾರಣದಿಂದ ಹೊಸ ಕಲಾವಿದರ ಈ ಸಿನಿಮಾ ನಿರೀಕ್ಷೆ ಮೂಡಿಸಿದೆ.

ಇದನ್ನೂ ಓದಿ: ಚಿತ್ರರಂಗದಲ್ಲಿ ಬಿರಾದಾರ್ ಹೊಸ ಸಾಧನೆ; ವೈಜನಾಥ್​ ನಟನೆಯ 500ನೇ ಸಿನಿಮಾ ‘90 ಬಿಡಿ ಮನೀಗ್ ನಡಿ’ ಈ ವಾರ ತೆರೆಗೆ

ನಟ ಸುಘೋಷ್ ಅವರು ಮೂಲತಃ ಮಂಡ್ಯದವರು. ಚಿಕ್ಕ ವಯಸ್ಸಿನಿಂದಲೇ ಬಣ್ಣದ ಲೋಕದ ಕನಸು ಕಟ್ಟಿಕೊಂಡಿದ್ದ ಅವರು ಮಹೇಶ್ ನಿರ್ದೇಶನದ ‘ಅತಿರಥ’ ಚಿತ್ರದಲ್ಲಿ ಒಂದು ಪಾತ್ರ ಮಾಡಿದ್ದರು. ಅವರ ಅಭಿನಯ ನೋಡಿದ ಮಹೇಶ್​ ಬಾಬು ಅವರು ‘ಅಪರೂಪ’ ಸಿನಿಮಾದಲ್ಲಿ ಹೀರೋ ಆಗುವ ಚಾನ್ಸ್​ ನೀಡಿದ್ದಾರೆ. ಡ್ಯಾನ್ಸ್​ನಲ್ಲಿಯೂ ಸುಘೋಷ್​ ಪಳಗಿದ್ದಾರೆ. ಈಗಾಗಲೇ ‘ಲವ್ ಗೆ ನೋ ನೋ..’ ಎಂಬ ಗೀತೆ ವೈರಲ್ ಆಗಿದೆ. ಅಶೋಕ್, ಅವಿನಾಶ್, ಕುರಿ ಪ್ರತಾಪ್, ಅರುಣಾ ಬಾಲರಾಜ್, ದಿನೇಶ್ ಮಂಗಳೂರು, ಕಡ್ಡಿಪುಡಿ‌ ಚಂದ್ರು, ವಿಜಯ್ ಚೆಂಡೂರು, ಮೋಹನ್ ಜುನೇಜಾ ಈ ಚಿತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: 6 ಸಾವಿರ ಕಾಲೇಜು ವಿದ್ಯಾರ್ಥಿಗಳು ಮೆಚ್ಚಿದ ‘ನಮಸ್ತೆ ಗೋಷ್ಟ್​​’ ಸಿನಿಮಾ; ರಿಲೀಸ್​ಗೂ ಮುನ್ನ ಹೊಸ ಪ್ರಯತ್ನ

‘ಸುಗ್ಗಿ ಸಿನಿಮಾಸ್’ ಬ್ಯಾನರ್ ಮೂಲಕ ‘ಅಪರೂಪ’ ಸಿನಿಮಾ ತಯಾರಾಗಿದೆ. ಈ ಚಿತ್ರವನ್ನು ‘ಕೆಆರ್​ಜಿ ಸ್ಟುಡಿಯೋಸ್’ ವಿತರಣೆ ಮಾಡಲಿದೆ. ಪ್ರಜ್ವಲ್‌ ಪೈ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಅರ್ಮಾನ್ ಮಲ್ಲಿಕ್, ಅನಿರುದ್ಧ್ ಶಾಸ್ತ್ರೀ, ಸಂಗೀತಾ ರವೀಂದ್ರನಾಥ್, ಪ್ರಜ್ವಲ್ ಪೈ ಹಾಗೂ ಪುನೀತ್ ರಾಜ್​ಕುಮಾರ್ ಅವರು ಈ ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಬೆಂಗಳೂರು, ಚಿಕ್ಕಮಗಳೂರು, ಮೈಸೂರು ಹಾಗೂ ಕಾಶ್ಮೀರದಲ್ಲಿ ಚಿತ್ರೀಕರಣ ಮಾಡಲಾಗಿದೆ. ಸೂರ್ಯಕಾಂತ್‌ ಅವರು ಛಾಯಾಗ್ರಹಣ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಸಾಧಾರಣ ಮೊತ್ತ ಗಳಿಸಿದ ಆರ್​ಸಿಬಿ, ಬೌಲರ್​ಗಳ ಮೇಲೆ ಹೆಚ್ಚಿನ ನಿರೀಕ್ಷೆ!
ಸಾಧಾರಣ ಮೊತ್ತ ಗಳಿಸಿದ ಆರ್​ಸಿಬಿ, ಬೌಲರ್​ಗಳ ಮೇಲೆ ಹೆಚ್ಚಿನ ನಿರೀಕ್ಷೆ!
ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್