ಹಾರರ್, ಆ್ಯಕ್ಷನ್, ಸಸ್ಪೆನ್ಸ್​, ಕಾಮಿಡಿಯ ಝಲಕ್​ ತೋರಿಸಿದ ‘ರಮೇಶ್​ ಸುರೇಶ್​’ ಟ್ರೇಲರ್​

‘ರಮೇಶ್​ ಸುರೇಶ್​’ ಚಿತ್ರವು ಟ್ರೇಲರ್​ ಮೂಲಕ ಕೌತುಕ ಸೃಷ್ಟಿಸಿದೆ. ಈ ಸಿನಿಮಾದಲ್ಲಿ ಬೆನಕ, ಯಶು ರಾಜ್​ ಅವರು ಹೀರೋಗಳಾಗಿ ನಟಿಸಿದ್ದಾರೆ. ನಾಯಕಿಯಾಗಿ ಚಂದನಾ ಸೋಗು ಅಭಿನಯಿಸಿದ್ದಾರೆ. ಪಿ. ಕೃಷ್ಣ, ಬಿ. ಶಂಕರ್ ನಿರ್ಮಾಣದ ಈ ಸಿನಿಮಾಗೆ ನಾಗರಾಜ್ ಮಲ್ಲಿಗೇನಹಳ್ಳಿ, ರಘುರಾಜ್ ಗೌಡ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ‘ರಮೇಶ್​ ಸುರೇಶ್​’ ಸಿನಿಮಾ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..

ಹಾರರ್, ಆ್ಯಕ್ಷನ್, ಸಸ್ಪೆನ್ಸ್​, ಕಾಮಿಡಿಯ ಝಲಕ್​ ತೋರಿಸಿದ ‘ರಮೇಶ್​ ಸುರೇಶ್​’ ಟ್ರೇಲರ್​
ಬೆನಕ ಗುಬ್ಬಿ ವೀರಣ್ಣ, ಯಶು ರಾಜ್​
Follow us
|

Updated on: Jun 07, 2024 | 9:13 PM

ಜೂನ್​ ತಿಂಗಳಲ್ಲಿ ಕನ್ನಡದ ಹಲವು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಜೂನ್​ 21ರಂದು ‘ರಮೇಶ್​ ಸುರೇಶ್​’ ಸಿನಿಮಾ (Ramesh Suresh Movie) ಬಿಡುಗಡೆ ಆಗಲಿದೆ. ‘ಆರ್.ಕೆ. ಟಾಕೀಸ್’ ಮೂಲಕ ಪಿ. ಕೃಷ್ಣ ಮತ್ತು ಬಿ. ಶಂಕರ್ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ನಾಗರಾಜ್ ಮಲ್ಲಿಗೇನಹಳ್ಳಿ ಮತ್ತು ರಘುರಾಜ್ ಗೌಡ ಅವರು ಜಂಟಿಯಾಗಿ ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಗುಬ್ಬಿ ವೀರಣ್ಣ ಅವರ ಮರಿಮಗ ಬೆನಕ (Benak Gubbi Veeranna) ಮತ್ತು ಯಶು ರಾಜ್ ಅವರು ನಟಿಸಿದ್ದಾರೆ. ಇತ್ತೀಚೆಗೆ ‘ರಮೇಶ್​ ಸುರೇಶ್​’ ಸಿನಿಮಾದ ಟ್ರೇಲರ್ (Ramesh Suresh Trailer)​ ಬಿಡುಗಡೆ ಮಾಡಲಾಯಿತು.

ಟ್ರೇಲರ್​ ಮೂಲಕ ‘ರಮೇಶ್​ ಸುರೇಶ್​’ ಸಿನಿಮಾ ಕೌತುಕ ಮೂಡಿಸಿದೆ. ವಿಶೇಷ ಏನೆಂದರೆ, ಈ ಟ್ರೇಲರ್​ನಲ್ಲಿ ಮನರಂಜನೆಯ ಹಲವು ಎಳೆಗಳು ಕಾಣಿಸಿವೆ. ಅಂದರೆ ಹಾರರ್​, ಕಾಮಿಡಿ, ಆ್ಯಕ್ಷನ್​, ಸಸ್ಪೆನ್ಸ್​ ಮುಂತಾದ ಅಂಶಗಳು ಈ ಸಿನಿಮಾದಲ್ಲಿ ಇವೆ ಎಂಬುದಕ್ಕೆ ಟ್ರೇಲರ್​ನಲ್ಲಿ ಝಲಕ್​ ತೋರಿಸಲಾಗಿದೆ. ಬೆನಕ, ಯಶು ರಾಜ್ ಜೊತೆ ಸತ್ಯಪ್ರಕಾಶ್, ಉಮಾ, ನೀನಾಸಂ ರಂಗನಾಥ್, ಸಾಧುಕೋಕಿಲ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಚಂದನಾ ಸೇಗು ಅವರು ಈ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ‘ಕೋಟಿ’ ಸಿನಿಮಾ ಟ್ರೇಲರ್​ ಮೂಲಕ ಕೌತುಕ ಹೆಚ್ಚಿಸಿದ ಡಾಲಿ, ಪರಮ್​

‘ರಮೇಶ್​ ಸುರೇಶ್​’ ಸಿನಿಮಾದ ಟ್ರೇಲರ್​ ಬಿಡುಗಡೆ ಕಾರ್ಯಕ್ರಮಕ್ಕೆ ಸಂತೋಷ್ ಆರ್ಯನ್, ವಿಜಯ್ ಚೆಂಡೂರ್, ನಾಗೇಂದ್ರ ಅರಸ್ ಅವರು ಮುಖ್ಯ ಅತಿಥಿಗಳಾಗಿ ಬಂದು ಶುಭ ಕೋರಿದರು. ಈ ಸಿನಿಮಾಗೆ ಇಬ್ಬರು ನಿರ್ಮಾಪಕರು, ಇಬ್ಬರು ನಾಯಕರು ಹಾಗೂ ಇಬ್ಬರು ನಿರ್ದೇಶಕರು ಎಂಬುದು ವಿಶೇಷ. ‘ನಮ್ಮ ಚಿತ್ರದಲ್ಲಿ ಡಬಲ್ ಮೀನಿಂಗ್ ಡೈಲಾಗ್​ಗಳು ಇಲ್ಲ. ಅನವಶ್ಯಕವಾದ ಸನ್ನಿವೇಶಗಳು ಕೂಡ ಇಲ್ಲ. ಜನರಿಗೆ ಬೇಸರ ಆಗದಂತೆ ಉತ್ತಮ ಮನರಂಜನೆಯನ್ನು ನೀಡುವ ಸಿನಿಮಾ ಇದು’ ಎಂದು ಬೆನಕ ಗುಬ್ಬಿ ವೀರಣ್ಣ ಮತ್ತು ಯಶು ರಾಜ್ ಹೇಳಿದ್ದಾರೆ.

‘ರಮೇಶ್​ ಸುರೇಶ್​’ ಸಿನಿಮಾ ಟ್ರೇಲರ್​:

ನಿರ್ಮಾಪಕರಾದ ಕೃಷ್ಣ ಮತ್ತು ಶಂಕರ್ ಅವರು ಮಾತನಾಡಿ, ‘ಹೊಸ ಪ್ರತಿಭೆಗಳಿಗೆ ಚಾನ್ಸ್​ ಕೊಡುವ ಉದ್ದೇಶದಿಂದ ‘ಆರ್.ಕೆ. ಟಾಕೀಸ್’ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ್ದೇವೆ. ಮೊದಲ ಹೆಜ್ಜೆಯಾಗಿ ಈ ಸಿನಿಮಾವನ್ನು ನಿರ್ಮಿಸಿದ್ದೇವೆ. ನಿರ್ದೇಶಕರಾದ ನಾಗರಾಜ್ ಮತ್ತು ರಘುರಾಜ್ ಅವರ ಉತ್ತಮವಾಗಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಟೀಸರ್, ಟ್ರೇಲರ್ ಮತ್ತು ಹಾಡುಗಳಿಗೆ ಮೆಚ್ಚುಗೆ ಸಿಕ್ಕಿದೆ’ ಎಂದು ಹೇಳಿದ್ದಾರೆ. ನಿರ್ದೇಶಕರಾದ ನಾಗರಾಜ್ ಮಲ್ಲಿಗೇನಹಳ್ಳಿ ಮತ್ತು ರಘುರಾಜ್ ಗೌಡ ಅವರು ಟ್ರೇಲರ್​ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ‘ಇದೊಂದು ಕಾಮಿಡಿ ಪ್ರಕಾರದ ಸಿನಿಮಾವಾದರೂ ಒಳ್ಳೆಯ ಸಂದೇಶ ಇದೆ. ಪ್ರೇಕ್ಷಕರಿಗೆ ಬೇಕಾದ ಎಲ್ಲ ಅಂಶಗಳು ನಮ್ಮ ಸಿನಿಮಾದಲ್ಲಿದೆ’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ