‘ಕೋಟಿ’ ಸಿನಿಮಾ ಟ್ರೇಲರ್​ ಮೂಲಕ ಕೌತುಕ ಹೆಚ್ಚಿಸಿದ ಡಾಲಿ, ಪರಮ್​

‘ಕೋಟಿ’ ಚಿತ್ರ ಅದ್ದೂರಿಯಾಗಿ ಮೂಡಿಬಂದಿದೆ. ಸಿನಿಮಾದ ಟ್ರೇಲರ್​ನಲ್ಲಿ ಮೇಕಿಂಗ್​ ಗುಣಮಟ್ಟ ಕಂಡು ಸಿನಿಪ್ರಿಯರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಟ್ರೇಲರ್​ನಲ್ಲಿ ಡೈಲಾಗ್​ ಸಹ ಗಮನ ಸೆಳೆದಿದೆ. ಡಾಲಿ ಧನಂಜಯ್​, ರಂಗಾಯಣ ರಘು, ರಮೇಶ್​ ಇಂದಿರಾ, ಮೋಕ್ಷಾ ಕುಶಾಲ್​, ತಾರಾ ಅನುರಾಧಾ, ಪೃಥ್ವಿ ಶ್ಯಾಮನೂರ್​ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

‘ಕೋಟಿ’ ಸಿನಿಮಾ ಟ್ರೇಲರ್​ ಮೂಲಕ ಕೌತುಕ ಹೆಚ್ಚಿಸಿದ ಡಾಲಿ, ಪರಮ್​
ಡಾಲಿ ಧನಂಜಯ್​
Follow us
|

Updated on: Jun 05, 2024 | 9:48 PM

ನಟ ಡಾಲಿ ಧನಂಜಯ (Daali Dhananjaya) ಅವರು ‘ಕೋಟಿ’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರ ಪಾತ್ರ ಡಿಫರೆಂಟ್​ ಆಗಿರಲಿದೆ. ಪರಮ್​ (Param) ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಹಾಡು, ಟೀಸರ್​ ಮೂಲಕ ಜನರಲ್ಲಿ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಟ್ರೇಲರ್​ ಇಂದು (ಜೂನ್​ 5) ಬಿಡುಗಡೆ ಆಗಿದೆ. ‘ಕೋಟಿ’ ಟ್ರೇಲರ್​ (Kotee Trailer) ನೋಡಿ ಸಿನಿಪ್ರಿಯರಲ್ಲಿ ಕೌತುಕ ಹೆಚ್ಚಿದೆ. ಕಥೆಯ ಬಗ್ಗೆ ಒಂದಷ್ಟು ಸುಳಿವು ಬಿಟ್ಟುಕೊಡಲಾಗಿದೆ. ಜೂನ್​ 14ರಂದು ‘ಕೋಟಿ’ ತೆರೆಕಾಣಲಿದ್ದು, ಅದಕ್ಕಾಗಿ ಸಕಲ ತಯಾರಿ ಮಾಡಿಕೊಳ್ಳಲಾಗಿದೆ.

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ನಟ ರಮೇಶ್​ ಇಂದಿರಾ ಅವರು ವಿಲನ್​ ಪಾತ್ರ ಮಾಡಿ ಜನರ ಚಪ್ಪಾಳೆ ಗಿಟ್ಟಿಸಿದ್ದರು. ಈಗ ಅವರು ‘ಕೋಟಿ’ ಸಿನಿಮಾದಲ್ಲೂ ವಿಲನ್​ ಆಗಿದ್ದಾರೆ. ದೀನು ಸಾಹುಕಾರ್ ಎಂಬ ಪಾತ್ರವನ್ನು ಅವರು ಮಾಡಿದ್ದಾರೆ. ಇಡೀ ಸಿನಿಮಾದಲ್ಲಿ ಡಾಲಿ ಧನಂಜಯ್​ ವರ್ಸಸ್​ ರಮೇಶ್​ ಇಂದಿರಾ ಅವರ ಮುಖಾಮುಖಿ ದೃಶ್ಯಗಳು ಇರಲಿವೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸುಳಿವು ಸಿಕ್ಕಿದೆ.

ಇದನ್ನೂ ಓದಿ: ಡಾಲಿ ಧನಂಜಯ ನಟನೆಯ ‘ಕೋಟಿ’ ಸಿನಿಮಾ ಬಿಡುಗಡೆ ಮಾಡಲಿರುವ ‘ಕೆಆರ್​ಜಿ’

‘ಕೋಟಿ’ ಸಿನಿಮಾ ಅದ್ದೂರಿಯಾಗಿ ಮೂಡಿಬಂದಿದೆ. ಟ್ರೇಲರ್​ನಲ್ಲಿ ಮೇಕಿಂಗ್​ ಗುಣಮಟ್ಟವನ್ನು ಕಂಡು ಜನರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಟ್ರೇಲರ್​ನಲ್ಲಿ ಡೈಲಾಗ್​ ಕೂಡ ಗಮನ ಸೆಳೆದಿದೆ. ‘ವ್ಯವಹಾರ ಯಾರ ಜೊತೆ ಬೇಕಾದರೂ ಆಗಬಹುದು. ಆದರೆ ಎರಡು ಮುಖ ಇರುವವರ ಜೊತೆ ಮಾತ್ರ ಮಾಡಬಾರದು. ಯಾಕೆಂದರೆ, ಅವರಿಂದ ಮೋಸ ಆದಾಗ ಯಾವ ಮುಖಕ್ಕೆ ಬಾರಿಸೋದು ಅನ್ನೋ ಕನ್ಫ್ಯೂಷನ್​ನಲ್ಲೇ ಟೈಮ್ ವೇಸ್ಟ್​ ಆಗಿಬಿಡುತ್ತೆ’ ಎಂದು ಡಾಲಿ ಡೈಲಾಗ್​ ಹೊಡೆದಿದ್ದಾರೆ.

‘ಕೋಟಿ’ ಟ್ರೇಲರ್:

ಡಾಲಿ ಧನಂಜಯ್​, ರಮೇಶ್​ ಇಂದಿರಾ ಅವರ ಜೊತೆಗೆ ರಂಗಾಯಣ ರಘು, ತಾರಾ ಅನುರಾಧಾ, ಮೋಕ್ಷಾ ಕುಶಾಲ್​, ತನುಶಾ ವೆಂಕಟೇಶ್​, ಪೃಥ್ವಿ ಶ್ಯಾಮನೂರ್​, ಅಭಿಷೇಕ್​ ಶ್ರೀಕಾಂತ್​ ಮುಂತಾದವರು ‘ಕೋಟಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಜಿಯೋ ಸ್ಟುಡಿಯೋಸ್​ ಮೂಲಕ ಜ್ಯೋತಿ ದೇಶಪಾಂಡೆ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ವಾಸುಕಿ ವೈಭವ್​ ಅವರ ಸಂಗೀತ, ನೋಬಿನ್​ ಪೌಲ್​ ಅವರ ಹಿನ್ನೆಲೆ ಸಂಗೀತ ಈ ಸಿನಿಮಾಗೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್