AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yash: ಚಿತ್ರರಂಗ ಬೇಡ ಎಂದು ಹೊರಟಿದ್ದ ಚಿಕ್ಕಣ್ಣ; ಇದನ್ನು ತಡೆದಿದ್ದು ಯಶ್

ಚಿಕ್ಕಣ್ಣ ಅವರು ವೃತ್ತಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಅವರು ನಾಟಕಗಳನ್ನು ಮಾಡಿದ್ದರು. ಚಿಕ್ಕಣ್ಣ ನಟನೆಯನ್ನು ಯಶ್ ನೋಡಿದ್ದರು. ‘ಕಿರಾತಕ’ ಮಾಡುವಾಗ ಯಶ್ ಅವರೇ ಕರೆದು ಚಿಕ್ಕಣ್ಣಗೆ ಆಫರ್ ಕೊಟ್ಟರು. ಚಿಕ್ಕಣ್ಣ ಒಪ್ಪಿ ನಟಿಸಿದರು. ಯಶ್ ಗೆಳೆಯನ ಪಾತ್ರ ಮಾಡಿದರು ಚಿಕ್ಕಣ್ಣ. 

Yash: ಚಿತ್ರರಂಗ ಬೇಡ ಎಂದು ಹೊರಟಿದ್ದ ಚಿಕ್ಕಣ್ಣ; ಇದನ್ನು ತಡೆದಿದ್ದು ಯಶ್
ಯಶ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Jun 06, 2024 | 11:12 AM

Share

ಯಶ್ (Yash) ಅವರ ಖ್ಯಾತಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಬ್ಬಿದೆ. ಅವರ ಅಭಿಮಾನಿ ಬಳಗ ತುಂಬಾನೇ ಹಿರಿದಾಗಿದೆ. ಅವರು ತಮ್ಮ ಸ್ವಂತ ಬಲದಿಂದ ಇಷ್ಟು ಎತ್ತರಕ್ಕೆ ಬಂದಿದ್ದಾರೆ. ಆರಂಭದಲ್ಲಿ ಅವರು ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. ಈಗ ಅವರನ್ನು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಯಶ್ ತಾವು ಬೆಳೆಯುವುದರ ಜೊತೆಗೆ ಒಂದಷ್ಟು ಜನರನ್ನು ಬೆಳೆಸಿದ್ದಾರೆ. ಅದರಲ್ಲಿ ಚಿಕ್ಕಣ್ಣ ಕೂಡ ಒಬ್ಬರು. ಈ ಬಗ್ಗೆ ಚಿಕ್ಕಣ್ಣ ಅವರು ಕಲಾಮಾಧ್ಯಮ ಯೂಟ್ಯೂಬ್ ಚಾಲೆನ್​ಗೆ ನೀಡಿದಸ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದರು.

ಚಿಕ್ಕಣ್ಣ ಅವರು ವೃತ್ತಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಅವರು ನಾಟಕಗಳನ್ನು ಮಾಡಿದ್ದರು. ಚಿಕ್ಕಣ್ಣ ನಟನೆಯನ್ನು ಯಶ್ ನೋಡಿದ್ದರು. ‘ಕಿರಾತಕ’ ಮಾಡುವಾಗ ಯಶ್ ಅವರೇ ಕರೆದು ಚಿಕ್ಕಣ್ಣಗೆ ಆಫರ್ ಕೊಟ್ಟರು. ಚಿಕ್ಕಣ್ಣ ಒಪ್ಪಿ ನಟಿಸಿದರು. ಯಶ್ ಗೆಳೆಯನ ಪಾತ್ರ ಮಾಡಿದರು ಚಿಕ್ಕಣ್ಣ.

ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿತು. ಆ ಬಳಿಕ ಅವರಿಗೆ ಸಿನಿಮಾ ಬರಬಹುದು ಎಂದುಕೊಂಡಿದ್ದರು. ಆದರೆ, ಆ ರೀತಿ ಆಗಲಿಲ್ಲ. ಈ ಮಧ್ಯೆ ಉದಯ ಕಾಮಿಡಿಯ ಕೆಲವು ಶೋಗಳನ್ನು ನಡೆಸಿಕೊಡುತ್ತಿದ್ದರು ಚಿಕ್ಕಣ್ಣ. ಸಿನಿಮಾ ಬೇಡವೇ ಬೇಡ ಎಂದು ನಿರ್ಧಾರಕ್ಕೆ ಬಂದ ಅವರು ಶೋನಲ್ಲಿ ಮುಂದುವರಿಯಲು ನಿರ್ಧರಿಸಿದರು.

ಆ ಬಳಿಕ ‘ರಾಜಾಹುಲಿ’ ಸಿನಿಮಾದ ಆಫರ್ ಬಂತು. ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಚಿಕ್ಕಣ್ಣ ನಟನೆ ನಿರ್ದೇಶಕರಿಗೆ ಇಷ್ಟ ಆಗಿರಲಿಲ್ಲ. ಆಗ ಅವರು ಈ ಚಿತ್ರದಿಂದ ಹೊರ ಹೋಗಲು ನಿರ್ಧರಿಸಿದರು. ಆದರೆ, ಯಶ್ ಅವರು ಚಿಕ್ಕಣ್ಣ ಅವರ ಮನ ಒಲಿಸಿದರು. ಆ ಬಳಿಕ ಅವರ ಶಾಟ್ ಓಕೆ ಆಯಿತು. ಈ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಸರಿಯಾಗಿ ಶೋಗೆ ಹೋಗೋಕೆ ಆಗಿಲ್ಲ. ಈ ಸಿನಿಮಾ ಗೆಲುವು ಕಾಣುತ್ತಿದ್ದಂತೆ ಅವರನ್ನು ಉದಯ ಕಾಮಿಡಿ ಶೋನಿಂದ ತೆಗೆದರು. ಆ ಬಳಿಕ ಚಿಕ್ಕಣ್ಣ ಚಿಂತೆಗೆ ಒಳಗಾದರು. ಆದರೆ, ಆ ಬಳಿಕ ಬಂದ ಆಫರ್​ಗಳು ಚಿಕ್ಕಣ್ಣ ಜೀವನವನ್ನೇ ಬದಲಾಯಿಸಿತು.

ಇದನ್ನೂ ಓದಿ: ‘ಫಾರೆಸ್ಟ್’ ಹೊಕ್ಕ ಚಿಕ್ಕಣ್ಣ, ಅನೀಶ್, ಗುರುನಂದನ್, ರಂಗಾಯಣ ರಘು; ‘ಬ್ರಹ್ಮಚಾರಿ’ಯ ಹೊಸ ಸಿನಿಮಾ

ಶರಣ್ ಜೊತೆ ‘ಅಧ್ಯಕ್ಷ’ ಸಿನಿಮಾ ಮಾಡಿದರು. ಈ ಚಿತ್ರ ಚಿಕ್ಕಣ್ಣ ವೃತ್ತಿ ಜೀವನವನ್ನು ಬದಲಿಸಿತು. ಈಗ ಚಿಕ್ಕಣ್ಣ ಹೀರೋ ಆಗಿದ್ದಾರೆ. ‘ಉಪಾಧ್ಯಕ್ಷ’ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ. ಈಗ ಅವರು ಹೀರೋ ಆಗಿ ನಟಿಸುತ್ತಿರುವ ಎರಡನೇ ಸಿನಿಮಾ ಸೆಟ್ಟೇರುವ ಹಂತದಲ್ಲಿ ಇದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಸಿಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ