AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Media Trial: ಆ 2 ರಾಷ್ಟ್ರೀಯ ಸುದ್ದಿವಾಹಿನಿ ವಿರುದ್ಧ ತೊಡೆ ತಟ್ಟಿ ನಿಂತ ಬಾಲಿವುಡ್ ದಿಗ್ಗಜರು

ಮುಂಬೈ: ಬಾಲಿವುಡ್​ ಬಗ್ಗೆ ಬೇಜವಾಬ್ದಾರಿ, ನಿಂದನಾತ್ಮಕ ಹಾಗೂ ಮಾನಹಾನಿಕರ ಸುದ್ದಿಗಳನ್ನು ಸತತವಾಗಿ ಪ್ರಸಾರ ಮಾಡಿದ್ದ ಎರಡು ರಾಷ್ಟ್ರೀಯ ಸುದ್ದಿವಾಹಿನಿಗಳ ವಿರುದ್ಧ ಚಿತ್ರರಂಗದ ದಿಗ್ಗಜರು ಇದೀಗ ತೊಡೆ ತಟ್ಟಿ ನಿಂತಿದ್ದಾರೆ. ರಿಪಬ್ಲಿಕ್ ಟಿವಿ ಹಾಗೂ ಟೈಮ್ಸ್​ ನೌ ರಾಷ್ಟ್ರೀಯ ಸುದ್ದಿವಾಹಿನಿಗಳ ವಿರುದ್ಧ ದೆಹಲಿ ಹೈಕೋರ್ಟ್​ನಲ್ಲಿ ಚಿತ್ರರಂಗದ ಹಲವು ನಿರ್ಮಾಣ ಸಂಸ್ಥೆಗಳು ಮತ್ತು ಒಕ್ಕೂಟಗಳು ಕೇಸ್​ ದಾಖಲಿಸಿವೆ. ಬಾಲಿವುಡ್​ ದಿಗ್ಗಜರಾದ ಶಾರೂಖ್​ ಖಾನ್​, ಆಮಿರ್ ಖಾನ್​, ಸಲ್ಮಾನ್ ಖಾನ್​, ಅಜಯ್​ ದೇವಗನ್​, ಅಕ್ಷಯ್​ ಕುಮಾರ್ ಸೇರಿದಂತೆ 34 ಪ್ರಮುಖ ನಟರು […]

Media Trial: ಆ 2 ರಾಷ್ಟ್ರೀಯ ಸುದ್ದಿವಾಹಿನಿ ವಿರುದ್ಧ ತೊಡೆ ತಟ್ಟಿ ನಿಂತ ಬಾಲಿವುಡ್ ದಿಗ್ಗಜರು
KUSHAL V
| Updated By: ಆಯೇಷಾ ಬಾನು|

Updated on:Nov 24, 2020 | 6:43 AM

Share

ಮುಂಬೈ: ಬಾಲಿವುಡ್​ ಬಗ್ಗೆ ಬೇಜವಾಬ್ದಾರಿ, ನಿಂದನಾತ್ಮಕ ಹಾಗೂ ಮಾನಹಾನಿಕರ ಸುದ್ದಿಗಳನ್ನು ಸತತವಾಗಿ ಪ್ರಸಾರ ಮಾಡಿದ್ದ ಎರಡು ರಾಷ್ಟ್ರೀಯ ಸುದ್ದಿವಾಹಿನಿಗಳ ವಿರುದ್ಧ ಚಿತ್ರರಂಗದ ದಿಗ್ಗಜರು ಇದೀಗ ತೊಡೆ ತಟ್ಟಿ ನಿಂತಿದ್ದಾರೆ. ರಿಪಬ್ಲಿಕ್ ಟಿವಿ ಹಾಗೂ ಟೈಮ್ಸ್​ ನೌ ರಾಷ್ಟ್ರೀಯ ಸುದ್ದಿವಾಹಿನಿಗಳ ವಿರುದ್ಧ ದೆಹಲಿ ಹೈಕೋರ್ಟ್​ನಲ್ಲಿ ಚಿತ್ರರಂಗದ ಹಲವು ನಿರ್ಮಾಣ ಸಂಸ್ಥೆಗಳು ಮತ್ತು ಒಕ್ಕೂಟಗಳು ಕೇಸ್​ ದಾಖಲಿಸಿವೆ.

ಬಾಲಿವುಡ್​ ದಿಗ್ಗಜರಾದ ಶಾರೂಖ್​ ಖಾನ್​, ಆಮಿರ್ ಖಾನ್​, ಸಲ್ಮಾನ್ ಖಾನ್​, ಅಜಯ್​ ದೇವಗನ್​, ಅಕ್ಷಯ್​ ಕುಮಾರ್ ಸೇರಿದಂತೆ 34 ಪ್ರಮುಖ ನಟರು ಹಾಗೂ ಇತರರಿಗೆ ಸೇರಿರುವ ನಿರ್ಮಾಣ ಸಂಸ್ಥೆಗಳು ಮತ್ತು ಒಕ್ಕೂಟಗಳು ಹೈಕೋರ್ಟ್ ಕದ ತಟ್ಟಿವೆ.

ಬಾಲಿವುಡ್ ಬಗ್ಗೆ ಬೇಜವಾಬ್ದಾರಿ, ನಿಂದನಾತ್ಮಕ ಮತ್ತು ಮಾನಹಾನಿಕರ ಹೇಳಿಕೆ ನೀಡದಂತೆ ನಿರ್ಬಂಧ ವಿಧಿಸಲು ಮನವಿ ಮಾಡಲಾಗಿದೆ. ಬಾಲಿವುಡ್ ವ್ಯಕ್ತಿಗಳ ಬಗ್ಗೆ ಮಾಧ್ಯಮಗಳು ವಿಚಾರಣೆ ನಡೆಸದಂತೆ ನಿರ್ಬಂಧ ಹೇರುವಂತೆ ಸಹ ಮನವಿ ಮಾಡಲಾಗಿದೆ. ಜೊತೆಗೆ, ಬಾಲಿವುಡ್ ವಿರುದ್ಧ ಪ್ರಸಾರ ಮಾಡಿರುವ ಮಾನಹಾನಿಕರ ಕಂಟೆಂಟ್ ವಾಪಸ್ ಪಡೆಯಲು ಸಹ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ರಿಪಬ್ಲಿಕ್​ ಸುದ್ದಿವಾಹಿನಿಯ ಜನಪ್ರಿಯ ನಿರೂಪಕ ಆರ್ನಬ್​ ಗೋಸ್ವಾಮಿ, ಪ್ರದೀಪ್​ ಭಂಡಾರಿ ಹಾಗೂ ಟೈಮ್ಸ್​ ನೌ ಸುದ್ದಿವಾಹಿನಿಯ ನಿರೂಪಕರಾದ ನಾವಿಕಾ ಕುಮಾರ್ ಮತ್ತು ರಾಹುಲ್​ ಶಿವಶಂಕರ್ ವಿರುದ್ಧ ಕೇಸ್ ದಾಖಲಾಗಿದೆ.

Published On - 6:58 pm, Mon, 12 October 20

ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು