Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಲವ್​ ಮಾಕ್​ಟೇಲ್​ ಸಿನಿಮಾ ಅದ್ಭುತ’​; ESCN ಎಂದಿದ್ದ ಆಸ್ಟ್ರೇಲಿಯಾ ಪತ್ರಕರ್ತೆಗೆ ಈಗ ಕನ್ನಡ ಸಿನಿಮಾಗಳ ಮೇಲೆ ಒಲವು

Chloe Amanda Bailey: 2020ರಲ್ಲಿ ತೆರೆಗೆ ಬಂದ ಲವ್​ ಮಾಕ್​​ಟೇಲ್​ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಡಾರ್ಲಿಂಗ್​ ಕೃಷ್ಣ ಹಾಗೂ ಮಿಲನಾ ಸಿನಿ ಬದುಕಿಗೆ ಈ ಚಿತ್ರ ಸಾಕಷ್ಟು ಮೈಲೇಜ್​ ನೀಡಿತ್ತು.

‘ಲವ್​ ಮಾಕ್​ಟೇಲ್​ ಸಿನಿಮಾ ಅದ್ಭುತ’​; ESCN ಎಂದಿದ್ದ ಆಸ್ಟ್ರೇಲಿಯಾ ಪತ್ರಕರ್ತೆಗೆ ಈಗ ಕನ್ನಡ ಸಿನಿಮಾಗಳ ಮೇಲೆ ಒಲವು
ಕ್ಲೊಯಿ ಅಮಂಡಾ- ಲವ್​ ಮಾಕ್ಟೇಲ್​ ಸಿನಿಮಾ ಪೋಸ್ಟರ್​
Follow us
ರಾಜೇಶ್ ದುಗ್ಗುಮನೆ
|

Updated on: May 27, 2021 | 7:43 PM

ಆಸ್ಟ್ರೆಲಿಯಾದ ಜನಪ್ರಿಯ ಕ್ರೀಡಾ ಪತ್ರಕರ್ತೆ ಕ್ಲೊಯಿ ಅಮಂಡಾ ಬೈಲಿ ಇತ್ತೀಚೆಗೆ ‘ಈ ಸಲ ಕಪ್​ ನಮ್ದೇ’ ಎಂದು ಕನ್ನಡದಲ್ಲಿ ಟ್ವೀಟ್​ ಮಾಡಿ ಕರ್ನಾಟಕದವರ ಮನ ಗೆದ್ದಿದ್ದರು. ಈಗ ಕನ್ನಡಿಗರಿಗೆ ಅವರು ಮತ್ತಷ್ಟು ಹತ್ತಿರವಾಗಿದ್ದಾರೆ. ಕ್ಲೊಯಿ ಕನ್ನಡ ಸಿನಿಮಾಗಳ ಬಗ್ಗೆ ಒಲವು ಹೆಚ್ಚಿಸಿಕೊಂಡಿದ್ದು, ಡಾರ್ಲಿಂಗ್​ ಕೃಷ್ಣ ಹಾಗೂ ಮಿಲನಾ ನಾಗರಾಜ್​ ನಟನೆಯ ‘ಲವ್​ ಮಾಕ್​​ಟೇಲ್’​ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.

2020ರಲ್ಲಿ ತೆರೆಗೆ ಬಂದ ‘ಲವ್​ ಮಾಕ್​​ಟೇಲ್’​ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಡಾರ್ಲಿಂಗ್​ ಕೃಷ್ಣ ಹಾಗೂ ಮಿಲನಾ ಸಿನಿ ಬದುಕಿಗೆ ಈ ಚಿತ್ರ ಸಾಕಷ್ಟು ಮೈಲೇಜ್​ ನೀಡಿತ್ತು. ಈ ಸಿನಿಮಾವನ್ನು ನೋಡಿ ಕಣ್ಣೀರಿಟ್ಟವರ ಸಂಖ್ಯೆ ದೊಡ್ಡದಿದೆ. ಈಗ ಈ ಚಿತ್ರಕ್ಕೆ ದೂರದ ಆಸ್ಟ್ರೇಲಿಯಾದಿಂದ ಮೆಚ್ಚುಗೆಯ ಮಾತು ಕೇಳಿ ಬಂದಿದೆ. ಕ್ಲೊಯಿ ಅಮಂಡಾ ಬೈಲಿ ಸಿನಿಮಾ ನೋಡಿ ಟ್ವೀಟ್​ ಮಾಡಿದ್ದಾರೆ.

‘ನಾನು ‘ಲವ್​ ಮಾಕ್ಟೇಲ್’​ ಸಿನಿಮಾ ನೋಡಿದೆ. ನಿಜಕ್ಕೂ ಇದು ಅತ್ಯುತ್ತಮ ಸಿನಿಮಾ. ನಾನು ಸಿನಿಮಾ ಉದ್ದಕ್ಕೂ ನಕ್ಕಿದ್ದೇನೆ. ಸಿನಿಮಾದ ಕ್ಲೈಮ್ಯಾಕ್ಸ್​ ಬೇಸರ ಮೂಡಿಸುತ್ತದೆ. ಸಿನಿಮಾ ಮ್ಯೂಸಿಕ್​ ಅದ್ಭುತವಾಗಿದೆ. ಸಿನಿಮಾದಲ್ಲಿ ಫನ್​ ಇದೆ, ಬೇಸರ ಇದೆ. ಈ ಚಿತ್ರ ಎಲ್ಲಾ ಎಮೋಷನ್​ಗಳನ್ನು ಒಳಗೊಂಡಿದೆ. ಲವ್​ ಮಾಕ್​ಟೇಲ್​ 2 ಬರುತ್ತಿದೆ ಎಂದು ಕೇಳಲ್ಪಟ್ಟೆ’ ಎಂಬುದಾಗಿ ಅವರು ಬರೆದಕೊಂಡಿದ್ದಾರೆ.

ಇನ್ನು, ಕ್ಲೊಯಿ ಅಮಂಡಾ ಯಶ್​ ನಟನೆಯ ‘ಕೆಜಿಎಫ್​‘ ಸಿನಿಮಾ ನೋಡಿದ್ದಾರಂತೆ. ಈ ಬಗ್ಗೆ ಅವರು ಕಮೆಂಟ್​ನಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲ, ‘ಕೆಜಿಎಫ್​ 2’ಗಾಗಿ ಕಾದಿದ್ದೇನೆ ಎಂಬುದಾಗಿಯೂ ಬರೆದುಕೊಂಡಿದ್ದಾರೆ. ಸದ್ಯ, ಅವರ ಈ ಟ್ವೀಟ್​ ಸಾಕಷ್ಟು ವೈರಲ್​ ಆಗಿದೆ.

ಐಪಿಎಲ್​ 14ನೇ ಸೀಸನ್​ ಆರಂಭವಾದಾಗ ಆರ್​ಸಿಬಿ ಜೆರ್ಸಿ ಹಾಕಿಕೊಂಡು ‘ಈ ಸಲ ಕಪ್​ ನಮ್ದೇ’ ಎಂದು ಹಾಕಿದ್ದರು. ಈ ಮೂಲಕ ಸಾಕಷ್ಟು ಕನ್ನಡ ಅಭಿಮಾನಿಗಳನ್ನು ಪಡೆದುಕೊಂಡಿದ್ದರು. ಈಗ ಲವ್​ ಮಾಕ್​ಟೇಲ್​ ಸಿನಿಮಾ ಬಗ್ಗೆ ಅವರು ಕೊಟ್ಟ ಪ್ರತಿಕ್ರಿಯೆಯಿಂದ ಅವರ ಅಭಿಮಾನಿ ಬಳಗ ಮತ್ತಷ್ಟು ಹಿರಿದಾಗಿದೆ.

ಇದನ್ನೂ ಓದಿ: ಕೊವಿಡ್​ ಪಾಸಿಟಿವ್​ ಆದರೂ ಅಭಿಮಾನ ಮರೆಯದ ಕೃಷ್ಣ-ಮಿಲನಾ!

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !