ರಿಟ್ರೀವ್ ಆಗಿಲ್ಲ ದರ್ಶನ್​-ಪವಿತ್ರಾ ಐಫೋನ್; ಮುಂದೇನು?

ಬೆಂಗಳೂರಿನ ಪಟ್ಟಣಗೆರೆ ಶೆಡ್​ನಲ್ಲಿ ರೇಣುಕಾ ಸ್ವಾಮಿ ಅಂಗಲಾಚುತ್ತಿರುವ ಫೋಟೋ ವೈರಲ್ ಆಗಿದೆ. ಈ ಫೋಟೋ ನೋಡಿದವರ ಕರುಳು ಚುರಕ್ ಎಂದಿದೆ. ಈ ಫೋಟೋಗಳು ಪ್ರದೋಷ್ ಮೊಬೈಲ್​ನಿಂದ ರಿಟ್ರೀವ್ ಮಾಡಲಾಗಿದೆ. ಆದರೆ, ದರ್ಶನ್ ಮೊಬೈಲ್​ನ ರಿಟ್ರೀವ್ ಮಾಡೋಕೆ ಆಗಿಲ್ಲ.

ರಿಟ್ರೀವ್ ಆಗಿಲ್ಲ ದರ್ಶನ್​-ಪವಿತ್ರಾ ಐಫೋನ್; ಮುಂದೇನು?
ದರ್ಶನ್​-ಪವಿತ್ರಾ ಐಫೋನ್​ ರಿಟ್ರೀವ್ ಮಾಡಲಾಗದೇ ಕೈಚೆಲ್ಲಿದ ತಜ್ಞರು
Follow us
| Updated By: ರಾಜೇಶ್ ದುಗ್ಗುಮನೆ

Updated on:Sep 05, 2024 | 12:44 PM

ನಟ ದರ್ಶನ್ ಹಾಗೂ ಪವಿತ್ರಾ ಗೌಡ ಅವರು ರೇಣುಕಾ ಸ್ವಾಮಿ ಗೌಡ ಕೊಲೆ ಕೇಸ್​ನಲ್ಲಿ ಎ2 ಹಾಗೂ ಎ1 ಆರೋಪಿ ಆಗಿದ್ದಾರೆ. ಇವರ ಮೊಬೈಲ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ, ಈ ಮೊಬೈಲ್​ನಲ್ಲಿರುವ ಡಾಟಾ ರಿಟ್ರೀವ್ ಮಾಡಲು ಹೈದರಾಬಾದ್​ನ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯದ (CFSL) ತಜ್ಞರ ಬಳಿ ಸಾಧ್ಯವಾಗಿಲ್ಲ. ಐಫೋನ್ ಆಗಿರುವ ಹಿನ್ನೆಲೆಯಲ್ಲಿ ಯಾವುದೇ ಡಾಟಾ ತೆಗೆಯಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ದರ್ಶನ್ ಹಾಗೂ ಪವಿತ್ರಾ ಅವರನ್ನು ಅರೆಸ್ಟ್ ಮಾಡಿದ ಬಳಿಕ ಅವರ ಮೊಬೈಲ್​​ಗಳನ್ನು ವಶಕ್ಕೆ ಪಡೆಯಲಾಗಿತ್ತು. ಮೊಬೈಲ್​ನಲ್ಲಿರುವ ಡಾಟಾ ಪಡೆಯಲು ಮೊಬೈಲ್​ನ ಹೈದರಾಬಾದ್​ನ CFS ಲ್ಯಾಬ್​ಗೆ ಕಳುಹಿಸಲಾಗಿತ್ತು. ಆದರೆ, ಈಗ ಅವರು ಎರಡೂ ಮೊಬೈಲ್​​ಗಳನ್ನು ವಾಪಸ್​ ಕಳುಹಿಸಿದ್ದಾರೆ.

ಕಳೆದ ಒಂದೂವರೆ ತಿಂಗಳಿನಿಂದ ಈ ಮೊಬೈಲ್​ಗಳು ಲ್ಯಾಬ್​ನಲ್ಲಿ ಇತ್ತು. ಎಫ್ಎಸ್ಎಲ್ ತಜ್ಞರು ರಿಟ್ರೀವ್​​ಗೆ ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೆ, ಅವರಿಂದ ಸಾಧ್ಯವಾಗಿಲ್ಲ. ಹೀಗಾಗಿ, 2 ಐಫೋನ್​​ಗಳನ್ನು ಗುಜರಾತ್​​ನ ಎಫ್​ಎಸ್​ಎಲ್​​ ಯೂನಿವರ್ಸಿಟಿಗೆ ಕಳಿಸಲು ಚಿಂತನೆ ನಡೆಸಿದ್ದಾರೆ. ಇಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಇರುತ್ತದೆ.

ಇದನ್ನೂ ಓದಿ: ‘ನನ್ನ ಮಗನಿಗಾದ ನೋವು ದರ್ಶನ್​ಗೂ ಆಗಬೇಕು’; ಹಿಡಿಶಾಪ ಹಾಕಿದ ರೇಣುಕಾಸ್ವಾಮಿ ತಂದೆ

ಈ ಮೊದಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಸ್​ನಲ್ಲೂ ಹೀಗೆಯೇ ಆಗಿತ್ತು. ಅವರ ಮೊಬೈಲ್​ನ ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿತ್ತು. ಈ ಮೊಬೈಲ್​ನ ಅನ್​ಲಾಕ್ ಮಾಡಲು ಸಹಾಯ ಮಾಡುವುದಿಲ್ಲ ಎಂದು ಆ್ಯಪಲ್ ಸಂಸ್ಥೆ ಹೇಳಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:36 pm, Thu, 5 September 24