AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಮಾರ್ಟಿನ್​ ಅಲ್ಲ’; ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ ಧ್ರುವ ಸರ್ಜಾ: ಯಾರು ನಿಜವಾದ ಮಾರ್ಟಿನ್​?

ಹೀರೋ ಪಾತ್ರದ ಹೆಸರನ್ನೇ ಚಿತ್ರದ ಶೀರ್ಷಿಕೆಯನ್ನಾಗಿ ಇಡುವ ಒಂದು ಟ್ರೆಂಡ್​ ಮೊದಲಿನಿಂದಲೂ ಇದೆ. ಹಾಗಾಗಿ, ‘ಮಾರ್ಟಿನ್​’ ಚಿತ್ರದಲ್ಲಿ ಧ್ರುವ ಸರ್ಜಾ ಅವರ ಪಾತ್ರದ ಹೆಸರು ಮಾರ್ಟಿನ್​ ಆಗಿರುತ್ತದೆ ಎಂಬುದು ಬಹುತೇಕರ ಊಹೆ. ಆದರೆ ಅದು ನಿಜವಲ್ಲ ಎನ್ನುತ್ತಿದೆ ಚಿತ್ರತಂಡ.

‘ನಾನು ಮಾರ್ಟಿನ್​ ಅಲ್ಲ’; ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ ಧ್ರುವ ಸರ್ಜಾ: ಯಾರು ನಿಜವಾದ ಮಾರ್ಟಿನ್​?
ಉದಯ್​ ಕೆ. ಮೆಹ್ತಾ, ಧ್ರುವ ಸರ್ಜಾ, ಎ.ಪಿ. ಅರ್ಜುನ್​
TV9 Web
| Edited By: |

Updated on: Aug 16, 2021 | 12:09 PM

Share

‘ಆ್ಯಕ್ಷನ್​ ಪ್ರಿನ್ಸ್​’ ಧ್ರುವ ಸರ್ಜಾ (Dhruva Sarja) ಅವರ ಹೊಸ ಸಿನಿಮಾ ‘ಮಾರ್ಟಿನ್​’ (Martin) ಸೆಟ್ಟೇರಿದೆ. 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಈ ಚಿತ್ರದ ಮುಹೂರ್ತ ನೆರವೇರಿಸಲಾಗಿರುವುದು ವಿಶೇಷ. ಧ್ರುವ ಸರ್ಜಾ ಅವರ ಮೊದಲ ಚಿತ್ರ ‘ಅದ್ದೂರಿ’ಗೆ ನಿರ್ದೇಶನ ಮಾಡಿದ್ದ ಎ.ಪಿ. ಅರ್ಜುನ್ (AP Arjun)​ ಅವರೇ ಈಗ ಮಾರ್ಟಿನ್​’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಖ್ಯಾತ ನಿರ್ಮಾಪಕ ಉದಯ್​ ಮೆಹ್ತಾ ಅವರು ಬಂಡವಾಳ ಹೂಡುತ್ತಿದ್ದಾರೆ. ಚಿತ್ರದ ಪಾತ್ರವರ್ಗದ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಸಿಗಬೇಕಿದೆ. ಕನ್ನಡ ಮಾತ್ರವಲ್ಲದೆ ತೆಲುಗು, ಮಲಯಾಳಂ, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಈ ಚಿತ್ರ ಮೂಡಿಬರಲಿದೆ. ಸಿನಿಮಾ ಸೆಟ್ಟೇರಿದ ದಿನವೇ ‘ನಾನು ಮಾರ್ಟಿನ್​ ಅಲ್ಲ’ ಎಂದಿದ್ದಾರೆ ಧ್ರುವ ಸರ್ಜಾ!

ಸಾಮಾನ್ಯವಾಗಿ ಹೀರೋ ಪಾತ್ರದ ಹೆಸರನ್ನೇ ಚಿತ್ರದ ಶೀರ್ಷಿಕೆಯನ್ನಾಗಿ ಇಡಲಾಗುತ್ತದೆ. ಅದೇ ರೀತಿ ‘ಮಾರ್ಟಿನ್​’ ಚಿತ್ರದಲ್ಲಿ ಧ್ರುವ ಸರ್ಜಾ ಅವರ ಪಾತ್ರದ ಹೆಸರು ಮಾರ್ಟಿನ್​ ಆಗಿರುತ್ತದೆ ಎಂಬುದು ಬಹುತೇಕರ ಊಹೆ. ಆದರೆ ಅದು ನಿಜವಲ್ಲ ಎಂದು ಧ್ರುವ ಸರ್ಜಾ ಆರಂಭದಲ್ಲಿಯೇ ಸ್ಪಷ್ಟಪಡಿಸುತ್ತಿದ್ದಾರೆ. ‘ಮಾರ್ಟಿನ್​ ಎಂಬುದು ಒಂದು ಹೆಸರು. ಆದರೆ ಈ ಚಿತ್ರದಲ್ಲಿ ನಾನು ಮಾರ್ಟಿನ್​ ಅಲ್ಲ. ಅದು ಯಾರು ಎಂಬುದು ಸಿನಿಮಾ ನೋಡಿದ ಮೇಲೆ ತಿಳಿಯಲಿದೆ. ಅದಕ್ಕಾಗಿಯೇ ಈ ಟೀಸರ್​ನಲ್ಲಿ Who is Martin ಎಂಬ ಡೈಲಾಗ್​ ಇದೆ’ ಎಂದಿದ್ದಾರೆ ಧ್ರುವ ಸರ್ಜಾ.

ಇಷ್ಟು ದಿನ ಧ್ರುವ ಸರ್ಜಾ ಅವರ ಎಲ್ಲ ಸಿನಿಮಾಗಳಲ್ಲಿ ಉದ್ದುದ್ದ ಡೈಲಾಗ್​ಗಳು ಫೇಮಸ್​ ಆಗುತ್ತಿದ್ದವು. ಆದರೆ ಮಾರ್ಟಿನ್​ ವಿಚಾರದಲ್ಲಿ ಒಂದು ಬದಲಾವಣೆ ಇರಲಿದೆ. ‘ಈ ಸಿನಿಮಾದಲ್ಲಿ ನಾನು ಉದ್ದುದ್ದ ಡೈಲಾಗ್​ ಹೊಡೆಯಲ್ಲ. ಎಲ್ಲವೂ ಚಿಕ್ಕದಾಗಿ, ಸ್ಟ್ರಾಂಗ್​ ಆಗಿರಲಿವೆ. ಪ್ರಶಾಂತ್​ ರಾಜಪ್ಪ ಡೈಲಾಗ್​ ಬರೆಯುತ್ತಿದ್ದಾರೆ’ ಎಂದು ಧ್ರುವ ಹೇಳಿದ್ದಾರೆ.

ಅದ್ದೂರಿ ಬಜೆಟ್​ನಲ್ಲಿ ಈ ಸಿನಿಮಾ ತಯಾರಾಗಲಿದೆ. ಅಂದಾಜು ಮೂರು ಕೋಟಿ ರೂ. ಖರ್ಚು ಮಾಡಿ ಒಂದು ದೃಶ್ಯದ ಚಿತ್ರೀಕರಣ ಮಾಡಲಾಗುವುದು. ಮೂರು ಎಕರೆ ಜಾಗದಲ್ಲಿ ಜೈಲಿನ ಸೆಟ್​ ಹಾಕಲಾಗಿದೆ. ಅದು ಚಿತ್ರದಲ್ಲಿ ಹೈಲೈಟ್​ ಆಗಲಿದೆ ಎನ್ನುವ ಮೂಲಕ ಕುತೂಹಲ ಕೆರಳಿಸಿದ್ದಾರೆ ನಿರ್ಮಾಪಕ ಉದಯ್ ಕೆ.​ ಮೆಹ್ತಾ.

(ಮಾರ್ಟಿನ್​ ಚಿತ್ರದ ಟೀಸರ್​)

‘ಇದೊಂದು ಗ್ಯಾಂಗ್​ಸ್ಟರ್​ ಕಥೆ. ಆತನ ಲವ್​ಸ್ಟೋರಿ ಇದೆ. ತಾಯಿ-ಮಗನ ಸೆಂಟಿಮೆಂಟ್​ ಇದೆ. ಎಲ್ಲ ಭಾಷೆಗೂ ಈ ಟೈಟಲ್​ ಸೂಕ್ತ ಆಗಲಿದೆ. ಎಲ್ಲ ಭಾಷೆಗೂ ಹೊಂದಿಕೆ ಆಗುವಂತಹ ಶೈಲಿಯಲ್ಲಿ ಡೈಲಾಗ್​ ಇರಲಿದೆ. ಇನ್ನು ಕೆಲವೇ ದಿನಗಳಲ್ಲಿ ಹೀರೋಯಿನ್​ ಯಾರು ಎಂಬುದು ಗೊತ್ತಾಗುತ್ತದೆ’ ಎಂದಿದ್ದಾರೆ ನಿರ್ದೇಶಕ ಎ.ಪಿ. ಅರ್ಜುನ್​. ಈ ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣ, ಮಣಿ ಶರ್ಮಾ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ:

ಸೆಟ್ಟೇರಿದ ಧ್ರುವ ಸರ್ಜಾ ಹೊಸ ಚಿತ್ರ ‘ಮಾರ್ಟಿನ್’; ಶುಭ ಹಾರೈಸಿದ ರವಿಚಂದ್ರನ್​

‘ದುಬಾರಿ ಸಿನಿಮಾ ಖಂಡಿತಾ ಮಾಡ್ತೀವಿ’; ಜೊತೆಯಾಗಿ ನಿಂತು ಸ್ಪಷ್ಟನೆ ನೀಡಿದ ಧ್ರುವ ಸರ್ಜಾ-ನಂದಕಿಶೋರ್​

Follow Us
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ