‘ದಿಲ್‌ದಾರ್’ ಸಿನಿಮಾ ಟೀಸರ್​ನಲ್ಲಿ ಶ್ರೇಯಸ್ ಮಂಜು ಆ್ಯಕ್ಷನ್ ಭರಿತ ಎಂಟ್ರಿ

‘ದಿಲ್‌ದಾರ್’ ಸಿನಿಮಾಗೆ ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಮುಕ್ತಾಯ ಆಗಿವೆ. ಶೀಘ್ರದಲ್ಲೇ ಈ ಚಿತ್ರದ ರಿಲೀಸ್ ದಿನಾಂಕ ಘೋಷಣೆ ಆಗಲಿದೆ. ನಟ ಶ್ರೇಯಸ್ ಮಂಜು ಅವರ ಹುಟ್ಟುಹಬ್ಬದ ಪ್ರಯುಕ್ತ ಆ್ಯಕ್ಷನ್ ಭರಿತ ಟೀಸರ್ ಬಿಡುಗಡೆ ಮಾಡಲಾಗಿದೆ. ಈ ಟೀಸರ್ ನೋಡಿದ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ.

‘ದಿಲ್‌ದಾರ್’ ಸಿನಿಮಾ ಟೀಸರ್​ನಲ್ಲಿ ಶ್ರೇಯಸ್ ಮಂಜು ಆ್ಯಕ್ಷನ್ ಭರಿತ ಎಂಟ್ರಿ
Shreyas Manju

Updated on: Apr 06, 2026 | 4:04 PM

ಖ್ಯಾತ ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್ ಮಂಜು (Shreyas Manju) ಅವರು ಚಿತ್ರರಂಗದಲ್ಲಿ ನಟನಾಗಿ ಸಕ್ರಿಯರಾಗಿದ್ದಾರೆ. ‘ಪಡ್ಡೆಹುಲಿ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಹೀರೋ ಆಗಿ ಎಂಟ್ರಿ ಕೊಟ್ಟ ಅವರು ಈಗ ಬೇರೆ ಬೇರೆ ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ. ಶ್ರೇಯಸ್ ಮಂಜು ನಟಿಸುತ್ತಿರುವ ‘ದಿಲ್​ದಾರ್’ (Dildar) ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ. ಅದರ ಝಲಕ್ ತೋರಿಸಲು ಟೀಸರ್ ರಿಲೀಸ್ ಆಗಿದೆ. ಶ್ರೇಯಸ್ ಮಂಜು ಅವರು ಬರ್ತ್​ಡೇ (ಏಪ್ರಿಲ್ 5) ಪ್ರಯುಕ್ತ ಟೀಸರ್ ಬಿಡುಗಡೆ ಆಗಿದ್ದು ವಿಶೇಷ.

ಈ ಟೀಸರ್ ಮೂಲಕ ಶ್ರೇಯಸ್ ಮಂಜು ಅವರ ಹುಟ್ಟುಹಬ್ಬದ ಸಂಭ್ರಮವನ್ನು ಹೆಚ್ಚಿಸಲಾಯಿತು. ಜನ್ಮದಿನಕ್ಕೆ ಉಡುಗೊರೆ ಎಂಬಂತೆ ಬಿಡುಗಡೆ ಆದ ಈ ಟೀಸರ್ ಮೂಲಕ ವಿಶ್ ಮಾಡಲಾಗಿದೆ. ಮೊದಲಿನಿಂದಲೂ ಆ್ಯಕ್ಷನ್ ಲುಕ್​ನಲ್ಲಿ ಮಿಂಚುತ್ತಾ ಬಂದಿರುವ ಶ್ರೇಯಸ್ ಮಂಜು ಅವರಿಗೆ ‘ದಿಲ್​ದಾರ್’ ಸಿನಿಮಾದಲ್ಲಿ ಕೂಡ ಅದೇ ರೀತಿಯ ಪಾತ್ರ ಇರಲಿದೆ ಎಂಬುದು ಈ ಟೀಸರ್ ಮೂಲಕ ಗೊತ್ತಾಗಿದೆ.

‘ದಿಲ್​ದಾರ್’ ಸಿನಿಮಾದ ಈ ಟೀಸರ್‌ನಲ್ಲಿ ಶ್ರೇಯಸ್ ಮಂಜು ಅವರ ಆ್ಯಕ್ಷನ್ ಅಬ್ಬರ ಇನ್ನೊಂದು ಮಟ್ಟಕ್ಕೆ ಏರಿದೆ. ಟೀಸರ್ ನೋಡಿದ ಸಿನಿಪ್ರಿಯರಿಗೆ ಈ ಚಿತ್ರದ ಮೇಲೆ ನಿರೀಕ್ಷೆ ಮೂಡುವಂತಾಗಿದೆ. ಟೀಸರ್​ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ. ಈ ಸಿನಿಮಾದ ಬಹುತೇಕ ಕೆಲಸಗಳು ಮುಗಿದಿದ್ದು, ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

‘ದಿಲ್​ದಾರ್’ ಸಿನಿಮಾದ ಟೀಸರ್‌:

ಮಧು ಗೌಡ ಗಂಗೂರ್ ಅವರು ‘ದಿಲ್​ದಾರ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಹೊಸ ತಲೆಮಾರಿನ ಪ್ರೇಕ್ಷಕರಿಗೆ ಹೆಚ್ಚು ಕನೆಕ್ಟ್ ಆಗುವಂತಹ ಕಥೆ ಈ ಸಿನಿಮಾದಲ್ಲಿ ಇದೆ ಎಂದು ಚಿತ್ರತಂಡ ಹೇಳಿದೆ. ಸದ್ಯಕ್ಕೆ ಶ್ರೇಯಸ್ ಮಂಜು ಅವರ ಬರ್ತ್‌ಡೇ ಟೀಸರ್ ಮೂಲಕ ಒಟ್ಟಾರೆ ಸಿನಿಮಾ ಹೇಗೆ ಮೂಡಿಬಂದಿರಬಹುದು ಎಂಬುದರ ಸುಳಿವು ಸಿಕ್ಕಿದೆ.

ಇದನ್ನೂ ಓದಿ: ಶ್ರೇಯಸ್ ಮಂಜು ನಟನೆಯ ‘ದಿಲ್ ದಾರ್’ ಚಿತ್ರಕ್ಕೆ ಶರಣ್ ಸೊಸೆ ಕೀರ್ತಿ ಕೃಷ್ಣ ನಾಯಕಿ

‘ಏನ್ಸಿಯೆಂಟ್ ಮೂವೀಸ್’ ಬ್ಯಾನರ್‌ ಮೂಲಕ ಡಾ. ಆರ್. ಸಂತೋಷ್ ಕುಮಾರ್ (ಎಸ್‌ವಿಟಿ) ಅವರು ‘ದಿಲ್‌ದಾರ್’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಟ ಶರಣ್ ಅವರ ತಂಗಿ ಮಗಳಾದ ಕೀರ್ತಿ ಕೃಷ್ಣ ಅವರು ಈ ಸಿನಿಮಾದ ಮೂಲಕ ಹೀರೋಯಿನ್ ಆಗಿ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಸಾಧು ಕೋಕಿಲ, ಚಿಲ್ಲರ್ ಮಂಜು, ಚಂದ್ರಪ್ರಭ, ಕಾರ್ತಿಕ್ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಕೆಜಿಎಫ್ ಖ್ಯಾತಿಯ ಅವಿನಾಶ್, ಭಜರಂಗಿ ಲೋಕಿ, ಅರ್ಪಿತ್ ಅವರು ವಿಲನ್ ಆಗಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us