AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dr Rajkumar: ಅಭಿಮಾನಿಗಳಿಗೆ ಹೆದರಿ ಕೂತಿದ್ದ ಅಣ್ಣಾವ್ರು, ಆಮೇಲೆ ನಡೆದಿದ್ದು ಅದ್ಭುತ

ಅಭಿಮಾನಿಗಳನ್ನು ಅಪಾರವಾಗಿ ಪ್ರೀತಿಸುತ್ತಿದ್ದ, ಅಭಿಮಾನಿಗಳಿಗೆ ದೇವರ ಸ್ಥಾನ ನೀಡಿದ್ದ ನಟ ರಾಜ್​ಕುಮಾರ್ ಒಮ್ಮೆ ಅಭಿಮಾನಿಗಳಿಗೆ ಹೆದರಿ ಕೂತಿದ್ದರಂತೆ. ಆದರೆ ಆ ದಿನ ನಡೆದಿದ್ದು ಅದ್ಭುತ

Dr Rajkumar: ಅಭಿಮಾನಿಗಳಿಗೆ ಹೆದರಿ ಕೂತಿದ್ದ ಅಣ್ಣಾವ್ರು, ಆಮೇಲೆ ನಡೆದಿದ್ದು ಅದ್ಭುತ
ಸೋದರಿ ಸಿನಿಮಾದಲ್ಲಿ ಅಣ್ಣಾವ್ರು
ಮಂಜುನಾಥ ಸಿ.
|

Updated on: Mar 04, 2023 | 4:38 PM

Share

ಇಂದಿಗೂ ಕೋಟ್ಯಂತರ ಮಂದಿಯ ಆರಾಧ್ಯ ದೈವ ಡಾ ರಾಜ್​ಕುಮಾರ್ (Dr Rajkumar). ತಮ್ಮನ್ನು ಅಭಿಮಾನಿಸುವ ಅಭಿಮಾನಿಗಳಿಗೆ ದೇವರ ಸ್ಥಾನ ಕೊಟ್ಟವರು ಮಹಾತ್ಮ ಅಣ್ಣಾವ್ರು. ಅವರಿಗೆ ತಮ್ಮ ಅಭಿಮಾನಿಗಳ ಪ್ರೀತಿಯ ಮೊದಲ ದರ್ಶನವಾಗುವ ಮುನ್ನ ಅದೇ ಅಭಿಮಾನಿಗಳಿಗೆ ಹೆದರಿ ಬಿಟ್ಟಿದ್ದರಂತೆ ಅಣ್ಣಾವ್ರು. ಈ ಆಸಕ್ತಿಕರ ಸಂಘಟನೆಯನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ರಾಜ್​ಕುಮಾರ್ ಅವರಿಗೆ ಆಪ್ತವಾಗಿದ್ದ ಚಿ ಉದಯಶಂಕರ್ (Chi Udayashankar) ಅವರು ಆಕಾಶವಾಣಿಗಾಗಿ ಮಾಡಿರುವ ಅಣ್ಣಾವ್ರ ಸಂದರ್ಶನದಲ್ಲಿ ಈ ಆಸಕ್ತಿಕರ ಸಂಘಟನೆಯ ಉಲ್ಲೇಖವಿದೆ.

ಡಾ ರಾಜ್ ಕುಮಾರ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದ ‘ಬೇಡರ ಕಣ್ಣಪ್ಪ’ ಆಗಷ್ಟೆ ಬಿಡುಗಡೆ ಆಗಿತ್ತು. ಅವರ ಎರಡನೇ ಸಿನಿಮಾ ‘ಸೋದರಿ’. ಸಿನಿಮಾದಲ್ಲಿ ಅಣ್ಣಾವ್ರಿಗೆ ನಾಯಕಿಯ ಸಹೋದರನ ಪಾತ್ರ. ಆ ಸಿನಿಮಾದ ನಾಯಕ‌ ಪಾತ್ರಕ್ಕೆ ಕೌಶಿಕ್ ಎಂಬುವರು ಆಯ್ಕೆಯಾಗಿದ್ದರು. ಆದರೆ ‘ಬೇಡರ ಕಣ್ಣಪ್ಪ’ ಸಿನಿಮಾ ಹಿಟ್ ಆಗಿದ್ದರಿಂದ ರಾಜ್ ಕುಮಾರ್ ಅವರು ನಾಯಕಿಯ ಅಣ್ಣನ ಪಾತ್ರ ಮಾಡಿದರೆ ಸರಿ ಹೋಗುವುದಿಲ್ಲ, ಅವರು ನಾಯಕನ ಪಾತ್ರದಲ್ಲಿ ನಟಿಸಬೇಕೆಂದು ನಿರ್ದೇಶಕರಿಗೆ ಅನಿಸಿ, ನಾಯಕ ನಟನಾಗಬೇಕಿದ್ದ ಕೌಶಿಕ್​ಗೆ ಹೊಲೆಸಿದ್ದ ಬಟ್ಟೆಗಳನ್ನು ರಾಜ್ ಕುಮಾರ್ ಅವರಿಗೆ ತೊಡಿಸಿ ನಾಯಕ‌ನ ಪಾತ್ರ ನೀಡಿದರಂತೆ. ಅಣ್ಣಾವ್ರೇ ಹೇಳಿರುವಂತೆ, ಕೌಶಿಕ್ ತಮಗಿಂತಲೂ ದೇಹಾಕಾರದಲ್ಲಿ, ಎತ್ತರದಲ್ಲಿ ಸಣ್ಣವ. ಅವರ ಬಟ್ಟೆಗಳು ಅಣ್ಣಾವ್ರಿಗೆ ಬಹಳ ಬಿಗಿಯಾಗಿದ್ದವಂತೆ. ಹೇಗೊ ಅದನ್ನೇ ಧರಿಸಿ ಸಿನಿಮಾ ಮುಗಿಸಿದರಂತೆ ಅಣ್ಣಾವ್ರು.

ಸಿನಿಮಾ ಬಿಡುಗಡೆ ಆದಾಗ ಪತ್ನಿ ಪಾರ್ವತಿಯೊಟ್ಟಿಗೆ ಶಿವಾಜಿನಗರದ ಚಿತ್ರಮಂದಿರಕ್ಕೆ ಸಿನಿಮಾ ನೋಡಲು ಹೋಗಿದ್ದರಂತೆ. ಸಣ್ಣ ಬಟ್ಟೆಗಳನ್ನು ಹಾಕಿಕೊಂಡು ಇಕ್ಕಟ್ಟಿನಲ್ಲಿ ಹೇಗೋ ನಟಿಸಿದ್ದೇನೆ. ಜನ ಏನನ್ನುತ್ತಾರೋ ಎಂಬ ಭಯ ಅಣ್ಣಾವ್ರಿಗೆ.

ಮಧ್ಯಂತರದ ವೇಳೆಗೆ ಸಿನಿಮಾದಲ್ಲಿ ನಟಿಸಿರುವ ರಾಜ್ ಕುಮಾರ್ ಚಿತ್ರಂದಿರದಲ್ಲಿದ್ದಾರೆ ಎಂಬುದು ಜನರಿಗೆ ಗೊತ್ತಾಗಿದೆ. ಕೂಡಲೆ ಎಲ್ಲರೂ ರಾಜ್ ಕುಮಾರ್ ಹೊರಗೆ ಬರಬೇಕು, ಮುಖ ತೋರಿಸಬೇಕು ಎಂದು ಹಠ ಹಿಡಿದಿದ್ದಾರೆ. ಆದರೆ ಅಣ್ಣಾವ್ರಿಗೆ ಹೆದರಿಕೆ, ಜನ ಬೈದು ಬಿಡುತ್ತಾರೇನೋ ಎಂದು. ನಾಟಕದಲ್ಲಿ ಸಂಭಾಷಣೆಯನ್ನು ತಪ್ಪು ಹೇಳಿದರೆ ಅಥವಾ ತಡಬಡಾಯಿಸಿದರೆ ‘ಕೋಳಿ ಕಳ್ಳ’ ಎಂದು ಕೂಗಿ ಅವಮಾನಿತ್ತಿದ್ದರಂತೆ ಜನ. ಅದರ ನೆನಪುಳ್ಳ ರಾಜ್ ಕುಮಾರ್, ಈಗಲೂ ಹಾಗೆಯೇ ಆಗುತ್ತದೇನೊ ಎಂದು ಅಳುಕಿನಿಂದಲೇ ಹೊರಗೆ ಬಂದರಂತೆ.

ಆದರೆ ಅವರನ್ನು ನೋಡಿದ‌ ಜನ ಜೋರಾಗಿ ಚಪ್ಪಾಳೆ ತಟ್ಟಿದ್ದಾರೆ. ಅದ್ಭುತವಾಗಿ ನಟಿಸಿದ್ದೀಯ. ನಿನ್ನ ಬಾಯಿಯಿಂದ ಕನ್ನಡ ಕೇಳಿದರೆ ರೋಮಾಂಚನ ಆಗುತ್ತದೆ ಎಂದೆಲ್ಲ ಹೊಗಳಿದರಂತೆ. ಅದೇ ಮೊದಲ ಬಾರಿಗೆ ಅಣ್ಣಾವ್ರು ಅಭಿಮಾನಿಗಳ ಪ್ರೀತಿಯನ್ನು ಸವಿದಿದ್ದು.

ಅಣ್ಣಾವ್ರಿಗೆ ಇದೆಲ್ಲ ಹೊಸದು. ”ಜನರ ಮುಂದೆ ಹೇಗೆ ಮಾನಾಡಬೇಕು ಎಂಬುದು ಸಹ ನನಗೆ ಅಂದು ಗೊತ್ತಿರಿಲ್ಲ. ಅವರ ಪ್ರೀತಿಯ, ಅಭಿಮಾನದ ಮಾತು ಕೇಳಿ ನನಗೆ ಏನು ಹೇಳಬೇಕು. ಅವರ ಪ್ರೀತಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ಸಹ ಗೊತ್ತಾಗಲಿಲ್ಲ. ನನಗೆ ಅಂದು ಕಣ್ಣೀರು ಬಂದು ಬಿಟ್ಟಿತು, ಅತ್ತುಬಿಟ್ಟೆ” ಎಂದು ಸಂದರ್ಶನದಲ್ಲಿ ಅಣ್ಣಾವ್ರು ಹೇಳಿಕೊಂಡಿದ್ದಾರೆ.

ಅಂದು ಮೊದಲ ಬಾರಿಗೆ ಅಭಿಮಾನಿಗಳ ಆ ಪ್ರೀತಿ ಕಂಡ ರಾಜ್​ಕುಮಾರ್ ”ಇವರನ್ನು ನಾನು ರಂಜಿಸುತ್ತಲೇ ಇರವೇಕು, ಇವರ ಪ್ರೀತಿ ಗಳಿಸುತ್ತಲೇ ಇರಬೇಕು ”ಎನಿಸಿತ್ತಂತೆ. ತಮ್ಮ ಜೀವನದ ಕೊನೆಯ ವರೆಗೂ ಆ ಕಾರ್ಯವನ್ನು ಬಿಡದೇ ಮಾಡಿದರು ಅಣ್ಣಾವ್ರ. ಈಗ ಅದನ್ನು ಅವರ ಮಕ್ಕಳು, ಮೊಮ್ಮಕ್ಕಳು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ