ರಾಜ್​ಕುಮಾರ್​ನ ಶರ್ಟ್​ಲೆಸ್​ ಆಗಿ ನೋಡಬೇಕು ಎಂದು ಹಠ ಹಿಡಿದಿದ್ದ ಕಾಲೇಜು ಹುಡುಗಿಯರು

Rajkumar Birth Anniversary: ರಾಜ್​ಕುಮಾರ್ ಅನೇಕರಿಗೆ ಮಾದರಿ. ಅವರು ಫಿಟ್ನೆಸ್​ನ ಆ ರೀತಿಯಲ್ಲಿ ಕಾಪಾಡಿಕೊಂಡು ಹೋಗಿದ್ದರು. ಒಮ್ಮೆ ರಾಜ್​ಕುಮಾರ್ ಮನೆಗೆ ಬಂದಿದ್ದ ಕಾಲೇಜು ಹುಡುಗಿಯರು ಅಣ್ಣಾವ್ರನ್ನು ಶರ್ಟ್​ಲೆಸ್ ಆಗಿ ನೋಡಲು ಇಚ್ಛಿಸಿದ್ದರು. ಇದಕ್ಕೆ ಅವರು ಕೊಟ್ಟ ಕಾರಣ ಮಾತ್ರ ತುಂಬಾನೇ ವಿಚಿತ್ರವಾಗಿತ್ತು.

ರಾಜ್​ಕುಮಾರ್​ನ ಶರ್ಟ್​ಲೆಸ್​ ಆಗಿ ನೋಡಬೇಕು ಎಂದು ಹಠ ಹಿಡಿದಿದ್ದ ಕಾಲೇಜು ಹುಡುಗಿಯರು
ರಾಜ್​ಕುಮಾರ್
Follow us
|

Updated on:Apr 24, 2024 | 7:00 AM

ವರನಟ ಡಾ. ರಾಜ್​ಕುಮಾರ್ (Rajkumar) ಅವರು ದೊಡ್ಡ ಮಟ್ಟದಲ್ಲಿ ಗೆಲುವು ಕಂಡ ಕನ್ನಡದ ಸ್ಟಾರ್ ಹೀರೋ. ಅವರನ್ನು ಆರಾಧಿಸುವ ಕೋಟ್ಯಂತರ ಮಂದಿ ಈಗಲೂ ಇದ್ದಾರೆ. ರಾಜ್​ಕುಮಾರ್ ಇಂದು ನಮ್ಮೊಂದಿಗೆ ಇರದೇ ಇರಬಹುದು, ಆದರೆ ಅವರು ಹಾಕಿಕೊಟ್ಟ ಆದರ್ಶ, ಸಿನಿಮಾ, ನೆನಪು ಸದಾ ಜೀವಂತ. ಅವರಿಗೆ ಇಂದು (ಏಪ್ರಿಲ್ 24) ಜನ್ಮದಿನ. ಅವರ ಹೆಸರಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡಲಾಗುತ್ತಿದೆ. ರಾಜ್​ಕುಮಾರ್ ಸಮಾಧಿಗೆ ಕುಟುಂಬದವರು ಬಂದು ಪೂಜೆ ಸಲ್ಲಿಸೋ ಸಾಧ್ಯತೆ ಇದೆ. ರಾಜ್​ಕುಮಾರ್ ಬಗ್ಗೆ ಪಾರ್ವತಮ್ಮ ಹೇಳಿದ ಒಂದು ಅಪರೂಪದ ವಿಚಾರ ಇಲ್ಲಿದೆ.

ರಾಜ್​ಕುಮಾರ್ ಅವರು ಅನೇಕರಿಗೆ ಮಾದರಿ. ಅವರು ಫಿಟ್ನೆಸ್​ನ ಆ ರೀತಿಯಲ್ಲಿ ಕಾಪಾಡಿಕೊಂಡು ಹೋಗಿದ್ದರು. ಒಮ್ಮೆ ರಾಜ್​ಕುಮಾರ್ ಮನೆಗೆ ಬಂದಿದ್ದ ಕಾಲೇಜು ಹುಡುಗಿಯರು ಅಣ್ಣಾವ್ರನ್ನು ಶರ್ಟ್​ಲೆಸ್ ಆಗಿ ನೋಡಲು ಇಚ್ಛಿಸಿದ್ದರು. ಇದಕ್ಕೆ ಅವರು ಕೊಟ್ಟ ಕಾರಣ ಮಾತ್ರ ತುಂಬಾನೇ ವಿಚಿತ್ರವಾದದ್ದು. ಈ ಬಗ್ಗೆ ಪಾರ್ವತಮ್ಮ ಅವರು ಹೇಳಿಕೊಂಡಿದ್ದರು.

‘ಒಮ್ಮೆ ಮನೆಗೆ ಸುಮಾರು 25 ಕಾಲೇಜು ಹುಡುಗಿಯರು ಬಂದರು. ಅವರಿಗೆ ರಾಜ್​ಕುಮಾರ್ ಅವರನ್ನು ನೋಡೋ ಬಯಕೆ. ನನ್ನ ಬಳಿ ಬಂದು ರಾಜ್​ಕುಮಾರ್ ಅವರನ್ನು ನೋಡಬೇಕು ಎಂದರು. ಅವರು ಮಲಗಿದ್ದಾರೆ ಆ ಬಳಿಕ ಬನ್ನಿ ಎಂದು ಹೇಳಿ ಕಳುಹಿಸಿದೆ. ಆದರೆ, ಅವರು ಇದಕ್ಕೆ ಒಪ್ಪಲಿಲ್ಲ. ಕೊನೆಗೆ ನಾನು ಹೋಗಿ ಅವರನ್ನು ಎಬ್ಬಿಸಿದೆ. ಅವರು ಎದ್ದು ಬಂದರು’ ಎಂದರು ಪಾರ್ವತಮ್ಮ.

ಇದನ್ನೂ ಓದಿ: ಡಾ. ರಾಜ್​ಕುಮಾರ್​ ಜನ್ಮದಿನಕ್ಕೆ ‘ಮೈ ನೇಮ್ ಇಸ್ ರಾಜ್’ ಸಂಗೀತ ಕಾರ್ಯಕ್ರಮ

ಹುಡುಗಿಯರು ಇಟ್ಟ ಬೇಡಿಕೆ ಕೇಳಿ ಅವರಿಗೆ ಶಾಕ್ ಆಗಿತ್ತು. ‘ರಾಜ್​ಕುಮಾರ್ ಅವರನ್ನು ಶರ್ಟ್​ಲೆಸ್ ಆಗಿ ನೋಡಬೇಕು ಎಂದು ಕೇಳಿದರು. ನನಗೆ ಶಾಕ್ ಆಯಿತು. ಆಗ ಅವರು ದಯವಿಟ್ಟು ಬೇರೆ ಅರ್ಥದಲ್ಲಿ ತಿಳಿದುಕೊಳ್ಳಬೇಡಿ. ಸಿನಿಮಾದಲ್ಲಿ ಆ ರೀತಿ ಫಿಟ್ ಆಗಿ ಕಾಣುತ್ತಾರಲ್ಲ, ನಿಜಕ್ಕೂ ಹಾಗೆಯೇ ಇದ್ದಾರಾ ಅನ್ನೋದನ್ನು ನೋಡಬೇಕು. ಅದಕ್ಕಾಗಿ ಶರ್ಟ್​ಲೆಸ್ ಆಗಿ ನೋಡಬೇಕು ಎಂದು ಅವರು ನನ್ನ ಬಳಿ ಹೇಳಿದರು. ಕೊನೆಗೆ ರಾಜ್​ಕುಮಾರ್ ಅವರನ್ನು ಒಪ್ಪಿಸಬೇಕಾಯಿತು’ ಎಂದಿದ್ದರು ಪಾರ್ವತಮ್ಮ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:59 am, Wed, 24 April 24

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ