Sign In

By signing in or creating an account, you agree with Associated Broadcasting Company's Terms & Conditions and Privacy Policy.

Gaalipata 2: ‘ನಾನು ಲೂಸ್​ ಅಂತ ಮನೆಯವರಿಗೆ ಮಾತ್ರ ಗೊತ್ತಿತ್ತು, ಇಡೀ ನಾಡಿಗೆ ತಿಳಿಸಿದ್ದು ಗಣೇಶ್​’: ಯೋಗರಾಜ್​ ಭಟ್​

Golden Star Ganesh | Yogaraj Bhat: ಯೋಗರಾಜ್​ ಭಟ್​ ಲೂಸ್​ ಆಗಿದ್ದಾರೆ ಎಂಬುದು ಗಣೇಶ್​ ಆರೋಪ. ಅದಕ್ಕೆ ಸಾಕ್ಷಿ ಎಂಬಂತೆ ಒಂದು ವಿಡಿಯೋವನ್ನು ಅವರು ವೈರಲ್​ ಮಾಡಿದ್ದಾರೆ.

Gaalipata 2: ‘ನಾನು ಲೂಸ್​ ಅಂತ ಮನೆಯವರಿಗೆ ಮಾತ್ರ ಗೊತ್ತಿತ್ತು, ಇಡೀ ನಾಡಿಗೆ ತಿಳಿಸಿದ್ದು ಗಣೇಶ್​’: ಯೋಗರಾಜ್​ ಭಟ್​
ಯೋಗರಾಜ್ ಭಟ್, ರಮೇಶ್​ ರೆಡ್ಡಿ, ಗಣೇಶ್
Follow us
TV9 Web
| Updated By: ಮದನ್​ ಕುಮಾರ್​

Updated on:Aug 14, 2022 | 4:34 PM

ಕನ್ನಡದ ಪ್ರೇಕ್ಷಕರು ‘ಗಾಳಿಪಟ 2’ (Gaalipata 2) ಸಿನಿಮಾವನ್ನು ಇಷ್ಟಪಡುತ್ತಿದ್ದಾರೆ. ಆಗಸ್ಟ್​ 12ರಂದು ಬಿಡುಗಡೆ ಆಗಿರುವ ಈ ಚಿತ್ರ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಒಂದಷ್ಟು ಮಿಶ್ರ ಪ್ರತಿಕ್ರಿಯೆಗಳು ಇದ್ದರೂ ಕೂಡ ಬಾಕ್ಸ್​ ಆಫೀಸ್​ನಲ್ಲಿ ‘ಗಾಳಿಪಟ 2’ ಚಿತ್ರ ಒಳ್ಳೆಯ ಕಮಾಯಿ ಮಾಡುತ್ತಿದೆ. ಈ ಖುಷಿಯಲ್ಲೇ ಇಡೀ ತಂಡ ಥಿಯೇಟರ್​ ವಿಸಿಟ್ ಮಾಡುತ್ತಿದೆ. ನಿರ್ದೇಶಕ ಯೋಗರಾಜ್​ ಭಟ್ (Yogaraj Bhat)​, ನಾಯಕ ನಟ ಗೋಲ್ಡನ್​ ಸ್ಟಾರ್​ ಗಣೇಶ್​, ನಿರ್ಮಾಪಕ ರಮೇಶ್​ ರೆಡ್ಡಿ ಅವರು ಹಲವು ಚಿತ್ರಮಂದಿಗಳಿಗೆ ಭೇಟಿ ನೀಡುತ್ತಿದ್ದಾರೆ. ಅಚ್ಚರಿ ಎಂದರೆ ಈ ಸಿನಿಮಾದ ಭರ್ಜರಿ ಯಶಸ್ಸಿನಿಂದ ಯೋಗರಾಜ್​ ಭಟ್​ ಲೂಸ್​ ಆಗಿದ್ದಾರಂತೆ. ಹಾಗಂತ ಇದು ನಾವು ಮಾಡುತ್ತಿರುವ ಆರೋಪ ಅಲ್ಲ. ಗಣೇಶ್ (Golden Star Ganesh)​ ಅವರು ಸೋಶಿಯಲ್​ ಮೀಡಿಯಾ ಮೂಲಕ ಇದನ್ನು ಜಗಜ್ಜಾಹೀರು ಮಾಡಿದ್ದಾರೆ!

ನಟ ಗಣೇಶ್​ ಮತ್ತು ನಿರ್ದೇಶಕ ಯೋಗರಾಜ್​ ಭಟ್​ ಅವರ ನಡುವೆ ಒಂದು ಉತ್ತಮ ಬಾಂಧವ್ಯ, ಸಲುಗೆ ಇದೆ. ‘ಮುಂಗಾರು ಮಳೆ’ ಕಾಲದಿಂದ ‘ಗಾಳಿಪಟ 2’ವರೆಗೂ ಅದು ಮುಂದುವರಿದುಕೊಂಡು ಬಂದಿದೆ. ಈಗ ಈ ನಟ-ನಿರ್ದೇಶಕನ ಕಾಂಬಿನೇಷನ್​ಗೆ ಮತ್ತೊಂದು ಗೆಲುವು ಸಿಕ್ಕಿದೆ. ಈ ಖುಷಿಯಲ್ಲಿ ಭಟ್ಟರು ಲೂಸ್​ ಆಗಿದ್ದಾರೆ ಎಂಬುದು ಗಣೇಶ್​ ಆರೋಪ. ಅದಕ್ಕೆ ಸಾಕ್ಷಿ ಎಂಬಂತೆ ಒಂದು ವಿಡಿಯೋವನ್ನು ಅವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಯೋಗರಾಜ್​ ಭಟ್​ ಅವರ ಹೆಂಡತಿ ಮತ್ತು ಮಗಳು ಆಡಿರುವ ಮಾತುಗಳಿವೆ.

ಇದನ್ನೂ ಓದಿ
Image
Gaalipata 2 Review: ಇದು ಬಗೆಹರಿಯದ ಭಾವನೆಗಳ ‘ಹಾಡು’-ಪಾಡು ಆಗಿರಬಹುದು ಪ್ರಾಯಶಃ
Image
Gaalipata 2: ಅಕ್ಷಯ್​ ಕುಮಾರ್​ ಚಿತ್ರವನ್ನೇ ಮೀರಿಸಿದ ‘ಗಾಳಿಪಟ 2’; ಬುಕ್​ ಮೈ ಶೋನಲ್ಲಿ ಭರ್ಜರಿ ಹವಾ
Image
Gaalipata 2: ಯೋಗರಾಜ್​ ಭಟ್​ ಲೇಖನಿಯಲ್ಲಿ ಮತ್ತೊಂದು ಎಣ್ಣೆ ಸಾಂಗ್​; ‘ಗಾಳಿಪಟ 2’ ಚಿತ್ರದಲ್ಲಿ ಹಿಟ್​ ಕಾಂಬಿನೇಷನ್​
Image
‘ಗಾಳಿಪಟ 2’ ಹುಡುಗರ ಎಲ್ಲ ಸಬ್ಜೆಕ್ಟ್​ ಫೇಲ್​; ಬಾಯಿ ಬಡಿದುಕೊಂಡ ಗಣೇಶ್​, ದಿಗಂತ್​, ಪವನ್​

‘ನಮ್​ ಅಪ್ಪ ಲೂಸ್​ ಆಗಿದಾರೆ ಅಂತ ನಮ್ಮ ಅಮ್ಮ ಹೇಳ್ತಾ ಇದಾರೆ. ನಮ್​ ಅಪ್ಪ ಈಗ ಹೊರಗೆ ಹೋಗ್ತಾ ಇದಾರೆ. ಅವರ ಕೈಗೆ ತಮಟೆ ಕೊಡ್ಬೇಡಿ ಪ್ಲೀಸ್​..’ ಎಂದು ಯೋಗರಾಜ್​ ಭಟ್​ ಪುತ್ರಿ ಹೇಳಿರುವ ವಿಡಿಯೋ ವೈರಲ್​ ಆಗಿದೆ. ‘ಏನ್​ ಸಾರ್​ ಇದು ಹಿಂಗೆ..’ ಎಂದು ಹೇಳಿದ್ದಕ್ಕೆ ಭಟ್ಟರು ಗಣೇಶ್​ ಕಡೆಗೆ ಕೈ ತೋರಿಸಿದ್ದಾರೆ.

‘ಇದಕ್ಕೆಲ್ಲ ಕಾರಣ ಇವನು. ನಾನು ಲೂಸ್​ ಅಂತ ನಮ್ಮ ಮನೆಯವರಿಗೆ ಮಾತ್ರ ಗೊತ್ತಿತ್ತು. ಅದನ್ನು ಇಡೀ ನಾಡಿಗೆ ಗೊತ್ತಾಗುವಂತೆ ಮಾಡಿದ್ದು ಇವನು’ ಎಂದು ಯೋಗರಾಜ್​ ಭಟ್​ ಅವರು​ ನಗೆ ಚಟಾಕಿ ಹಾರಿಸಿದ್ದಾರೆ. ಸಿನಿಮಾದ ಗೆಲುವಿಗೆ ಕಾರಣರಾದ ನಿರ್ಮಾಪಕ ರಮೇಶ್​ ರೆಡ್ಡಿ ಮತ್ತು ಪ್ರೇಕ್ಷಕರಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:34 pm, Sun, 14 August 22