AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gaalipata 2: ‘ನಾನು ಲೂಸ್​ ಅಂತ ಮನೆಯವರಿಗೆ ಮಾತ್ರ ಗೊತ್ತಿತ್ತು, ಇಡೀ ನಾಡಿಗೆ ತಿಳಿಸಿದ್ದು ಗಣೇಶ್​’: ಯೋಗರಾಜ್​ ಭಟ್​

Golden Star Ganesh | Yogaraj Bhat: ಯೋಗರಾಜ್​ ಭಟ್​ ಲೂಸ್​ ಆಗಿದ್ದಾರೆ ಎಂಬುದು ಗಣೇಶ್​ ಆರೋಪ. ಅದಕ್ಕೆ ಸಾಕ್ಷಿ ಎಂಬಂತೆ ಒಂದು ವಿಡಿಯೋವನ್ನು ಅವರು ವೈರಲ್​ ಮಾಡಿದ್ದಾರೆ.

Gaalipata 2: ‘ನಾನು ಲೂಸ್​ ಅಂತ ಮನೆಯವರಿಗೆ ಮಾತ್ರ ಗೊತ್ತಿತ್ತು, ಇಡೀ ನಾಡಿಗೆ ತಿಳಿಸಿದ್ದು ಗಣೇಶ್​’: ಯೋಗರಾಜ್​ ಭಟ್​
ಯೋಗರಾಜ್ ಭಟ್, ರಮೇಶ್​ ರೆಡ್ಡಿ, ಗಣೇಶ್
TV9 Web
| Edited By: |

Updated on:Aug 14, 2022 | 4:34 PM

Share

ಕನ್ನಡದ ಪ್ರೇಕ್ಷಕರು ‘ಗಾಳಿಪಟ 2’ (Gaalipata 2) ಸಿನಿಮಾವನ್ನು ಇಷ್ಟಪಡುತ್ತಿದ್ದಾರೆ. ಆಗಸ್ಟ್​ 12ರಂದು ಬಿಡುಗಡೆ ಆಗಿರುವ ಈ ಚಿತ್ರ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಒಂದಷ್ಟು ಮಿಶ್ರ ಪ್ರತಿಕ್ರಿಯೆಗಳು ಇದ್ದರೂ ಕೂಡ ಬಾಕ್ಸ್​ ಆಫೀಸ್​ನಲ್ಲಿ ‘ಗಾಳಿಪಟ 2’ ಚಿತ್ರ ಒಳ್ಳೆಯ ಕಮಾಯಿ ಮಾಡುತ್ತಿದೆ. ಈ ಖುಷಿಯಲ್ಲೇ ಇಡೀ ತಂಡ ಥಿಯೇಟರ್​ ವಿಸಿಟ್ ಮಾಡುತ್ತಿದೆ. ನಿರ್ದೇಶಕ ಯೋಗರಾಜ್​ ಭಟ್ (Yogaraj Bhat)​, ನಾಯಕ ನಟ ಗೋಲ್ಡನ್​ ಸ್ಟಾರ್​ ಗಣೇಶ್​, ನಿರ್ಮಾಪಕ ರಮೇಶ್​ ರೆಡ್ಡಿ ಅವರು ಹಲವು ಚಿತ್ರಮಂದಿಗಳಿಗೆ ಭೇಟಿ ನೀಡುತ್ತಿದ್ದಾರೆ. ಅಚ್ಚರಿ ಎಂದರೆ ಈ ಸಿನಿಮಾದ ಭರ್ಜರಿ ಯಶಸ್ಸಿನಿಂದ ಯೋಗರಾಜ್​ ಭಟ್​ ಲೂಸ್​ ಆಗಿದ್ದಾರಂತೆ. ಹಾಗಂತ ಇದು ನಾವು ಮಾಡುತ್ತಿರುವ ಆರೋಪ ಅಲ್ಲ. ಗಣೇಶ್ (Golden Star Ganesh)​ ಅವರು ಸೋಶಿಯಲ್​ ಮೀಡಿಯಾ ಮೂಲಕ ಇದನ್ನು ಜಗಜ್ಜಾಹೀರು ಮಾಡಿದ್ದಾರೆ!

ನಟ ಗಣೇಶ್​ ಮತ್ತು ನಿರ್ದೇಶಕ ಯೋಗರಾಜ್​ ಭಟ್​ ಅವರ ನಡುವೆ ಒಂದು ಉತ್ತಮ ಬಾಂಧವ್ಯ, ಸಲುಗೆ ಇದೆ. ‘ಮುಂಗಾರು ಮಳೆ’ ಕಾಲದಿಂದ ‘ಗಾಳಿಪಟ 2’ವರೆಗೂ ಅದು ಮುಂದುವರಿದುಕೊಂಡು ಬಂದಿದೆ. ಈಗ ಈ ನಟ-ನಿರ್ದೇಶಕನ ಕಾಂಬಿನೇಷನ್​ಗೆ ಮತ್ತೊಂದು ಗೆಲುವು ಸಿಕ್ಕಿದೆ. ಈ ಖುಷಿಯಲ್ಲಿ ಭಟ್ಟರು ಲೂಸ್​ ಆಗಿದ್ದಾರೆ ಎಂಬುದು ಗಣೇಶ್​ ಆರೋಪ. ಅದಕ್ಕೆ ಸಾಕ್ಷಿ ಎಂಬಂತೆ ಒಂದು ವಿಡಿಯೋವನ್ನು ಅವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಯೋಗರಾಜ್​ ಭಟ್​ ಅವರ ಹೆಂಡತಿ ಮತ್ತು ಮಗಳು ಆಡಿರುವ ಮಾತುಗಳಿವೆ.

ಇದನ್ನೂ ಓದಿ
Image
Gaalipata 2 Review: ಇದು ಬಗೆಹರಿಯದ ಭಾವನೆಗಳ ‘ಹಾಡು’-ಪಾಡು ಆಗಿರಬಹುದು ಪ್ರಾಯಶಃ
Image
Gaalipata 2: ಅಕ್ಷಯ್​ ಕುಮಾರ್​ ಚಿತ್ರವನ್ನೇ ಮೀರಿಸಿದ ‘ಗಾಳಿಪಟ 2’; ಬುಕ್​ ಮೈ ಶೋನಲ್ಲಿ ಭರ್ಜರಿ ಹವಾ
Image
Gaalipata 2: ಯೋಗರಾಜ್​ ಭಟ್​ ಲೇಖನಿಯಲ್ಲಿ ಮತ್ತೊಂದು ಎಣ್ಣೆ ಸಾಂಗ್​; ‘ಗಾಳಿಪಟ 2’ ಚಿತ್ರದಲ್ಲಿ ಹಿಟ್​ ಕಾಂಬಿನೇಷನ್​
Image
‘ಗಾಳಿಪಟ 2’ ಹುಡುಗರ ಎಲ್ಲ ಸಬ್ಜೆಕ್ಟ್​ ಫೇಲ್​; ಬಾಯಿ ಬಡಿದುಕೊಂಡ ಗಣೇಶ್​, ದಿಗಂತ್​, ಪವನ್​

‘ನಮ್​ ಅಪ್ಪ ಲೂಸ್​ ಆಗಿದಾರೆ ಅಂತ ನಮ್ಮ ಅಮ್ಮ ಹೇಳ್ತಾ ಇದಾರೆ. ನಮ್​ ಅಪ್ಪ ಈಗ ಹೊರಗೆ ಹೋಗ್ತಾ ಇದಾರೆ. ಅವರ ಕೈಗೆ ತಮಟೆ ಕೊಡ್ಬೇಡಿ ಪ್ಲೀಸ್​..’ ಎಂದು ಯೋಗರಾಜ್​ ಭಟ್​ ಪುತ್ರಿ ಹೇಳಿರುವ ವಿಡಿಯೋ ವೈರಲ್​ ಆಗಿದೆ. ‘ಏನ್​ ಸಾರ್​ ಇದು ಹಿಂಗೆ..’ ಎಂದು ಹೇಳಿದ್ದಕ್ಕೆ ಭಟ್ಟರು ಗಣೇಶ್​ ಕಡೆಗೆ ಕೈ ತೋರಿಸಿದ್ದಾರೆ.

‘ಇದಕ್ಕೆಲ್ಲ ಕಾರಣ ಇವನು. ನಾನು ಲೂಸ್​ ಅಂತ ನಮ್ಮ ಮನೆಯವರಿಗೆ ಮಾತ್ರ ಗೊತ್ತಿತ್ತು. ಅದನ್ನು ಇಡೀ ನಾಡಿಗೆ ಗೊತ್ತಾಗುವಂತೆ ಮಾಡಿದ್ದು ಇವನು’ ಎಂದು ಯೋಗರಾಜ್​ ಭಟ್​ ಅವರು​ ನಗೆ ಚಟಾಕಿ ಹಾರಿಸಿದ್ದಾರೆ. ಸಿನಿಮಾದ ಗೆಲುವಿಗೆ ಕಾರಣರಾದ ನಿರ್ಮಾಪಕ ರಮೇಶ್​ ರೆಡ್ಡಿ ಮತ್ತು ಪ್ರೇಕ್ಷಕರಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:34 pm, Sun, 14 August 22

Follow Us
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ