‘ಕ್ಷಮೆ ಅನ್ನೋದು ಸಣ್ಣ ಪದ’; ಗೀತಾಗೆ ಸಾರಿ ಕೇಳಿ ಕಣ್ಣೀರು ಹಾಕಿದ ಶಿವರಾಜ್​ಕುಮಾರ್

ಶಿವರಾಜ್ ಕುಮಾರ್ ಅವರ ಕ್ಯಾನ್ಸರ್ ಹೋರಾಟದಲ್ಲಿ ಪತ್ನಿ ಗೀತಾ ಅವರ ಬೆಂಬಲ ಅಪಾರವಾಗಿತ್ತು. ಕ್ಯಾನ್ಸರ್ ಇರುವ ವಿಚಾರ ಗೊತ್ತಾದಾಗಿನಿಂದ ಚಿಕಿತ್ಸೆಯವರೆಗೆ ಅವರು ನಿರಂತರವಾಗಿ ಜೊತೆಯಲ್ಲಿದ್ದರು. ದುಃಖ ಮತ್ತು ಖುಷಿಯ ಕ್ಷಣಗಳಲ್ಲಿ ಗೀತಾ ಅವರ ಬೆಂಬಲ ಅವರಿಗೆ ಹೆಚ್ಚಿನ ಶಕ್ತಿ ತುಂಬಿತು. ಶಿವರಾಜ್ ಕುಮಾರ್ ಅವರು ತಮ್ಮ ಪತ್ನಿಯ ಬೆಂಬಲಕ್ಕೆ ಧನ್ಯವಾದ ಹೇಳಿದ್ದಾರೆ.

‘ಕ್ಷಮೆ ಅನ್ನೋದು ಸಣ್ಣ ಪದ’; ಗೀತಾಗೆ ಸಾರಿ ಕೇಳಿ ಕಣ್ಣೀರು ಹಾಕಿದ ಶಿವರಾಜ್​ಕುಮಾರ್
ಗೀತಾ-ಶಿವಣ್ಣ
Follow us
ರಾಜೇಶ್ ದುಗ್ಗುಮನೆ
|

Updated on: Feb 01, 2025 | 7:29 AM

ಗೀತಾ ಶಿವರಾಜ್​ಕುಮಾರ್ ಅವರು ಪ್ರತಿ ಹಂತದಲ್ಲೂ ಪತಿಯನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಶಿವಣ್ಣನಿಗೆ ಬೇಸರ ಆದಾಗ, ದುಃಖ ಆದಾಗ ಅವರ ಪಕ್ಕದಲ್ಲಿ ನಿಂತಿದ್ದರು. ಅದೇ ರೀತಿ ಖುಷಿಯ ಕ್ಷಣವನ್ನು ಕೂಡ ಒಟ್ಟಾಗಿ ಕಳೆದಿದ್ದಾರೆ. ಶಿವರಾಜ್​ಕುಮಾರ್ ಅವರು ಕ್ಯಾನ್ಸರ್ ವಿರುದ್ಧ ಹೋರಾಡುವಾಗ ಬೆಂಬಲಕ್ಕೆ ನಿಂತಿದ್ದು ಗೀತಾ. ಇದನ್ನು ಶಿವರಾಜ್​ಕುಮಾರ್ ಅವರು ಸ್ಮರಿಸಿಕೊಂಡಿದ್ದಾರೆ. ಜೊತೆಗೆ ಪತ್ನಿಗೆ ಅವರು ಧನ್ಯವಾದ ಹೇಳಿದ್ದಾರೆ.

ಬಿ. ಗಣಪತಿ ಅವರ ಯ್ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಶಿವಣ್ಣ ಹಾಗೂ ಗೀತಕ್ಕ ಅವರು ಮಾತನಾಡಿದ್ದಾರೆ. ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕ್ಯಾನ್ಸರ್ ವಿಚಾರ ಗೊತ್ತಾಗಿದ್ದು ಹೇಗೆ, ಇದನ್ನು ಹೇಗೆ ಹ್ಯಾಂಡಲ್ ಮಾಡಲಾಯಿತು ಎಂಬುದನ್ನು ವಿವರಿಸಿದ್ದಾರೆ. ಈ ಪರಿಸ್ಥಿತಿಯನ್ನು ಅವರು ನಿರ್ವಹಿಸಿದ ರೀತಿ ಶಿವಣ್ಣನಿಗೆ ಇಷ್ಟ ಆಗಿದೆ.

ಆರಂಭದಲ್ಲಿ ಕ್ಯಾನ್ಸರ್ ಇರುವ ವಿಚಾರವನ್ನು ಶಿವರಾಜ್​ಕುಮಾರ್ ಅವರಿಂದ ಮುಚ್ಚಿಡಲಾಗಿತ್ತು. ಅವರು ಇದನ್ನು ಹೇಗೆ ಸ್ವೀಕರಿಸುತ್ತಾರೇನೋ ಎನ್ನುವ ಭಯ ಗೀತಾ ಅವರನ್ನು ಕಾಡಿತ್ತು. ಹೀಗಾಗಿ ಆರಂಭದಲ್ಲಿ ಇದನ್ನು ಹೇಳಿರಲಿಲ್ಲ. ಕೊನೆಗೆ ಕಿಮೋ ಥೆರಪಿ ಮಾಡಿಸಲೇಬೇಕಾದ ಅನಿವಾರ್ಯತೆ ಎದುರಾದಾಗ ಶಿವರಾಜ್​ಕುಮಾರ್​ಗೆ ಕ್ಯಾನ್ಸರ್ ಇರುವ ವಿಚಾರವನ್ನು ಹೇಳಲೇ ಬೇಕಾಯಿತು. ಆ ಬಳಿಕ ಹಂತ ಹಂತವಾಗಿ ಚಿಕಿತ್ಸೆಗಳು ನಡೆದವು.

ಈ ಎಲ್ಲಾ ಸಂದರ್ಭಗಳಲ್ಲಿ ಶಿವರಾಜ್​ಕುಮಾರ್​​ ಅವರಿಗೆ ಬೆಂಬಲವಾಗಿ ನಿಂತಿದ್ದು ಗೀತಾ ಅವರು. ಇದನ್ನು ಶಿವರಾಜ್​​ಕುಮಾರ್ ನೆನಪಿಸಿಕೊಂಡಿದ್ದಾರೆ. ‘ಎಲ್ಲಾ ಸ್ಥಾನವನ್ನು ಪತ್ನಿ ತುಂಬೋಕೆ ಆಗಲ್ಲ. ಆದರೆ, ಗೀತಾ ಅದನ್ನು ತುಂಬಿದ್ದಾಳೆ. ನಾನು ಹಲವು ತಪ್ಪನ್ನು ಮಾಡಿದ್ದೇನೆ. ನಾನು ಫಿಟ್ ಹೌದೋ ಅಲ್ಲವೋ ಅನಿಸುತ್ತದೆ’ ಎನ್ನುತ್ತಲೇ ಶಿವಣ್ಣನಿಗೆ ಕಣ್ಣೀರು ಬಂತು.

‘ಕ್ಷಮೆ ಕೇಳೋದು ಸಹಜ. ಆದರೆ, ಯೋಚಿಸಿದಾಗ ಅರ್ಥ ಆಳಕ್ಕೆ ಹೋಗುತ್ತದೆ. ಈ ಬೆಂಬಲ ತುಂಬಾನೇ ಗಟ್ಟಿಯಾಗಿತ್ತು. ತಾಯಿ ಆಗಿ, ಗೆಳತಿಯಾಗಿ, ಪತ್ನಿಯಾಗಿ ಅವರು ಬೆಂಬಲಿಸಿದ್ದಾರೆ’ ಎಂದು ಶಿವರಾಜ್​ಕುಮಾರ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಕ್ಯಾನ್ಸರ್ ಬಂದ ವಿಚಾರವನ್ನು ಶಿವರಾಜ್​ಕುಮಾರ್​ಗೂ ಹೇಳಿರಲಿಲ್ಲ ಗೀತಾ; ಗೊತ್ತಾಗಿದ್ದು ಹೇಗೆ?

ಶಿವರಾಜ್​ಕುಮಾರ್ ಈಗಾಗಲೇ ನಿಧಾನವಾಗಿ ಬಣ್ಣದ ಲೋಕದ ಕೆಲಸ ಆರಂಭಿಸಿದ್ದಾರೆ. ‘ಸರಿಗಮಪ’ ವೇದಿಕೆಗೆ ಅತಿಥಿಯಾಗಿ ಅವರು ಆಗಮಿಸಿದ್ದು, ಇಂದು (ಫೆಬ್ರವರಿ 1) ಹಾಗೂ ನಾಳೆ (ಫೆಬ್ರವರಿ 2) ಈ ಎಪಿಸೋಡ್ ಪ್ರಸಾರ ಕಾಣಲಿದೆ. ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜ್ಯ ಬಿಜೆಪಿ ಬಣ ಬಡಿದಾಟ; ಸೋಮಣ್ಣ ಎರಡೂ ತಂಡಗಳ ಜೊತೆ ಮಾತಾಡುವ ಸಾಧ್ಯತೆ
ರಾಜ್ಯ ಬಿಜೆಪಿ ಬಣ ಬಡಿದಾಟ; ಸೋಮಣ್ಣ ಎರಡೂ ತಂಡಗಳ ಜೊತೆ ಮಾತಾಡುವ ಸಾಧ್ಯತೆ
ಸುಧಾಕರ್ ಯಾವತ್ತೂ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ಸು ಹೋಗಲ್ಲ: ಮುನಿರತ್ನ
ಸುಧಾಕರ್ ಯಾವತ್ತೂ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ಸು ಹೋಗಲ್ಲ: ಮುನಿರತ್ನ
ಹಾವೇರಿ: ಡಾಬಾ ಬಂತು ನೋಡು ಎಂದ ಕೂಡಲೇ ಸತ್ತವ ಬದುಕಿದ!
ಹಾವೇರಿ: ಡಾಬಾ ಬಂತು ನೋಡು ಎಂದ ಕೂಡಲೇ ಸತ್ತವ ಬದುಕಿದ!
ಸ್ವಂತ ಖರ್ಚಿನಲ್ಲಿ ದೆಹಲಿ ಬರುತ್ತೇವೆ, ಸುಂಕ ವಸೂಲಿ ಎಲ್ಲಿಂದ ಬಂತು?ಯತ್ನಾಳ್
ಸ್ವಂತ ಖರ್ಚಿನಲ್ಲಿ ದೆಹಲಿ ಬರುತ್ತೇವೆ, ಸುಂಕ ವಸೂಲಿ ಎಲ್ಲಿಂದ ಬಂತು?ಯತ್ನಾಳ್
ಏರ್ ಶೋ: ಸೂರ್ಯ ಕಿರಣ್ ತಂಡದ ವೈಮಾನಿಕ ಸಾಹಸದ ವಿಡಿಯೋ ಇಲ್ಲಿದೆ ನೋಡಿ
ಏರ್ ಶೋ: ಸೂರ್ಯ ಕಿರಣ್ ತಂಡದ ವೈಮಾನಿಕ ಸಾಹಸದ ವಿಡಿಯೋ ಇಲ್ಲಿದೆ ನೋಡಿ
ಬೆಂಗಳೂರು ಏರ್​ ಶೋ: ಏರ್​ಪೋರ್ಟ್​ ರಸ್ತೆಯಲ್ಲಿ ಟ್ರಾಫಿಕ್ ಜಾಮ್​​
ಬೆಂಗಳೂರು ಏರ್​ ಶೋ: ಏರ್​ಪೋರ್ಟ್​ ರಸ್ತೆಯಲ್ಲಿ ಟ್ರಾಫಿಕ್ ಜಾಮ್​​
ಏರ್ ಶೋಗೆ ವೀಕ್ಷಿಸಲು ತೆರಳಿರುವವರು ಟ್ರಾಫಿಕ್ ನಿರ್ಬಂಧಗಳನ್ನು ಗಮನಿಸಿ
ಏರ್ ಶೋಗೆ ವೀಕ್ಷಿಸಲು ತೆರಳಿರುವವರು ಟ್ರಾಫಿಕ್ ನಿರ್ಬಂಧಗಳನ್ನು ಗಮನಿಸಿ
ಯುವಜನಾಂಗದಲ್ಲಿ ಜಾತ್ರೆ, ಊರಹಬ್ಬಗಳ ಮೇಲಿನ ಆಸಕ್ತಿ ಕಮ್ಮಿಯಾಗುತ್ತಿದೆ
ಯುವಜನಾಂಗದಲ್ಲಿ ಜಾತ್ರೆ, ಊರಹಬ್ಬಗಳ ಮೇಲಿನ ಆಸಕ್ತಿ ಕಮ್ಮಿಯಾಗುತ್ತಿದೆ
Aero India 2025: ಬೆಂಗಳೂರು ಏರ್​ ಶೋ ಲೈವ್​, ಲೋಹದ ಹಕ್ಕಿಗಳ ಚಮತ್ಕಾರ
Aero India 2025: ಬೆಂಗಳೂರು ಏರ್​ ಶೋ ಲೈವ್​, ಲೋಹದ ಹಕ್ಕಿಗಳ ಚಮತ್ಕಾರ
ವಿಠಲ ಗ್ರಾಮದ ಬಳಿ 20ಕ್ಕೂ ಅಧಿಕ ಕಾಡಾನೆಗಳು ಪ್ರತ್ಯಕ್ಷ, ಸ್ಥಳೀಯರಲ್ಲಿ ಆತಂಕ
ವಿಠಲ ಗ್ರಾಮದ ಬಳಿ 20ಕ್ಕೂ ಅಧಿಕ ಕಾಡಾನೆಗಳು ಪ್ರತ್ಯಕ್ಷ, ಸ್ಥಳೀಯರಲ್ಲಿ ಆತಂಕ