AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಬರ್ದಸ್ಥ್ ಕಲಾವಿದರಿಂದ ‘ಕೆಜಿಎಫ್’ ಸ್ಪೂಪ್, ನಕ್ಕು ಸುಸ್ತಾದ ಜಡ್ಜ್​ಗಳು

KGF movie Spoof: ತೆಲುಗಿನ ಕಾಮಿಡಿ ರಿಯಾಲಿಟಿ ಶೋ ‘ಜಬರ್ದಸ್ತ್​’ನಲ್ಲಿ ಕನ್ನಡದ ಬಲು ಜನಪ್ರಿಯ ಮತ್ತು ಸೂಪರ್ ಹಿಟ್ ಪ್ಯಾನ್ ಇಂಡಿಯಾ ಸಿನಿಮಾ ‘ಕೆಜಿಎಫ್​’ನ ಸ್ಪೂಫ್ ಮಾಡಲಾಗಿದೆ. ‘ಕೆಜಿಎಫ್’ ಸಿನಿಮಾದ ಹಲವು ಮೇನ್ ದೃಶ್ಯಗಳನ್ನು ಇರಿಸಿಕೊಂಡು ಅವನ್ನು ಹಾಸ್ಯದ ರೂಪದಲ್ಲಿ ಪ್ರಸ್ತುತಪಡಿಸಲಾಗಿದೆ.

ಜಬರ್ದಸ್ಥ್ ಕಲಾವಿದರಿಂದ ‘ಕೆಜಿಎಫ್’ ಸ್ಪೂಪ್, ನಕ್ಕು ಸುಸ್ತಾದ ಜಡ್ಜ್​ಗಳು
Kgf Spoof
TV9 Web
| Edited By: |

Updated on: Jan 31, 2025 | 3:22 PM

Share

ತೆಲುಗು ಟಿವಿ ಲೋಕದಲ್ಲಿ ಕಾಮಿಡಿ ರಿಯಾಲಿಟಿ ಶೋಗಳು ಬಹಳ ಜನಪ್ರಿಯ. ಕಾಮಿಡಿ ರಿಯಾಲಿಟಿ ಶೋಗಳಿಂದ ಕೆಲವು ಅದ್ಭುತ ಪ್ರತಿಭೆಗಳು ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿವೆ. ಜನಪ್ರಿಯ ಕಾಮಿಡಿ ರಿಯಾಲಿಟಿ ಶೋಗಳಲ್ಲಿ ಜಬರ್ದಸ್ಥ್ ಬಹಳ ಜನಪ್ರಿಯ. ಕಾಲ ಕಾಲಕ್ಕೆ ಕೆಲವು ಅತ್ಯುತ್ತಮ ಹಾಸ್ಯ ನಟರನ್ನು ಈ ರಿಯಾಲಿಟಿ ಶೋ ತೆಲುಗು ಚಿತ್ರರಂಗಕ್ಕೆ ನೀಡುತ್ತಲೇ ಬಂದಿದೆ. ಹೊಸ ರೀತಿಯ ಕಂಟೆಂಟ್ ಅನ್ನು ಈ ಕಾರ್ಯಕ್ರಮ ನೀಡುತ್ತಾ ಬಂದಿದೆ. ಇತ್ತೀಚೆಗೆ ಈಟಿವಿಯ ಜಬರ್ದಸ್ಥ್ ಕಾರ್ಯಕ್ರಮದಲ್ಲಿ ಕನ್ನಡದ ಬಲು ಜನಪ್ರಿಯ ಸಿನಿಮಾ ‘ಕೆಜಿಎಫ್’ನ ಸ್ಪೂಫ್ ಅಥವಾ ಹಾಸ್ಯಮಯ ನಕಲು ಮಾಡಲಾಗಿದೆ. ಈ ಕೆಜಿಎಫ್ ಸ್ಪೂಫ್ ಯೂಟ್ಯೂಬ್​ನಲ್ಲಿ ವೈರಲ್ ಆಗುತ್ತಿದೆ.

ಬುಲೆಟ್ ಭಾಸ್ಕರ್ ತಂಡದವರು ‘ಕೆಜಿಎಫ್’ ಸ್ಪೂಫ್ ಮಾಡಿದ್ದು, ರಾಕಿಭಾಯ್, ರಾಕಿಭಾಯ್​ನ ತಾಯಿ, ನಾಯಕಿ ಶ್ರೀನಿಧಿ ಶೆಟ್ಟಿ, ಅಧೀರ ಅವರ ಪಾತ್ರಗಳನ್ನು ಇರಿಸಿಕೊಂಡು ಸ್ಪೂಫ್ ಮಾಡಲಾಗಿದೆ. ರಾಕಿಭಾಯ್ ತಾಯಿ ಜಗತ್ತಿನ ಎಲ್ಲ ಚಿನ್ನವನ್ನು ಪುಟ್ಟ ಮಗನ ಬಳಿ ಕೇಳುವುದು, ಅದಕ್ಕೆ ರಾಕಿಭಾಯ್ ಅಷ್ಟೋಂದು ಚಿನ್ನ ಎಲ್ಲಿ ಇಟ್ಟುಕೊಳ್ಳುತ್ತೀಯ ಎಂದು ಕೇಳುವುದು, ಹೀಗೆ ‘ಕೆಜಿಎಫ್’ನ ಹಲವು ಡೈಲಾಗ್​ಗಳನ್ನು ತಮಾಷೆಯ ರೀತಿಯಲ್ಲಿ ತೋರಿಸಲಾಗಿದೆ.

ಇದನ್ನೂ ಓದಿ:ಬಾಲಿವುಡ್​ಗೆ ಕಾಲಿಟ್ಟ ‘ಕೆಜಿಎಫ್’ ನಟಿಯ ಪುತ್ರಿ, ಜಾನ್ಹವಿ, ಸಾರಾಗೆ ನಡುಕ

ನಾಯಕಿ, ರಾಕಿಭಾಯ್​ ಬಳಿ ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದಾಗ ರಾಕಿಭಾಯ್, ಹೆಲಿಕಾಪ್ಟರ್ ತರಿಸುವ ದೃಶ್ಯ ‘ಕೆಜಿಎಫ್’ನಲ್ಲಿದೆ. ಆ ದೃಶ್ಯವನ್ನು ಜಬರ್ದಸ್ತ್​ನಲ್ಲಿ ಕಾಮಿಡಿ ರೀತಿಯಲ್ಲಿ ತೋರಿಸಲಾಗಿದ್ದು, ನಾಯಕಿ ನನಗೆ ಸೆಖೆ ಆಗುತ್ತಿದೆ ಎಂದಾಗ ಸೈಕಲ್​ ಟಯರ್​ಗೆ ಗಾಳಿ ಹೊಡೆಯುವ ಪಂಪ್ ತರಿಸಿ ಅದರಿಂದ ನಟಿಗೆ ಗಾಳಿ ಹೊಡೆಯಲಾಗುತ್ತದೆ. ಇಂಥಹಾ ಹಲವು ಹಾಸ್ಯಮಯ ದೃಶ್ಯಗಳು ‘ಕೆಜಿಎಫ್’ ಸ್ಪೂಫ್​ನಲ್ಲಿವೆ.

ಈ ಹಿಂದೆಯೂ ಸಹ ಹಲವು ಬಾರಿ ‘ಕೆಜಿಎಫ್’ ಸಿನಿಮಾದ ಸ್ಪೂಫ್​ಗಳನ್ನು ಮಾಡಲಾಗಿದೆ. ವಿಶೇಷವಾಗಿ ತಾಯಿ, ಮಗನ ಬಳಿ ಚಿನ್ನ ಕೇಳುವ ದೃಶ್ಯವನ್ನು ತಮಾಷೆ ಮಾಡಲಾಗಿದೆ. ಕೆಲವು ಸಿನಿಮಾಗಳಲ್ಲಿಯೂ ಸಹ ರಾಕಿಭಾಯ್ ಪಾತ್ರವನ್ನು ತಮಾಷೆಗೆ ಬಳಸಿಕೊಳ್ಳಲಾಗಿದೆ. ತೆಲುಗು ಸಿನಿಮಾ ನಿರ್ದೇಶಕನೊಬ್ಬ ಸಂದರ್ಶನವೊಂದರಲ್ಲಿ ‘ಕೆಜಿಎಫ್’ ಬಗ್ಗೆ ಮಾತನಾಡಿ ವಿವಾದ ಮಾಡಿಕೊಂಡಿದ್ದ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Web contact
Web contact

TV9 Kannada

Read More
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?