AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

KJ Yesudas Birthday: ಯೇಸುದಾಸ್​ 82ನೇ ಜನ್ಮದಿನ; ಲೆಜೆಂಡರಿ ಗಾಯಕನ ಟಾಪ್​ 10 ಕನ್ನಡ ಗೀತೆಗಳು

KJ Yesudas Top 10 Kannada Songs: ಕನ್ನಡದ ಹಲವಾರು ಹಾಡುಗಳಿಗೆ ತಮ್ಮ ಕಂಠದ ಮೂಲಕ ಜೀವ ತುಂಬಿದ ಕೆ.ಜೆ. ಯೇಸುದಾಸ್​ ಅವರು ಕರುನಾಡಿನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅನೇಕ ಸೂಪರ್​ ಹಿಟ್​ ಹಾಡುಗಳನ್ನು ಅವರು ನೀಡಿದ್ದಾರೆ.

KJ Yesudas Birthday: ಯೇಸುದಾಸ್​ 82ನೇ ಜನ್ಮದಿನ; ಲೆಜೆಂಡರಿ ಗಾಯಕನ ಟಾಪ್​ 10 ಕನ್ನಡ ಗೀತೆಗಳು
ಕೆ.ಜೆ. ಯೇಸುದಾಸ್
TV9 Web
| Edited By: |

Updated on: Jan 10, 2022 | 1:42 PM

Share

ಭಾರತೀಯ ಚಿತ್ರರಂಗದ ಖ್ಯಾತ ಗಾಯಕರಲ್ಲಿ ಒಬ್ಬರಾದ ಕೆ.ಜೆ. ಯೇಸುದಾಸ್​ ಅವರು ಇಂದು (ಜ.10) 82ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಮಲಯಾಳಂ, ತೆಲುಗು, ತಮಿಳು, ಕನ್ನಡ, ಹಿಂದಿ ಮುಂತಾದ ಭಾಷೆಗಳನ್ನು ಸೇರಿ ಸಾವಿರಾರು ಗೀತೆಗಳಿಗೆ ಧ್ವನಿಯಾದ ಈ ಮಹಾನ್​ ಕಲಾವಿದನಿಗೆ ಕೋಟ್ಯಂತರ ಅಭಿಮಾನಿಗಳು ಶುಭಕೋರುತ್ತಿದ್ದಾರೆ. ಸಿನಿಮಾ ಸಂಗೀತ ಲೋಕಕ್ಕೆ ಯೇಸುದಾಸ್​ ಅವರ ಕೊಡುಗೆ ದೊಡ್ಡದು. ಕನ್ನಡ ಚಿತ್ರರಂಗಕ್ಕೆ ಅವರು ಮರೆಯಲಾಗದ ಹಾಡುಗಳನ್ನು ನೀಡಿದ್ದಾರೆ. ಹಂಸಲೇಖ ಅವರ ಜೊತೆಗೂಡಿ ಯೇಸುದಾಸ್​ ಅವರು ಹಲವು ಸೂಪರ್​ ಹಿಟ್​ ಹಾಡುಗಳನ್ನು ನೀಡಿದ್ದಾರೆ. ಅನೇಕ ಭಕ್ತಿಗೀತೆಗಳಿಗೂ ಅವರು ಧ್ವನಿಯಾಗಿದ್ದಾರೆ. ಯೇಸುದಾಸ್​ ಕಂಠದಲ್ಲಿ ಮೂಡಿಬಂದ ಟಾಪ್​ 10 ಕನ್ನಡ ಸಿನಿಮಾ ಹಾಡುಗಳ ಬಗ್ಗೆ ಮಾಹಿತಿ ಇಲ್ಲಿದೆ..

  1. ಅನಾಥ ಮಗುವಾದೆ.. (ಹೊಸ ಜೀವನ -1990)

ಶಂಕರ್​ ನಾಗ್​ ಅಭಿನಯದ ‘ಹೊಸ ಜೀವನ’ ಸಿನಿಮಾದ ‘ಅನಾಥ ಮಗುವಾದೆ..’ ಹಾಡು ಕನ್ನಡಿಗರಿಗೆ ಆಲ್​ಟೈಮ್​ ಫೇವರೀಟ್​ ಗೀತೆ. ಹಂಸಲೇಖ ಸಂಗೀತ ನೀಡಿದ ಈ ಗೀತೆಗೆ ಯೇಸುದಾಸ್​ ಅವರು ಧ್ವನಿ ನೀಡಿದ್ದಾರೆ. ಅವರ ಅದ್ಭುತ ಕಂಠದಲ್ಲಿ ಮೂಡಿಬಂದ ಈ ಹಾಡು ಎವರ್​ಗ್ರೀನ್​ ಎನಿಸಿಕೊಂಡಿದೆ.

  1. ಅಂದವೋ ಅಂದವೋ ಕನ್ನಡ ನಾಡು.. (ಮಲ್ಲಿಗೆ ಹೂವೇ – 1992)

ಈ ಗೀತೆ ಮೂಡಿಬಂದಿದ್ದು ಕೂಡ ಹಂಸಲೇಖ ಅವರ ಸಂಗೀತ ನಿರ್ದೇಶನದಲ್ಲಿ. ಯೇಸುದಾಸ್​ ಅವರ ಟಾಪ್​ ಗೀತೆಗಳಲ್ಲಿ ‘ಅಂದವೋ ಅಂದವೋ ಕನ್ನಡ ನಾಡು..’ ಸಾಂಗ್​ ಕೂಡ ಸ್ಥಾನ ಪಡೆದುಕೊಂಡಿದೆ. ಈ ಹಾಡಿನಲ್ಲಿ ಅಂಬರೀಷ್​ ಅಭಿಯಿಸಿದ್ದರು. ಕನ್ನಡ ನಾಡನ್ನು ವರ್ಣಿಸುವ ಈ ಸಾಂಗ್​ ಇಂದಿಗೂ ಕೇಳುಗರ ಫೇವರಿಸ್ಟ್​ ಲಿಸ್ಟ್​ನಲ್ಲಿದೆ.

  1. ನಮ್ಮೂರ ಯುವರಾಣಿ ಕಲ್ಯಾಣವಂತೆ.. (ರಾಮಾಚಾರಿ – 1991)

ರವಿಚಂದ್ರನ್​ ನಟನೆಯ ‘ರಾಮಾಚಾರಿ’ ಸಿನಿಮಾ ಸೂಪರ್​ ಹಿಟ್​ ಆಗುವಲ್ಲಿ ಆ ಚಿತ್ರದ ಗೀತೆಗಳು ಕೂಡ ಮಹತ್ವದ ಪಾತ್ರ ವಹಿಸಿವೆ ಎಂದರೆ ತಪ್ಪಿಲ್ಲ. ‘ನಮ್ಮೂರ ಯುವರಾಣಿ ಕಲ್ಯಾಣವಂತೆ..’ ಹಾಡಿಗೆ ಯೇಸುದಾಸ್​ ಅವರು ತಮ್ಮ ಧ್ವನಿಯಿಂದ ಜೀವ ತುಂಬಿದ್ದಾರೆ. ರೆಟ್ರೋ ಪ್ರಿಯರಿಗೆ ಈ ಹಾಡು ಈಗಲೂ ಅಚ್ಚುಮೆಚ್ಚು.

  1. ರಾಮಾಚಾರಿ ಹಾಡುವ.. (ರಾಮಚಾರಿ – 1991)

‘ರಾಮಾಚಾರಿ’ ಸಿನಿಮಾದ ಸೂಪರ್​ ಹಿಟ್​ ಗೀತೆಗಳಲ್ಲಿ ‘ರಾಮಚಾರಿ ಹಾಡುವ ಲಾಲಿ ಹಾಡ ಕೇಳವ್ವ..’ ಸಾಂಗ್​ ಕೂಡ ಯೇಸುದಾಸ್​ ಅವರ ಕಂಠದಲ್ಲಿ ಮೂಡಿಬಂದು ಮೋಡಿ ಮಾಡಿತು. ಈ ಗೀತೆಗೆ ಸಂಗೀತ ನೀಡುವುದರ ಜೊತೆಗೆ ಸಾಹಿತ್ಯ ಬರೆದಿದ್ದು ಕೂಡ ಹಂಸಲೇಖ. ರವಿಚಂದ್ರನ್​-ಮಾಲಾಶ್ರೀ ಕಾಂಬಿನೇಷನ್​ನ ಈ ಚಿತ್ರದ ಈ ಗೀತೆಯನ್ನು ಫ್ಯಾನ್ಸ್​ ಎಂದಿಗೂ ಮರೆಯಲು ಸಾಧ್ಯವಿಲ್ಲ.

  1. ಹಾಡೊಂದು ನಾ ಹಾಡುವೆನು.. (ಶ್ರುತಿ – 1990)

ಶ್ರುತಿ ಮತ್ತು ಸುನಿಲ್​ ಜೋಡಿಯ ‘ಶ್ರುತಿ’ ಸಿನಿಮಾದಲ್ಲಿ ಸಂಗೀತವೇ ಪ್ರಧಾನವಾಗಿತ್ತು. ಎಸ್​.ಎ. ರಾಜ್​ಕುಮಾರ್​ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದ ‘ಹಾಡೊಂದು ನಾ ಹಾಡುವೆನು..’ ಗೀತೆಗೆ ಯೇಸುದಾಸ್​ ಧ್ವನಿ ನೀಡಿದರು. ಸರ್ವಕಾಲಕ್ಕೂ ಗುನುಗಿಸಿಕೊಳ್ಳುವಂತಹ ಶಕ್ತಿ ಈ ಹಾಡಿಗೆ ಇದೆ.

  1. ಎಲ್ಲೆಲ್ಲೂ ಸಂಗೀತವೇ.. (ಮಲಯ ಮಾರುತ- 1986)

ವಿಷ್ಣುವರ್ಧನ್​ ಅಭಿನಯದ ಸಂಗೀತ ಪ್ರಧಾನ ಸಿನಿಮಾ ‘ಮಲಯ ಮಾರುತ’. ಆ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದವರು ವಿಜಯ ಭಾಸ್ಕರ್​. ಈ ಸಿನಿಮಾದ 11 ಹಾಡಿಗೆ ಯೇಸುದಾಸ್​ ಧ್ವನಿ ನೀಡಿದ್ದಾರೆ! ಆ ಪೈಕಿ ‘ಎಲ್ಲೆಲ್ಲೂ ಸಂಗೀತವೇ..’ ಹಾಡು ಹೆಚ್ಚು ಗಮನ ಸೆಳೆಯಿತು.

  1. ಯಾರೇ ನೀನು ಚೆಲುವೆ.. (ನಾನು ನನ್ನ ಹೆಂಡ್ತಿ-1985)

ರವಿಚಂದ್ರನ್​ ಮತ್ತು ಯೇಸುದಾಸ್​ ಅವರ ಕಾಂಬಿನೇಷನ್​ನಲ್ಲಿ ಅನೇಕ ಸುಮಧುರ ಗೀತೆಗಳು ಹೊರಬಂದಿವೆ. ಆ ಪೈಕಿ ‘ನಾನು ನನ್ನ ಹೆಂಡ್ತಿ’ ಚಿತ್ರದ ‘ಯಾರೇ ನೀನು ಚೆಲುವೆ.. ನಿನ್ನಷ್ಟಕ್ಕೆ ನೀನೇ ಏಕೆ ನಗುವೆ..’ ಹಾಡನ್ನು ಅಭಿಮಾನಿಗಳು ಇಂದಿಗೂ ಗುನುಗುತ್ತಿದ್ದಾರೆ. ಶಂಕರ್​-ಗಣೇಶ್​ ಈ ಚಿತ್ರಕ್ಕೆ ಸಂಗೀತ ನೀಡಿದ್ದರು.

  1. ನಾನು ಕನ್ನಡದ ಕಂದ.. (ಎ.ಕೆ. 47 – 1999)

ಶಿವರಾಜ್​ಕುಮಾರ್​ ಮತ್ತು ಚಾಂದಿನಿ ಅಭಿನಯದ ಸೂಪರ್​ ಹಿಟ್​ ಸಿನಿಮಾ ‘ಎ.ಕೆ.47’ನಲ್ಲಿ ಹಾಡುಗಳು ಸಖತ್​ ಗಮನ ಸೆಳೆದವು. ಈ ಚಿತ್ರಕ್ಕೆ ಹಂಸಲೇಖ ಸಂಗೀತ ನೀಡಿದ್ದರು. ಈ ಚಿತ್ರದಲ್ಲಿನ ‘ನಾನು ಕನ್ನಡದ ಕಂದ..’ ಹಾಡಿಗೆ ಜೀವ ನೀಡಿದವರು ಯೇಸುದಾಸ್​.

  1. ಬಂಗಾರದಿಂದ ಬಣ್ಣಾನ ತಂದ.. (ಪ್ರೀತ್ಸೋದ್​ ತಪ್ಪಾ? 1998)

ಎಲ್ಲ ಬಗೆಯ ಹಾಡುಗಳಿಗೆ ಜೀವ ತುಂಬುವಂತಹ ಕಲಾವಿದ ಕೆ.ಜೆ. ಯೇಸುದಾಸ್​. ರವಿಚಂದ್ರನ್​ ನಟನೆಯ ‘ಪ್ರೀತ್ಸೋದ್​ ತಪ್ಪಾ’ ಸಿನಿಮಾದ ‘ಬಂಗಾರದಿಂದ ಬಣ್ಣಾನ ತಂದ..’ ಹಾಡು ಮೂಡಿಬಂದಿದ್ದು ಕೂಡ ಯೇಸುದಾಸ್​ ಅವರ ಕಂಠದಲ್ಲಿ. ಅದೇ ಸಿನಿಮಾದ ‘ಸೋನೆ ಸೋನೆ.. ಪ್ರೀತಿಯಾ ಸೋನೆ..’ ಹಾಡಿಗೂ ಸಹ ಅವರು ಧ್ವನಿ ನೀಡಿದರು.

  1. ಮೇರು ಗಿರಿಯಾಣೆ.. (ಎಸ್​.ಪಿ. ಸಾಂಗ್ಲಿಯಾನಾ ಪಾರ್ಟ್​ 2- 1990)

ಶಂಕರ್​ ನಾಗ್​ ಮತ್ತು ಭವ್ಯ ಜೋಡಿಯಾಗಿ ನಟಿಸಿದ ‘ಎಸ್​.ಪಿ. ಸಾಂಗ್ಲಿಯಾನಾ ಪಾರ್ಟ್​ 2’ ಚಿತ್ರದಲ್ಲಿ ‘ಮೇರು ಗಿರಿಯಾಣೆ..’ ಹಾಡು ರೊಮ್ಯಾಂಟಿಕ್​ ಆಗಿ ಮೂಡಿಬಂದಿತ್ತು. ಈ ಗೀತೆಯನ್ನು ಹಾಡಿದ್ದು ಕೂಡ ಯೇಸುದಾಸ್. ಹೀಗೆ ಹಲವಾರು ಹಾಡುಗಳಿಗೆ ತಮ್ಮ ಕಂಠದ ಮೂಲಕ ಜೀವ ತುಂಬಿದ ಅವರು ಕರುನಾಡಿನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ:

ದೇವಸ್ಥಾನದ ಪೂಜೆಯಲ್ಲೂ ‘ಪುಷ್ಪ’ ಚಿತ್ರದ ‘ಸಾಮಿ ಸಾಮಿ’ ಹಾಡು! ಇಲ್ಲಿದೆ ವೈರಲ್​ ವಿಡಿಯೋ

Lata Mangeshkar Birthday: ಲತಾ ಮಂಗೇಶ್ಕರ್ ಫೇಮಸ್​ ಆಗುವುದಕ್ಕೂ ಮುನ್ನವೇ ಭವಿಷ್ಯ ನುಡಿದಿದ್ದರು ಪಾಕ್​ ಗಾಯಕಿ ನೂರ್​ ಜಹಾನ್

Follow Us
Web contact
Web contact

TV9 Kannada

Read More
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
‘ಬ್ಲಾಸ್ಟ್​’ ಸಿನಿಮಾಗೆ ಬ್ಲಾಸ್ಟ್​ ಮ್ಯೂಸಿಕ್ ಕೊಟ್ಟ ರವಿ ಬಸ್ರೂರು
‘ಬ್ಲಾಸ್ಟ್​’ ಸಿನಿಮಾಗೆ ಬ್ಲಾಸ್ಟ್​ ಮ್ಯೂಸಿಕ್ ಕೊಟ್ಟ ರವಿ ಬಸ್ರೂರು