AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rajkumar Birthday: ಕೇವಲ ಮೂರನೇ ಕ್ಲಾಸ್ ಓದಿದ್ದ ರಾಜ್​ಕುಮಾರ್ ಇಂಗ್ಲಿಷ್ ಕಲಿತಿದ್ದು ಹೇಗೆ? ಇಲ್ಲಿದೆ ಅಚ್ಚರಿಯ ವಿಚಾರ

ರಾಜ್​ಕುಮಾರ್ ಅವರು ಹಠವಾದಿ. ಯಾವುದಾದರೂ ವಿಚಾರವನ್ನು ಕಲಿಯಬೇಕು ಅಥವಾ ಮಾಡಬೇಕು ಎಂದರೆ ಅದನ್ನು ಮಾಡಿಯೇ ಮಾಡುತ್ತಿದ್ದರು. ಹೊಸ ವಿಚಾರ ಕಲಿಯಬೇಕು ಎಂದರೆ ಅವರು ಎಂದಿಗೂ ಹಿಂದೇಟು ಹಾಕಿದವರಲ್ಲ.

Rajkumar Birthday: ಕೇವಲ ಮೂರನೇ ಕ್ಲಾಸ್ ಓದಿದ್ದ ರಾಜ್​ಕುಮಾರ್ ಇಂಗ್ಲಿಷ್ ಕಲಿತಿದ್ದು ಹೇಗೆ? ಇಲ್ಲಿದೆ ಅಚ್ಚರಿಯ ವಿಚಾರ
ರಾಜ್​ಕುಮಾರ್
TV9 Web
| Edited By: |

Updated on: Apr 24, 2022 | 6:00 AM

Share

ರಾಜ್​ಕುಮಾರ್ ಅವರು (Rajkumar) ಭಾರತ ಚಿತ್ರರಂಗ ಕಂಡ ಶ್ರೇಷ್ಠ ನಟ. ಇಂದು (ಏಪ್ರಿಲ್ 24) ಅವರ ಜನ್ಮದಿನ (Rajkumar Birthday). ಅವರಿಲ್ಲದೆ 16 ವರ್ಷಗಳು ಕಳೆದು ಹೋಗಿವೆ. ರಾಜ್​ಕುಮಾರ್ ಜನ್ಮದಿನವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಮಾಡುವ ಮೂಲಕ ಅಣ್ಣಾವ್ರ ಹುಟ್ಟು ಹಬ್ಬಕ್ಕೆ ಒಂದು ಅರ್ಥ ನೀಡಿದ್ದಾರೆ. ರಾಜ್​ಕುಮಾರ್ ಅವರ ಜೀವನ ಒಂದು ಅಚ್ಚರಿಗಳ ಗೂಡು. ಅವರು ಮಾಡಿದ ಸಾಧನೆ ಅಂತಿಂಥದ್ದಲ್ಲ. ದೊಡ್ಡ ಸ್ಟಾರ್​ಗಿರಿ ಇದ್ದರೂ ಅವರು ಸಾಮಾನ್ಯರಂತೆ ಬದುಕಿ ತೋರಿಸಿದ್ದಾರೆ. ಅವರು ಇಂಗ್ಲಿಷ್ (English) ಕಲಿತಿದ್ದು ಕೂಡ ಒಂದು ಅಚ್ಚರಿಯ ವಿಚಾರವೇ.

ರಾಜ್​ಕುಮಾರ್ ಅವರು ಹಠವಾದಿ. ಯಾವುದಾದರೂ ವಿಚಾರವನ್ನು ಕಲಿಯಬೇಕು ಅಥವಾ ಮಾಡಬೇಕು ಎಂದರೆ ಅದನ್ನು ಮಾಡಿಯೇ ಮಾಡುತ್ತಿದ್ದರು. ಹೊಸ ವಿಚಾರ ಕಲಿಯಬೇಕು ಎಂದರೆ ಅವರು ಎಂದಿಗೂ ಹಿಂದೇಟು ಹಾಕಿದವರಲ್ಲ. ಅವರು ಇಂಗ್ಲಿಷ್ ಕಲಿತಿದ್ದು ಒಂದು ಅಚ್ಚರಿಯ ಘಟನೆ. ರಾಜ್​ಕುಮಾರ್ ಓದಿದ್ದು 3ನೇ ತರಗತಿ. ಆ ಬಳಿಕ ಶಿಕ್ಷಣ ಪಡೆಯಲಿಲ್ಲ. ಆದರೆ, ಸಿನಿಮಾದಲ್ಲಿ ಬರುವ ಇಂಗ್ಲಿಷ್ ಡೈಲಾಗ್​ಗಳನ್ನು ನಿರರ್ಗಳವಾಗಿ ಹೇಳುತ್ತಿದ್ದರು. ಇದು ಹೇಗೆ ಎನ್ನುವ ವಿಚಾರವನ್ನು ಹಿರಿಯ ನಟ ಬೆಂಗಳೂರು ನಾಗೇಶ್​ ಅವರು ವಿವರಿಸಿದ್ದಾರೆ.

ನಾಗೇಶ್ ಹಾಗೂ ರಾಜ್​ಕುಮಾರ್ ಅವರ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ರಾಜ್​ಕುಮಾರ್ ಅವರನ್ನು ತುಂಬಾನೇ ಹತ್ತಿರದಿಂದ ಕಂಡವರಲ್ಲಿ ನಾಗೇಶ್ ಕೂಡ ಒಬ್ಬರು. ಅವರು ರಾಜ್​ಕುಮಾರ್​ಗೆ ಇಂಗ್ಲಿಷ್ ಕಲಿಸಿದ ಬಗ್ಗೆ ಹೇಳಿಕೊಂಡಿದ್ದಾರೆ.

‘ನಾನು ಎಜುಕೇಡೆಟ್​ ಆಗಿದ್ದರಿಂದ ಅಣ್ಣಾವ್ರಿಗೆ ನನ್ನನ್ನು ಕಂಡರೆ ಬಹಳ ಇಷ್ಟ. ಶೂಟಿಂಗ್​ ಇಲ್ಲದಿರುವ ದಿನಗಳಲ್ಲಿ ನಾನು ಅವರ ಮನೆಗೆ ತೆರಳುತ್ತಿದ್ದೆ. ಸಂಜೆ ಅವರ ಜೊತೆ ವಾಕಿಂಗ್​ ಹೋಗುತ್ತಿದ್ದೆ. ಅಣ್ಣಾ ನೀವು ಇಂಗ್ಲಿಷ್​ನಲ್ಲಿ ಮಾತನಾಡಬೇಕು ಅಂತ ಅವರಿಗೆ ಒಂದು ದಿನ ಹೇಳಿದೆ. ಮೂರನೇ ಕ್ಲಾಸ್​ ಓದಿದವನಿಗೆ ಇಂಗ್ಲಿಷ್​ ಎಲ್ಲಿ ಬರುತ್ತದೆ ಅಂತ ಅವರು ಹೇಳಿದರು. ಪ್ರತಿ ದಿನ ಎರಡೆರಡೇ ವಾಕ್ಯ ಹೇಳಿಕೊಡಲು ಶುರುಮಾಡಿದೆ. ಹೀಗೆ ಎಷ್ಟೋ ದಿನಗಳ ಕಾಲ ನಡೆಯಿತು. ಎಲ್ಲವನ್ನೂ ಪರ್ಫೆಕ್ಟ್​ ಆಗಿ ಅವರು ಕಲಿತರು. ಅವರ ಜೊತೆಗಿನ ಒಡನಾಟ ನನ್ನ ಭಾಗ್ಯ ಎಂದೇ ಹೇಳಬೇಕು’ ಎನ್ನುತ್ತಾರೆ ಬೆಂಗಳೂರು ನಾಗೇಶ್​.

ಇದನ್ನೂ ಓದಿ: Dr Rajkumar: ಡಾ. ರಾಜ್​ಕುಮಾರ್​ ಪುಣ್ಯ ಸ್ಮರಣೆ; ಅಣ್ಣಾವ್ರು ಭೌತಿಕವಾಗಿ ಇಲ್ಲದೇ ಕಳೆಯಿತು 16 ವರ್ಷಗಳು 

 ರಾಜ್​ಕುಮಾರ್ ಕೊಟ್ಟ ಆದರ್ಶಗಳನ್ನು ಚಾಚೂತಪ್ಪದೆ ಪಾಲಿಸುತ್ತಿದ್ದಾರೆ ಮಕ್ಕಳು; ವಿಶೇಷ ಮಾಹಿತಿ ಬಿಚ್ಚಿಟ್ಟ ಪ್ರಥಮ್

Follow Us
40 ಶಾಸಕರು, ಸಚಿವರನ್ನು ಗುರಿಯಾಗಿಸಿ ಇಡಿ ದಾಳಿ ನಡೆಯಬಹುದು: ಸಿಎಂ ಎಚ್ಚರಿಕೆ
40 ಶಾಸಕರು, ಸಚಿವರನ್ನು ಗುರಿಯಾಗಿಸಿ ಇಡಿ ದಾಳಿ ನಡೆಯಬಹುದು: ಸಿಎಂ ಎಚ್ಚರಿಕೆ
ಸತೀಶ್​​ ಜಾರಕಿಹೊಳಿಗೆ ಇಡಿ ಶಾಕ್​​: ಸಿಎಂ ಡಿಕೆ ಶಿವಕುಮಾರ್​​ ಹೇಳಿದ್ದೇನು?
ಸತೀಶ್​​ ಜಾರಕಿಹೊಳಿಗೆ ಇಡಿ ಶಾಕ್​​: ಸಿಎಂ ಡಿಕೆ ಶಿವಕುಮಾರ್​​ ಹೇಳಿದ್ದೇನು?
ಸತೀಶ್ ಜಾರಕಿಹೊಳಿ ನಿವಾಸಗಳ ಮೇಲೆ ಇಡಿ ಶೋಧ: ಸಿಎಂಗೆ ಖರ್ಗೆ ಮಾಹಿತಿ
ಸತೀಶ್ ಜಾರಕಿಹೊಳಿ ನಿವಾಸಗಳ ಮೇಲೆ ಇಡಿ ಶೋಧ: ಸಿಎಂಗೆ ಖರ್ಗೆ ಮಾಹಿತಿ
‘ಬಿಗ್ ಬಾಸ್’ನಲ್ಲಿ ಗಗನ್ ಹಾಗೂ ಮಂಜು ನಡುವೆ ನಡೆಯಿತು ವಾಗ್ವಾದ
‘ಬಿಗ್ ಬಾಸ್’ನಲ್ಲಿ ಗಗನ್ ಹಾಗೂ ಮಂಜು ನಡುವೆ ನಡೆಯಿತು ವಾಗ್ವಾದ
ಬೆಳ್ಳಂಬೆಳಗ್ಗೆಯೇ ಸತೀಶ್​ ಜಾರಕಿಹೊಳಿ ಮನೆಗಳ ಮೇಲೆ ಇಡಿ ರೇಡ್ ಆಗಿದ್ದೇಕೆ?
ಬೆಳ್ಳಂಬೆಳಗ್ಗೆಯೇ ಸತೀಶ್​ ಜಾರಕಿಹೊಳಿ ಮನೆಗಳ ಮೇಲೆ ಇಡಿ ರೇಡ್ ಆಗಿದ್ದೇಕೆ?
ಸತೀಶ್ ಜಾರಕಿಹೊಳಿಗೆ ಡಬಲ್ ಶಾಕ್! ಗೋಕಾಕ್ ನಿವಾಸದ ಮೇಲೂ ಇಡಿ ರೇಡ್
ಸತೀಶ್ ಜಾರಕಿಹೊಳಿಗೆ ಡಬಲ್ ಶಾಕ್! ಗೋಕಾಕ್ ನಿವಾಸದ ಮೇಲೂ ಇಡಿ ರೇಡ್
ಸಚಿವ ಮಲ್ಲಿಕಾರ್ಜುನ್ ಅವಾಚ್ಯ ನಿಂದನೆ ವಿರುದ್ಧ ಶಾಸಕ ಬಿಪಿ ಹರೀಶ್ ಆಕ್ರೋಶ
ಸಚಿವ ಮಲ್ಲಿಕಾರ್ಜುನ್ ಅವಾಚ್ಯ ನಿಂದನೆ ವಿರುದ್ಧ ಶಾಸಕ ಬಿಪಿ ಹರೀಶ್ ಆಕ್ರೋಶ
ಲ್ಯಾಂಡಿಂಗ್ ವೇಳೆ ತೊಂದರೆ ಅನುಭವಿಸಿದ ರಾಹುಲ್ ಇದ್ದ ವಿಮಾನ
ಲ್ಯಾಂಡಿಂಗ್ ವೇಳೆ ತೊಂದರೆ ಅನುಭವಿಸಿದ ರಾಹುಲ್ ಇದ್ದ ವಿಮಾನ
ಇಂದು ಈ ರಾಶಿಯವರು ನಿಮ್ಮ ವೀಕ್ನೆಸ್ ಅನ್ನು ಯಾರಿಗೂ ಹೇಳಿಕೊಳ್ಳಬೇಡಿ!
ಇಂದು ಈ ರಾಶಿಯವರು ನಿಮ್ಮ ವೀಕ್ನೆಸ್ ಅನ್ನು ಯಾರಿಗೂ ಹೇಳಿಕೊಳ್ಳಬೇಡಿ!
ಕುಂಭಾಭಿಷೇಕಕ್ಕೆ ಹೊಸ ಬಣ್ಣದಲ್ಲಿ ಸಿಂಗಾರಗೊಂಡ ಮಧುರೈ ಮೀನಾಕ್ಷಿ ದೇವಸ್ಥಾನ
ಕುಂಭಾಭಿಷೇಕಕ್ಕೆ ಹೊಸ ಬಣ್ಣದಲ್ಲಿ ಸಿಂಗಾರಗೊಂಡ ಮಧುರೈ ಮೀನಾಕ್ಷಿ ದೇವಸ್ಥಾನ