AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲಿವುಡ್​ಗೆ ರಿಮೇಕ್​ ಆಗಲಿದೆ ರವಿಚಂದ್ರನ್​ ನಟನೆಯ ಸಿನಿಮಾ; ಯಾವುದು ಗೊತ್ತಾ?

ಭಾರತದಿಂದ ನೇರವಾಗಿ ಹಾಲಿವುಡ್​ಗೆ ರಿಮೇಕ್​ ಆಗಲಿರುವ ಮೊದಲ ಚಿತ್ರ ಎಂಬ ಖ್ಯಾತಿ ಈ ಸಿನಿಮಾಗೆ ಸಿಗುತ್ತಿದೆ. ಎಲ್ಲ ದೇಶಗಳಿಗೂ ಈ ಚಿತ್ರದ ಕಥೆ ಅನ್ವಯ ಆಗುತ್ತದೆ. ಇದರಲ್ಲಿನ ಸಸ್ಪೆನ್ಸ್​ ಅಂಶವನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆ. ಹಾಗಾಗಿ ‘ದೃಶ್ಯಂ’ ಚಿತ್ರಕ್ಕೆ ಈ ಪರಿ ಬೇಡಿಕೆ ಇದೆ. ಈಗಾಗಲೇ ಅನೇಕ ಭಾಷೆಗಳಿಗೆ ರಿಮೇಕ್​ ಆಗಿರುವ ಈ ಚಿತ್ರವನ್ನು ಇಂಗ್ಲಿಷ್​ ಪ್ರೇಕ್ಷಕರಿಗೆ ತಲುಪಿಸಲು ಸಿದ್ಧತೆ ನಡೆಯುತ್ತಿದೆ.

ಹಾಲಿವುಡ್​ಗೆ ರಿಮೇಕ್​ ಆಗಲಿದೆ ರವಿಚಂದ್ರನ್​ ನಟನೆಯ ಸಿನಿಮಾ; ಯಾವುದು ಗೊತ್ತಾ?
ರವಿಚಂದ್ರನ್​
ಮದನ್​ ಕುಮಾರ್​
|

Updated on: Feb 29, 2024 | 12:37 PM

Share

ಹಾಲಿವುಡ್​ನಿಂದ ಸ್ಫೂರ್ತಿ ಪಡೆದು ಅನೇಕ ಸಿನಿಮಾಗಳನ್ನು ಭಾರತದಲ್ಲಿ ರಿಮೇಕ್​ ಮಾಡಲಾಗಿದೆ. ಆದರೆ ಭಾರತದ ಸಿನಿಮಾಗಳನ್ನು ನೇರವಾಗಿ ಹಾಲಿವುಡ್​ನಲ್ಲಿ (Hollywood) ರಿಮೇಕ್​ ಮಾಡಿದ ಉದಾಹರಣೆ ಇಲ್ಲ. ಈಗ ಭಾರತದ ‘ದೃಶ್ಯಂ’ ಚಿತ್ರವನ್ನು (Drishyam Movie) ಇಂಗ್ಲಿಷ್​ನಲ್ಲಿ ರಿಮೇಕ್​ ಮಾಡಲು ಪ್ಲ್ಯಾನ್​ ಸಿದ್ಧವಾಗಿದೆ. ಅದಕ್ಕಾಗಿ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಕೈ ಜೋಡಿಸಿವೆ. ಈಗಾಗಲೇ ಭಾರತದ ಅನೇಕ ಭಾಷೆಗಳಲ್ಲಿ ಈ ಸಿನಿಮಾ ರಿಮೇಕ್​ ಆಗಿದೆ. ಮಲಯಾಳಂ, ಹಿಂದಿ, ಕನ್ನಡ, ತಮಿಳು, ತೆಲುಗು ಮುಂತಾದ ಭಾಷೆಗಳಲ್ಲಿ ಮೂಡಿಬಂದ ಈ ಸಿನಿಮಾ ಸೂಪರ್​ ಹಿಟ್​ ಆಗಿದೆ. ಕನ್ನಡದ ರಿಮೇಕ್​ ಆಗಿ ಮೂಡಿಬಂದ ‘ದೃಶ್ಯ’ ಸಿನಿಮಾದಲ್ಲಿ ರವಿಚಂದ್ರನ್​ (Ravichandran) ಪ್ರಮುಖ ಪಾತ್ರ ಮಾಡಿದರು. ಇಂಗ್ಲಿಷ್​​ನಲ್ಲಿ ಯಾರು ನಟಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕು.

ಇದು ಮೂಲ ಮಲಯಾಳಂ ಭಾಷೆಯ ಸಿನಿಮಾ. ಮೋಹನ್​ಲಾಲ್​, ಮೀನಾ ಮುಂತಾದವರು ನಟಿಸಿದ ‘ದೃಶ್ಯಂ’ ಸಿನಿಮಾ 2013ರಲ್ಲಿ ಬಿಡುಗಡೆಯಾಗಿ ಸೂಪರ್​ ಹಿಟ್​ ಆಯಿತು. ಬಳಿಕ ಇದೇ ಸಿನಿಮಾವನ್ನು ಕನ್ನಡಕ್ಕೆ (ದೃಶ್ಯ 2014) ರಿಮೇಕ್​ ಮಾಡಲಾಯಿತು. ಅದೇ ವರ್ಷ ತೆಲುಗಿನಲ್ಲಿ ಹಾಗೂ 2015ರಲ್ಲಿ ಹಿಂದಿಗೆ ‘ದೃಶ್ಯಂ’ ಶೀರ್ಷಿಕೆಯಲ್ಲೇ ರಿಮೇಕ್​ ಆಯಿತು. ಟಾಲಿವುಡ್​ನಲ್ಲಿ ದಗ್ಗುಬಾಟಿ ವೆಂಕಟೇಶ್​ ಹಾಗೂ ಹಿಂದಿಯಲ್ಲಿ ಅಜಯ್​ ದೇವಗನ್​ ಅವರು ಮುಖ್ಯ ಪಾತ್ರ ಮಾಡಿದರು.

ಇದನ್ನೂ ಓದಿ: ಹಾಲಿವುಡ್​ನಲ್ಲಿ ಆಂಜನೇಯನ ಕತೆ, ‘ಮಂಕಿ ಮ್ಯಾನ್’ ಟ್ರೈಲರ್ ನೋಡಿದಿರಾ?

2015ರಲ್ಲಿ ‘ದೃಶ್ಯಂ’ ಸಿನಿಮಾ ತಮಿಳಿಗೆ ‘ಪಾಪನಾಶಂ’ ಟೈಟಲ್​ನಲ್ಲಿ ರಿಮೇಕ್​ ಆಯಿತು. ಅದರಲ್ಲಿ ಕಮಲ್​ ಹಾಸನ್​ ಅವರು ಹೀರೋ ಆಗಿ ನಟಿಸಿದರು. 2017ರಲ್ಲಿ ಸಿಂಗಳ ಭಾಷೆಗೆ ಹಾಗೂ 2019ರಲ್ಲಿ ಚೈನೀಸ್​ ಭಾಷೆಗೂ ಈ ಸಿನಿಮಾವನ್ನು ರಿಮೇಕ್​ ಮಾಡಲಾಯಿತು. 2021ರಲ್ಲಿ ಇಂಡೋನೇಷ್ಯನ್​ ರಿಮೇಕ್​ ಹಾಗೂ 2023ರಲ್ಲಿ ಕೊರಿಯನ್​ ರಿಮೇಕ್​ ಘೋಷಿಸಲಾಯಿತು. ಈಗ ಹಾಲಿವುಡ್​ಗೆ ‘ದೃಶ್ಯಂ’ ಸಿನಿಮಾವನ್ನು ರಿಮೇಕ್​ ಮಾಡಲಾಗುತ್ತಿದೆ.

ಇದನ್ನೂ ಓದಿ: ಹಾಲಿವುಡ್ ಸಿನಿಮಾನಲ್ಲಿ ಸದ್ಗುರು ಜಗ್ಗಿ ವಾಸುದೇವ್, ಪಾತ್ರವೇನು?

‘ದೃಶ್ಯಂ’ ಸಿನಿಮಾದ ವಿದೇಶಿ ರಿಮೇಕ್​ ಹಕ್ಕುಗಳನ್ನು ‘ಪನೋರಮಾ ಸ್ಟುಡಿಯೋಸ್​’ ಖರೀದಿ ಮಾಡಿದೆ. ಆ ಸಂಸ್ಥೆ ಈಗ ‘ಗಲ್ಫ್​ ಸ್ಟ್ರೀಮ್​ ಪಿಕ್ಚರ್ಸ್​’ ಹಾಗೂ ‘JOAT Films’ ಸಂಸ್ಥೆಗಳ ಜೊತೆ ಸೇರಿ ‘ದೃಶ್ಯಂ’ ಸಿನಿಮಾವನ್ನು ಹಾಲಿವುಡ್​ನಲ್ಲಿ ರಿಮೇಕ್​ ಮಾಡಲಿವೆ. ಈ ರೀತಿ ರಿಮೇಕ್​ ಆಗುತ್ತಿರುವ ಭಾರತದ ಮೊದಲ ಸಿನಿಮಾ ಎಂಬ ಖ್ಯಾತಿಗೆ ಈ ಚಿತ್ರ ಒಳಗಾಗುತ್ತಿದೆ. ಹಾಲಿವುಡ್​ ಮತ್ತು ಕೊರಿಯಾ ರಿಮೇಕ್​ ಬಳಿಕ ಮುಂದಿನ 3ರಿಂದ 5 ವರ್ಷಗಳಲ್ಲಿ ಇನ್ನೂ 10 ಬೇರೆ ಬೇರೆ ದೇಶಗಳಲ್ಲಿ ಈ ಸಿನಿಮಾವನ್ನು ರಿಮೇಕ್​ ಮಾಡಲಾಗುವುದು ಎಂದು ಈ ನಿರ್ಮಾಣ ಸಂಸ್ಥೆಗಳು ತಿಳಿಸಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು