AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾವು ರೈತರ ಮರೆಯಲ್ಲ, ವರ್ತೂರು ಮುದ್ದೆ ತಿನ್ನೋ ರೈತ ಅಲ್ಲ ಅಂತ ಗೊತ್ತು’; ಸುದೀಪ್

ಸುದೀಪ್ ಅವರ ಕಡೆಯಿಂದ ಊಟ ಸಿಕ್ಕಿದೆ. ಇದನ್ನು ತಿಂದು ಮನೆ ಮಂದಿ ಸಖತ್ ಖುಷಿಪಟ್ಟಿದ್ದಾರೆ. ಇದರ ಮಧ್ಯೆ ವರ್ತೂರು ಸಂತೋಷ್ ಬೇಸರ ಮಾಡಿಕೊಂಡರು. ಅವರನ್ನು ಚಿಯರ್​ಅಪ್ ಮಾಡಿದ್ದಾರೆ ಸುದೀಪ್.

‘ನಾವು ರೈತರ ಮರೆಯಲ್ಲ, ವರ್ತೂರು ಮುದ್ದೆ ತಿನ್ನೋ ರೈತ ಅಲ್ಲ ಅಂತ ಗೊತ್ತು’; ಸುದೀಪ್
ಸುದೀಪ್​-ಸಂತೋಷ್
ರಾಜೇಶ್ ದುಗ್ಗುಮನೆ
|

Updated on: Dec 16, 2023 | 7:08 AM

Share

ಬಿಗ್ ಬಾಸ್ (Bigg Boss) ಮನೆಯಲ್ಲಿ ಸ್ಪರ್ಧಿಗಳಿಗೆ ಸಖತ್ ಸರ್​ಪ್ರೈಸ್ ಇತ್ತು. ಸ್ಪರ್ಧಿಗಳು ಹಸಿದುಕೊಂಡಿದ್ದಾಗ ಸುದೀಪ್ ಕಡೆಯಿಂದ ಲೆಟರ್ ಬಂತು. ಆ ಬಳಿಕ ಊಟ ಕೂಡ ಬಂತು. ಇದನ್ನು ಮನೆಯವರು ನೋಡಿ ಸಖತ್​ ಸರ್​ಪ್ರೈಸ್​ಗೆ ಒಳಗಾದರು. ಆ ಬಳಿಕ ಸುದೀಪ್ (Sudeep) ಅವರು ಮನೆಯವರ ಜೊತೆ ಮಾತನಾಡಿದ್ದಾರೆ. ಈ ಎಪಿಸೋಡ್ ಎಲ್ಲರ ಗಮನ ಸೆಳೆದಿದೆ. ಸುದೀಪ್ ಮಾಡಿದ ಅಡುಗೆ ತಿಂದು ಮನೆ ಮಂದಿ ಒಮ್ಮೆ ಭಾವುಕರಾಗಿದ್ದಾರೆ. ವರ್ತೂರು ಸಂತೋಷ್​ ಅವರ ಕಾಲನ್ನು ಸುದೀಪ್ ಎಳೆದಿದ್ದಾರೆ.

ಬಿಗ್ ಬಾಸ್​ನಲ್ಲಿ ಸ್ಪರ್ಧಿಗಳಿಗೆ ಶಾಕ್ ಮೇಲೆ ಶಾಕ್ ಸಿಗುತ್ತಾ ಇರುತ್ತದೆ. ಇದರ ಜೊತೆಗೆ ಸರ್​ಪ್ರೈಸ್ ಕೂಡ ಸಿಗುತ್ತದೆ. ಈ ಬಾರಿ ಸ್ಪರ್ಧಿಗಳಿಗೆ ಸಿಕ್ಕ ಸರ್​ಪ್ರೈಸ್ ಸ್ವಲ್ಪ ದೊಡ್ಡದೇ ಇತ್ತು. ಸುದೀಪ್ ಅವರು ಪ್ರತೀ ಸೀಸನ್​ನಲ್ಲಿ ಸ್ಪರ್ಧಿಗಳಿಗೆ ಅಡುಗೆ ಮಾಡಿ ಕಳುಹಿಸುತ್ತಾರೆ. ಈ ಬಾರಿಯೂ ಹಾಗೆಯೇ ಆಗಿದೆ. ಸುದೀಪ್ ಅವರ ಕಡೆಯಿಂದ ಊಟ ಸಿಕ್ಕಿದೆ. ಇದನ್ನು ತಿಂದು ಮನೆ ಮಂದಿ ಸಖತ್ ಖುಷಿಪಟ್ಟಿದ್ದಾರೆ. ಇದರ ಮಧ್ಯೆ ವರ್ತೂರು ಸಂತೋಷ್ ಬೇಸರ ಮಾಡಿಕೊಂಡರು. ಅವರನ್ನು ಚಿಯರ್​ಅಪ್ ಮಾಡಿದ್ದಾರೆ ಸುದೀಪ್.

ಎಲ್ಲರ ಹೆಸರನ್ನೂ ಕರೆದು ಸುದೀಪ್ ಮಾತನಾಡಿದರು. ಸುದೀಪ್ ಎಲ್ಲವನ್ನೂ ಹೇಳಿದ ಬಳಿಕ ವರ್ತೂರು ಸಂತೋಷ್​​ಗೆ ತಮ್ಮ ಹೆಸರನ್ನು ಕರೆದೇ ಇಲ್ಲ ಎನ್ನುವ ಅನುಮಾನ ಮೂಡಿತು. ‘ನನ್ನ ಹೆಸರನ್ನು ಸುದೀಪ್ ಕರೆದೇ ಇಲ್ಲ’ ಎಂದು ಬೇಸರ ಮಾಡಿಕೊಂಡರು. ‘ವರ್ತೂರು ಅವರೇ’ ಎಂದರು ಸುದೀಪ್. ‘ನಾವು ರೈತರನ್ನು ಮರೆಯಲ್ಲ. ಮುದ್ದೆ ಕಳುಹಿಸಿಲ್ಲ ಎಂದು ಬೇಸರಗೊಳ್ಳಬೇಡಿ. ನೀವು ಮುದ್ದೆ ತಿನ್ನೋ ರೈತ ಅಲ್ಲ ಅನ್ನೋದು ನನಗೆ ಗೊತ್ತು’ ಎಂದರು ಸುದೀಪ್. ಇದನ್ನು ಕೇಳಿ ಮನೆ ಮಂದಿ ನಕ್ಕರು.

ಇದನ್ನೂ ಓದಿ: ಬಿಗ್ ಬಾಸ್​ನಲ್ಲಿ ಸಂಪೂರ್ಣ ಸೈಲೆಂಟ್ ಆದ ಡ್ರೋನ್ ಪ್ರತಾಪ್; ಇದು ಸುದೀಪ್​ ಪಾಠದ ಎಫೆಕ್ಟ್​

ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಈ ಎಪಿಸೋಡ್ ಶುಕ್ರವಾರ (ಡಿಸೆಂಬರ್ 15) ಪ್ರಸಾರ ಕಂಡಿದೆ. ಜಿಯೋ ಸಿನಿಮಾದಲ್ಲಿ ಈ ಎಪಿಸೋಡ್​ನ ಯಾವಾಗ ಬೇಕಾದರೂ ನೋಡಬಹುದು. ಜೊತೆ 24 ಗಂಟೆ ಲೈವ್ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ