AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾವು ರೈತರ ಮರೆಯಲ್ಲ, ವರ್ತೂರು ಮುದ್ದೆ ತಿನ್ನೋ ರೈತ ಅಲ್ಲ ಅಂತ ಗೊತ್ತು’; ಸುದೀಪ್

ಸುದೀಪ್ ಅವರ ಕಡೆಯಿಂದ ಊಟ ಸಿಕ್ಕಿದೆ. ಇದನ್ನು ತಿಂದು ಮನೆ ಮಂದಿ ಸಖತ್ ಖುಷಿಪಟ್ಟಿದ್ದಾರೆ. ಇದರ ಮಧ್ಯೆ ವರ್ತೂರು ಸಂತೋಷ್ ಬೇಸರ ಮಾಡಿಕೊಂಡರು. ಅವರನ್ನು ಚಿಯರ್​ಅಪ್ ಮಾಡಿದ್ದಾರೆ ಸುದೀಪ್.

‘ನಾವು ರೈತರ ಮರೆಯಲ್ಲ, ವರ್ತೂರು ಮುದ್ದೆ ತಿನ್ನೋ ರೈತ ಅಲ್ಲ ಅಂತ ಗೊತ್ತು’; ಸುದೀಪ್
ಸುದೀಪ್​-ಸಂತೋಷ್
ರಾಜೇಶ್ ದುಗ್ಗುಮನೆ
|

Updated on: Dec 16, 2023 | 7:08 AM

Share

ಬಿಗ್ ಬಾಸ್ (Bigg Boss) ಮನೆಯಲ್ಲಿ ಸ್ಪರ್ಧಿಗಳಿಗೆ ಸಖತ್ ಸರ್​ಪ್ರೈಸ್ ಇತ್ತು. ಸ್ಪರ್ಧಿಗಳು ಹಸಿದುಕೊಂಡಿದ್ದಾಗ ಸುದೀಪ್ ಕಡೆಯಿಂದ ಲೆಟರ್ ಬಂತು. ಆ ಬಳಿಕ ಊಟ ಕೂಡ ಬಂತು. ಇದನ್ನು ಮನೆಯವರು ನೋಡಿ ಸಖತ್​ ಸರ್​ಪ್ರೈಸ್​ಗೆ ಒಳಗಾದರು. ಆ ಬಳಿಕ ಸುದೀಪ್ (Sudeep) ಅವರು ಮನೆಯವರ ಜೊತೆ ಮಾತನಾಡಿದ್ದಾರೆ. ಈ ಎಪಿಸೋಡ್ ಎಲ್ಲರ ಗಮನ ಸೆಳೆದಿದೆ. ಸುದೀಪ್ ಮಾಡಿದ ಅಡುಗೆ ತಿಂದು ಮನೆ ಮಂದಿ ಒಮ್ಮೆ ಭಾವುಕರಾಗಿದ್ದಾರೆ. ವರ್ತೂರು ಸಂತೋಷ್​ ಅವರ ಕಾಲನ್ನು ಸುದೀಪ್ ಎಳೆದಿದ್ದಾರೆ.

ಬಿಗ್ ಬಾಸ್​ನಲ್ಲಿ ಸ್ಪರ್ಧಿಗಳಿಗೆ ಶಾಕ್ ಮೇಲೆ ಶಾಕ್ ಸಿಗುತ್ತಾ ಇರುತ್ತದೆ. ಇದರ ಜೊತೆಗೆ ಸರ್​ಪ್ರೈಸ್ ಕೂಡ ಸಿಗುತ್ತದೆ. ಈ ಬಾರಿ ಸ್ಪರ್ಧಿಗಳಿಗೆ ಸಿಕ್ಕ ಸರ್​ಪ್ರೈಸ್ ಸ್ವಲ್ಪ ದೊಡ್ಡದೇ ಇತ್ತು. ಸುದೀಪ್ ಅವರು ಪ್ರತೀ ಸೀಸನ್​ನಲ್ಲಿ ಸ್ಪರ್ಧಿಗಳಿಗೆ ಅಡುಗೆ ಮಾಡಿ ಕಳುಹಿಸುತ್ತಾರೆ. ಈ ಬಾರಿಯೂ ಹಾಗೆಯೇ ಆಗಿದೆ. ಸುದೀಪ್ ಅವರ ಕಡೆಯಿಂದ ಊಟ ಸಿಕ್ಕಿದೆ. ಇದನ್ನು ತಿಂದು ಮನೆ ಮಂದಿ ಸಖತ್ ಖುಷಿಪಟ್ಟಿದ್ದಾರೆ. ಇದರ ಮಧ್ಯೆ ವರ್ತೂರು ಸಂತೋಷ್ ಬೇಸರ ಮಾಡಿಕೊಂಡರು. ಅವರನ್ನು ಚಿಯರ್​ಅಪ್ ಮಾಡಿದ್ದಾರೆ ಸುದೀಪ್.

ಎಲ್ಲರ ಹೆಸರನ್ನೂ ಕರೆದು ಸುದೀಪ್ ಮಾತನಾಡಿದರು. ಸುದೀಪ್ ಎಲ್ಲವನ್ನೂ ಹೇಳಿದ ಬಳಿಕ ವರ್ತೂರು ಸಂತೋಷ್​​ಗೆ ತಮ್ಮ ಹೆಸರನ್ನು ಕರೆದೇ ಇಲ್ಲ ಎನ್ನುವ ಅನುಮಾನ ಮೂಡಿತು. ‘ನನ್ನ ಹೆಸರನ್ನು ಸುದೀಪ್ ಕರೆದೇ ಇಲ್ಲ’ ಎಂದು ಬೇಸರ ಮಾಡಿಕೊಂಡರು. ‘ವರ್ತೂರು ಅವರೇ’ ಎಂದರು ಸುದೀಪ್. ‘ನಾವು ರೈತರನ್ನು ಮರೆಯಲ್ಲ. ಮುದ್ದೆ ಕಳುಹಿಸಿಲ್ಲ ಎಂದು ಬೇಸರಗೊಳ್ಳಬೇಡಿ. ನೀವು ಮುದ್ದೆ ತಿನ್ನೋ ರೈತ ಅಲ್ಲ ಅನ್ನೋದು ನನಗೆ ಗೊತ್ತು’ ಎಂದರು ಸುದೀಪ್. ಇದನ್ನು ಕೇಳಿ ಮನೆ ಮಂದಿ ನಕ್ಕರು.

ಇದನ್ನೂ ಓದಿ: ಬಿಗ್ ಬಾಸ್​ನಲ್ಲಿ ಸಂಪೂರ್ಣ ಸೈಲೆಂಟ್ ಆದ ಡ್ರೋನ್ ಪ್ರತಾಪ್; ಇದು ಸುದೀಪ್​ ಪಾಠದ ಎಫೆಕ್ಟ್​

ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಈ ಎಪಿಸೋಡ್ ಶುಕ್ರವಾರ (ಡಿಸೆಂಬರ್ 15) ಪ್ರಸಾರ ಕಂಡಿದೆ. ಜಿಯೋ ಸಿನಿಮಾದಲ್ಲಿ ಈ ಎಪಿಸೋಡ್​ನ ಯಾವಾಗ ಬೇಕಾದರೂ ನೋಡಬಹುದು. ಜೊತೆ 24 ಗಂಟೆ ಲೈವ್ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಬಾಂಗ್ಲಾ ಅಕ್ರಮ ವಲಸಿಗರ ಕಾಟ; ಅರೆಸ್ಟ್ ಆದವ್ರ ಹಿನ್ನೆಲೆ ಏನು?
ಬಾಂಗ್ಲಾ ಅಕ್ರಮ ವಲಸಿಗರ ಕಾಟ; ಅರೆಸ್ಟ್ ಆದವ್ರ ಹಿನ್ನೆಲೆ ಏನು?
ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ
ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!
ಹಬ್ಬದ ಸೀಸನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ಆಘಾತ
ಹಬ್ಬದ ಸೀಸನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ಆಘಾತ
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
‘ಹಳ್ಳಿ ಪವರ್ ರಿಯಾಲಿಟಿ ಶೋ’: ವಾಡೆ ಮನೆಗೆ ಗ್ರಹಪ್ರವೇಶ ಮಾಡಿದ ಸ್ಪರ್ಧಿಗಳು
‘ಹಳ್ಳಿ ಪವರ್ ರಿಯಾಲಿಟಿ ಶೋ’: ವಾಡೆ ಮನೆಗೆ ಗ್ರಹಪ್ರವೇಶ ಮಾಡಿದ ಸ್ಪರ್ಧಿಗಳು
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು