AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಸಿದಿದ್ದ ಬಿಗ್​ಬಾಸ್ ಸ್ಪರ್ಧಿಗಳಿಗೆ ಸಖತ್ ಸರ್ಪ್ರೈಸ್ ಕೊಟ್ಟ ಕಿಚ್ಚ ಸುದೀಪ್

Bigg Boss: ಡ್ರೋನ್ ಪ್ರತಾಪ್ ಮುದ್ದೆ ಮಾಡಿದ್ದರಿಂದ ಮನೆಯ ಸದಸ್ಯರೆಲ್ಲ ಹಸಿದು ಕಂಗಾಲಾಗಿದ್ದರು, ಆಗ ಸುದೀಪ್ ಸಖತ್ ಸರ್ಪ್ರೈಸ್ ಒಂದನ್ನು ನೀಡಿದರು.

ಹಸಿದಿದ್ದ ಬಿಗ್​ಬಾಸ್ ಸ್ಪರ್ಧಿಗಳಿಗೆ ಸಖತ್ ಸರ್ಪ್ರೈಸ್ ಕೊಟ್ಟ ಕಿಚ್ಚ ಸುದೀಪ್
ಕಿಚ್ಚ ಸುದೀಪ್
Follow us
ಮಂಜುನಾಥ ಸಿ.
|

Updated on:Dec 15, 2023 | 11:17 PM

ಟಾಸ್ಕ್​ಗಳ ಶ್ರಮ, ಮನೆಯೊಳಗೆ ನಡೆಯುವ ಜಗಳಗಳಿಂದ ಮಾನಸಿಕವಾಗಿ ಜರ್ಜರಿತವಾಗುವ ಬಿಗ್​ಬಾಸ್ (Bigg Boss) ಮನೆಯ ಸದಸ್ಯರಿಗೆ ಆಗಾಗ್ಗೆ ಉತ್ಸಾಹ ತುಂಬಲು, ಭರವಸೆ ಮೂಡಿಸಲು ಆಗೊಮ್ಮೆ ಈಗೊಮ್ಮೆ ಸರ್ಪ್ರೈಸ್​ಗಳನ್ನು ಬಿಗ್​ಬಾಸ್ ನೀಡುತ್ತಿರುತ್ತಾರೆ. ಕೆಲವೊಮ್ಮೆ ಸೆಲೆಬ್ರಿಟಿಗಳು ಮನೆಗೆ ಬಂದು ಸದಸ್ಯರೊಟ್ಟಿಗೆ ಸಮಯ ಕಳೆಯುತ್ತಾರೆ, ಇನ್ನು ಕೆಲವು ಬಾರಿ ಮನೆಯ ಸದಸ್ಯರ ಸಂದೇಶಗಳು ಬರುತ್ತವೆ, ಮನೆಯ ಸದಸ್ಯರೇ ಬಂದು ಬಿಡುತ್ತಾರೆ, ಆದರೆ ಶುಕ್ರವಾರ ಅದ್ಭುತ ಸರ್ಪ್ರೈಸ್ ಅನ್ನೇ ಸುದೀಪ್ ನೀಡಿದ್ದಾರೆ. ಸುದೀಪ್ (Sudeep) ಕೊಟ್ಟ ಸರ್ಪ್ರೈಸ್​ಗೆ ಮನೆ ಮಂದಿ ಥ್ರಿಲ್ ಆಗಿದ್ದಾರೆ.

ಆಗಿದ್ದಿಷ್ಟು, ಈ ಬಾರಿಯೂ ಮನೆಯ ಸದಸ್ಯರು ಲಕ್ಷುರಿ ಬಜೆಟ್ ಗಳಿಸುವಲ್ಲಿ ವಿಫಲರಾದರು. ಹಾಗಾಗಿ ಕಡಿಮೆ ವಸ್ತುಗಳನ್ನೇ ಬಳಸಿ ಅಡುಗೆ ಮಾಡಬೇಕಿತ್ತು, ಅದು ಸಾಕಾಗುತ್ತಿರಲಿಲ್ಲ. ಆಗ ಡ್ರೋನ್ ಪ್ರತಾಪ್ ಹಾಗೂ ಇನ್ನು ಕೆಲವರು ರಾಗಿ ಹಿಟ್ಟಿದೆ ಮುದ್ದೆ ಮಾಡೋಣ ಎಂದರು. ಆದರೆ ಅದು ಅಂದಿನ ವಾರದ ಬಳಕೆಯ ಪಟ್ಟಿಯಲ್ಲಿರಲಿಲ್ಲ. ರಾಗಿ ಮುದ್ದೆ ಮಾಡುವ ಯೋಜನೆಗೆ ವಿನಯ್, ಸಿರಿ, ನಮ್ರತಾ ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದರು. ಆದರೂ ತುಕಾಲಿ ಸಂತು, ಕಾರ್ತಿಕ್, ಮೈಖಲ್ ಬೆಂಬಲದಿಂದ ರಾಗಿ ಮುದ್ದೆ ಮಾಡಿಯೇ ಬಿಟ್ಟರು ಡ್ರೋನ್ ಪ್ರತಾಪ್.

ಆದರೆ ಆ ಬಳಿಕ ಬಿಗ್​ಬಾಸ್, ಗ್ಯಾಸ್ ಒಲೆಯನ್ನು ಆಫ್ ಮಾಡಿದರು. ಆಗ ಶುರುವಾಯ್ತು ಮನೆಯಲ್ಲಿ ಗಲಾಟೆ. ವಿನಯ್, ಡ್ರೋನ್ ಪ್ರತಾಪ್ ಮೇಲೆ ಉಗ್ರಾವತಾರ ತೋರಿದರು. ನನಗೆ ಊಟ ಬೇಕು ಎಂದು ಪಟ್ಟು ಹಿಡಿದರು. ಹಾಲು, ಹಣ್ಣು ಕೊಡುತ್ತೇನೆ ಎಂದರೆ ಅದಕ್ಕೂ ವಿನಯ್ ಒಪ್ಪಲಿಲ್ಲ. ಡ್ರೋನ್ ಪ್ರತಾಪ್ ಪರವಾಗಿ ಮುದ್ದೆ ತಿಂದಿದ್ದ ಕಾರ್ತಿಕ್, ತುಕಾಲಿ, ವರ್ತೂರು ಅವರುಗಳು ನಿಂತರಾದರೂ, ವಿನಯ್​ ಆಗಾಗ್ಗೆ ಪ್ರತಾಪ್​ಗೆ ಬೈಯ್ಯುತ್ತಲೇ ಇದ್ದರು. ಸಿರಿ, ನಮ್ರತಾ, ಇನ್ನಿತರರಿಗೂ ಹೊಟ್ಟೆ ಹಸಿದು, ಆಗಾಗ್ಗೆ ಪ್ರತಾಪ್​ ಮಾಡಿದ ತಪ್ಪನ್ನು ಚುಚ್ಚಿ ಆಡುತ್ತಲೇ ಇದ್ದರು.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ನಗು, ಹಾಡು-ನೃತ್ಯ: ಸ್ಟಾರ್​ ವಿದ್ಯಾರ್ಥಿಗಳಾಗಿದ್ಯಾರು?

ಮನೆಯವರೆಲ್ಲ ಹಸಿದು, ಊಟಕ್ಕಾಗಿ ಕಾಯುತ್ತಿರುವಾಗ, ಮನೆಯ ಸದಸ್ಯರಿಗೆ ಸಂದೇಶಗಳು ಬರಲು ಆರಂಭವಾದವು. ಆ ಸಂದೇಶವನ್ನು ಸ್ವತಃ ಕಿಚ್ಚ ಸುದೀಪ್ ಕಳಿಸಿದ್ದರು. ಎಲ್ಲರಿಗೂ ಅವರವರ ಆಟದ ವೈಖರಿಯನ್ನು ಆಧರಿಸಿ ಸಂದೇಶಗಳನ್ನು ಕಿಚ್ಚ ಸುದೀಪ್ ಬರೆದು ಕಳಿಸಿದ್ದರು. ಸುದೀಪ್​ರಿಂದ ಬಂದ ಸಂದೇಶಗಳು, ಹಸಿದಿದ್ದ ಮನೆಯ ಸದಸ್ಯರಿಗೆ ತುಸು ನೆಮ್ಮದಿ ನೀಡಿತು.

ಬಳಿಕ ಎಲ್ಲರನ್ನೂ ಲಿವಿಂಗ್ ಏರಿಯಾದಲ್ಲಿನ ಸೋಫಾದಲ್ಲಿ ಕೂರಿಸಲಾಯ್ತು. ಜೈಲಿನಲ್ಲಿದ್ದ ಪವಿಯನ್ನೂ ರಿಲೀಸ್ ಮಾಡಲು ಸೂಚನೆ ಬಂತು. ಆಗ ಅಲ್ಲಿದ್ದ ಟಿವಿಯಲ್ಲಿ ಸುದೀಪ್ ಬಂದರು ಸಾಮಾನ್ಯವಾಗಿ ಅಲ್ಲ ಬದಲಿಗೆ ಶೆಫ್ ಆಗಿ! ಶೆಫ್​ ರೀತಿ ಏಪ್ರನ್ ತೊಟ್ಟು ಬಂದ ಸುದೀಪ್, ಮನೆಯವರಿಗಾಗಿ ತಾವು ಮಾಡಿದ ಅಡುಗೆಯ ವಿಡಿಯೋವನ್ನು ಟಿವಿಯಲ್ಲಿ ಪ್ರದರ್ಶಿಸಲಾಯ್ತು. ಸುದೀಪ್ ತಮ್ಮ ಕೈಯ್ಯಾರೆ ಊಟದ ಡಬ್ಬಿಗಳನ್ನು ಪ್ಯಾಕ್ ಮಾಡಿ, ಸಂದೇಶಗಳನ್ನು ಬರೆದು ಮನೆಯವರಿಗಾಗಿ ಕಳಿಸಿದರು.

ಮನೆಯ ಸದಸ್ಯರಿಗೆ ಅವರ ಆಯ್ಕೆಯ ಅನುಸಾರ ಊಟವನ್ನು ಸುದೀಪ್ ಕಳಿಸಿದ್ದರು. ಸಂಗೀತಾ ಅಂತೂ ಊಟ ಮಾಡುತ್ತಾ ಕಣ್ಣೀರು ಹಾಕಿದರು. ಹಸಿದು ಕಂಗಾಲಾಗಿದ್ದ ಮನೆಯ ಸದಸ್ಯರು ನಗು-ನಗುತ್ತಾ ಊಟ ಮಾಡಿದರು. ಮತ್ತೊಂದು ವಿಶೇಷವೆಂದರೆ, ಎಲ್ಲರೂ ಊಟ ಮಾಡುವ ಸಮಯದಲ್ಲಿ ಸ್ವತಃ ಸುದೀಪ್, ಲೈವ್ ಆಗಿ ಮಾತನಾಡಿದ್ದು, ಮನೆಯ ಸದಸ್ಯರಿಗೆ ಇನ್ನಷ್ಟು ಖುಷಿ ಕೊಟ್ಟಿತು. ಸುದೀಪ್ ಊಟದ ಮೇಲೆ ಬರೆದು ಕಳಿಸಿದ್ದ ಸಂದೇಶಗಳನ್ನು ಎಲ್ಲರೂ ಓದಿ-ಓದಿ ಖುಷಿ ಪಟ್ಟರು. ನಾಳೆ ಅಂದರೆ ಶನಿವಾರ ಸುದೀಪ್ ಅವರು ಮನೆಯ ಸದಸ್ಯರನ್ನು ಎದುರುಗೊಳ್ಳಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:16 pm, Fri, 15 December 23

ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್