AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಮನೆಯಲ್ಲಿ ನಗು, ಹಾಡು-ನೃತ್ಯ: ಸ್ಟಾರ್​ ವಿದ್ಯಾರ್ಥಿಗಳಾಗಿದ್ಯಾರು?

Bigg Boss: ಬಿಗ್​ಬಾಸ್ ಮನೆಯಲ್ಲಿ ಇಂದು ಯಾವ-ಯಾವ ತರಗತಿ ನಡೆಯಿತು? ವಿನಯ್​ಗೆ ಲವ್ ಯೂ ಎಂದು ಸ್ಟಾರ್ ನೀಡಿದರು ಸಂಗೀತಾ? ಕಾರಣವೇನು?

ಬಿಗ್​ಬಾಸ್ ಮನೆಯಲ್ಲಿ ನಗು, ಹಾಡು-ನೃತ್ಯ: ಸ್ಟಾರ್​ ವಿದ್ಯಾರ್ಥಿಗಳಾಗಿದ್ಯಾರು?
ಬಿಗ್​ಬಾಸ್
ಮಂಜುನಾಥ ಸಿ.
|

Updated on: Dec 13, 2023 | 11:18 PM

Share

ಬಿಗ್​ಬಾಸ್ (Bigg Boss) ಕನ್ನಡ ಸೀಸನ್ 10ರಲ್ಲಿ ಕಳೆದ ವಾರ ನಡೆದಿದ್ದ ಜಗಳ-ಕಿತ್ತಾಟಕ್ಕೆ ಈ ವಾರ ಬ್ರೇಕ್ ದೊರೆತಿದೆ. ವಾರದ ಆರಂಭದಿಂದಲೇ ತಮಾಷೆಯ ಮತ್ತು ಕ್ರಿಯಾಶೀಲತೆಗೆ ಅವಕಾಶವಿರುವ ಟಾಸ್ಕ್​ಗಳನ್ನು ಬಿಗ್​ಬಾಸ್ ನೀಡಿದ್ದಾರೆ. ಟಾಸ್ಕ್​ಗಳನ್ನು ಆಡುತ್ತಾ ಮನೆಯ ಸ್ಪರ್ಧಿಗಳು ಸಖತ್ ಎಂಜಾಯ್ ಮಾಡಿದ್ದಾರೆ.

ಶಾಲೆ ಮಕ್ಕಳಂತೆ ವೇಷ ಧರಿಸಿ ಶಾಲೆಯ ವಾತಾವರಣ ಮರುಸೃಷ್ಟಿ ಮಾಡುವ ಟಾಸ್ಕ್ ಅನ್ನು ಬಿಗ್​ಬಾಸ್ ಈ ವಾರ ನೀಡಿದ್ದಾರೆ. ಮಂಗಳವಾರದ ಎಪಿಸೋಡ್​ನಲ್ಲಿ ಡ್ರೋನ್ ಪ್ರತಾಪ್, ಮೈಖಲ್, ಪವಿ, ತನಿಷಾ ಅವರುಗಳು ಶಿಕ್ಷಕರಾಗಿದ್ದರು. ಚೆನ್ನಾಗಿ ಪಾಠ ಕೇಳಿ, ತರಗತಿಯಲ್ಲಿ ಸಕ್ರಿಯವಾಗಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಶಿಕ್ಷಕರು ಸ್ಟಾರ್ ನೀಡಬೇಕಾಗಿದೆ. ಅಂತೆಯೇ ಚೆನ್ನಾಗಿ ಪಾಠ ಮಾಡಿದ ಶಿಕ್ಷಕರಿಗೆ, ವಿದ್ಯಾರ್ಥಿಗಳು ಶಹಭಾಸ್ ಗಿರಿ ನೀಡಬೇಕಿದೆ.

ನಿನ್ನೆ ತರಗತಿಯಲ್ಲಿ ವಿದ್ಯಾರ್ಥಿಗಳು ಸಖತ್ ತರ್ಲೆ, ತಮಾಷೆ ಮಾಡಿದ್ದರು. ಆದರೆ ಇಂದಿನ ತರಗತಿಗಳು ನಿನ್ನೆಗೆ ಹೋಲಿಸಿದರೆ ತುಸು ಫಲದಾಯಕವಾಗಿದ್ದವು. ಇಂದಿನ ತರಗತಿಗಳಲ್ಲಿ ತುಕಾಲಿ ಸಂತು ಇಂಗ್ಲೀಷ್ ಮೇಷ್ಟ್ರಾಗಿದ್ದರು. ಅವರ ಇಂಗ್ಲೀಷ್​ಗೆ ವಿದ್ಯಾರ್ಥಿಗಳು ನಕ್ಕು ಸುಸ್ತಾದರು. ಕನ್ನಡ ಸಿನಿಮಾ ಡೈಲಾಗ್​ಗಳನ್ನು ಇಂಗ್ಲೀಷ್​ನಲ್ಲಿ ಹೇಳಿಸಿದ್ದು ಸಖತ್ ಆಗಿತ್ತು. ವಿದ್ಯಾರ್ಥಿಗಳು ಮೇಷ್ಟ್ರನ್ನು ಸಖತ್ ಗೋಳು ಹೊಯ್ದುಕೊಂಡರು.

ಇದನ್ನೂ ಓದಿ:ಬಿಗ್​ಬಾಸ್ ಪ್ರಾಥಮಿಕ ಪಾಠಶಾಲೆ ನೋಡಿ ಹೇಗಿದೆ: ಇಲ್ಲಿವೆ ಚಿತ್ರಗಳು

ಬಳಿಕ ಬಂದ ನಮ್ರತಾ ಟೀಚರ್, ವಿದ್ಯಾರ್ಥಿಗಳಿಗೆ ಡ್ಯಾನ್ಸ್ ಮತ್ತು ನಾಟಕ ಹೇಳಿಕೊಟ್ಟರು. ಒಳ್ಳೆಯ ಡ್ಯಾನ್ಸರ್ ಆದ ನಮ್ರತಾ ಎಲ್ಲರಿಂದಲೂ ಸಖತ್ ಆಗಿ ಡ್ಯಾನ್ಸ್ ಮಾಡಿಸಿದರು. ವರ್ತೂರು, ಪ್ರತಾಪ್​ರು ನೃತ್ಯ ಮಾಡಿದ್ದು ಮಜವಾಗಿತ್ತು. ಸ್ಟಾರ್ ಸಿಕ್ಕಿದ್ದು ಪ್ರತಾಪ್​ಗೆ.

ಬಳಿಕ ಬಂದ ಸಂಗೀತಾ, ಅಧ್ಯಾತ್ಮದ ತರಗತಿ ತೆಗೆದುಕೊಂಡರು. ಅವರ ತರಗತಿಯನ್ನು ತುಸು ಗಂಭೀರವಾಗಿ ವಿದ್ಯಾರ್ಥಿಗಳು ಕೇಳಿದರು. ಅವರು ತೋರಿಸಿದ ನೀರಿನ ಪ್ರಾತ್ಯಕ್ಷಿಕೆ ಚೆನ್ನಾಗಿತ್ತು, ನಮ್ಮಲ್ಲಿರುವ ಋಣಾತ್ಮಕ ಆಲೋಚನೆಗಳನ್ನು ದೂರ ತಳ್ಳುವ ಏಕೈಕ ಮಾರ್ಗ ಧನಾತ್ಮಕ ಆಲೋಚನೆಗಳು ಎಂದರು. ಸಂಗೀತಾ ಮಾಡಿಸಿದ ಟಾಸ್ಕ್​ನಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡರು ಆ ಸಮಯದಲ್ಲಿ ಪವಿ ತಮ್ಮ ವೈಯಕ್ತಿಕ ವಿಷಯ ನೆನದು ಕಣ್ಣೀರು ಹಾಕಿದರು. ವಿನಯ್​ಗೆ ಸ್ಟಾರ್ ನೀಡಿದ ಸಂಗೀತಾ, ವಿನಯ್ ಸೇರಿದಂತೆ ಎಲ್ಲರಿಗೂ ಲವ್​ ಯೂ ಹೇಳಿದರು. ಎಲ್ಲರೂ ಪರಸ್ಪರರನ್ನು ಪ್ರೀತಿಸುವಂತೆ, ಗೌರವಿಸುವಂತೆ ಹೇಳಿದರು.

ಬಳಿಕ ಬಂದ ಸಿರಿ ಅವರು ಕ್ರಾಫ್ಟಿಂಗ್ ಮಾಡಿಸಿದರು. ವಿದ್ಯಾರ್ಥಿಗಳಿಂದ ಹೃದಯ ಮಾಡಿಸಿದರು. ಬೋಟ್ ಮಾಡಿಸಿ ಅದನ್ನು ಸ್ವಿಮ್ಮಿಂಗ್ ಪೂಲ್​ನಲ್ಲಿ ತೇಲಿ ಬಿಟ್ಟರು. ಒಟ್ಟಾರೆ ಮನೆಯ ಸ್ಪರ್ಧಿಗಳೆಲ್ಲ ಟಾಸ್ಕ್​ ಅನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಟಾಸ್ಕ್ ಮುಗಿದ ಬಳಿಕ, ಮೈಖಲ್, ಬಿಗ್​ಬಾಸ್ ಇನ್ನು ಮುಂದೆ ಇಂಥಹದೇ ಟಾಸ್ಕ್​ಗಳನ್ನು ನೀಡಿ ಎಂದು ಕೇಳಿಕೊಂಡರು ಸಹ. ಎಪಿಸೋಡ್​ನ ಅಂತ್ಯಕ್ಕೆ ಕಡಿಮೆ ದೂರು ಪಡೆದ ಶಿಕ್ಷಕರು, ಸಿರಿ ಮತ್ತು ನಮ್ರತಾ, ಹೆಚ್ಚು ಸ್ಟಾರ್ ಪಡೆದ ವಿದ್ಯಾರ್ಥಿಗಳು ಡ್ರೋನ್ ಪ್ರತಾಪ್, ಪವಿ ಮತ್ತು ವಿನಯ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!