AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಜೆ 5 ಘಂಟೆಗೆ ಇಂದ್ರಜಿತ್ ಲಂಕೇಶ್​ ಮತ್ತೊಂದು ಸುದ್ದಿಗೋಷ್ಠಿ; ಈ ಮಧ್ಯೆ ದರ್ಶನ್ ಪ್ರತಿಕ್ರಿಯೆ ಸಾಧ್ಯತೆ

Indrajit Lankesh: ಇಂದು ಸಂಜೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸುದ್ದಿಗೋಷ್ಠಿಯನ್ನು ನಡೆಸುವುದಾಗಿ ತಿಳಿಸಿದ್ದಾರೆ. ಇದರ ನಡುವೆ ನಟ ದರ್ಶನ್ ಮೈಸೂರಿನ ಘಟನೆಯ ಕುರಿತು ಸ್ಪಷ್ಟನೆ ನೀಡುವ ಸಾಧ್ಯತೆ ಇದೆ.

ಸಂಜೆ 5 ಘಂಟೆಗೆ ಇಂದ್ರಜಿತ್ ಲಂಕೇಶ್​ ಮತ್ತೊಂದು ಸುದ್ದಿಗೋಷ್ಠಿ; ಈ ಮಧ್ಯೆ ದರ್ಶನ್ ಪ್ರತಿಕ್ರಿಯೆ ಸಾಧ್ಯತೆ
ಇಂದ್ರಜಿತ್ ಲಂಕೇಶ್
TV9 Web
| Updated By: shivaprasad.hs|

Updated on:Jul 16, 2021 | 11:54 AM

Share

ಬೆಂಗಳೂರು: ಸಂದೇಶ್ ಪ್ರಿನ್ಸ್ ಹೋಟೆಲ್​ನ ಮಾಲೀಕನ ಪುತ್ರ ಮಾಧ್ಯಮಕ್ಕೆ ಸ್ಪಷ್ಟನೆ ಕೊಟ್ಟ ಬೆನ್ನಲ್ಲೇ ಇಂದ್ರಜಿತ್ ಲಂಕೇಶ್ ಇಂದು ಸಂಜೆ ಸುದ್ದಿಗೋಷ್ಠಿ ನಡೆಸುವುದಾಗಿ ತಿಳಿಸಿದ್ದಾರೆ. ಇದರಿಂದಾಗಿ ಮೈಸೂರಿನ ಹೋಟೆಲ್ ಒಂದರಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅನೇಕ ಮಾಹಿತಿ ಸ್ಫೋಟವಾಗುವ ಸಾಧ್ಯತೆ ಇದೆ. ಈ ಮೊದಲು ಹೇಳಿಕೆ ನೀಡಿದ್ದ ಸಂದೇಶ್ ದಿ ಪ್ರಿನ್ಸ್ ಹೋಟೆಲ್ ಮಾಲೀಕರ ಪುತ್ರ , ದರ್ಶನ್ ಅವರು ಬೈದಿರುವುದು ನಿಜ. ಆದರೆ ಅದೇನು ದೊಡ್ಡ ವಿಷಯವಲ್ಲ ಎಂದಿದ್ದರು. ಹಾಗೆಯೇ ಹೋಟೆಲ್​ನ ಸಿಸಿಟಿವಿಯ ದೃಶ್ಯಾವಳಿಗಳು ಹತ್ತು ದಿನಗಳ ನಂತರ ಸಿಗುವುದಿಲ್ಲ ಎಂದಿದ್ದರು. 

ಈ ಮೊದಲು ಮಾತನಾಡಿದ್ದ ಇಂದ್ರಜಿತ್ ಲಂಕೇಶ್, ಪೊಲಿಸ್ ತನಿಖೆ ನಡೆಯಲಿ. ಅವರಿಗೆ ಸಾಕ್ಷ್ಯ ಲಭ್ಯವವಾಗದಿದ್ದಲ್ಲಿ ನಮ್ಮ ಬಳಿ ಇರುವ ಸಾಕ್ಷ್ಯ ನೀಡುತ್ತೇವೆ ಎಂದಿದ್ದರು. ಈಗ ಇಂದ್ರಜಿತ್ ಅವರು ಇಂದು ಸಂಜೆಯೇ ಪತ್ರಿಕಾಗೋಷ್ಠಿ ಕರೆದಿರುವುದರಿಂದ ದಾಖಲೆ ಬಿಡುಗಡೆ ಮಾಡುತ್ತಾರಾ ಎಂಬ ಕುತೂಹಲ ಮೂಡಿದೆ.

ಈ ನಡುವೆ ದರ್ಶನ್ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಹೇಳಿಕೆಗೆ ನಟ ದರ್ಶನ್ ಪ್ರತಿಕ್ರಿಯೆ ನೀಡುವ ಸಾಧ್ಯತೆ ಇದೆ. ಇಂದ್ರಜಿತ್ ಲಂಕೇಶ್ ಹಾಗೂ ಸಂದೇಶ್ ಹೋಟೆಲ್ ಮಾಲೀಕರ ಹೇಳಿಕೆಗೂ ಅಜಗಜಾಂತರ ವ್ಯತ್ಯಾಸ ಇರುವುದರಿಂದ ದರ್ಶನ್ ಹೇಳಿಕೆ ಕುತೂಹಲ ಕೆರಳಿಸಿದೆ. ಒಂದು ವೇಳೆ ಸಿಸಿಟಿವಿಯ ದೃಶ್ಯಾವಳಿ ಬಹಿರಂಗಗೊಂಡರೆ ಅಧಿಕೃತ ಮಾಹಿತಿ ದೊರೆಯುವ ಸಾಧ್ಯತೆ ಇದೆ.

ಸಂದೇಶ್ ದಿ ಪ್ರಿನ್ಸ್​ ಹೋಟೆಲ್ ಮಾಲಿಕರ ಪುತ್ರ ಹೇಳಿದ್ದೇನು?

ಹೋಟೆಲ್ ಸಿಬ್ಬಂದಿಗೆ ಬೈದಿರುವುದು ನಿಜ. ಆದರೆ ಹಲ್ಲೆ ನಡೆಸಿಲ್ಲ ಎಂದು ಸಂದೇಶ್ ತಿಳಿಸಿದ್ದಾರೆ. ಸದ್ಯ ಹೋಟೆಲ್​ಗಳೆಲ್ಲ ಮುಚ್ಚಿ ನಾವೇ ಸಂಕಷ್ಟದಲ್ಲಿದ್ದೇವೆ. ಹೋಟೆಲ್ ನಮ್ಮ ಹೊಟ್ಟೆಪಾಡು. ಇಲ್ಲಿ ಗ್ರಾಹಕರು ಏನೇ ಹೇಳಿದ್ರೂ ನಾವು ಕೊಡಬೇಕಾಗುತ್ತೆ. ಅವರು ಏನೇ ಬೈದರೂ ನಾವು ಬೈಸಿಕೊಳ್ಳಬೇಕಾಗುತ್ತದೆ. ದರ್ಶನ್ ನಮ್ಮ ಸಿಬ್ಬಂದಿ ಮೇಲೆ ಸ್ವಲ್ಪ ಬೈದಿದ್ದಾರೆ, ಆದರೆ ಹೊಡೆದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ನಮ್ಮ ಹೋಟೆಲ್ನಲ್ಲಿ ಇರುವುದೇ ತರಬೇತುದಾರರು. ಚೆನ್ನೈ, ಬಿಹಾರ, ಪಶ್ಚಿಮ ಬಂಗಾಳದಿಂದ ಬಂದವರಿದ್ದಾರೆ. ನಮ್ಮ ಹೋಟೆಲ್ನಲ್ಲಿ 10 ದಿನಗಳ ಫೂಟೇಜ್ ಇರುತ್ತದೆ. ಆಮೇಲೆ ಸಿಸಿ ಕ್ಯಾಮರಾದ ದೃಶ್ಯಗಳು ಡಿಲೀಟ್ ಆಗುತ್ತದೆ. ನಮಗೆ ಹೋಟೆಲ್ ಗ್ರಾಹಕರು, ಸಿಬ್ಬಂದಿ ಇಬ್ಬರೂ ಬೇಕು. ಅಂದಿನ ಘಟನೆಯಿಂದ ನಮಗೂ ಸ್ವಲ್ಪ ಸಮಸ್ಯೆಯಾಗಿದೆ ಎಂದು ಸಂದೇಶ್ ಹೇಳಿದ್ದಾರೆ.

ಇದನ್ನೂ ಓದಿ: ಇಂದ್ರಜಿತ್ ಲಂಕೇಶ್ ಮನವಿಗೆ ಸ್ಪಂದಿಸಿದ ಗೃಹ ಸಚಿವ ಬೊಮ್ಮಾಯಿ; ತನಿಖೆಗೆ ಸೂಚನೆ

ಇದನ್ನೂ ಓದಿ: ದರ್ಶನ್ ಹೋಟೆಲ್ ಸಿಬ್ಬಂದಿಗೆ ಬೈದಿರುವುದು ನಿಜ, ಹಲ್ಲೆ ನಡೆಸಿಲ್ಲ; ಸಂದೇಶ್ ಮಾಹಿತಿ

(Indrajit Lankesh will conduct press meet today evening meanwhile actor Darshan may give his statement)

Published On - 12:22 pm, Thu, 15 July 21

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ