AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪುನೀತ್​ ಇಲ್ಲದೇ ‘ಜೇಮ್ಸ್​’ ಶೂಟಿಂಗ್​ ಮಾಡೋದು ಕಷ್ಟ ಆಗ್ತಿದೆ’: ನಟ ಅವಿನಾಶ್​ ಭಾವುಕ ನುಡಿ

Puneeth Rajkumar: ‘ಪುನೀತ್​ ನೆನಪುಗಳು ಕಾಡುತ್ತವೆ. ಶೂಟಿಂಗ್​ ಮಾಡುವಾಗ ತುಂಬ ಬೇಜಾರಾಗುತ್ತದೆ. ಆದರೂ ಕೆಲಸ ಮುಗಿಸಲೇಬೇಕು’ ಎಂದು ಹಿರಿಯ ನಟ ಅವಿನಾಶ್​​ ಹೇಳಿದ್ದಾರೆ.

‘ಪುನೀತ್​ ಇಲ್ಲದೇ ‘ಜೇಮ್ಸ್​’ ಶೂಟಿಂಗ್​ ಮಾಡೋದು ಕಷ್ಟ ಆಗ್ತಿದೆ’: ನಟ ಅವಿನಾಶ್​ ಭಾವುಕ ನುಡಿ
ಪುನೀತ್​ ರಾಜ್​ಕುಮಾರ್​, ಅವಿನಾಶ್
TV9 Web
| Edited By: |

Updated on: Jan 06, 2022 | 9:36 AM

Share

ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ನಿಧನದಿಂದಾಗಿ ಕನ್ನಡ ಚಿತ್ರರಂಗಕ್ಕೆ ನಷ್ಟ ಆಗಿದೆ. ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದ ಅವರು ಎಲ್ಲ ಕೆಲಸಗಳನ್ನು ಅರ್ಧಕ್ಕೆ ಬಿಟ್ಟು ಇಹಲೋಕ ತ್ಯಜಿಸಿದರು. ಪುನೀತ್​ ನಟಿಸುತ್ತಿದ್ದ ‘ಜೇಮ್ಸ್​​’ (James Kannada Movie) ಸಿನಿಮಾದ ಮೇಲೆ ಅಭಿಮಾನಿಗಳು ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಆ ಚಿತ್ರದ ಶೂಟಿಂಗ್​ ಮುಗಿಯುವುದಕ್ಕೂ ಮುನ್ನವೇ ಅವರು ಕೊನೆಯುಸಿರು ಎಳೆದಿದ್ದು ಬೇಸರದ ಸಂಗತಿ. ಚೇತನ್​ ಕುಮಾರ್​ ನಿರ್ದೇಶನದ ಈ ಚಿತ್ರದಲ್ಲಿ ಹಿರಿಯ ನಟ ಅವಿನಾಶ್​ (Actor Avinash) ಕೂಡ ಅಭಿನಯಿಸುತ್ತಿದ್ದಾರೆ. ಪುನೀತ್​ ಇಲ್ಲ ಎಂಬ ನೋವಿನ ನಡುವೆಯೂ ಈ ಚಿತ್ರದ ಶೂಟಿಂಗ್​ ಪುನಾರಂಭ ಆಗಿದೆ. ಆ ಬಗ್ಗೆ ಅವಿನಾಶ್​ ಮಾತನಾಡಿದ್ದಾರೆ.

‘ತುಂಬ ಕಷ್ಟ ಆಗುತ್ತಿದೆ. ಅಪ್ಪು ಇಲ್ಲದೇ ಶೂಟಿಂಗ್​ ಮಾಡುವಾಗ ಬಹಳ ನೆನಪುಗಳು ಕಾಡುತ್ತವೆ. ಕೊನೆ ಬಾರಿ ಶೂಟಿಂಗ್​ ಮಾಡಿದಾಗ ರಾತ್ರಿಯೆಲ್ಲ ಜೊತೆಯಾಗಿ ಕಳೆದಿದ್ದೆವು. ಅವರು ದಿಢೀರ್​ ಅಂತ ಹೀಗೆ ಹೋಗಿಬಿಡುತ್ತಾರೆ ಎಂದು ಕನಸಿನಲ್ಲಿಯೂ ಯಾರೂ ಊಹಿಸಿರಲಿಲ್ಲ. ತುಂಬ ಬೇಜಾರಾಗುತ್ತದೆ. ಆದರೂ ಕೆಲಸ ಮುಗಿಸಲೇಬೇಕು. ಅದಕ್ಕಾಗಿ ಶೂಟಿಂಗ್​ ಮಾಡುತ್ತಿದ್ದೇವೆ’ ಎಂದಿದ್ದಾರೆ ಅವಿನಾಶ್​​.

‘ಜೇಮ್ಸ್​’ ಸಿನಿಮಾದಲ್ಲಿ ತಮ್ಮ ಪಾಲಿನ ಬಹುತೇಕ ದೃಶ್ಯಗಳ ಚಿತ್ರೀಕರಣವನ್ನು ಪುನೀತ್​ ಮುಗಿಸಿದ್ದರು. ಈಗ ಅವರ ಪಾತ್ರಕ್ಕೆ ಡಬ್ಬಿಂಗ್​ ಮಾಡುವುದು ಯಾರು ಎಂಬ ಕೌತುಕ ಕೂಡ ಇದೆ. ಸಹೋದರನ ಪಾತ್ರಕ್ಕೆ ಧ್ವನಿ ನೀಡಲು ತಾವು ರೆಡಿ ಎಂದು ಶಿವರಾಜ್​ಕುಮಾರ್​ ಈ ಹಿಂದೆಯೇ ಹೇಳಿದ್ದರು. ಆ ಕಾರಣದಿಂದಲೂ ‘ಜೇಮ್ಸ್​’ ಚಿತ್ರದ ಮೇಲೆ ನಿರೀಕ್ಷೆ ಇದೆ.

ಅವಿನಾಶ್​ ಬಗ್ಗೆ ಹರಡಿತ್ತು ವದಂತಿ:

ಯಾರೋ ಕಿಡಿಗೇಡಿಗಳು ಅವಿನಾಶ್ ಇನ್ನಿಲ್ಲ ಎಂಬ ಸುದ್ದಿ ಹರಡಿಸಿದ್ದರು. ಇದು ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಈ ಕುರಿತು ನಟ ಅವಿನಾಶ್ ಟಿವಿ9ಗೆ ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ ಈ ಕುರಿತು ಸೈಬರ್ ಕ್ರೈಂಗೆ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ. ಅವಿನಾಶ್‌‌ ಸುಳ್ಳು ಸುದ್ದಿಯ ಕುರಿತು ಪ್ರತಿಕ್ರಿಯಿಸಿದ್ದು, ‘ಆರಾಮವಾಗಿದ್ದೇನೆ. ಬೆಳಗ್ಗೆ ವರ್ಕೌಟ್ ಮಾಡಿದ್ದೇನೆ’ ಎಂದಿದ್ದಾರೆ. ಅಲ್ಲದೇ ಇಂತಹ ಸುದ್ದಿ ಹರಿದಾಡಿದ್ದರ ವಿರುದ್ಧ ಸೈಬರ್ ಕ್ರೈಂಗೆ ದೂರು ನೀಡಿರುವುದಾಗಿಯೂ ನಟ ತಿಳಿಸಿದ್ದಾರೆ. ಈ ಮೂಲಕ ಕಿಡಿಗೇಡಿಗಳಿಗೆ ತಕ್ಕ ಶಾಸ್ತಿ ಮಾಡಲು ಮುಂದಾಗಿದ್ದಾರೆ.

ಇದನ್ನೂ  ಓದಿ:

ಪುನೀತ್​ ರಾಜ್​ಕುಮಾರ್​ಗೆ ‘ನವನಕ್ಷತ್ರ ಸನ್ಮಾನ 2021’ ಪ್ರಶಸ್ತಿ; ವೇದಿಕೆಯಲ್ಲಿ ಭಾವುಕರಾದ ಶಿವಣ್ಣ

ಪುನೀತ್​ಗೆ ದೇವರ ಸ್ಥಾನ ನೀಡಿದ ಫ್ಯಾನ್ಸ್​; ಅಪ್ಪು ಮೇಲಿನ ಅಪಾರ ಅಭಿಮಾನಕ್ಕೆ ಇನ್ನೊಂದು ಸಾಕ್ಷಿ

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ