AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kabzaa 2: ನಿರೀಕ್ಷೆ ಮೂಡಿಸಿದ ‘ಕಬ್ಜ 2’; ಕಥೆ ಇನ್ನೂ ಬಾಕಿ ಇದೆ ಎಂದ ಆರ್. ಚಂದ್ರು

Kabzaa Sequel | R Chandru: ‘ಕಬ್ಜ’ ಚಿತ್ರದಲ್ಲಿ ಪ್ರೇಕ್ಷಕರು ನೋಡಿರುವುದು ಅರ್ಧ ಕಥೆ ಮಾತ್ರ. ಇನ್ನುಳಿದ ಕೌತುಕ ಹಾಗೆಯೇ ಇದೆ. ಅದನ್ನು ‘ಕಬ್ಜ 2’ ಚಿತ್ರದಲ್ಲಿ ನಿರ್ದೇಶಕ ಆರ್​. ಚಂದ್ರು ಮುಂದುವರಿಸಲಿದ್ದಾರೆ.

Kabzaa 2: ನಿರೀಕ್ಷೆ ಮೂಡಿಸಿದ ‘ಕಬ್ಜ 2’; ಕಥೆ ಇನ್ನೂ ಬಾಕಿ ಇದೆ ಎಂದ ಆರ್. ಚಂದ್ರು
ಕಿಚ್ಚ ಸುದೀಪ್
ಮದನ್​ ಕುಮಾರ್​
|

Updated on:Mar 17, 2023 | 5:00 PM

Share

ಭಾರತೀಯ ಸಿನಿಮಾರಂಗದಲ್ಲಿ ಸೀಕ್ವೆಲ್​ಗಳ ಟ್ರೆಂಡ್​ ಜೋರಾಗಿದೆ. ಆ ಸಾಲಿಗೆ ಹೊಸ ಸೇರ್ಪಡೆ ‘ಕಬ್ಜ 2’ (Kabzaa 2) ಸಿನಿಮಾ. ದೊಡ್ಡ ಚಿತ್ರಗಳ ಕಥೆಯನ್ನು ಎರಡು ಪಾರ್ಟ್​ನಲ್ಲಿ ಹೇಳಲು ನಿರ್ದೇಶಕರು ಆಸಕ್ತಿ ತೋರಿಸುತ್ತಿದ್ದಾರೆ. ಅಂತಹ ಕೆಲವು ಪ್ರಯತ್ನಗಳಿಗೆ ಯಶಸ್ಸು ಸಿಕ್ಕಿದೆ. ‘ಬಾಹುಬಲಿ’ ಮತ್ತು ‘ಕೆಜಿಎಫ್​’ ಚಿತ್ರಗಳು ಎರಡು ಪಾರ್ಟ್​ನಲ್ಲಿ ಬಂದು ಧೂಳೆಬ್ಬಿಸಿದವು. ‘ಪೊನ್ನಿಯಿನ್​ ಸೆಲ್ವನ್​ 1’ ಸೂಪರ್​ ಹಿಟ್​ ಆಗಿದ್ದು, ಈಗ ಅದರ ಸೀಕ್ವೆಲ್​ ಸಿದ್ಧವಾಗುತ್ತಿದೆ. ‘ಕಾಂತಾರ 2’ ಕೂಡ ಬರಲಿದೆ. ಹಾಗೆಯೇ ‘ಕಬ್ಜ 2’ ಚಿತ್ರವೀಗ ನಿರೀಕ್ಷೆ ಮೂಡಿಸಿದೆ. ಇಂದು (ಮಾರ್ಚ್​ 17) ‘ಕಬ್ಜ’ ಸಿನಿಮಾದ (Kabzaa Movie) ಕ್ಲೈಮ್ಯಾಕ್ಸ್​ನಲ್ಲಿ ಸೀಕ್ವೆಲ್​ನ ಸೂಚನೆ ನೀಡಲಾಗಿದೆ. ಚಿತ್ರ ನೋಡಿ ಹೊರಬಂದವರೆಲ್ಲರೂ ‘ಪಾರ್ಟ್​ 2’ ಕಥೆಯನ್ನು ಊಹಿಸುತ್ತಿದ್ದಾರೆ. ನಿರ್ದೇಶಕ ಆರ್. ಚಂದ್ರು ಅವರು (R. Chandru) ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಹಂಚಿಕೊಳ್ಳಬೇಕಿದೆ.

‘ಕಬ್ಜ’ ಸಿನಿಮಾದ ಕಥೆ ಎರಡು ಪಾರ್ಟ್​ಗಳಲ್ಲಿ ಬರಲಿದೆ ಎಂದು ಚಿತ್ರತಂಡ ನಿಶ್ಚಿತವಾಗಿ ಹೇಳಿರಲಿಲ್ಲ. ಆದರೆ ಈಗ ಆ ವಿಚಾರ ಬಯಲಾಗಿದೆ. ‘ಕಬ್ಜ’ ಚಿತ್ರದಲ್ಲಿ ಪ್ರೇಕ್ಷಕರು ನೋಡಿರುವುದು ಅರ್ಧ ಕಥೆ ಮಾತ್ರ. ಇನ್ನುಳಿದ ಕೌತುಕ ಹಾಗೆಯೇ ಇದೆ. ಅದನ್ನು ‘ಕಬ್ಜ 2’ ಚಿತ್ರದಲ್ಲಿ ನಿರ್ದೇಶಕ ಆರ್​. ಚಂದ್ರು ಮುಂದುವರಿಸಲಿದ್ದಾರೆ. ಈ ಬಗ್ಗೆ ಈಗ ಅಭಿಮಾನಿಗಳ ವಲಯದಲ್ಲಿ ಟಾಕ್​ ಕ್ರಿಯೇಟ್​ ಆಗಿದೆ.

ಇದನ್ನೂ ಓದಿ: ಪವನ್ ಕಲ್ಯಾಣ್​ ಚಿತ್ರಕ್ಕೆ ಆರ್​. ಚಂದ್ರು ನಿರ್ದೇಶನ? ‘ಕಬ್ಜ’ ನೋಡಿ ಮೆಚ್ಚಿಕೊಂಡ ಪವರ್​ಸ್ಟಾರ್

ಇದನ್ನೂ ಓದಿ
Image
Kabzaa Twitter Review: ‘ಕಬ್ಜ’ ನೋಡಿ ಏನು ಹೇಳ್ತಿದ್ದಾರೆ ಫಸ್ಟ್​ ಡೇ ಪ್ರೇಕ್ಷಕರು? ಇಲ್ಲಿದೆ ಟ್ವಿಟರ್​ ವಿಮರ್ಶೆ
Image
Kabzaa Movie Review: 1970ರ ಕಾಲಕ್ಕೆ ಕರೆದೊಯ್ಯುವ ‘ಕಬ್ಜ’; ತೆರೆ ಹಿಂದಿನ ಹೀರೋಗಳ ಅದ್ದೂರಿ ಸಿನಿಮಾ
Image
‘ಕ್ಲೈಮ್ಯಾಕ್ಸ್ ಮಿಸ್ ಮಾಡೋ ಮಾತೇ ಇಲ್ಲ’; ‘ಕಬ್ಜ’ ನೋಡಿದ ಅಭಿಮಾನಿಗಳ ರಿಯಾಕ್ಷನ್
Image
Kabzaa First Half Review: ಹೇಗಿದೆ ‘ಕಬ್ಜ’ ಚಿತ್ರದ ಮೊದಲಾರ್ಧ? ಉಪೇಂದ್ರ-ಆರ್​. ಚಂದ್ರು ತೆರೆದಿಟ್ಟ ಬೇರೊಂದು ಲೋಕ ಇಲ್ಲಿದೆ..

ಉಪೇಂದ್ರ ಅವರು ‘ಕಬ್ಜ’ ಚಿತ್ರದಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಕಿಚ್ಚ ಸುದೀಪ್​ ಅವರ ಧ್ವನಿಯಲ್ಲಿ ಇಡೀ ಸಿನಿಮಾದ ಕಥೆ ನಿರೂಪಿತವಾಗಿದೆ. ಇನ್ನು, ಶಿವರಾಜ್​ಕುಮಾರ್​ ಅವರು ಅತಿಥಿ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ಆ ಪಾತ್ರದ ಹಿನ್ನೆಲೆ ಏನು ಎಂಬುದನ್ನು ಇನ್ನೂ ರಿವೀಲ್​ ಆಗಿಲ್ಲ. ಅದನ್ನು ‘ಕಬ್ಜ 2’ ಚಿತ್ರದಲ್ಲಿ ವಿವರಿಸಬೇಕಿದೆ. ಹಾಗಾದರೆ ಸೀಕ್ವೆಲ್​ನಲ್ಲಿ ಯಾರ ಪಾತ್ರ ಹೈಲೈಟ್​ ಆಗಲಿದೆ? ಯಾರು ಅತಿಥಿ ಪಾತ್ರ ಮಾಡಲಿದ್ದಾರೆ? ಈ ಎಲ್ಲ ಪ್ರಶ್ನೆಗಳಿಗೆ ಮುಂಬರುವ ದಿನಗಳಲ್ಲಿ ಉತ್ತರ ಸಿಗಲಿದೆ.

ಇದನ್ನೂ ಓದಿ: R Chandru: ಅವನ ಕೈಲಾಗುತ್ತಾ? ಆರ್.ಚಂದ್ರು ಸಾಮರ್ಥ್ಯದ ಬಗ್ಗೆ ಆಪ್ತರಿಗೇ ಇತ್ತು ಅನುಮಾನ!

‘ಕಬ್ಜ’ ನೋಡಿದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಮೊದಲ ದಿನ ಈ ಚಿತ್ರಕ್ಕೆ ಒಳ್ಳೆಯ ಓಪನಿಂಗ್​ ಸಿಕ್ಕಿದೆ. ಎಲ್ಲ ಕಡೆಗಳಲ್ಲಿ ಹೌಸ್​ ಫುಲ್​ ಪ್ರದರ್ಶನ ಆಗಿದೆ. ಕರ್ನಾಟಕ ಮಾತ್ರವಲ್ಲದೇ ಹೊರರಾಜ್ಯಗಳಲ್ಲೂ ಕೂಡ ‘ಕಬ್ಜ’ ಬಗ್ಗೆ ಜನರು ಮಾತನಾಡುತ್ತಿದ್ದಾರೆ. ತಾಂತ್ರಿಕವಾಗಿ ಈ ಚಿತ್ರದ ಗುಣಮಟ್ಟ ಎಲ್ಲರಿಗೂ ಇಷ್ಟ ಆಗಿದೆ. ಜನರಿಂದ ಸಿಕ್ಕಿರುವ ಉತ್ತಮ ಸ್ಪಂದನೆ ಕಂಡು ಬೇರೆ ಭಾಷೆಯ ಸೆಲೆಬ್ರಿಟಿಗಳು ಕೂಡ ‘ಕಬ್ಜ’ ಬಗ್ಗೆ ಟ್ವೀಟ್​ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:38 pm, Fri, 17 March 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್