AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kabzaa Movie Review: 1970ರ ಕಾಲಕ್ಕೆ ಕರೆದೊಯ್ಯುವ ‘ಕಬ್ಜ’; ತೆರೆ ಹಿಂದಿನ ಹೀರೋಗಳ ಅದ್ದೂರಿ ಸಿನಿಮಾ

Upendra | Kabzaa Kannada Movie: ತಂತ್ರಜ್ಞರೇ ಈ ಸಿನಿಮಾದ ಹೀರೋಗಳು ಅಂತ ಉಪೇಂದ್ರ ಅವರು ಹೇಳಿಕೆ ನೀಡಿದ್ದರು. ‘ಕಬ್ಜ’ ನೋಡುವಾಗ ಆ ಮಾತು ಹೌದು ಅಂತ ಖಂಡಿತಾ ಎನಿಸುತ್ತದೆ.

Kabzaa Movie Review: 1970ರ ಕಾಲಕ್ಕೆ ಕರೆದೊಯ್ಯುವ ‘ಕಬ್ಜ’; ತೆರೆ ಹಿಂದಿನ ಹೀರೋಗಳ ಅದ್ದೂರಿ ಸಿನಿಮಾ
ಕಬ್ಜ ಸಿನಿಮಾ ಪೋಸ್ಟರ್
Follow us
ಮದನ್​ ಕುಮಾರ್​
| Updated By: Digi Tech Desk

Updated on:Mar 17, 2023 | 2:29 PM

ಚಿತ್ರ: ಕಬ್ಜ

ನಿರ್ಮಾಣ: ಆರ್​. ಚಂದ್ರು

ನಿರ್ದೇಶನ: ಆರ್​. ಚಂದ್ರು

ಪಾತ್ರವರ್ಗ: ಉಪೇಂದ್ರ, ಶ್ರೀಯಾ ಶರಣ್​, ಕಿಚ್ಚ ಸುದೀಪ್​, ಮುರಳಿ ಶರ್ಮಾ, ಶಿವರಾಜ್​ಕುಮಾರ್​ ಮುಂತಾದವರು.

ಸ್ಟಾರ್​: 3.5/5

ನಿರ್ದೇಶಕ ಆರ್​ ಚಂದ್ರು ಅವರು ‘ಕಬ್ಜ’ ಸಿನಿಮಾಗಾಗಿ 4 ವರ್ಷ ಮೀಸಲಿಟ್ಟಿದ್ದರು. ಕೊರೊನಾ, ಲಾಕ್​ಡೌನ್​.. ಇತ್ಯಾದಿ ಅಡೆತಡೆಗಳು ಎದುರಾದರೂ ಕೂಡ ಅವುಗಳನ್ನು ಮೆಟ್ಟಿನಿಂತು ಕೆಲಸ ಮುಂದುವರಿಸಿದರು. ಇಂದು (ಮಾರ್ಚ್​ 17) ಅದ್ದೂರಿಯಾಗಿ ಎಲ್ಲ ಕಡೆಗಳಲ್ಲಿ ‘ಕಬ್ಜ’ ರಿಲೀಸ್​ ಆಗಿದೆ. ಉಪೇಂದ್ರ, ಕಿಚ್ಚ ಸುದೀಪ್​, ಶಿವರಾಜ್​ಕುಮಾರ್​ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ ಎಂಬ ಕಾರಣದಿಂದ ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ವಿಶೇಷವಾದ ನಿರೀಕ್ಷೆ ಇತ್ತು. ಆ ನಿರೀಕ್ಷೆಯ ಮಟ್ಟವನ್ನು ತಲುಪಲು ‘ಕಬ್ಜ’ ಯಶಸ್ವಿ ಆಗಿದೆಯೇ ಎಂಬುದು ತಿಳಿಯಲು ಈ ವಿಮರ್ಶೆ ಓದಿ..

‘ಕಬ್ಜ’ ಚಿತ್ರದ ಒನ್​ ಲೈನ್​ ಕಥೆ ಏನು?

ಸ್ವಾತಂತ್ರ್ಯ ಹೋರಾಟಗಾರನ ಮಗನಾದ ಆರ್ಕೇಶ್ವರ ಪೈಲೆಟ್​ ಆಗಬೇಕು ಅಂತ ಕನಸು ಕಾಣುತ್ತಾನೆ. ಆದರೆ ತಮ್ಮ ಕುಟುಂಬಕ್ಕೆ ಆದ ಅನ್ಯಾಯವನ್ನು ಮೆಟ್ಟಿ ನಿಲ್ಲಲು ಆತ ಆಯುಧ ಹಿಡಿಯಬೇಕಾಗುತ್ತದೆ. ನಂತರ ಶುರುವಾಗೋದು ರಕ್ತದೋಕುಳಿಯ ಕಥೆ. ಭೂಗತ ಲೋಕಕ್ಕೆ ಎಂಟ್ರಿ ನೀಡಿದ ಬಳಿಕ ಹೆಜ್ಜೆ ಹೆಜ್ಜೆಗೂ ಎದುರಾಗುವ ವಿಲನ್​ಗಳನ್ನು ಮಟ್ಟ ಹಾಕುವ ಆತನ ಪರಿಸ್ಥಿತಿ ಕೊನೆಗೆ ಏನಾಗುತ್ತದೆ? ಈ ಪ್ರಶ್ನೆಗೆ ಉತ್ತರ ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.

ಡಿಫರೆಂಟ್​ ಪಾತ್ರದಲ್ಲಿ ಉಪೇಂದ್ರ:

ನಟ ಉಪೇಂದ್ರ ಅವರ ವೃತ್ತಿಜೀವನದಲ್ಲಿ ಇದು ಡಿಫರೆಂಟ್​ ಸಿನಿಮಾ. 1970ರ ಸಮಯದಲ್ಲಿ ನಡೆಯುವ ಕಥೆಯಲ್ಲಿ ಅವರು ಗ್ಯಾಂಗ್​ಸ್ಟರ್​ ಪಾತ್ರ ಮಾಡಿದ್ದಾರೆ. ಮೊದಲು ಸೌಮ್ಯವಾಗಿದ್ದು, ನಂತರ ಜ್ವಾಲಾಮುಖಿಯಂತೆ ಅಬ್ಬರಿಸುವ ಆರ್ಕೇಶ್ವರನೆಂಬ ಯುವಕನ ಪಾತ್ರದಲ್ಲಿ ಅವರು ಉತ್ತಮವಾಗಿ ಅಭಿನಯಿಸಿದ್ದಾರೆ. ಭಿನ್ನವಾದಂತಹ ಫೈಟಿಂಗ್​ ದೃಶ್ಯಗಳಲ್ಲಿ ಅವರು ಪರಾಕ್ರಮ ಮೆರೆದಿದ್ದಾರೆ.

ಸುದೀಪ್​-ಶಿವಣ್ಣ ನೀಡ್ತಾರೆ ದೊಡ್ಡ ಸರ್ಪ್ರೈಸ್​:

‘ಕಬ್ಜ’ ಚಿತ್ರಕ್ಕೆ ಹೈಪ್​ ಹೆಚ್ಚಲು ಕಾರಣವಾದ ಪ್ರಮುಖ ಅಂಶಗಳಲ್ಲಿ ಪಾತ್ರವರ್ಗ ಕೂಡ ಒಂದು. ಈ ಚಿತ್ರದಲ್ಲಿ ಉಪೇಂದ್ರ ಜೊತೆ ಕಿಚ್ಚ ಸುದೀಪ್​ ಮತ್ತು ಶಿವರಾಜ್​ಕುಮಾರ್​ ನಟಿಸಿದ್ದಾರೆ ಎಂಬ ನಿರೀಕ್ಷೆಯಿಂದಲೇ ಹೆಚ್ಚಿನ ಮಂದಿ ಚಿತ್ರಮಂದಿರಕ್ಕೆ ಬರುತ್ತಾರೆ. ಅಂಥವರಿಗೆ ಸರ್ಪ್ರೈಸ್​ ಕಾದಿರುತ್ತದೆ. ಪೊಲೀಸ್​ ಕಮಿಷನರ್​ ಪಾತ್ರದಲ್ಲಿ ಸುದೀಪ್​ ಅವರು ಆರಂಭದಲ್ಲೇ ಎಂಟ್ರಿ ನೀಡುತ್ತಾರೆ. ಒಂದು ವಿಶೇಷ ಸನ್ನಿವೇಶದಲ್ಲಿ ಶಿವಣ್ಣ ಕಾಣಿಸಿಕೊಳ್ಳುತ್ತಾರೆ. ಕಿಚ್ಚ ಸುದೀಪ್​, ಶಿವರಾಜ್​ಕುಮಾರ್​ ಹಾಗೂ ಉಪೇಂದ್ರ ಅವರು ಒಟ್ಟಿಗೆ ಕಾಣಿಸಿಕೊಳ್ಳುವ ದೃಶ್ಯ ಬಂದಾಗ ಪ್ರೇಕ್ಷಕರಿಗೆ ರಿಯಲ್​ ಸರ್ಪ್ರೈಸ್​ ಎದುರಾಗುತ್ತದೆ.

ತಂತ್ರಜ್ಞರ ಸಿನಿಮಾ ‘ಕಬ್ಜ’:

ಉಪೇಂದ್ರ ಅವರು ಈ ಮೊದಲು ಅನೇಕ ಬಾರಿ ಈ ಮಾತನ್ನು ಹೇಳಿದ್ದರು. ತಂತ್ರಜ್ಞರೇ ಈ ಸಿನಿಮಾದ ಹೀರೋಗಳು ಅಂತ ಅವರು ಹೇಳಿಕೆ ನೀಡಿದ್ದರು. ‘ಕಬ್ಜ’ ನೋಡುವಾಗ ಆ ಮಾತು ಹೌದು ಅಂತ ಖಂಡಿತ ಎನಿಸುತ್ತದೆ. ನಿರ್ದೇಶಕ ಆರ್​. ಚಂದ್ರು ಅವರು ಒಂದು ಕಲ್ಪನಾಲೋಕವನ್ನು ತೆರೆದಿಟ್ಟಿದ್ದಾರೆ. ಅದಕ್ಕೆ ಪೂರಕವಾಗಿ ಕಲಾ ನಿರ್ದೇಶಕ ಶಿವಕುಮಾರ್​ ಕೊಡುಗೆ ನೀಡಿದ್ದಾರೆ. ಛಾಯಾಗ್ರಾಹಕ ಎಜೆ ಶೆಟ್ಟಿ ಅವರು ಎಲ್ಲವನ್ನೂ ಬೆರಗಿನಂತೆ ತೋರಿಸಿದ್ದಾರೆ. ಎಂದಿನಂತೆ ಅಬ್ಬರಿಸುವ ಸಂಗೀತದೊಂದಿಗೆ ರವಿ ಬಸ್ರೂರು ಆವರಿಸಿಕೊಂಡಿದ್ದಾರೆ.

ಇದನ್ನೂ ಓದಿ: South Indian Hero Review: ಸಿನಿಮಾ ಮಾಡೋರಿಗೂ, ನೋಡೋರಿಗೂ ಆಪ್ತ ಎನಿಸುವ ‘ಸೌತ್​ ಇಂಡಿಯನ್​ ಹೀರೋ’

ಆ್ಯಕ್ಷನ್ ಪ್ರಿಯರಿಗೆ ಖುಷಿ ಕೊಡುವ ಸಿನಿಮಾ:

‘ಕಬ್ಜ’ ಸಿನಿಮಾದಲ್ಲಿ ಪಾತ್ರಗಳಿಗಿಂತಲೂ ಹೆಚ್ಚಾಗಿ ಆಯುಧಗಳು ಮಾತನಾಡುತ್ತವೆ. ಪ್ರತಿ ಸನ್ನಿವೇಶದಲ್ಲೂ ಗನ್​ಗಳು ಸದ್ದು ಮಾಡುತ್ತವೆ. ಲಾಂಗು, ಮಚ್ಚುಗಳು ಝಳಪಿಸುತ್ತವೆ. ಕೆಲವು ದೃಶ್ಯಗಳಲ್ಲಿ ರಕ್ತದೋಕುಳಿಯೇ ಹರಿಯುತ್ತದೆ. ಈ ರೀತಿಯ ಆ್ಯಕ್ಷನ್ ಇಷ್ಟಪಡುವ ಪ್ರೇಕ್ಷಕರಿಗೆ ‘ಕಬ್ಜ’ ಚಿತ್ರ ಮಸ್ತ್​ ಮನರಂಜನೆ ನೀಡುತ್ತದೆ.

ಬಲವಾಗಿದೆ ‘ಕಬ್ಜ’ ಪಾತ್ರವರ್ಗ:

ಅಂದಾಜು 60 ಕಲಾವಿದರು ‘ಕಬ್ಜ’ ಚಿತ್ರದಲ್ಲಿ ನಟಿಸಿದ್ದಾರೆ. ಪ್ರತಿ ಪಾತ್ರಕ್ಕೂ ಘಟಾನುಘಟಿ ಕಲಾವಿದರನ್ನು ಆರ್​. ಚಂದ್ರು ಆಯ್ಕೆ ಮಾಡಿಕೊಂಡಿದ್ದಾರೆ. ಎಲ್ಲ ಪಾತ್ರಕ್ಕೂ ಸಾಧ್ಯವಾದಷ್ಟು ಫೋಕಸ್​ ನೀಡುವ ಪ್ರಯತ್ನ ಆಗಿದೆ. ಮುರಳಿ ಶರ್ಮಾ, ನೀನಾಸಂ ಅಶ್ವತ್ಥ್​, ದೇವ್​ ಗಿಲ್​, ದಾನಿಶ್​ ಅಖ್ತರ್​, ನವಾಬ್​ ಷಾ, ಜಾನ್​ ಕೊಕೆನ್, ಬಾಲ ಕಲಾವಿದರಾದ ಚಿರು, ಜ್ಞಾನ್​​ ಸೇರಿದಂತೆ ಅನೇಕರು ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಇದನ್ನೂ ಓದಿ: 19 20 21 Movie Review: ನಾಡಿನ ಜನ ನೋಡಲೇಬೇಕಾದ ಕಾಡಿನ ಮಕ್ಕಳ ಕಥೆ ಮತ್ತು ಘನತೆ

ರಾಜಕುಮಾರಿ ಶ್ರೀಯಾ ಶರಣ್​:

ನಟಿ ಶ್ರೀಯಾ ಶರಣ್​ ಅವರಿಗೆ ‘ಕಬ್ಜ’ ಚಿತ್ರದಲ್ಲಿ ಮಹತ್ವದ ಪಾತ್ರ ಸಿಕ್ಕಿದೆ. ರಾಜಮನೆತನದ ಮಗಳಾಗಿ ಅವರು ಮಿಂಚಿದ್ದಾರೆ. ‘ನಮಾಮಿ.. ನಮಾಮಿ..’ ಹಾಡಿನಲ್ಲಿ ಅವರು ಕಣ್ಮನ ಸೆಳೆಯುತ್ತಾರೆ. ಇಡೀ ಸಿನಿಮಾದಲ್ಲಿ ಅವರು ಹೈಲೈಟ್​ ಆಗುವಂತಹ ಒಂದಷ್ಟು ದೃಶ್ಯಗಳಿವೆ. ಅವುಗಳನ್ನು ಅವರು ಸಮರ್ಥವಾಗಿ ಬಳಸಿಕೊಂಡಿದ್ದಾರೆ.

ಒಟ್ಟಾರೆ ಸಿನಿಮಾ ಹೇಗಿದೆ?

‘ಕಬ್ಜ’ ಎಂಬುದು ಬೇರೆಯದೇ ಲೋಕ. ಬಾಕಿ ಸಿನಿಮಾಗಳಲ್ಲಿ ನೋಡಿದ್ದಕ್ಕಿಂತಲೂ ಭಿನ್ನವಾದ ದೃಶ್ಯಗಳು ಇಲ್ಲಿ ಕಾಣಸಿಗುತ್ತವೆ. ರೆಟ್ರೋ ಕಾಲದ ಕಥೆಯನ್ನು ಫೀಲ್​ ಮಾಡಬೇಕು ಎಂಬುವವರಿಗೆ ಈ ಚಿತ್ರ ಹೆಚ್ಚು ಇಷ್ಟ ಆಗುತ್ತದೆ. ಮೇಕಿಂಗ್​ ದೃಷ್ಟಿಯಿಂದ ಸಾಕಷ್ಟು ಶ್ರೀಮಂತಿಕೆ ಕಾಣಿಸುತ್ತದೆ. ಕೆಲವೇ ಸೆಕೆಂಡ್​ಗಳು ಬಂದು ಹೋಗುವ ಫ್ರೇಮ್​ಗಳಿಗೂ ಆರ್​. ಚಂದ್ರು ಅವರು ಬೆಟ್ಟದಷ್ಟು ಕಾಳಜಿ ವಹಿಸಿದ್ದಾರೆ. ವೇಗವಾಗಿ ಸಾಗುವ ನಿರೂಪಣೆ ಕೂಡ ಈ ಸಿನಿಮಾದ ಪ್ಲಸ್​ ಪಾಯಿಂಟ್​. ತಾನ್ಯಾ ಹೋಪ್​ ಡ್ಯಾನ್ಸ್​ ಮಾಡಿರುವ ‘ಚುಂ ಚುಂ ಚಳಿ ಚಳಿ..’ ಹಾಡು ಕಥೆಯ ಓಟಕ್ಕೆ ಕೊಂಚ ಅಡ್ಡಿ ಮಾಡಿದೆ ಎನಿಸಿದರೂ ಸ್ಪೆಷಲ್​ ಸಾಂಗ್​ ಬಯಸುವವರಿಗೆ ಇಷ್ಟ ಆಗುತ್ತದೆ.

ಇದನ್ನೂ ಓದಿ: Dooradarshana Review: ‘ದೂರದರ್ಶನ’ ಪರದೆಯಲ್ಲಿ ಬಿತ್ತರಗೊಂಡ ಆ ದಿನಗಳ ನೆನಪು; ಬೇಕಿತ್ತು ಇನ್ನಷ್ಟು ಹೊಳಪು

ಬರಲಿದೆ ‘ಕಬ್ಜ 2’:

ಆರ್. ಚಂದ್ರು ಅವರು ಈವರೆಗೂ ಹೇಳಿರುವುದು ಅರ್ಧ ಕಹಾನಿ ಮಾತ್ರ. ಒಂದು ಮುಖ್ಯ ಘಟ್ಟಕ್ಕೆ ಬಂದು ‘ಕಬ್ಜ’ ಕಥೆ ನಿಲ್ಲುತ್ತದೆ. ಮುಂದೇನಾಯ್ತು ಎಂಬುದನ್ನು ಅವರು ‘ಕಬ್ಜ 2’ ಚಿತ್ರದಲ್ಲಿ ತಿಳಿಸಲಿದ್ದಾರೆ. ಅದರಲ್ಲಿ ಯಾವೆಲ್ಲ ಪಾತ್ರಗಳು ಹೈಲೈಟ್​ ಆಗಲಿವೆ ಎಂಬುದು ತಿಳಿಯಲು ‘ಪಾರ್ಟ್​ 2’ ಬರೋತನಕ ಕಾಯಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:36 pm, Fri, 17 March 23

ರಾಜಸ್ಥಾನ ತಂಡದಲ್ಲಿ ಸ್ಥಾನ ಕೊಡಿಸುವುದಾಗಿ ಬೆಳಗಾವಿ ಕ್ರಿಕೆಟರ್​​ಗೆ ವಂಚನೆ
ರಾಜಸ್ಥಾನ ತಂಡದಲ್ಲಿ ಸ್ಥಾನ ಕೊಡಿಸುವುದಾಗಿ ಬೆಳಗಾವಿ ಕ್ರಿಕೆಟರ್​​ಗೆ ವಂಚನೆ
ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜಲಪಾತಗಳ ಬಂಡೆಗಳೇ ಆಗಬೇಕೇ?
ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜಲಪಾತಗಳ ಬಂಡೆಗಳೇ ಆಗಬೇಕೇ?
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ; ಮಹಡಿಯಿಂದ ಹಾರಿದ ತಂದೆ, ಮಕ್ಕಳ ಸಾವು
ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ; ಮಹಡಿಯಿಂದ ಹಾರಿದ ತಂದೆ, ಮಕ್ಕಳ ಸಾವು
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಜಾತಿ ಗಣತಿ ವರದಿ, ಕಾಲ್ತುಳಿತದ ಬಗ್ಗೆ CM-DCMಗೆ ಹೈಕಮಾಂಡ್ ಖಡಕ್​ ಸೂಚನೆ
ಜಾತಿ ಗಣತಿ ವರದಿ, ಕಾಲ್ತುಳಿತದ ಬಗ್ಗೆ CM-DCMಗೆ ಹೈಕಮಾಂಡ್ ಖಡಕ್​ ಸೂಚನೆ
ಭೂಮಿಕ್ ಸಾಕುತ್ತಿದ್ದ ನಾಯಿ ಅನ್ನ-ನೀರು ಬಿಟ್ಟು ರೋದಿಸುತ್ತಿದೆ: ಅಶೋಕ
ಭೂಮಿಕ್ ಸಾಕುತ್ತಿದ್ದ ನಾಯಿ ಅನ್ನ-ನೀರು ಬಿಟ್ಟು ರೋದಿಸುತ್ತಿದೆ: ಅಶೋಕ
ಪುನಾರಚನೆ ಬಗ್ಗೆ ಗೊತ್ತಿಲ್ಲ, ನನಗೆ ಸಚಿವನಾಗುವ ಆಕಾಂಕ್ಷೆ ಇಲ್ಲ: ರಾಜು ಕಾಗೆ
ಪುನಾರಚನೆ ಬಗ್ಗೆ ಗೊತ್ತಿಲ್ಲ, ನನಗೆ ಸಚಿವನಾಗುವ ಆಕಾಂಕ್ಷೆ ಇಲ್ಲ: ರಾಜು ಕಾಗೆ